ಇವರ ಹೆಸರು ಮೋಹನ್ ಕುಮಾರ್. ಮೈಸೂರಿನ ದೇವರಾಜ ಅರಸು ರಸ್ತೆಯ ಪಕ್ಕದಲ್ಲಿರುವ ಸಂಬಂಧಿಕರ ಐಸ್ಕ್ರೀಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಅದು, ಇದು ಎಂದು ಅಂದಾಜಿಸುತ್ತಿದ್ದರೆ, ಅವರಿಗೆ ಯಾವ ತರಹದ್ದು ಐಸ್ಕ್ರೀಮ್ ಇಷ್ಟವೆಂದು ಕೇಳಿ ಸೂಕ್ತವಾದದ್ದನ್ನು ಆರಿಸಿಕೊಡುತ್ತಾರೆ.
ಬದುಕಿರುವಷ್ಟು ದಿನ ಸುಮ್ಮನೆ ಕೂತು, ಸಮಯ ವ್ಯರ್ಥ ಮಾಡಬಾರದು ಎಂದು ಬುದ್ಧಿ ಹೇಳುವ ಮೋಹನ್ ಕುಮಾರ್ ಅವರು ಕಷ್ಟಕ್ಕೆ ಎದೆಗುಂದದೆ ಮುನ್ನುಗ್ಗುತ್ತಿರಬೇಕು ಎಂದು ಜೀವನ ಪಾಠವನ್ನೂ ಹೇಳುತ್ತಾರೆ.
ಇವರ ತಂದೆ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರು. ಹತ್ತನೇ ತರಗತಿ ಓದು ಮುಗಿಯುತ್ತಿದ್ದಂತೆ ಅಂಗಡಿಗೆ ಸೇರಿದರು. ಈಗಿವರಿಗೆ 65 ವರ್ಷ. ವ್ಯಾಪಾರ ಎಂದ ಮೇಲೆ ಲಾಭ, ನಷ್ಟ ಇದ್ದೇ ಇರುತ್ತದೆ ಎನ್ನುವ ಮೋಹನ್ ಕುಮಾರ್ ತಮ್ಮ ಪ್ರಾವಿಷನ್ ಅಂಗಡಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಐದು ವರ್ಷಗಳ ಈಚೆಗೆ ಮುಚ್ಚಿದ್ದಾರೆ. ಆದರೆ ಚಿಕ್ಕಂದಿನಿಂದ ದುಡಿದ ದೇಹ, ಕೆಲಸವಿಲ್ಲದೆ ಸುಮ್ಮನೆ ಕೂರ ಲಾಗಲಿಲ್ಲ. ಐಸ್ಕ್ರೀಮ್ ಅಂಗಡಿಯ ಮೇಲುಸ್ತುವಾರಿಕೆ ನೋಡಿ ಕೊಳ್ಳುವುದಾ ದರೂ ಸರಿ ಎಂದು ಕೆಲಸ ಮಾಡುತ್ತಲೇ ತಮ್ಮ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಿ ದ್ದಾರೆ. ಜನರ ಜೊತೆ ಬೆರೆಯುವುದೇ ತಮಗೆ ಖುಷಿ ಎನ್ನುತ್ತಾರೆ ಮೋಹನ್ ಕುಮಾರ್ ಅವರು.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದ ಮೂಲಕ ನಂಜನಗೂಡು ಹಾಗೂ ಚಾಮರಾಜನಗರ ಸಂಜೆಯ ವೇಳೆ ಸಾಕಷ್ಟು ಬಸ್ಗಳಿಲ್ಲದೆ…
ಸೇಡು.. ಕೇಡು ! ಯುದ್ಧವೆಂದರೆ ಏನಿದೆ ಅದರಲ್ಲಿ.. ದೇಶ-ದೇಶಗಳ ನಡುವೆ ಬರೀ ದ್ವೇಷ, ಸೇಡು ಭರಿಸಲಾಗದ ಕೇಡು ಗೆದ್ದವರ ಹಾಡು…
ದೇಶದಲ್ಲಿ ಸಾವಿರಾರು ಯುವಕರು ವಿದ್ಯಾವಂತರಾಗಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯ…
ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ…