ಅಂಕಣಗಳು

ಸುನಂದಾ ಅವರ ಪುಟ್ಟ ಹೋಟೆಲ್

ಭೂಮಿಕಾ

ಕೆಲಬಾರಿ ಅನಿರೀಕ್ಷಿತ ತಿರುವುಗಳು ನಮ್ಮ ಬದುಕಿನ ಗತಿಯನ್ನೇ ಬದಲಿಸಿ ಬಿಡುತ್ತವೆ. ಏನೋ ಮಾಡಬೇಕು ಎಂದುಕೊಂಡವರು ಇನ್ನೇನೋ ಮಾಡುತ್ತಾ ಜೀವನ ಕಟ್ಟಿಕೊಂಡಿರುತ್ತಾರೆ. ಅಂತಹವರಲ್ಲಿ ಒಬ್ಬರು ೬೬ ವರ್ಷ ಪ್ರಾಯದ ಸುನಂದಾ.

ಮೈಸೂರಿನ ವಿ.ವಿ.ಪುರಂ ಪಕ್ಕದಲ್ಲಿ ಸಣ್ಣದೊಂದು ಉಪಾಹಾರ ಮಂದಿರವನ್ನು ನಡೆಸುತ್ತಿದ್ದಾರೆ ಸುನಂದಾ. ಇವರು ಕಳೆದ ೨೩ ವರ್ಷ ಗಳಿಂದಲೂ ಪುಟ್ಟ ಹೋಟೆಲ್ ನಡೆಸುತ್ತಿದ್ದು, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳು ಗೃಹಿಣಿಯಾಗಿದ್ದ ಇವರನ್ನು ಹೋಟೆಲ್ ವ್ಯಾಪಾರಕ್ಕೆ ಕಾಲಿಡುವಂತೆ ಮಾಡಿತು.

ಸುನಂದಾರವರ ಪತಿ ಉಪಾಹಾರ ಮಂದಿರವನ್ನು ನಡೆಸುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ನಿಧನರಾದಾಗ, ಬದುಕಿನ ಬಂಡಿ ಹೊರಬೇಕಾದ ಜವಾಬ್ದಾರಿ ಸುನಂದಾರ ಬೆನ್ನಿಗೆ ಬಿತ್ತು. ಮನೆಯ ಜವಾಬ್ದಾರಿಯ ಜತೆ ಜತೆಗೆ ಮಗನ ಓದು, ಹಣಕಾಸು ತೊಂದರೆಗಳೆಲ್ಲವನ್ನೂ ನಿಭಾಯಿಸುವುದೇ ಇವರಿಗೆ ದೊಡ್ಡ ಸವಾಲಾಗಿ ಹೋಯಿತು. ಮುಂದೇನು ಮಾಡಬೇಕು ಎಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಅವರ ಮುಂದಿದ್ದ ದಾರಿಯೇ ಪತಿ ನಡೆಸುತ್ತಿದ್ದ ಉಪಾಹಾರ ಮಂದಿರವನ್ನು ಮುನ್ನಡೆಸಿಕೊಂಡು ಹೋಗುವುದು.ಕುಟುಂಬದ ಜವಾಬ್ದಾರಿ ಹಾಗೂ ಸ್ನೇಹಿತರ ಒತ್ತಾಸೆಯಂತೆ ಈ ಉಪಾಹಾರ ಮಂದಿರವನ್ನು ಮುನ್ನಡೆಸಲು ಸುನಂದಾ ಮುಂದಾದರು.

ಮೊದಲಿನಿಂದಲೂ ಸುನಂದಾರ ಈ ಸಣ್ಣ ಹೋಟೆಲ್‌ನಲ್ಲಿ ಟೀ, ಕಾಫಿ, ಇಡ್ಲಿ, ವಡೆ, ರೈಸ್ ಬಾತ್, ಬಜ್ಜಿ, ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಮನೆಯ ಊಟದಂತಿರುವ ಇವರ ಹೋಟೆಲ್ ಗಳಿಗೆ ಅವರದ್ದೇ ಆದ ಗ್ರಾಹಕರೂ ಇದ್ದಾರೆ. ಹೇಗೋ ಈ ಸಣ್ಣ ಹೋಟೆಲ್ ಸುನಂದಾ ಅವರಿಗೆ ಬದುಕು ನೀಡಿದ್ದು, ನೆಮ್ಮದಿಯಿಂದ ಜೀವನ ಸಾಗುತ್ತಿದ್ದಾರೆ.

ಬೆಳಿಗ್ಗೆ ಐದೂವರೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಈ ಉಪಾಹಾರ ಮಂದಿರ ತೆರೆದಿ ರುತ್ತದೆ. ಸುನಂದಾ ಅವರ ಸಹಾಯಕ್ಕೆ ಮಗನೂ ಆಸರೆಯಾಗಿದ್ದಾರೆ. ‘ಬದುಕು ಸಾಗಿಸಬೇಕೆಂಬ ಒಂದೇ ಕನಸಿನಿಂದ ಹೋಟೆಲ್ ಕೆಲಸಕ್ಕೆ ಬಂದೆ. ಈಗಲೂ ಇದನ್ನೇ ನಂಬಿದ್ದೇನೆ. ನೆಮ್ಮದಿಯಿಂದ ಜೀವನ ಸಾಗ್ತಿದೆ’ ಎನ್ನುತ್ತಾರೆ ಸುನಂದಾ.

ಸುನಂದಾ ಅವರೇನು ಈ ಹೋಟೆಲ್ ಆರಂಭಿಸಿ ಲಾಭಗಳಿಸಿಲ್ಲ. ಜೀವನದ ಬಂಡಿ ಓಡಬೇಕು, ತಮ್ಮ ಕುಟುಂಬಕ್ಕೊಂದು ಆಸರೆಯಾಗಬೇಕು ಎಂದು ಆರಂಭಿಸಿದ ಕಾಯಕ. ಇದು ಲಾಭಕ್ಕಿಂತ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂಬ ಸುನಂದಾ ಅವರ ಕಾಯಕ ತತ್ವದೊಳಗೆ ಜೀವನ ಸೂತ್ರವಿದೆ.

ಆಂದೋಲನ ಡೆಸ್ಕ್

Recent Posts

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

20 mins ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

3 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

3 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

3 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

3 hours ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

3 hours ago