ಅಂಕಣಗಳು

ಐಸ್‌ಕ್ರೀಮ್ ಅಂಗಡಿಯ ಮೋಹನ್ ಕುಮಾರ್,

ಇವರ ಹೆಸರು ಮೋಹನ್ ಕುಮಾರ್. ಮೈಸೂರಿನ ದೇವರಾಜ ಅರಸು ರಸ್ತೆಯ ಪಕ್ಕದಲ್ಲಿರುವ ಸಂಬಂಧಿಕರ ಐಸ್‌ಕ್ರೀಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಅದು, ಇದು ಎಂದು ಅಂದಾಜಿಸುತ್ತಿದ್ದರೆ, ಅವರಿಗೆ ಯಾವ ತರಹದ್ದು ಐಸ್‌ಕ್ರೀಮ್ ಇಷ್ಟವೆಂದು ಕೇಳಿ ಸೂಕ್ತವಾದದ್ದನ್ನು ಆರಿಸಿಕೊಡುತ್ತಾರೆ.

ಬದುಕಿರುವಷ್ಟು ದಿನ ಸುಮ್ಮನೆ ಕೂತು, ಸಮಯ ವ್ಯರ್ಥ ಮಾಡಬಾರದು ಎಂದು ಬುದ್ಧಿ ಹೇಳುವ ಮೋಹನ್ ಕುಮಾರ್ ಅವರು ಕಷ್ಟಕ್ಕೆ ಎದೆಗುಂದದೆ ಮುನ್ನುಗ್ಗುತ್ತಿರಬೇಕು ಎಂದು ಜೀವನ ಪಾಠವನ್ನೂ ಹೇಳುತ್ತಾರೆ.

ಇವರ ತಂದೆ ಪ್ರಾವಿಷನ್ ಸ್ಟೋ‌ರ್‌ ನಡೆಸುತ್ತಿದ್ದರು. ಹತ್ತನೇ ತರಗತಿ ಓದು ಮುಗಿಯುತ್ತಿದ್ದಂತೆ ಅಂಗಡಿಗೆ ಸೇರಿದರು. ಈಗಿವರಿಗೆ 65 ವರ್ಷ. ವ್ಯಾಪಾರ ಎಂದ ಮೇಲೆ ಲಾಭ, ನಷ್ಟ ಇದ್ದೇ ಇರುತ್ತದೆ ಎನ್ನುವ ಮೋಹನ್ ಕುಮಾರ್ ತಮ್ಮ ಪ್ರಾವಿಷನ್ ಅಂಗಡಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಐದು ವರ್ಷಗಳ ಈಚೆಗೆ ಮುಚ್ಚಿದ್ದಾರೆ. ಆದರೆ ಚಿಕ್ಕಂದಿನಿಂದ ದುಡಿದ ದೇಹ, ಕೆಲಸವಿಲ್ಲದೆ ಸುಮ್ಮನೆ ಕೂರ ಲಾಗಲಿಲ್ಲ. ಐಸ್‌ಕ್ರೀಮ್ ಅಂಗಡಿಯ ಮೇಲುಸ್ತುವಾರಿಕೆ ನೋಡಿ ಕೊಳ್ಳುವುದಾ ದರೂ ಸರಿ ಎಂದು ಕೆಲಸ ಮಾಡುತ್ತಲೇ ತಮ್ಮ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಿ ದ್ದಾರೆ. ಜನರ ಜೊತೆ ಬೆರೆಯುವುದೇ ತಮಗೆ ಖುಷಿ ಎನ್ನುತ್ತಾರೆ ಮೋಹನ್ ಕುಮಾರ್‌ ಅವರು.

ಆಂದೋಲನ ಡೆಸ್ಕ್

Recent Posts

ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸದೇ ಹೋದರೆ ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…

10 hours ago

ಹನೂರು| ರಸ್ತೆಯಲ್ಲಿ ಹುಲಿ ದರ್ಶನ: ವಿಡಿಯೋ ವೈರಲ್‌

ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…

11 hours ago

ಶೀಘ್ರದಲ್ಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ರಹೀಂ ಖಾನ್‌

ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್‌ ತಿಳಿಸಿದರು. ವಿಧಾನಪರಿಷತ್‌ ಕಲಾಪದಲ್ಲಿ…

11 hours ago

ಎಚ್‌ಡಿಕೆ ಹುಟ್ಟುಹಬ್ಬ: ಮಂಡ್ಯದಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಆಚರಣೆ

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…

11 hours ago

ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ: ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಿಷ್ಟು.!

ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ…

11 hours ago

ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…

12 hours ago