ಜಿಲ್ಲೆಗಳು

‘ಭಾರತೀಯತೆ’ ಶೀರ್ಷಿಕೆಯಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

ಮೈಸೂರು : ‘ಭಾರತೀಯತೆ’ ಶೀರ್ಷಿಕೆಯಡಿಯಲ್ಲಿ ಡಿ.೮ ರಿಂದ ೧೫ರವೆಗೆ ರಂಗಾಯಣದ ವತಿಯಿಂದ ಹಮ್ಮಿಕೊಂಡಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು ಡಿ.೧೦ರಂದು ಸಂಜೆ ೫.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಡಿ.೮ರಂದು ಜಾನಪದೋತ್ಸವಕ್ಕೆ ಚಾಲನೆ ನೀಡಲಾಗುವುದು.

ಇನ್ನು ಬಾರಿಯ ರಂಗೋತ್ಸವದಲ್ಲಿ ಒಟ್ಟು ೨೦ ನಾಟಕಗಳು ಪ್ರದರ್ಶನವಾಗಲಿದ್ದು, ೧೨ ಕನ್ನಡ, ೧ ತುಳು, ಸಂಸ್ಕೃತ, ಮಲೆಯಾಳಂ, ತೆಲುಗು, ಹಿಂದಿ ಸೇರಿದಂತೆ ೭ನಾಟಕಗಳಲ್ಲಿ ವಿವಿಧ ರಾಜ್ಯ ಕಲಾವಿದರು ಅಭಿನಯಿಸುವರು.

ಬಜೆಟ್ ಕೊರತೆಯಿಂದಾಗಿ ಈ ಬಾರಿ ೭ ದಿನ ಮಾತ್ರ ರಂಗೋತ್ಸವವನ್ನು ಆಯೋಜಿಸಿದ್ದರೂ, ಡಿ.೩ರಂದೇ ಬಹುರೂಪಿ ರಾಷ್ಟ್ರೀಯ ರಂಗೋತ್ಸದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರದಂದು (ಡಿ.೩)ಬಿ.ವಿ.ಕಾರಂತರ ರಂಗ ಚಾವಡಿಯಲ್ಲಿ ಚಿತ್ರಕಲಾ ಶಿಬಿರವನ್ನು ಆರಂಭಿಸುತ್ತಿದ್ದು, ಬೆ.೧೦.೩೦ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಚಾಲನೆ ನೀಡುವರು. ಹಿರಿಯ ಶಿಲ್ಪಿ ಎಲ್.ಶಿವಲಿಂಗಪ್ಪ, ಕಾವಾ ಡೀನ್ ದೇವರಾಜ್ ಇರಲಿದ್ದಾರೆ. ಈ ಶಿಬಿರದಲ್ಲಿ ವಿವಿಧ ಭಾಗಗಳಿಂದ ಸುಮಾರು ೨೦ ಕಲಾವಿದರು ಭಾಗವಹಿಸುವರು.

ಡಿ.೫ರಿಂದ ಪ್ರಚಾರಾಂದೋಲನ : ಇನ್ನು ರಂಗೋತ್ಸವದತ್ತ ಜನರನ್ನು ಸೆಳೆಯು ಉದ್ದೇಶದಿಂದ ಡಿ.೫ರಿಂದ ಗಾರುಡಿ ಗೊಂಬೆಗಳೊಂದಿಗೆ ‘ಮನೆ-ಮನೆಗೆ ರಂಗಾಯಣ- ಮನ ಮನಕೆ ಬಹುರೂಪಿ’ ಪರಿಕಲ್ಪನೆಯಲ್ಲಿ ಪ್ರಚಾರಾಂದೋಲನವನ್ನು ಮೈಸೂರು ನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಅವರ ಮನೆಯಿಂದ ಆರಂಭಿಸಲಾಗುತ್ತದೆ.

ಚಲನಚಿತ್ರೋತ್ಸವ: ರಂಗಾಯಣದ ಆವರಣದಲ್ಲಿರುವ ಡಾ.ಪುನೀತ ರಾಜ್ ಕುಮಾರ್ ಚಿತ್ರಮಂದಿರದಲ್ಲಿ ಡಿ.೯ರಂದು ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಅಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ ಕಶ್ಯಪ್ ಅವರು ಚಾಲನೆ ನೀಡುವರು. ಚಿತ್ರನಟ ದೊಡ್ಡಣ್ಣ ಅವರು ಭಾಗವಹಿಸುವರು. ನಾನಾ ಭಾಷೆಯ ಸುಮಾರು ೨೮ ಚಲನಚಿತ್ರಗಳು ಪ್ರದರ್ಶನವಾಗಲಿವೆ.

ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ರಂಗಾಭಿಮಾನಿಗೆ ಟಿಕೆಟ್ ವಿತರಿಸಲಾಯಿತು.

ರಾಷ್ಟ್ರೀಯ ವಿಚಾರ ಸಂಕಿರಣ: ಡಿ.೧೦ ಮತ್ತು ೧೧ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಸನಾತನ ಧರ್ಮ ಮತ್ತು ಭಾರತೀಯತೆ’ ಹಾಗೂ ‘ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿ’ ಎಂಬ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ವಿಚಾರ ಸಂಕಿರಣದಲ್ಲಿ ಲೇಖಕರಾದ ಡಾ.ಎಸ್.ಆರ್.ಲೀಲಾ, ಎಸ್.ಎನ್.ಸೇತುರಾಮ್, ಚಿಂತಕರಾದ ಡಾ.ಬಿ.ವಿ.ಆರತಿ, ರಮಾನಂದ ಐನಕೈ, ಸಾಹಿತಿ ಬಾಬು ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ ಸು.ರಾಮಣ್ಣ ಭಾಗವಹಿಸಿ ವಿಚಾರ ಮಂಡನೆ ಮಾಡುವರು.

ಡಿ.೧೧ರಂದು‘ವೈವಿಧ್ಯತೆಯಲ್ಲಿ ಭಾರತೀಯತೆ’ ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ಪದವಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪ್ರಥಮ ಬಹುಮಾನವಾಗಿ ೧೫ ಸಾವಿರ ರೂ, ದ್ವಿತೀಯ ಬಹುಮಾನ ೧೦ ಸಾವಿರ ರೂ. ಮತ್ತು ತೃತೀಯ ಬಹುಮಾನ ೫ ಸಾವಿರ ರೂ. ಇರಲಿದೆ.

ಉದ್ಘಾಟನೆ: ಡಿ.೧೦ರಂದು ಸಂಜೆ ೫.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ ಪರೇಶ್ ರಾವಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್, ಮಹಾಪೌರರಾದ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಉಪಸ್ಥಿತರಿರುವರು.

ಈ ಸಂಬಂಧ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಆಯೋಜಿಸಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಭಾರತವೆಂದರೆ ಅದು ಕೇವಲ ನೆಲವೊಂದೇ ಅಲ್ಲ. ನಾವು ಇದನ್ನು ಮಾತೆ ಎಂದು ಪೂಜಿಸುತ್ತೇವೆ. ಹಾಗಾಗಿ, ಅತ್ಯಂತ ಗಂಭೀರವಾಗಿ ಚರ್ಚಿಸಿ ‘ಭಾರತೀಯತೆ’ ಶೀರ್ಷಿಕೆ ಇಡಲಾಗಿದೆ ಎಂದರು.

ಈ ಬಾರಿ ಬಜೆಟ್ ಅನ್ನು ಕಡಿಮೆ ನೀಡಲಾಗಿದ್ದು, ೨೫ ಲಕ್ಷ ರೂ.ನೀಡಲಾಗಿದೆ. ಆದರೂ, ವಿಭಿನ್ನ ಮತ್ತು ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇನ್ನು ಕೆಲವು ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಸೇರ್ಪಡೆ ಮಾಡಬೇಕಿದೆ ಈಗಾಗಲೇ ನಾಟಕದ ಟಿಕೆಟ್ ದೊರೆಲಿದೆ. ಪ್ರತಿ ನಾಟಕಕ್ಕೆ ೧೦೦ ರೂ.ಪ್ರವೇಶ ಶುಲ್ಕವಿರಲಿದೆ ಎಂದರು.

ಇದೇ ಸಮಯದಲ್ಲಿ ರಂಗಾಭಿಮಾನಿಗೆ ಟಿಕೆಟ್ ವಿತರಿಸಲಾಯಿತು. ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪನಿರ್ದೇಶಕರಾದ ನಿರ್ಮಲ ಮಠಪತಿ, ಸಂಚಾಲಕರಾದ ಜಗದೀಶ್ ಬನವಾಸೆ ಇದ್ದರು.

 

 

 

andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

26 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

31 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

41 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago