ಅಂಕಣಗಳು

ಸುನಂದಾ ಅವರ ಪುಟ್ಟ ಹೋಟೆಲ್

ಭೂಮಿಕಾ

ಕೆಲಬಾರಿ ಅನಿರೀಕ್ಷಿತ ತಿರುವುಗಳು ನಮ್ಮ ಬದುಕಿನ ಗತಿಯನ್ನೇ ಬದಲಿಸಿ ಬಿಡುತ್ತವೆ. ಏನೋ ಮಾಡಬೇಕು ಎಂದುಕೊಂಡವರು ಇನ್ನೇನೋ ಮಾಡುತ್ತಾ ಜೀವನ ಕಟ್ಟಿಕೊಂಡಿರುತ್ತಾರೆ. ಅಂತಹವರಲ್ಲಿ ಒಬ್ಬರು ೬೬ ವರ್ಷ ಪ್ರಾಯದ ಸುನಂದಾ.

ಮೈಸೂರಿನ ವಿ.ವಿ.ಪುರಂ ಪಕ್ಕದಲ್ಲಿ ಸಣ್ಣದೊಂದು ಉಪಾಹಾರ ಮಂದಿರವನ್ನು ನಡೆಸುತ್ತಿದ್ದಾರೆ ಸುನಂದಾ. ಇವರು ಕಳೆದ ೨೩ ವರ್ಷ ಗಳಿಂದಲೂ ಪುಟ್ಟ ಹೋಟೆಲ್ ನಡೆಸುತ್ತಿದ್ದು, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳು ಗೃಹಿಣಿಯಾಗಿದ್ದ ಇವರನ್ನು ಹೋಟೆಲ್ ವ್ಯಾಪಾರಕ್ಕೆ ಕಾಲಿಡುವಂತೆ ಮಾಡಿತು.

ಸುನಂದಾರವರ ಪತಿ ಉಪಾಹಾರ ಮಂದಿರವನ್ನು ನಡೆಸುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ನಿಧನರಾದಾಗ, ಬದುಕಿನ ಬಂಡಿ ಹೊರಬೇಕಾದ ಜವಾಬ್ದಾರಿ ಸುನಂದಾರ ಬೆನ್ನಿಗೆ ಬಿತ್ತು. ಮನೆಯ ಜವಾಬ್ದಾರಿಯ ಜತೆ ಜತೆಗೆ ಮಗನ ಓದು, ಹಣಕಾಸು ತೊಂದರೆಗಳೆಲ್ಲವನ್ನೂ ನಿಭಾಯಿಸುವುದೇ ಇವರಿಗೆ ದೊಡ್ಡ ಸವಾಲಾಗಿ ಹೋಯಿತು. ಮುಂದೇನು ಮಾಡಬೇಕು ಎಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಅವರ ಮುಂದಿದ್ದ ದಾರಿಯೇ ಪತಿ ನಡೆಸುತ್ತಿದ್ದ ಉಪಾಹಾರ ಮಂದಿರವನ್ನು ಮುನ್ನಡೆಸಿಕೊಂಡು ಹೋಗುವುದು.ಕುಟುಂಬದ ಜವಾಬ್ದಾರಿ ಹಾಗೂ ಸ್ನೇಹಿತರ ಒತ್ತಾಸೆಯಂತೆ ಈ ಉಪಾಹಾರ ಮಂದಿರವನ್ನು ಮುನ್ನಡೆಸಲು ಸುನಂದಾ ಮುಂದಾದರು.

ಮೊದಲಿನಿಂದಲೂ ಸುನಂದಾರ ಈ ಸಣ್ಣ ಹೋಟೆಲ್‌ನಲ್ಲಿ ಟೀ, ಕಾಫಿ, ಇಡ್ಲಿ, ವಡೆ, ರೈಸ್ ಬಾತ್, ಬಜ್ಜಿ, ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಮನೆಯ ಊಟದಂತಿರುವ ಇವರ ಹೋಟೆಲ್ ಗಳಿಗೆ ಅವರದ್ದೇ ಆದ ಗ್ರಾಹಕರೂ ಇದ್ದಾರೆ. ಹೇಗೋ ಈ ಸಣ್ಣ ಹೋಟೆಲ್ ಸುನಂದಾ ಅವರಿಗೆ ಬದುಕು ನೀಡಿದ್ದು, ನೆಮ್ಮದಿಯಿಂದ ಜೀವನ ಸಾಗುತ್ತಿದ್ದಾರೆ.

ಬೆಳಿಗ್ಗೆ ಐದೂವರೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಈ ಉಪಾಹಾರ ಮಂದಿರ ತೆರೆದಿ ರುತ್ತದೆ. ಸುನಂದಾ ಅವರ ಸಹಾಯಕ್ಕೆ ಮಗನೂ ಆಸರೆಯಾಗಿದ್ದಾರೆ. ‘ಬದುಕು ಸಾಗಿಸಬೇಕೆಂಬ ಒಂದೇ ಕನಸಿನಿಂದ ಹೋಟೆಲ್ ಕೆಲಸಕ್ಕೆ ಬಂದೆ. ಈಗಲೂ ಇದನ್ನೇ ನಂಬಿದ್ದೇನೆ. ನೆಮ್ಮದಿಯಿಂದ ಜೀವನ ಸಾಗ್ತಿದೆ’ ಎನ್ನುತ್ತಾರೆ ಸುನಂದಾ.

ಸುನಂದಾ ಅವರೇನು ಈ ಹೋಟೆಲ್ ಆರಂಭಿಸಿ ಲಾಭಗಳಿಸಿಲ್ಲ. ಜೀವನದ ಬಂಡಿ ಓಡಬೇಕು, ತಮ್ಮ ಕುಟುಂಬಕ್ಕೊಂದು ಆಸರೆಯಾಗಬೇಕು ಎಂದು ಆರಂಭಿಸಿದ ಕಾಯಕ. ಇದು ಲಾಭಕ್ಕಿಂತ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂಬ ಸುನಂದಾ ಅವರ ಕಾಯಕ ತತ್ವದೊಳಗೆ ಜೀವನ ಸೂತ್ರವಿದೆ.

ಆಂದೋಲನ ಡೆಸ್ಕ್

Recent Posts

ಭಾರತದಲ್ಲಿ ಟೆಲಿಗ್ರಾಂ ನಿಷೇಧ ತೆರವು

ನವದೆಹಲಿ: ನೀಟ್‌ ಮರು ಪರೀಕ್ಷೆ ಅಂಗವಾಗಿ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಸದ್ಯ ಪ್ಲೇ ಸ್ಟೋರ್‌ ಹಾಗೂ…

16 mins ago

ಓದುಗರ ಪತ್ರ: ಫಿಜಿಯೋ ಥೆರಪಿ ಸೌಲಭ್ಯ ಕಲ್ಪಿಸಿ

ಹೆಗ್ಗಡದೇವನಕೋಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ಸೌಲಭ್ಯವಿಲ್ಲದೇ ತಾಲ್ಲೂಕಿನ ಗ್ರಾಮಸ್ಥರು ಫಿಜಿಯೋ ಥೆರಪಿಗಾಗಿ ಖಾಸಗಿ ಆಸ್ಪತ್ರೆಗೆ ತೆರಳುವುದು ಅನಿವಾರ್ಯವಾಗಿದೆ. ಹಣವಿದ್ದವರು ಖಾಸಗಿ…

3 hours ago

ಓದುಗರ ಪತ್ರ: ಮರಗಳ ಗಣತಿ ಸ್ವಾಗತಾರ್ಹ

ಮೈಸೂರಿನಲ್ಲಿ ಭೇರುಂಡ ಫೌಂಡೇಷನ್ ಮುಖ್ಯಸ್ಥರಾದ ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಅವರ ನೇತೃತ್ವದಲ್ಲಿ ‘ನಮ್ಮ ಮರಗಳ ಗಣತಿ’ ಯ ಹೆಸರಿನಲ್ಲಿ…

3 hours ago

ಓದುಗರ ಪತ್ರ: ವಿದ್ಯುತ್ ವಿತರಣೆ ಖಾಸಗೀಕರಣ ಸಲ್ಲದು

ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಿಗೆಗಾಗಿ ಟಾಟಾ ಪವರ್ ಕಂಪೆನಿ ಅರ್ಜಿ ಸಲ್ಲಿಸಿದ್ದು, ಇದರ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಪ್ರತಿಭಟನೆ…

3 hours ago

ದಂಡ ರಿಯಾಯಿತಿ: ನಿಯಮ ಉಲ್ಲಂಘನೆಗೆ ಸ್ಛೂರ್ತಿ?

‘ಸಂಚಾರ ನಿಯಂತ್ರಣ ಪೊಲೀಸರ ಆದ್ಯ ಕರ್ತವ್ಯ ಆಗಲಿ’  ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ…

6 hours ago

ಮಳೆ ಕ್ಷೀಣ; ಕುಸಿದ ಹಾರಂಗಿ ಒಳಹರಿವು

ಕೆ.ಬಿ.ಶಂಶುದ್ಧೀನ್ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಮಳೆ; ರೈತರಲ್ಲಿ ಹೆಚ್ಚಿದ ಆತಂಕ ಕುಶಾಲನಗರ: ಮುಂಗಾರು ಮಳೆ ಕೊರತೆಯಿಂದ ಕೊಡಗು ಜಿಲ್ಲೆಯ ಹಾರಂಗಿ…

6 hours ago