ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಉಂಟಾಗಿದ್ದು, ಯುದ್ಧ ದಾಳಿಗೆ ತೈಲ ಸಂಗ್ರಹಗಾರಗಳೇ (Oil tanks) ಪ್ರಮುಖ ಟಾರ್ಗೆಟ್ ಆಗಿವೆ. ಯುದ್ಧದ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟ ಸಂಪೂರ್ಣ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು ಬ್ಯಾರೆಲ್ಗೆ 120 ಡಾಲರ್ ಮಟ್ಟ ತಲುಪಿದೆ. ಇದು 2022ರ ರಷ್ಯಾ-ಉಕ್ರೇನ್ ಯುದ್ಧದ ನಂತರದ ಅತಿದೊಡ್ಡ ಏರಿಕೆಯಾಗಿದೆ.
ಇರಾನ್ನಲ್ಲಿ ಸುಪ್ರೀಂ ಲೀಡರ್ ಅಲಿ ಖಾಮೆನೆಯಿ ಸಾವಿನ ನಂತರ ಮೊಜ್ತಬಾ ಖಾಮೆನೆಯಿ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಇದರ ಜೊತೆಗೆ ಇಸ್ರೇಲ್-ಅಮೆರಿಕಾ ದಾಳಿಗಳು ತೈಲ ಡಿಪೋಗಳು, ಟ್ಯಾಂಕರ್ಗಳು ಮತ್ತು ಸಾಗಾಟ ಮಾರ್ಗಗಳ ಮೇಲೆ ಪರಿಣಾಮ ಬೀರಿವೆ. ಜಾಗತಿಕ ತೈಲ ಸಾಗಾಟದ 20-30% ಹಾದುಹೋಗುವ ಹೊರ್ಮುಜ್ ಜಲಸಂಧಿ ಸಂಪೂರ್ಣ ಅಡಚಣೆಗೊಳಗಾಗಿದೆ. ಇರಾಕ್, ಕುವೈತ್ ಸೇರಿದಂತೆ ಮಧ್ಯಪ್ರಾಚ್ಯ ಉತ್ಪಾದಕರು ಉತ್ಪಾದನೆ ಕಡಿತಗೊಳಿಸಿದ್ದಾರೆ. ಇದರಿಂದ ಜಾಗತಿಕ ಶೇರು ಮಾರುಕಟ್ಟೆಗಳು ಸಹ ಕುಸಿದಿವೆ. ಜಾಗತಿಕ ತೈಲ ಸಾಗಾಟದ 20–30% ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಇರಾನ್ ದಾಳಿಗಳ ನಂತರ ಟ್ಯಾಂಕರ್ಗಳ ಮೇಲೆ ಡ್ರೋನ್ ಹಲ್ಲೆಗಳು ನಡೆದಿವೆ. ಇರಾಕ್ 15 ಲಕ್ಷ ಬ್ಯಾರೆಲ್ ಉತ್ಪಾದನೆ ಕಡಿತಗೊಳಿಸಿದೆ. ಇದರಿಂದ ಜಿ-7 ದೇಶಗಳು ತುರ್ತು ದಾಸ್ತಾನು ಬಿಡುಗಡೆ ಮಾಡುವ ಸಾಧ್ಯತೆಯನ್ನು ಪರಿಗಣಿಸುತ್ತಿವೆ
“ಸಂಘರ್ಷ ತ್ವರಿತವಾಗಿ ಕೊನೆಗೊಂಡರೆ ಬೆಲೆಗಳು ಕುಸಿಯುತ್ತವೆ. ಆದರೆ ಉದ್ದಕ್ಕೆ ಎಳೆದರೆ 150 ಡಾಲರ್ ತಲುಪುವ ಸಾಧ್ಯತೆ ಇದೆ” ಎಂದು ತೈಲ ವಿಶ್ಲೇಷಕರು ಹೇಳಿದ್ದಾರೆ.
ಕಚ್ಛಾ ತೈಲ ಬೆಲೆ ದುಬಾರಿಯಾದರೆ ಭಾರತದ ಮೇಲೇನು ಪರಿಣಾಮ?
ಆರ್ಥಿಕತೆಗೆ ಹಿನ್ನಡೆ : ತಜ್ಞರ ಪ್ರಕಾರ ಬ್ಯಾರಲ್ಗೆ 10 ಡಾಲರ್ನಷ್ಟು ಬೆಲೆ ಏರಿಕೆಯಾದರೆ, ಭಾರತದ ಜಿಡಿಪಿ ಬೆಳವಣಿಗೆ 50 ಮೂಲಾಂಕಗಳಷ್ಟು (ಶೇ. 0.5) ಹಿನ್ನಡೆ ಹೊಂದುತ್ತದೆ.
ಹಣದುಬ್ಬರ ಏರಿಕೆ : ಕಚ್ಚಾ ತೈಲ ಬೆಲೆ ಏರಿಕೆಯಾದರೆ ಪೆಟ್ರೋಲ್, ಡೀಸಲ್, ಎಲ್ಪಿಜಿ, ಎಲ್ಎನ್ಜಿ, ಪಿಎನ್ಜಿ ಇತ್ಯಾದಿ ಬೆಲೆಗಳೆಲ್ಲವೂ ಏರುತ್ತವೆ. ಇದರಿಂದಾಗಿ ಇತರ ಹಲವು ಸರಕುಗಳ ಬೆಲೆ ಏರುತ್ತದೆ. ಪರಿಣಾಮವಾಗಿ, ಹಣದುಬ್ಬರ ಹೆಚ್ಚುತ್ತದೆ.
ಕರೆಂಟ್ ಅಕೌಂಟ್ ಡೆಫಿಸಿಟ್ ಏರಿಕೆ : ದುಬಾರಿ ಬೆಲೆಗೆ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತ ಹೆಚ್ಚು ಡಾಲರ್ಗಳನ್ನು ವ್ಯಯಿಸಬೇಕು. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್ ಉಂಟಾಗುತ್ತದೆ. ಡಾಲರ್ ಎದುರು ರುಪಾಯಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದರಿಂದ ಆಮದು ವೆಚ್ಚ ಮತ್ತಷ್ಟು ಹೆಚ್ಚುತ್ತದೆ. ಇದು ಹಣದುಬ್ಬರ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ.
ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಸ್ಥಿರ!
ಭಾರತ ತನ್ನ 80% ತೈಲ ಅಗತ್ಯತೆಯನ್ನು ಆಮದು ಮಾಡುತ್ತದೆ. ಆದರೂ “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವುದಿಲ್ಲ”. ದೇಶದಲ್ಲಿ ಸುಮಾರು 25 ದಿನಗಳ ತೈಲ ದಾಸ್ತಾನು ಇದೆ. ಹೊರ್ಮುಜ್ ಅವಲಂಬನೆ ಕಡಿಮೆ ಮಾಡಿ ಬೇರೆ ಮೂಲಗಳಿಂದ (ರಷ್ಯಾ, ಸೌದಿ, ಅಮೆರಿಕಾ) ಆಮದು ಹೆಚ್ಚಿಸಲಾಗುತ್ತಿದೆ. ಹಣದುಬ್ಬರದ ಮೇಲೆ ದೊಡ್ಡ ಪರಿಣಾಮ ಬೀಳುವುದಿಲ್ಲ ಎಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಸಂಘರ್ಷ ದೀರ್ಘಕಾಲ ಮುಂದುವರಿದರೆ ಸಾರಿಗೆ, ಅಡುಗೆ ಎಣ್ಣೆ ಹಾಗೂ ಇತರ ಸರಕುಗಳ ಬೆಲೆ ಏರಬಹುದು.
ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…
ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…
ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…
ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…
ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…
ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…