Andolana originals

ಮರಿಗಳೊಂದಿಗೆ ಹುಲಿ ಕಂಡು ಪುಳಕಿತರಾದ ಪ್ರವಾಸಿಗರು

ಮಹೇಂದ್ರ ಹಸಗೂಲಿ

ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ 

ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಏಕಕಾಲದಲ್ಲಿ ಕಿರುಬನ ಕೊಳಚಿ ಕೆರೆಯಲ್ಲಿ ಒಂದು ದೊಡ್ಡಹುಲಿ ಮತ್ತು ಐದು ಮರಿಗಳನ್ನು ಕಂಡು ಪುಳಕಿತರಾದರು.

ಕಳೆದ ವರ್ಷ ತಾಯಿ ಹುಲಿ ಕಣ್ಮರೆಯಾದ ನಂತರ ಹೊರಗೆ ಕಾಣಿಸದೆ ಕಾಡಿನೊಳಗೇ ಇದ್ದ ಮೂರು ಮರಿಗಳೂ ಇದೇ ಮೊದಲ ಬಾರಿಗೆ ಹೊರಗೆಕಾಣಿಸಿಕೊಂಡಿರುವುದು ವಿಶೇಷ. ಕಳೆದ ನವೆಂಬರ್‌ನಲ್ಲಿ ಸಫಾರಿ ಬಂದ್ ಆಗಿದ್ದರಿಂದ ಯಾವುದೇ ವಾಹನಗಳ ಓಡಾಟವಿಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ವನ್ಯಜೀವಿಗಳು ಸಫಾರಿ ಆರಂಭವಾದ ನಂತರ ಪ್ರವಾಸಿಗರಿಗೆ ಕಾಣಿಸತೊಡಗಿವೆ.

ಸೋಮವಾರ ಬೆಳಿಗ್ಗೆ ಸಫಾರಿ ಸಂದರ್ಭದಲ್ಲಿ ಕಿರುಬನ ಕೊಳಚಿ ಕೆರೆ ಸಮೀಪ ಕೇತಳ್ಳಿ ಕೆರೆ ಬಳಿ ತಾಯಿ ಹುಲಿ ತನ್ನ ಎರಡು ಮರಿಗಳ ಜತೆ ಮಲಗಿರುವುದು ಹಾಗೂ ಅದೇ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಮೂರ್ಕೆರೆ ತಾಯಿ ಹುಲಿಯ ಮೂರು ಮರಿಗಳು ಕಾಡಿನತ್ತ ಓಡಿಹೋದ ವಿಡಿಯೋ ವೈರಲ್ ಆಗುತ್ತಿದೆ.

ಅರಣ್ಯ ಇಲಾಖೆಯ ಪಾಲನೆ: ಕಳೆದ ವರ್ಷ ತನ್ನ ಮೂರು ಮರಿಗಳ ಜತೆಗೆ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ನೀಡುತ್ತಿದ್ದ ಮೂರ್ಕೆರೆ ಫೀಮೇಲ್ ಹೆಸರಿನ ಹೆಣ್ಣುಹುಲಿ ಅಕ್ಟೋಬರ್ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಎಡ ಕಾಲಿಗೆ ಆದ ಗಾಯದಿಂದ ಕುಂಟುತ್ತಿದ್ದ ತಾಯಿ ತನ್ನ ೧೦ ತಿಂಗಳ ಮರಿಗಳನ್ನು ತೊರೆದುಹೋಗಿತ್ತು. ಅರಣ್ಯ ಇಲಾಖೆ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಅದು ಬದುಕಿದೆಯೋ ಸತ್ತಿದೆಯೇ ಎಂಬುದೇ ತಿಳಿಯದಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಿಗಳ ರಕ್ಷಣೆ ಹಾಗೂ ಪಾಲನೆಗೆ ಮುಂದಾಗಿತ್ತು.

ಬೇಟೆಯಾಡುವ ಕೌಶಲ ಕಲಿಯದೆ ತಮ್ಮ ಆಹಾರವನ್ನು ಸಂಪಾದಿಸಲು ಸಾಧ್ಯವಾಗದೆ ಅನಾಥವಾಗಿದ್ದ ಮರಿಗಳಿಗೆ ಆಹಾರ ನೀಡುವ ವ್ಯವಸ್ಥೆಯನ್ನೂ ಇಲಾಖೆ ಮಾಡಿತ್ತು. ಜತೆಗೆ ಕಾಡಿನಲ್ಲಿರುವ ಇತರ ಹುಲಿ, ಚಿರತೆಗಳಿಂದ ಅಪಾಯವಾಗದಂತೆ ಥರ್ಮಲ್ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲಿರಿಸಿ ಸಂರಕ್ಷಿಸಿತ್ತು. ನಿಧಾನಕ್ಕೆ ಬೆಳೆಯುತ್ತಾ ಬಂದ ಮರಿಗಳಿಗೆ ಸದ್ಯ ಒಂದೂವರೆ ವರ್ಷ ವಯಸ್ಸಾಗಿದ್ದು ಇವು ಪ್ರಸ್ತುತ ಬೇಟೆಯಾಡುವ ಸಾಮರ್ಥ್ಯ ಬೆಳೆಸಿಕೊಂಡಿವೆ. ಜಿಂಕೆಗಳನ್ನು ಬೇಟೆಯಾಡಿ ತಿನ್ನುತ್ತಿವೆ.

” ಇದೇ ಮೊದಲ ಬಾರಿಗೆ ಮೂರ್ಕೆರೆ ಫೀಮೇಲ್‌ನ ಮೂರು ಮರಿಗಳು ಹಾಗೂಕೇತಹಳ್ಳಿ ಕೆರೆ ಫೀಮೇಲ್ ಮರಿಗಳು ಒಟ್ಟಾಗಿ ಕಿರುಬನ ಕೊಳಚಿಯಲ್ಲಿ ಕಾಣಿಸಿಕೊಂಡಿವೆ. ತಾಯಿಯಿಲ್ಲದೆ ಅನಾಥವಾಗಿದ್ದ ಮೂರು ಮರಿಗಳು ತಮ್ಮ ಬೇಟೆಯನ್ನು ಸಂಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿವೆ.”

ಎನ್.ಸಿ.ಮಹದೇವ, ಆರ್‌ಎಫ್‌ಒ, ಬಂಡೀಪುರ ವಲಯ

 

 

ಆಂದೋಲನ ಡೆಸ್ಕ್

Recent Posts

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

18 mins ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

3 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

3 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

3 hours ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

4 hours ago