ಪರೋಪಕಾರಿ ಮನಸ್ಸನ್ನು ಹೊಂದಿದ್ದ ಶೀಲಾ ಇರಾನಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿದು ಉಳಿದಿದ್ದಾರೆ. ಶಿಕ್ಷಣ ತಜ್ಞೆ, ಸಂಸದೀಯ ಪಟುವಾಗಿದ್ದ ಶೀಲಾ ಇರಾನಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ಕಳೆದ ಭಾನುವಾರ ನಡೆಸಲಾಯಿತು.
ಹೊಸದಿಲ್ಲಿಯ ಶಿಕ್ಷಕಿ ವೃತ್ತಿಯ ಜತೆಗೆ ಜೀವನ ಪ್ರಾರಂಭಿಸಿದ ಅವರು, ಸೇಂಟ್ ಜಾನ್ಸ್ ಆಂಬುಲೆನ್ಸ್ ಕಾರ್ಪ್ಸ್ನಲ್ಲಿ ಸ್ವಯಂಸೇವಕರಾಗಿದ್ದರು. ಅವರ ಸೇವೆಗಾಗಿ ವೈಸ್ರಾಯ್ ಪ್ರಮಾಣಪತ್ರವನ್ನೂ ಪಡೆದಿದ್ದರು ಎಂಬುದು ಗಮನಾರ್ಹವಾದದ್ದಾಗಿದೆ.
ಮೈಸೂರು- ರೋಟರಿ ಶಾಲೆ ಆರಂಭ
೧೯೫೧ರಲ್ಲಿ ಮೈಸೂರಿಗೆ ಬಂದ ಅವರು ೧೯೬೮ರಲ್ಲಿ ಐಡಿಯಲ್ ಜಾವಾ ರೋಟರಿ ಶಾಲೆಯನ್ನು ಸ್ಥಾಪಿಸಿದ್ದರು. ಇದು ನಗರದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಬೆಳೆಯಿತು.
ಮೈಸೂರಿನಲ್ಲಿ ಚಾಮುಂಡಿ ಮಕ್ಕಳ ಮನೆಯನ್ನು ನಿರ್ಮಿಸಿದ್ದರು. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಅವರು ೨೦೦೩ರ ಏಪ್ರಿಲ್ ೧೦ರಂದು ನಿಧನರಾದರು.
ರಾಜಕೀಯ
ಕರ್ನಾಟಕ ವಿಧಾನಸಭೆಗೆ ನಾಮನಿರ್ದೇಶನಗೊಳ್ಳುವ ಮೂಲಕ ೧೯೬೮ರಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ೧೯೯೩ ಮತ್ತು ೧೯೯೫ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.
೧೯೯೫ರಲ್ಲಿ ಆಂಗ್ಲೋ?ಇಂಡಿಯನ್ ಕೋಟಾದಲ್ಲಿ ಲೋಕಸಭೆಗೆ ನಾಮನಿರ್ದೇಶನಗೊಂಡರು. ಆಂಗ್ಲೋ-ಇಂಡಿಯನ್ ಅಸೋಸಿೆುೀಂಶನ್ನ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಸಾಮಾಜಿಕ ಸೇವೆ
ಶೀಲಾ ಅವರು ಮಾನವೀಯತೆಗೆ ಮಿಡಿಯುವಂತವರಾಗಿದ್ದು, ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುದ್ದರು. ಮೈಸೂರಿನಲ್ಲಿ ಕುಷ್ಠ ರೋಗಿಗಳಿಗೆ ಚಿಕಿತ್ಸೆ, ಅನಾಥಾಶ್ರಮದ ಉಪಾಧ್ಯಕ್ಷರಾಗಿ, ಹಲವಾರು ಆಸ್ಪತ್ರೆಗಳ ಟ್ರಸ್ಟಿಯಾಗಿ ಕೆಲಸ ಮಾಡಿದ್ದರು. ಪಿ.ಕೆ. ಸ್ಯಾನಿಟೋರಿಯಂನ ಮಂಡಳಿಯಲ್ಲಿದ್ದರು.
ಫರೋಖ್ ಜತೆ ವಿವಾಹ
ಉದ್ಯಮಿ ಫರೋಖ್ ಕೆ. ಇರಾನಿ (ಎಫ್.ಕೆ. ಇರಾನಿ) ಅವರನ್ನು ಶೀಲಾ ವಿವಾಹವಾದರು. ಫರೋಖ್ ಅವರು ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಸ್ಥಾಪಿಸಿದರು. ಇದು ಜಾವಾ ಮೋಟಾರ್ ಸೈಕಲ್ಗಳು ಮತ್ತು ಪ್ರಸಿದ್ಧ ಯಜ್ಡಿ ರೋಡ್ ಕಿಂಗ್ ಬೈಕ್ಗಳನ್ನು ಮಾರಾಟ ಮಾಡುವ ಕಂಪನಿಯಾಗಿತ್ತು. ಈ ದಂಪತಿಗೆ ಪುತ್ರರಾದ ರೈಯಾನ್ ಇರಾನಿ, ಕೈರಸ್ ಎಫ್.ಇರಾನಿ ಮತ್ತು ಪುತ್ರಿ ಮೊರ್ವಾರಿಡ್ ಫೆರ್ನಾಂಡಿಸ್ ಇದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲೆಂಡ್…
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ವರ್ಷವಿಡೀ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೂ ಪ್ರತಿ ವರ್ಷವೂ…
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…
ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…
ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್…
ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…