ಅಂಕಣಗಳು

ಗಾಂಧಿ ಅಭಿಯಾನ ಅರಿವಿನಯಾನ | ಹುಟ್ಟೂರು ಕಲ್ಲಹಳ್ಳಿಗೆ ಗಾಂಧಿ ಮಾರ್ಗ ತಂದ ಚದುರಂಗ

• ವಿಕ್ರಂ ಚದುರಂಗ, ಮೈಸೂರು
ಪ್ರಸಿದ್ಧ ಕನ್ನಡ ಲೇಖಕ ಚದು ರಂಗರು, ಗಾಂಧೀಜಿ ಅವರನ್ನು ಅವರ ಒಳ ಮನಸ್ಸಿಗೆ ತೆರೆದು ಕೊಂಡಿದ್ದು ಯಾವಾಗ? ಎಲ್ಲಿ? ಗಾಂಧೀಜಿ ಅವರ ತತ್ವಾದರ್ಶಗಳನ್ನು ಚದುರಂಗರು ತಮ್ಮ ಬದುಕಿಗೆ ಅಳವಡಿಸಿಕೊಂಡು ಭಾರತದ ರೈತಾಪಿ ಜನರ ಅಭಿವೃದ್ಧಿಯ ಹೆಜ್ಜೆಯಲ್ಲಿ ಹಾದಿಯನ್ನು ತುಳಿದದ್ದು ಯಾವ ಊರಿನಲ್ಲಿ? ಎಂದು ನೋಡಿದಾಗ ಚದುರಂಗ ಅವರ ಬದುಕಿನಲ್ಲಿ ಗಾಂಧೀಜಿ ಬಂದ ರೀತಿ ಇವತ್ತಿಗೂ ನನ್ನ ನೆನಪಿನಲ್ಲಿದೆ.

ಮಹಾತ್ಮ ಗಾಂಧೀಜಿ ಮತ್ತು ಇತರ ದೇಶಭಕ್ತರ ಸ್ವಾತಂತ್ರ್ಯದ ಚಳವಳಿ 1940ರ ಆದಿಯಲ್ಲಿ ಬ್ರಿಟೀಷ್ ಸರ್ಕಾರವನು ಅಲುಗಾಡಿಸುತ್ತಿರುವ ಹೊತ್ತಿನಲ್ಲಿ ಚದುರಂಗ ಅವರು ಪೂನಾದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರು. ಗಾಂಧೀಜಿ ಅವರ ಆದರ್ಶಗಳು, ಅವರ ಅಹಿಂಸಾ ಮಾರ್ಗ, “ಲಿಬರ್ಟಿ’, ‘ಈಕ್ವಾಲಿಟಿ’ ಮತ್ತು ‘ಫ್ರಾಟರ್ನಿಟಿ’ಯ ಮೂಲ ಸೂತ್ರಗಳು ‘ಚದುರಂಗ’ರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಮೈಸೂರು ಸಿಟಿಗೆ ಹತ್ತಿರವಿರುವ ಹುಣಸೂರು ಟೌನ್‌ ಗೆ ಸಮೀಪವಿರುವ ಕಲ್ಲಹಳ್ಳಿ ಚದುರಂಗ ಅವರು ಹುಟ್ಟಿ, ಬಾಲ್ಯ ಕಳೆದ ಊರು. ಗಾಂಧೀಜಿ ಕಲಿಸಿಕೊಟ್ಟ ಹಳ್ಳಿಯ ರೈತರ ಸರ್ವತೋಮುಖವಾದ ಅಭಿವೃದ್ಧಿಯ ಕಡೆಗೆ ಚದುರಂಗ ಅವರು ಶ್ರಮಪಟ್ಟು ದುಡಿದರು. ಶೌಚಾಲಯದ ನಿರ್ಮಾಣ, ‘ಅಂಡರ್‌ಸ್ಯಂಡ್ ಸೀವೇಜ್‌ ಸಿಸ್ಟಮ್’, ಹೊಸ ರಸ್ತೆಗಳು, ಊರಿನ ಸ್ವಚ್ಛತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಲಿತರಿಗೆ ಅವರದೇ ಆದ ಸ್ವಾಭಿಮಾನವಿದೆ ಎಂದು ಮೇಲು ವರ್ಗದ ಜಾತಿಯವರಿಗೆ ತೋರಿಸಿ, ಎಲ್ಲಾ ಜಾತಿಯವರೂ ಒಂದೇ ಎಂಬ ಗಾಂಧೀಜಿಯ ತತ್ವವನ್ನು ಆಧರಿಸಿ, ಯಾವುದೇ ಸ್ವಾರ್ಥ ವಿಲ್ಲದೇ, ಊರಿಗೆ ಉಪಕಾರವನ್ನು ಮಾಡಿದವರಲ್ಲಿ ಚದುರಂಗರು ಮೊದಲಿಗರು. ಇವತ್ತಿಗೂ ನಮ್ಮ ಕಲ್ಲಹಳ್ಳಿಯ ಜನ ಚದುರಂಗರನ್ನು ಜ್ಞಾಪಿಸಿಕೊಳ್ಳುತ್ತಾರೆ.

