ಅಂಕಣಗಳು

ಆನೆಗಳ ಸಂರಕ್ಷಣೆ ಎಲ್ಲರ ನೈತಿಕ ಹೊಣೆಗಾರಿಕೆ

ಸಹಜ ಸೌಂದರ್ಯದ ಸಂಕೇತವಾಗಿರುವ ಆನೆ, ನಮ್ಮ ಕಾಡುಗಳ ಗರಿಮೆ ಮತ್ತು ಪರಿಸರದ ಸಮತೋಲನದ ಪ್ರಮುಖ ಕೊಂಡಿಯಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಆನೆಯ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದ್ದು, ಇದು ಮಾನವ ಜೀವಕ್ಕೂ, ಆನೆಗಳ ಬದುಕಿಗೂ ಅಪಾಯಕಾರಿಯಾಗಿದೆ. ಮನುಷ್ಯನ ಅತಿಯಾದ ಅರಣ್ಯ ನಾಶ, ಕೃಷಿಭೂಮಿಗಳ ವಿಸ್ತರಣೆ, ರಸ್ತೆ-ರೈಲು ಮಾರ್ಗಗಳ ನಿರ್ಮಾಣ, ಗಣಿಗಾರಿಕೆ, ಹಳ್ಳಿಗಳ ವಿಸ್ತರಣೆ ಇತ್ಯಾದಿ ಕಾರಣಗಳಿಂದ ಆನೆಗಳ ವಾಸಸ್ಥಳದ ಪ್ರದೇಶ ವ್ಯಾಪ್ತಿ ಕಡಿಮೆಯಾಗುತ್ತಿದೆ. ತಮ್ಮ ಸಂಪ್ರದಾಯಬದ್ಧ ದಾರಿಗಳನ್ನು ಕಳೆದುಕೊಂಡ ಆನೆಗಳು, ಆಹಾರ ಮತ್ತು ನೀರಿಗಾಗಿ ಗ್ರಾಮಾಂತರ ಪ್ರದೇಶಗಳಿಗೆ ಅನಿವಾರ್ಯವಾಗಿ ಬಂದು ಬೆಳೆಗಳನ್ನು ಹಾನಿಗೊಳಿಸುತ್ತವೆ. ಈ ವೇಳೆ ಮಾನವ-ಆನೆ ಸಂಘರ್ಷ ತೀವ್ರವಾಗಿ ಉಂಟಾಗುವ ಸಾಧ್ಯತೆ ಹೇರಳವಾಗಿರುತ್ತದೆ.

ಆನೆಗಳ ಅಜ್ಞಾತ ಸ್ವಭಾವ ಕೂಡ ಈ ಸಂಘರ್ಷವನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಸಾಮಾನ್ಯವಾಗಿ ಆನೆಗಳು ಶಾಂತ ಸ್ವಭಾವದ ಪ್ರಾಣಿಗಳು, ಆದರೆ ತೀವ್ರ ಹಸಿವು, ಮರಿಗಳನ್ನು ರಕ್ಷಿಸುವ ಪರಿಸ್ಥಿತಿ ಅಥವಾ ದೀರ್ಘ ಪ್ರಯಾಣದ ದಣಿವು… ಇಂತಹ ಸಂದರ್ಭಗಳಲ್ಲಿ ಅವು ಆಕ್ರಮಣಕಾರಿ ಸ್ವಭಾವ ತೋರಬಹುದು. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಶಬ್ದ ಅಥವಾ ಬೆಳಕಿನಿಂದಲೂ ಅವು ತೀವ್ರ ಕಸಿವಿಸಿಗೆ ಒಳಗಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮನುಷ್ಯರು ಆನೆಗಳ ಹಾದಿಯಲ್ಲಿ ಎದುರಾದರೆ ಅನಿವಾರ್ಯವಾಗಿ ಸಂಘರ್ಷ ಸಂಭವಿಸುತ್ತದೆ.

