ಅಂಕಣಗಳು

ನಾನು ಸಹನಾ, ಮೈಸೂರಿನ ಜನಪ್ರಿಯ ರೇಡಿಯೋ ಧ್ವನಿ!

ನಾನು ಸಹನಾ, ರೇಡಿಯೋ ಜಾಕಿ. ಚಿಕ್ಕ ವಯಸ್ಸಿನಿಂದಲೂ ಸಂಗೀತದ ಮೇಲಿನ ಆಸಕ್ತಿಯಿಂದ ನನಗೆ ರೇಡಿಯೋವೊಂದರಲ್ಲಿ ಜಾಕಿಯಾಗಿ ಕೆಲಸ ಮಾಡುವ ಅವಕಾಶ ಒದಗಿಬಂತು. ಆ ಮೂಲಕ ನನ್ನ ಹವ್ಯಾಸ ವೃತ್ತಿಯಾಯಿತು. ನಾವು ಯಾರೊಂದಿಗಾದರೂ ಸಂವಹಿಸಬೇಕು, ಅವರೊಂದಿಗೆ ಆತ್ಮೀಯತೆ ಬೆಳೆಯಬೇಕು ಎಂದರೆ ನಮ್ಮ ಮಾತಿನಲ್ಲಿ ಸ್ಪಷ್ಟತೆ, ಪ್ರೀತಿ, ಮಧುರವಾದ ಧ್ವನಿ ಇರಬೇಕು ಎಂಬುದು ನಾನು ಕಂಡುಕೊಂಡ ಸತ್ಯ. ನಮ್ಮ ಮಾತು ಮತ್ತೊಬ್ಬರನ್ನು ಆಕರ್ಷಿಸಿದಾಗ ಮಾತ್ರ ಅವರ ಸ್ನೇಹ ಸಂಪಾದಿಸಲು ಸಾಧ್ಯ. ನಾನು ರೇಡಿಯೋದಲ್ಲಿ ನನ್ನ ವೃತ್ತಿ ಬದುಕು ಆರಂಭಿಸಿದ್ದು, 93.5 ರೆಡ್ ಎಫ್‌ಎಂ ನಲ್ಲೇ. ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ನನಗೆ ಸಂಗೀತದ ಹೆಚ್ಚು ಆಸಕ್ತಿ. ಸಂಗೀತ ಅಭ್ಯಾಸವನ್ನೂ ಮಾಡಿದ್ದೆ. ಪತ್ರಿಕೋದ್ಯಮದ ವ್ಯಾಸಂಗದ ನಡುವೆ ಹವ್ಯಾಸವಾಗಿ ಒಂದಿಷ್ಟು ಡಬ್ಬಿಂಗ್, ವಾಯ್ಸ್ ಓವರ್‌ಗಳನ್ನು ನೀಡಿದ್ದೇನೆ.

ಇವೆಲ್ಲದರ ಅನುಭವ ಈಗ ವಿದ್ಯಾಭ್ಯಾಸ ಮುಗಿಸಿದ ತಕ್ಷಣವೇ Radio Jockey ಆಗುವ ಅವಕಾಶ ದೊರಕಿಸಿದೆ. ರೇಡಿಯೋ ಜಾಕಿ ಎಂದರೆ ಕರೆ ಮಾಡಿ ಮಾತನಾಡುತ್ತಾರೆ, ನೆಚ್ಚಿನ ಗೀತೆಗಳನ್ನು ಪ್ರಸಾರ ಮಾಡುತ್ತಾರೆ, ಒಂದಿಷ್ಟು ಮಾತುಗಳು, ಒಂದಿಷ್ಟು ಪ್ರಶ್ನೆಗಳು, ಒಂದಿಷ್ಟು ಹಾಸ್ಯ ಮಾತ್ರವಲ್ಲ. ಕೇಳುಗರಿಗೆ ಒಬ್ಬ ರೇಡಿಯೋ ಜಾಕಿಯ ಕೆಲಸ ಸಾಧಾರಣವೆನಿಸಬಹುದು. ಆದರೆ, ಅದರ ಹಿಂದಿನ ಶ್ರಮ ಅಗೋಚರವಾದದ್ದು. ಕಾರ್ಯಕ್ರಮಕ್ಕೂ ಮುನ್ನ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು. ಕೇಳುಗರಿಗೆ ಎಲ್ಲಿಯೂ ಬೇಸರವಾಗದಂತೆ ಮಾತನಾಡಬೇಕು, ಕರೆಯಲ್ಲಿಯೂ ಅವರನ್ನು ಆತ್ಮೀಯವಾಗಿ ಮಾತನಾಡಿಸಬೇಕು. ಇದೆಲ್ಲದರ ನಡುವೆ ನಾವು ನಮ್ಮ ಉತ್ಸಾಹವನ್ನು ಕಳೆದುಕೊಳ್ಳದೆ ಸುಲಲಿತವಾಗಿ ಕಾರ್ಯಕ್ರಮದ ಆರಂಭದಲ್ಲಿದ್ದ ಜೋಶ್‌ ಅನ್ನೇ ಕೊನೆಯವರೆಗೂ ಮುಂದುವರಿಸಬೇಕು. ಇಷ್ಟೆಲ್ಲ ಕಸರತ್ತುಗಳನ್ನು ನಾವೂ ಮಾಡಬೇಕಾಗುತ್ತದೆ. ನಾನು ನಿತ್ಯ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ RED JUNCTION’ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ.

ಇದರಲ್ಲಿ ಮಹಿಳೆಯರು, ಹಿರಿಯರು, ಸಣ್ಣಪುಟ್ಟ ವ್ಯಾಪಾರಸ್ಥರು, ಒಂದೇ ಸ್ಥಳದಲ್ಲಿ ಕುಳಿತು ದಿನವಿಡೀ ಕೆಲಸ ಮಾಡುವವರು ಈ ಕಾರ್ಯಕ್ರಮವನ್ನು ಕೇಳುತ್ತಾ ತಮ್ಮ ಕೆಲಸಗಳನ್ನು ಮಾಡುವುದರಿಂದ ಆ ಸಮಯದಲ್ಲಿ ಮಹಿಳಾ ಆಧಾರಿತ ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತೇನೆ. ಕೆಲ ಬಾರಿ ಮಹಿಳಾ ಸಾಧಕರ ಸಂದರ್ಶನವೂ ಇರುತ್ತದೆ. ಇದು ಸಾಕಷ್ಟು ಮಹಿಳೆಯರಿಗೆ, ಸಾಧಿಸಬೇಕು ಎಂಬ ಹಂಬಲವಿರುವವರಿಗೆ ಒಂದಿಷ್ಟು ಉತ್ಸಾಹ ತುಂಬಬೇಕು ಎಂಬುದೇ ನಮ್ಮ ಬಯಕೆ. ಇದರೊಂದಿಗೆ ಪ್ರತಿ ಶನಿವಾರ SING WITH SAHANA’ ಎನ್ನುವ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇದರಲ್ಲಿ ಕೇಳುಗರ ವಿನಂತಿ ಮೇರೆಗೆ ಸಿನಿಮಾ ಹಾಡುಗಳನ್ನು ನಾನೇ ಹಾಡುತ್ತೇನೆ. ಇದೆಲ್ಲದ್ದಕೂ ಸಿದ್ಧವಾಗುವುದು, ಉತ್ಸಾಹವನ್ನು ಕಾಪಿಟ್ಟುಕೊಳ್ಳುವುದು, ರೇಡಿಯೋ ಜಾಕಿಯ ಪ್ರಮುಖ ಗುಣಲಕ್ಷಣ.