ಗಾಂಧೀಜಿ ಅವರ ಅಹಿಂಸಾ ತತ್ವ, ಸ್ವಚ್ಛತೆ, ಅಪಾರವಾದ ಜೀವನಪ್ರೀತಿ, ಎಲ್ಲ ಜಾತಿಯವರನ್ನೂ ಒಟ್ಟಾಗಿ ನೋಡುವ ರೀತಿ ಈ ಅಪರೂಪವಾದ ಗುಣಗಳು ಚದುರಂಗರ ಗ್ರಹಿಕೆಯಲ್ಲಿ ತುಂಬಾ ಮುಖ್ಯವಾಗುತ್ತವೆ. ‘ಚದುರಂಗ’ರಲ್ಲಿ ಗಾಂಧೀಜಿ ‘ಫಿಗರ್’ ಅನ್ನು ನಾನು ಈ ರೀತಿ ಕಾಣುತ್ತಿದ್ದೇನೆ. ಚದುರಂಗ ಅವರು ಗಾಂಧೀಜಿ ಅವರನ್ನು ಹೀಗೆ ಕಂಡಿದ್ದ 1940ರ ದಶಕದಲ್ಲಿ ಭಾರತೀಯ ಸಮಾಜದ ಎಲ್ಲಾ ವಲಯಗಳ ಬದಲಾವಣೆ ಆಗಬೇಕು, ಪ್ರಗತಿ ಸಾಧಿಸಬೇಕು, ಅಹಿಂಸೆ ಮತ್ತು ಮನುಷ್ಯ ಸಹಜ ಪ್ರೀತಿ ಎನ್ನುವ ಮಾನವ ಧರ್ಮಕ್ಕೆ ಅನುಗುಣವಾಗಿ, ನೈತಿಕವಾಗಿ ಗಾಂಧೀಜಿ ಅವರು ದಿಟ್ಟ ಹೆಜ್ಜೆಗಳನ್ನಿಟ್ಟರು. ‘ಇಂಟರ್‌ನಲ್ ಚೇಂಜ್ ಫಾರ್ ದ ಬೆಟರ್‌ಮೆಂಟ್ ಆಫ್ ಹೂಮನ್ ಬೀಯಿಂಗ್’ ಎಂಬ ಬದಲಾವಣೆಯನ್ನು ಗಾಂಧೀಜಿ ಅವರು ಅವರ ಜೀವನದಲ್ಲಿ ಮಾಡಿ ಪ್ರಪಂಚಕ್ಕೆ ತೋರಿಸಿದರು.

