ಚಾಮರಾಜನಗರ

ಚಾ.ನಗರ ಸನಿಹವೇ ಸುಳಿದಾಡುತ್ತಿರುವ ಹುಲಿರಾಯ!

ಚಾಮರಾಜನಗರ: ಕಾಡು ಪ್ರಾಣಿಗಳು ಈ ಭಾಗದಲ್ಲಿ ಊರು ಪ್ರವೇಶಿಸುವುದನ್ನು ಕೇಳಿದ್ದೇವೆ- ಕಂಡಿದ್ದೇವೆ. ಆದರೆ ಹುಲಿಯೊಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸನಿಹದಲ್ಲೇ ಮೇಲಿಂದ ಮೇಲೆ ಸುಳಿದಾಡುತ್ತಿದ್ದು ಸಹಜವಾಗಿಯೇ ಇದರಿಂದ ಜನತೆ ಭಯಭೀತರಾಗಿದ್ದಾರೆ.

ಚಾಮರಾಜನಗರ -ನಂಜನಗೂಡು ಮುಖ್ಯರಸ್ತೆಯಲ್ಲಿರುವ ಮಕಾವ್ ಹೋಟೆಲ್ ಹತ್ತಿರದ ಕಾಳನಹುಂಡಿ ರಸ್ತೆಯಲ್ಲಿ ಸಿಗುವ ಕಟ್ಟೇಪುರದಲ್ಲಿ ಹುಲಿ ಇತ್ತೀಚೆಗೆ ಕರುವನ್ನು ಕೊಂದು ತಿಂದಿತ್ತು.

ಚಾ.ನಗರ ಪ್ರವೇಶ ದ್ವಾರದಿಂದ ಸುಮಾರು 5 ಕಿ.ಮೀ ದೂರದ ಕಟ್ಟೇಪುರದಲ್ಲಿ ಚಾಮರಾಜನಗರದ ಎಸ್‌ಪಿ ಎಸ್ ಸಾಹುಕಾರ್ ಜಿಯಾವುಲ್ಲಾ ಷರೀಫ್ ಅವರ ತೋಟವಿದ್ದು ಅಲ್ಲಿ ಕಟ್ಟಲಾಗಿದ್ದ ಕರುವನ್ನು ಏ.2ರಂದು ತಿಂದಿತ್ತು.

ಅರಣ್ಯ ಇಲಾಖೆ ಡಿಆರ್‌ಎಫ್ಒ ಸುರೇಶ್, ಫಾರೆಸ್ಟರ್ ಶ್ವೇತಾದ್ರಿ ಇತರರು ಪರಿಶೀಲನೆ ನಡೆಸಿದಾಗ ಮಾರನೇ ದಿನ ಕರುವಿನ ಕಳೇಬರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನ ತಿಳಿಯಲು ಘಟನಾ ಸ್ಥಳದಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿತ್ತು. ಸೆರೆಗೆ ಬೋನನ್ನೂ ಇಟ್ಟು ಅದರ ಒಳಗಡೆ ಮೇಕೆ ಮರಿಯನ್ನು ಕಟ್ಟಲಾಗಿದೆ.

ಮೇಕೆ ತಿನ್ನುವ ಆಸೆಯಿಂದ ಬಂದು ಬೋನಿಗೆ ಬೀಳಲೆಂದು ಹೀಗೆ ಮಾಡಲಾಗಿದೆ. ಆದರೆ, ಚಾಲಾಕಿ ಹುಲಿ ಬೋನಿನತ್ತ ಸುಳಿಯದೇ‌ ಅದರ ಹತ್ತಿರದಲ್ಲೇ ಮಂಗಳವಾರ (ಏ.8) ಮತ್ತೆ ನಡೆದು ಹೋಗಿರುವುದು, ಅದರ ಹೆಜ್ಜೆ ಗುರುತುಗಳು ಮೂಡಿರುವುದು ನೋಡಿ ಅಲ್ಲಿನ ತೋಟದ ಮನೆಗಳವರು ಆತಂಕಗೊಂಡಿದ್ದಾರೆ.

ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಕಟ್ಟೆ ಪುರದಲ್ಲಿ ಏ.2ರಂದು ಕರುವನ್ನು ಕೊಂದು ತಿಂದಿದ್ಧ ಹುಲಿಯೇ ಏ.6ರ ಭಾನುವಾರ ಅರಕಲವಾಡಿ ಬಳಿಯ ಲಿಂಗಣಾಪುರದಲ್ಲಿಯೂ ರೈತರೊಬ್ಬರ ಕರುವನ್ನು ಕೊಂದು ತಿಂದಿದೆ. ಹುಲಿ ಕರುಗಳ ಮೇಲೆ ದಾಳಿ ಮಾಡಿರುವ ಈ ಎರಡೂ ಗ್ರಾಮಗಳ ನಡುವಿನ ಅಂತರ ದೂರ ಇದೆಯಾದರೂ ಹುಲಿ ಈ ಪ್ರದೇಶವನ್ನು ತನ್ನ ಎಲ್ಲೆಯಾಗಿ ಮಾಡಿಕೊಂಡಿದೆ. ಅದು ಆಗಾಗ್ಗೆ ಸಂಚಾರ ಮಾಡುತ್ತಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಅರಣ್ಯ ಇಲಾಖೆಯವರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

7 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

7 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

7 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

7 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

7 hours ago