ಯಾವುದೇ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಮುನ್ನ ಹಿಂದಿನ ದಿನವೇ ಕಾರ್ಯಕ್ರಮದ ವಿಷಯ ವಸ್ತುವಿನ ಕುರಿತು ಅಧ್ಯಯನ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಪ್ರಾಯೋಜಕರೊಂದಿಗೆ ಚರ್ಚಿಸಿ, ಅಗತ್ಯ ಮಾಹಿತಿಗಳ ಸಿದ್ಧತೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ರೇಡಿಯೋನಲ್ಲಿ ಬರುವ ಜಾಹೀರಾತುಗಳಿಗೂ ಸ್ಕ್ರಿಪ್ಟ್ ಬರೆಯುವುದೂ ತಿಳಿದಿರಬೇಕು. ಹಾಗೆಯೇ ಜಾಹೀರಾತುಗಳಿಗೆ ಧ್ವನಿ ನೀಡುವುದು, ನಿರೂಪಣೆ ಮಾಡುವುದು ಹೀಗೆ ಹಲವಾರು ಸವಾಲುಗಳನ್ನು ಎದುರಿಸಲು ಸಿದ್ಧರಾಗಿ ಎಲ್ಲ ಹಂತದಲ್ಲಿಯೂ ಉತ್ಸಾಹವನ್ನು ಕಾಪಾಡಿಕೊಂಡು ಧ್ವನಿಯಲ್ಲಿ ಆಕರ್ಷಣೆಯನ್ನು ದೀರ್ಘ ಕಾಲದವರೆಗೆ ಉಳಿಸಿಕೊಳ್ಳುವಂತಿದ್ದರೆ ಮಾತ್ರ ರೇಡಿಯೋ ಜಾಕಿಯಾಗಿ ಮುಂದುವರಿಯಲು ಸಾಧ್ಯ. ಇವೆಲ್ಲವುಗಳ ಜತೆಗೆ ಸಾಮಾಜಿಕ ಜಾಲತಾಣದ ಮೇಲೆ ನಿಗಾವಿರಬೇಕು. ಅಲ್ಲಿಯೂ ಕೇಳುಗರು ಪ್ರತಿಕ್ರಿಯಿಸುವುದರಿಂದ ಅವರಿಗೆ ಉತ್ತರಿಸುವ ಜವಾಬ್ದಾರಿಯೂ ನಮ್ಮ ಮೇಲಿರುತ್ತದೆ. ದಿನವಿಡಿಯ ಇಷ್ಟೆಲ್ಲಾ ಸಾಹಸದ ಮಧ್ಯೆ ನಾವು ನಮ್ಮ ಆರೋಗ್ಯ, ಕುಟುಂಬ, ಸ್ನೇಹಿತರು, ನಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯ ಮೀಸಲಿಡುವುದು ಸವಾಲಿನ ಕೆಲಸವೇ ಸರಿ. ಕೊನೆಯದಾಗಿ ಒಂದು ಮಾತು. ಹವ್ಯಾಸವನ್ನು ವೃತ್ತಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹವ್ಯಾಸದ ಮೇಲೆ ಅತಿಯಾದ ಪ್ರೀತಿ ಮತ್ತು ಶಿಸ್ತು ಮುಂದೆ ಅದನ್ನು ವೃತ್ತಿ ಮಾಡಿಕೊಳ್ಳಲು ಸಹಕಾರಿ.
sahanar1998@gmail.com

andolanait

Recent Posts

ಓದುಗರ ಪತ್ರ:  ಸಾರ್ವಜನಿಕ ಶೌಚಾಲಯಗಳ ಬೀಗ ತೆರೆಯಿರಿ

ಮೈಸೂರಿನ ಮೆಟ್ರೋ ಪೋಲ್ ವೃತ್ತದ ಹತ್ತಿರ (ಮಹಾರಾಣಿ ಕಾಲೇಜು) ಮತ್ತು ಗಂಡಭೇರುಂಡ ಉದ್ಯಾನವನದ ಮುಂಭಾಗದಲ್ಲಿ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ…

4 mins ago

ಓದುಗರ ಪತ್ರ: ಅನಗತ್ಯ ಸಿಸೇರಿಯನ್: ಆಸ್ಪತ್ರೆಗಳ ವಿರುದ್ಧ ಕ್ರಮ ಸ್ವಾಗತಾರ್ಹ

ಹೆರಿಗೆ ಸಮಯದಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕೆಪಿಎಂಇ ಅಧಿನಿಯಮ ಕಾಯ್ದೆ ಪ್ರಕಾರ ಕಾನೂನು ಕ್ರಮ…

10 mins ago

ಪಂಜು ಗಂಗೊಳ್ಳಿ ವಾರದ ಅಂಕಣ: ವಿಕಲಾಂಗರ ಬದುಕಿಗೆ ಚಲನೆ ನೀಡುವ ಸಂದೀಪ್ ತಲ್ವಾರ್

ಸ್ವಾವಲಂಬನೆಗೆ ಸಹಕಾರಿಯಾದ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ 2010ರ ಆಗಸ್ಟ್ ತಿಂಗಳಿನಲ್ಲಿ ನಾಗ್ಪುರದ ನಿವಾಸಿ ನಿತೀನ್‌ರ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಲು…

48 mins ago

ನವೆಂಬರ್‌ನಲ್ಲೇ 1.59 ಕೋಟಿ ರೂ ರಾಜಸ್ವ ಸಂಗ್ರಹ

ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…

3 hours ago

ಅದ್ದೂರಿಯಾಗಿ ನೆರವೇರಿದ ಶ್ರೀ ಮುತ್ತುರಾಯಸ್ವಾಮಿ ಜಾತ್ರೆ

ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…

3 hours ago

ಹಳೆಯ ವಿದ್ಯಾರ್ಥಿಗಳಿಂದ ಕನ್ನಡಮಯವಾದ ಸರ್ಕಾರಿ ಶಾಲೆ

ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…

3 hours ago