ಚಾಮರಾಜನಗರ : ನಗರದಲ್ಲಿ ೨೦೧೩ರಿಂದ ಆರಂಭವಾದ ಚಾಮರಾಜನಗರ ಸಾಂಸ್ಕೃತಿಕ ದಸರಾ ೨೦೨೪ರವರೆಗೂ ನಡೆಯಿತು. ಈ ಬಾರಿ ದಸರಾ ರದ್ದಾಗಿರುವುದು ಆಡಳಿತ ವರ್ಗಕ್ಕೆ ಚಾಮರಾಜನಗರದ ಇತಿಹಾಸದ ಅರಿವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಾಹಿತಿ ಸೋಮಶೇಖರ್ ಬಿಸಲ್ವಾಡಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ೨ ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಚಾಮರಾಜನಗರದಲ್ಲಿ ಹಿಂದೆ ದಸರಾ ನಡೆದಿತ್ತೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅವರು ಚಾಮರಾಜನಗರ ದಸರಾ ಕಾರ್ಯಕ್ರಮ ರದ್ದುಪಡಿಸಿ, ಜಿಲ್ಲೆಗೆ ಅಪಚಾರ ಮಾಡಿದ್ದಾರೆ ಎಂದರು.
ಕಲಾವಿದರಾದ ನಾವು ಒಟ್ಟಾಗಿ ಚಾಮರಾಜನಗರ ದಸರಾ ಆಚರಿಸೋಣ ಎಂಬ ಸಂಕಲ್ಪ ಮಾಡಿರುವುದು ಪ್ರಶಂಸನೀಯ. ಕಲಾವಿದರೇ ಸ್ವಯಂಪ್ರೇರಿತವಾಗಿ ದಸರಾ ಆಚರಿಸುತ್ತಿರುವುದು ಸರ್ಕಾರಕ್ಕೆ ಕೊಟ್ಟ ಸಂದೇಶವಾಗಿದೆ ಎಂದರು.
ಇದನ್ನೂ ಓದಿ:-ಚಾ.ನಗರ ದಸರಾ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ; ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ
ಜಿಲ್ಲಾ ಯುವ ಕಲಾವಿದರ ಬಳಗದ ಅಧ್ಯಕ್ಷ ಶಿವಶಂಕರ್ ಎನ್.ಚಟ್ಟು ಮಾತನಾಡಿದರು. ವೇದಿಕೆಯಲ್ಲಿ ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ ಎಂಬ ಮಲೆ ಮಹದೇಶ್ವರರ ಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿ ಗೀತೆ, ಜಾನಪದ ಗೀತೆ, ಸುಗಮ ಸಂಗೀತ, ಕುಂಚ ಗಾಯನ, ನೀಲಗಾರರ ಪದ, ಸೋಬಾನೆ, ತಂಬೂರಿ ಪದ, ಚಲನಚಿತ್ರ ಗೀತೆಗಳು, ರಂಗ ಗೀತೆಗಳು, ಹೋರಾಟ ಗೀತೆಗಳು, ಹಾಸ್ಯ ಜಾನಪದ, ಭಜನೆ, ವೀರಗಾಸೆ, ಹರಿಕಥೆ, ಗೊರವರ ಕುಣಿತ, ಡೊಳ್ಳು ಕುಣಿತ, ಸ್ಯಾಕ್ರೋಪೋನ್ ವಾದನ, ತತ್ವಪದ, ಭರತನಾಟ್ಯ, ನೃತ್ಯ, ಶಿವತಾಂಡವ ನೃತ್ಯ ನಾಟಕ ಕಲಾ ಪ್ರಕಾರಗಳಿಗೆ ಸಂಬಂಽಸಿದ ಕಲಾ ಪ್ರದರ್ಶನಗಳು ಜರುಗಿದವು.
ವೇದಿಕೆಯಲ್ಲಿ ಕಲಾವಿದ ಮಂಗಲ ಶಿವಣ್ಣ, ಕನ್ನಡಪರ ಸಂಘಟನೆ ಮುಖಂಡ ಚಾ.ರಂ.ಶ್ರೀನಿವಾಸಗೌಡ, ವೇಣುಗೋಪಾಲ್, ಯುವ ಕಲಾವಿದರಾದ ಸಿದ್ದರಾಜು, ಮಂಜು ಶ್ರೀರಾಂ, ದಡದಹಳ್ಳಿ ರಮೇಶ್, ರಾಕ್ಗಿರೀಶ್, ಆಲೂರು ದೊರೆಸ್ವಾಮಿ ಜಾನಪದ ಕಲಾವಿದರು ಭಾಗವಹಿಸಿದ್ದರು.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…