ಮೈಸೂರು: ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿ ಬರುವ ವಿವಿಧ ಅಕಾಡೆಮಿ ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕಾತಿ ಮಾಡಿದೆ. ಜತೆಗೆ ಹಳೆ ಸದಸ್ಯರನ್ನು ಕೈ ಬಿಟ್ಟು ಹೊಸಬರನ್ನು ನೇಮಿಸಿದೆ.
ಪರಿಷ್ಕೃತಿ ಪಟ್ಟಿಯಲ್ಲಿ ಮೈಸೂರು ಭಾಗದವರ ವಿವರ ಇಂತಿವೆ. ಕರ್ನಾಟಕ ಲಲಿತಾ ಅಕಾಡೆಮಿಗೆ ಅನೀತಾ ಫಾತೀಮಾ ಬದಲು ಮಡಿಕೇರಿ ರಾಮ ಗೌತಮ್, ಕರ್ನಾಟಕ ನಾಟಕ ಅಕಾಡೆಮಿಗೆ ಪ್ರೇಮ ಬಾದಾಮಿ ಬದಲು ಮೈಸೂರಿನ ಜೀವನ ಕುಮಾರ್, ಕರ್ನಾಟಕ ಜಾನಪದ ಅಕಾಡೆಮಿಗೆ ಚಾಮರಾಜನಗರದ ನರಸಿಂಹ ಮೂರ್ತಿ ಬದಲು ಬಳ್ಳಾರಿ ಶಿವೇಶ್ವರ ಗೌಡ , ಕರ್ನಾಟಕ ಕೊಡವ ಸಮಾಜಕ್ಕೆ ಕೌಸಲ್ಯ ಸತೀಶ ಸೋಮಯಂಡ, ನಾಗೇಶ್ ಕಾಲುರೂ, ಪ್ರಮೀಳಾ ನಾಚಯ್ಯ, ಚಾಮನರ ದಿನೇಶ್ ಬೆಳ್ಳಿಯಪ್ಪ, ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೈಸೂರಿನ ವಸಂತ ಭಾರದ್ವಾಜ್ ಕಬ್ಬಿನಾಲೆ ಅವರನ್ನು ಕೈ ಬಿಟ್ಟು ಡಾ.ರಾಜೀವ ಲೋಚನ ಅವರನ್ನು ಸದಸ್ಯರಾಗಿ ನೇಮಿಸಿದೆ.
ರಂಗ ಸಮಾಜದ ಪೂರ್ತಿ ಬದಲು:
ರಂಗ ಸಮಾಜದ ಈ ಹಿಂದಿನಿ ಸದಸ್ಯರಾದ ಸಿದ್ದರಾಮ ಹಿಪ್ಪರಗಿ, ಹಾಲಸ್ವಾಮಿ, ಮೈಸೂರಿನ ಡಾ.ಹೇಲನ್, ಶ್ರೀಧರ್ ಹೆಗಡೆ, ಶಿವೇಶ್ವರ ಗೌಡ ಅವರನ್ನು ಕೈ ಬಿಟ್ಟು ಬದಲಾಗಿ ಡಾ. ಶಶಿಧರ್ ನರೇಂದ್ರ, ಡಾ.ಶೀನ ನಡೋಳಿ, ರಾಜಣ್ಣ ಜೀವರ್ಗಿ, ದಾಕ್ಷಾಯಿಣಿ ಭಟ್, ಡಾ.ಟಿ.ಆರ್.ಗುರುಪ್ರಸಾದ ಅವರನ್ನು ನೇಮಿಸಲಾಗಿದೆ.
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…
ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…