ಈ ಸಮಸ್ಯೆಯನ್ನು ತಗ್ಗಿಸಲು ಆನೆ ಮಾರ್ಗಗಳು “ಆನೆ ಕಾರಿಡಾರ್‌ಗಳು” ಬಹಳ ಮುಖ್ಯ. ಇವು ಆನೆಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲೇ ಸಂಚಾರ ಮಾಡಲು ಬಳಸುವಸಹಜ ದಾರಿಗಳಾಗಿವೆ. ಕಾಡುಗಳನ್ನು ಸಂಪರ್ಕಿಸುವ ಈ ದಾರಿಗಳನ್ನು ಕಾಪಾಡುವುದು, ಆನೆಗಳಿಗೆ ಅಡ್ಡಿಯಾದ ರಸ್ತೆ, ರೈಲು ಮಾರ್ಗ, ಗೋಡೆಗಳಂತಹ ಅಡೆತಡೆಗಳನ್ನು ತಪ್ಪಿಸುವುದು ಅವುಗಳ ಸ್ವಾಭಾವಿಕ ಸಂಚಾರಕ್ಕೆ ಸಹಕಾರಿ. ಆದರೆ ಇತ್ತೀಚೆಗೆ ಈ ಕಾರಿಡಾರ್‌ಗಳ ಮೇಲೆ ಮಾನವ ವಸತಿ, ಬೆಳೆಗಾರಿಕೆ ಮತ್ತು ಕೈಗಾರಿಕಾ ವಿಸ್ತರಣೆಯಂತಹ ಬೆಳವಣಿಗೆಗಳು ಹೆಚ್ಚುತ್ತಿರುವುದರಿಂದ ಆನೆಗಳ ಸಂಚಾ ರಕ್ಕೆ ಅಡ್ಡಿ ಉಂಟಾಗಿದೆ.

ಮಾನವ-ಆನೆ ಸಂಘರ್ಷ ಕಡಿಮೆ ಮಾಡಲು ಹಲವು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ. ರೈಲುಮಾರ್ಗಗಳಲ್ಲಿ ಆನೆಗಳ ಅಪಘಾತ ತಡೆಗೆ ರೈಲು ಬಾರಿಕೇಡ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇವು ಆನೆಗಳನ್ನು ರೈಲು ಹಳಿ ದಾಟದಂತೆ ತಡೆಯುತ್ತವೆ. ಕೃಷಿ ಪ್ರದೇಶಗಳ ಸುತ್ತ ಸೌರಶಕ್ತಿ ಬೇಲಿಗಳನ್ನು ಹಾಕುವುದರಿಂದ ಆನೆಗಳು ಹೊಲಗಳಿಗೆ ಪ್ರವೇಶಿಸುವುದನ್ನು ತಡೆಯಬಹುದು. ಅರಣ್ಯ ಗಡಿಭಾಗಗಳಲ್ಲಿ ತೋಡುವ ಆಳವಾದ ಕಂದಕಗಳು (ಟ್ರೆಂಚುಗಳು) ಕೂಡ ಆನೆಗಳ ಪ್ರವೇಶವನ್ನು ತಡೆಯುವಲ್ಲಿ ಸಹಾಯಕ. ಇವೆಲ್ಲವೂ ಕಾಡು ಮತ್ತು ಗ್ರಾಮಗಳ ನಡುವಿನ ಗಡಿಯನ್ನು ಸ್ಪಷ್ಟಪಡಿಸಿ, ಸಂಘರ್ಷ ತಗ್ಗಿಸಲು ನೆರವಾಗುತ್ತವೆ.

ಕೆಲವು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದರಿಂದ ಅವುಗಳ ಸಂಚಾರವನ್ನು ನಿರಂತರವಾಗಿ ಹತ್ತಿರದಿಂದ ಗಮನಿಸಬಹುದು. ಉಪಗ್ರಹದ ಮೂಲಕ ಸಂಗ್ರಹವಾಗುವ ಈ ಮಾಹಿತಿಯಿಂದ ಆನೆಗಳ ಚಲನವಲನಗಳನ್ನು ಮುಂಚಿತವಾಗಿ ತಿಳಿದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬಹುದು. ಈ ತಂತ್ರಜ್ಞಾನವು ಕಾಡು ಅಧಿಕಾರಿಗಳಿಗೆ ಆನೆಗಳ ಸಂಚಾರ ಮಾರ್ಗಗಳನ್ನು ಗುರುತಿಸಲು, ಸಂಘರ್ಷ ಪ್ರದೇಶಗಳನ್ನು ನಿರ್ಧರಿಸಲು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ.

