ಚಾಮರಾಜನಗರ

ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ ಜಿಲ್ಲೆಯಲ್ಲಿ ಬರ ಪರಿಶೀಲನೆ

ಚಾಮರಾಜನಗರ : ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡವು ಕೀಳಲೀಪುರ, ಕುಲಗಾಣ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.

ಕೀಳಲೀಪುರದ ಗುರುಸಿದ್ದಪ್ಪ ಎಂಬುವರ ಬಾಳೆತೋಟ, ಶ್ರೀಕಂಠಪ್ಪ ಅವರ ನೆಲಗಡಲೆ ಮತ್ತು ಟೊಮ್ಯಾಟೊ, ಕುಲಗಾಣ ಗ್ರಾಮದ ತಿರುಪತಿ ನಾಯಕರ ಸೇವಂತಿ ಫಸಲು, ಶೀಗೆವಾಡಿ ಗ್ರಾಮದ ಮರಿದಾಸನಾಯಕ ಅವರ ಹತ್ತಿ ಫಸಲನ್ನು ವೀಕ್ಷಿಸಿದರು.

ಮೂಡ್ನಾಕೂಡು ಗ್ರಾಮದ ನಾಗೇಶ್ ಅವರ ಬಾಳೆ ತೋಟ ಪರಿಶೀಲನೆ ನಡೆಸಿದರು. ಗಾಳಿ ಮಳೆಗೆ ಬಾಳೆ ಫಸಲು ನೆಲಕ್ಕೆ ಒರಗಿರುವುದನ್ನು ಗಮನಿಸಿದರು.

ಮುಂಗಾರು ಮಳೆ ಬೀಳದೆ ಜೋಳ, ಹತ್ತಿ, ನೆಲಗಡಲೆ ಫಸಲು ಒಣಗಿ ನಷ್ಟವಾಗಿದೆ ಎಂದು ರೈತರು ದೂರಿದರು.

ಸರಿಯಾಗಿ ವಿದ್ಯುತ್ ನೀಡದೆ ಬಾಳೆ, ತರಕಾರಿ ಫಸಲು ಹಾನಿಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಭೇಟಿ ನೀಡಿ ಪರಿಶೀಲಿಸಿಲ್ಲ. ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದರೂ ಏನು ಪ್ರಯೋಜನವಿಲ್ಲ ಎಂದು ರೈತರು ತಂಡದ ಗಮನಕ್ಕೆ ತಂದರು.

ತಂಡದಲ್ಲಿ ಶಾಸಕ ಶ್ರೀವತ್ಸ, ಡಾ.ನವೀನ್ ಕುಮಾರ್, ಮಾಜಿ ಶಾಸಕರಾದ ಎನ್.ಮಹೇಶ್, ಎಸ್. ಬಾಲರಾಜ್, ಸಿ.ಎಸ್.ನಿರಂಜನಕುಮಾರ್, ಹರ್ಷವರ್ಧನ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬಿಜೆಪಿ ಜಿಲ್ಲಾಧ್ತಕ್ಷ ನಾರಾಯಣಪ್ರಸಾದ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಎಸ್ ಟಿ ಮೋರ್ಚಾ ಅಧ್ಯಕ್ಷ ಜಯಸುಂದರ್ ಇತರರಿದ್ದರು.

lokesh

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

54 mins ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

56 mins ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

58 mins ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

60 mins ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

1 hour ago