ಜಿಲ್ಲೆಗಳು

ನಾಳೆ ಬೃಹತ್ ಯೇಸು ದೇವಾಲಯ ಉದ್ಘಾಟನೆ

ನಾಗನಹಳ್ಳಿ ಗ್ರಾಮದಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಪಕ್ಷಾತೀತವಾಗಿ ನಿರ್ಮಾಣ

ಎಚ್.ಡಿ.ಕೋಟೆ: ಜಾತ್ಯತೀತವಾಗಿ, ಪಕ್ಷಾತೀತವಾಗಿ ಗ್ರಾಮದಲ್ಲಿ ಎಲ್ಲರ ಪರಿಶ್ರಮದಿಂದ ಜಿಲ್ಲೆಯಲ್ಲಿ ದೊಡ್ಡದಾದ ೫ ಕೋಟಿ ರೂ. ವೆಚ್ಚದ ಯೇಸುವಿನ ದೇವಾಲಯವನ್ನು ನಿರ್ಮಿಸಿದ್ದು, ಶುಕ್ರವಾರ ಉದ್ಘಾಟನೆಗೆ ಸಜ್ಜಾಗಿದೆ.
ಪಟ್ಟಣ ಸಮೀಪದ ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚಾಗಿ ಕ್ರೈಸ್ತ ಸಮುದಾಯದವರು, ಅಲ್ಪಸ್ವಲ್ಪ ಪ್ರಮಾಣದಲ್ಲಿ ಹಿಂದೂ ಸಮುದಾಯದವರು ವಾಸಿಸುತ್ತಿದ್ದಾರೆ.
ರಾಜಕೀಯದಲ್ಲಿ ಪಕ್ಷಗಳ ಮತ್ತು ಮುಖಂಡರುಗಳ ನಡುವೆ ತೀವ್ರ ಪೈಪೋಟಿ ಇದ್ದರೂ ಎಲ್ಲರೂ ಒಗ್ಗಟ್ಟಾಗಿ ಗ್ರಾಮದಲ್ಲಿ ಅತ್ಯುತ್ತಮವಾದ ಮತ್ತು ಬೃಹತ್ತಾದ ಯೇಸುವಿನ ದೇವಾಲಯ ನಿರ್ಮಿಸಿರುವುದು ವಿಶೇಷ.
೨೦೧೧ರಲ್ಲಿ ಚರ್ಚಿನ ಫಾದರ್ ಆಗಿದ್ದ ಮರಿ ಜೋಸೆಫ್ ಈ ಗ್ರಾಮದಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ಯೇಸುವಿನ ದೇವಾಲಯ ನಿರ್ಮಾಣವಾಗಬೇಕೆಂದು ಗ್ರಾಮಸ್ಥರು ಮತ್ತು ಧರ್ಮಧ್ಯಕ್ಷರ ಜೊತೆ ಚರ್ಚಿಸಿ ಅದೇ ಸಾಲಿನಲ್ಲಿ ದೇವಾಲಯ ನಿರ್ಮಾಣಕ್ಕೆ ಧರ್ಮಾಧ್ಯಕ್ಷರಾದ ಥಾಮಸ್ ಅಂತೋನಿ ವಾಳ ಪಿಳ್ಳಿ, ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ, ಸಂಸದರಾಗಿದ್ದ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದೇಶ್ ನಾಗರಾಜು, ಚಿಕ್ಕಮಾದು, ಸಿದ್ದರಾಜು ಮುಂತಾದವರ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು.
ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ೧೦ ಲಕ್ಷ ರೂ., ಚಿಕ್ಕಮಾದು ೫ ಲಕ್ಷ ರೂ., ಅನಿಲ್ ಚಿಕ್ಕಮಾದು ೫ ಲಕ್ಷ ರೂ.ಗಳನ್ನು ನೀಡಿದ್ದರು. ನಾಲ್ಕೂವರೆ ಕೋಟಿ ರೂ.ಗಳನ್ನು ಗ್ರಾಮಸ್ಥರು, ದಾನಿಗಳು, ಮೈಸೂರು ಧರ್ಮ ಕ್ಷೇತ್ರ ಸೇರಿದಂತೆ ಇನ್ನಿತರರ ಮೂಲಕ ಹಂತ ಹಂತವಾಗಿ ಸಂಗ್ರಹಿಸಿ ಕಳೆದ ಹತ್ತು ವರ್ಷಗಳಿಂದ ದೇವಾಲಯದ ಕಾಮಗಾರಿ ನಡೆಸಿದ್ದು, ಈಗ ಪೂರ್ಣಗೊಂಡಿರುವುದರಿಂದ ಡಿ.೩೦ರಂದು ಬೆಳಿಗ್ಗೆ ೧೦ ಗಂಟೆಗೆ ಶುಕ್ರವಾರ ದೇವಾಲಯವನ್ನು ಮಹಾ ಧರ್ಮಾಧ್ಯಕ್ಷರಾದ ಜಾನ್ ಕಾರ್ಡಿನಲ್ ರಿಬಟ್, ಧರ್ಮಾಧ್ಯಕ್ಷರಾದ ಆಂಟೊನಿ ವಿಲಿಯಂ, ಥಾಮಸ್ ಆಂಟೊನಿ, ರೋಸರಿಯೂ, ಸಿಪ್ರಿಯನ್, ಜಾನ್, ಡೊಮೆನಿಕಲ್, ಶಾಸಕರಾದ ಅನಿಲ್ ಚಿಕ್ಕಮಾದು, ಜಿ.ಟಿ.ದೇವೇಗೌಡ, ಸಂಸದ ಶ್ರೀನಿವಾಸಪ್ರಸಾದ್, ಮಾಜಿ ಸಂಸದ ಧ್ರುವನಾರಾಯಣ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಶಿವಣ್ಣ, ಚಿಕ್ಕಣ್ಣ, ನಾಗನಹಳ್ಳಿ ಚರ್ಚ್ ಫಾದರ್ ಅಂತೋಣಿ ಸ್ವಾಮಿ, ಸಮಿತಿಯವರಾದ ಉಪಕಾರಿ, ಮೆಟ್ರಿನ್, ನಾಗನಹಳ್ಳಿ ಶಾಂತರಾಜು, ನಾಗನಹಳ್ಳಿ ಪ್ರದೀಪ, ಸ್ಟ್ಯಾನಿ, ಅಂತೋಣಿ, ಲಾಜರ್, ಚೋರಪ್ಪ, ಬಾಲರಾಜು, ಗೋಲ್ಡನ್, ಪೆದ್ರು, ಕ್ರೈಸ್ತ ಸಮುದಾಯದವರು ಭಾಗವಹಿಸಲಿದ್ದಾರೆ.

andolanait

Recent Posts

ಒಡನಾಡಿ ಸ್ಟ್ಯಾನ್ಲಿ ಅವರ ವಾರದ ಅಂಕಣ ; ಕೋಟಿಗೊಬ್ಬರೇ ಕೋಟಿ….!

ʻಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕುʼ ಕನ್ನಡದ ಪಾಪು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ ಧಾರವಾಡದ ‘ವಿಶ್ವವಾಣಿ’ ಪತ್ರಿಕೆಯ…

3 hours ago

ಆಂದೋಲನ ಸಂಪಾದಕೀಯ | ಸಾರ್ಥಕ ಪಯಣ 54 ; ಬೆನ್ನುತಟ್ಟಿ ನಡೆಸಿದವರು ನೀವು. . .

ನಿಮ್ಮೆಲ್ಲರ ‘ಆಂದೋಲನ’ ದಿನಪತ್ರಿಕೆ ೫೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಹುಟ್ಟಿನಿಂದ ನಡೆದುಬಂದ ಮಾರ್ಗದಲ್ಲೇ, ರೂಢಿಸಿಕೊಂಡ ಸಿದ್ಧಾಂತಗಳ ನೆರಳಲ್ಲೇ ಸಹಸ್ರಾರು ಸವಾಲುಗಳ…

3 hours ago

ಎಸ್‌ಐಆರ್‌ | ಬಿಜೆಪಿಯಿಂದ ಅನಗತ್ಯ ಆರೋಪ ; ಎಂ.ಲಕ್ಷ್ಮಣ್‌ ಕಿಡಿ

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…

18 hours ago

ಆರು ತಿಂಗಳ ಬಳಿಕ ಕೆಆರ್‌ಎಸ್‌ ಡ್ಯಾಂಗೆ 1000 ಕ್ಯೂಸೆಕ್ಸ್‌ ನೀರು ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ…

21 hours ago

ಓದುಗರ ಪತ್ರ: ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ

ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್…

1 day ago

ಶಂಕರ್ ಎಂಬ ನೆಲದ ಹೂ

ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…

1 day ago