ಆನೆಗಳು ಮತ್ತು ಕಾಡಿನ ಸಂರಕ್ಷಣೆ ಪರಸ್ಪರ ಪೂರಕವಾಗಿದೆ . ಆನೆಗಳು ಅರಣ್ಯದ ಬೀಜಗಳನ್ನು ದೂರದೂರಿಗೆ ಹರಡುವುದರಿಂದ ಹೊಸ ಗಿಡಗಳ ಬೆಳವಣಿಗೆಗೆ ಸಹಕಾರಿಯಾ ಗುತ್ತವೆ. ಹೀಗಾಗಿ, ಕಾಡು ಉಳಿದರೆ ಆನೆಗಳು ಉಳಿಯುತ್ತವೆ; ಆನೆಗಳು ಉಳಿದರೆ ಕಾಡುಗಳ ಜೀವನಚಕ್ರ ಸರಾಗವಾಗಿ ನಡೆಯುತ್ತದೆ. ಇಂದಿನ ಸ್ಥಿತಿಯಲ್ಲಿ ಕಾಡು ಪ್ರದೇಶ ದಿನೇ ದಿನೇ ಕಡಿಮೆಯಾಗುತ್ತಿದ್ದು, ಜಲಸಂಪನ್ಮೂಲಗಳ ಕೊರತೆ, ಗಿಡ ಮರಗಳ ನಾಶ, ಮತ್ತು ಬೇಟೆಗಾರಿಕೆ ಆನೆಗಳ ಜೀವನಕ್ಕೆ ಗಂಭೀರ ಸವಾಲುಗಳಾಗಿವೆ.

ಆದ್ದರಿಂದ, ಮಾನವ-ಆನೆ ಸಂಘರ್ಷವನ್ನು ತಗ್ಗಿಸಲು, ಆನೆಗಳ ನೈಸರ್ಗಿಕ ವಾಸಸ್ಥಳಗಳನ್ನು ಸಂರಕ್ಷಿಸುವುದು, ಆನೆ ಕಾರಿಡಾರ್‌ಗಳನ್ನು ಅಡ್ಡಿಮುಕ್ತವಾಗಿಡುವುದು, ತಂತ್ರಜ್ಞಾನ ಆಧಾರಿತ ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸುವುದು ಮತ್ತು ಗ್ರಾಮಸ್ಥರಲ್ಲಿ ಜಾಗೃತಿಮೂಡಿಸುವುದು ಅತ್ಯಗತ್ಯ. ಆನೆಗಳು ಕೇವಲ ಕಾಡಿನ ಭಾಗವಲ್ಲ, ನಮ್ಮ ಸಂಸ್ಕ ತಿ ಮತ್ತು ಪರಿಸರ ಸಮತೋಲನದ ಜೀವಂತ ಚಿಹ್ನೆಗಳು. ಹಾಗಾಗಿ ಆನೆಗಳ ಸಂರಕ್ಷಣೆ ನಮ್ಮೆಲ್ಲರ ನೈತಿಕ ಹೊಣೆಗಾರಿಕೆ.

” ಆನೆಗಳು ಮತ್ತು ಕಾಡಿನ ಸಂರಕ್ಷಣೆ ಪರಸ್ಪರ ಅವಿಭಾಜ್ಯ. ಆನೆಗಳು ಅರಣ್ಯದ ಬೀಜಗಳನ್ನು ದೂರದೂರಿಗೆ ಹರಡುವುದರಿಂದ ಹೊಸ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಹೀಗಾಗಿ, ಕಾಡು ಉಳಿದರೆ ಆನೆಗಳು ಉಳಿಯುತ್ತವೆ; ಆನೆಗಳು ಉಳಿದರೆ ಕಾಡುಗಳ ಜೀವನಚಕ್ರ ಸರಾಗವಾಗಿ ನಡೆಯುತ್ತದೆ.”

-ಶ್ರೇಯಸ್ ದೇವನೂರು, ಮೈಸೂರು

ಆಂದೋಲನ ಡೆಸ್ಕ್

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

12 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

12 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

23 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

23 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

23 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

23 hours ago