ಎಲ್ಲ ಕಾಲಕ್ಕೂ ಸಲ್ಲುವ ‘ಸತ್ಯ’ದ ಶೋಧನೆ, ಅವರ, ‘ಮೈ ಪಿರಿಮೆಂಟ್ಸ್ ವಿತ್ ಟ್ರುಥ್. ಜಡ್ಡುಗಟ್ಟಿದ ಭಾರತದ ಸಮಾಜದ ಬದಲಾವಣೆಗಾಗಿ, ಸಮ ಸಮಾಜದ ಕ್ರಾಂತಿಗಾಗಿ, ಅಕ್ಷರವೇ, ಅಂದರೆ ಶಿಕ್ಷಣವೇ ಬದಲಾವಣೆಯ ಹೊಸ ಆರಂಭ ಮತ್ತು ಹೀಗೆ ಮಾಡಿದರೆ ಭಾರತೀಯ ಸಂಸ್ಕೃತಿ ಪುನರುಜ್ಜಿವನ ಗೊಳ್ಳುತ್ತದೆ ಹಾಗೂ ಪರಿವರ್ತನೆ ಯಾಗುತ್ತದೆ ಎಂಬ ಭಾವನೆಗಳಿಂದ 1940ರ ದಶಕದಿಂದ ಗಾಂಧೀಜಿ ಅನೇಕ ತಲೆಮಾರುಗಳನ್ನು, ಅವರ, ‘ಮಾರಲ್ ಫೋರ್ಸ್ ಅಂಡ್ ಇಂಪೆಕೇಬಲ್ ಪರ್ಸನಲ್ ಇಂಟಿಗ್ರಿಟಿ’ಯ ಮೂಲಕ ರೂಪಿಸಿದರು.

ಗಾಂಧೀಜಿ ಎಂಬ ಶಕ್ತಿ ಈಗ ಹೇಗಿದೆ? ಭಾರತ ಸ್ವಾತಂತ್ರ್ಯ ಆದ ಮೇಲೆ(1947) ಸಮಾಜದಲ್ಲಿ ಅನೇಕ ಸ್ಥಿತ್ಯಂತರಗಳಾಗಿ ಹೊಸ ಪೀಳಿಗೆಗೆ ನಾಂದಿಯಾಯಿತು. ಗಾಂಧೀಜಿಯ ಇಮೇಜ್ ಈಗ ಏನಾಗಿದೆ? ಐನೂರು ರೂಪಾಯಿ ಕರೆನ್ಸಿ ನೋಟಿನಲ್ಲಿ ಒಂದು ಮೂಲೆಯಲ್ಲಿ ಗಾಂಧೀಜಿ ನಗುತ್ತಾ ಕುಳಿತಿದ್ದಾರೆ. ಆ ನೋಟಿನ ಹಿಂಭಾಗದಲ್ಲಿ ಗಾಂಧೀಜಿ ಅವರ ಕನ್ನಡಕ ಇದೆ. ಗಾಂಧೀಜಿಯ ಕನ್ನಡಕದ ‘ಪ್ರೇಮ್’ ಒಳಗಡೆ ಇರುವ ಗ್ಲಾಸ್‌ನಲ್ಲಿ ‘ಸ್ವಚ್ಛ ಭಾರತ (ಇದು ಹಿಂದಿಯಲ್ಲಿದೆ) ಎಂದು ಸ್ಪಷ್ಟವಾಗಿ ಬರೆದಿದೆ. ಗಾಂಧೀಜಿ ಕಂಡ ‘ಭಾರತ’, ಗಾಂಧೀಜಿ ಕಂಡ ‘ಬದಲಾವಣೆ’, ಸಾಮಾನ್ಯ ಪ್ರಜೆಗಳಾದ ನಾವು 21 ನೇ ಶತಮಾನದ ಆದಿಯಲ್ಲಿ, ಆ ವ್ಯಕ್ತಿತ್ವವನ್ನು ಬರೀ ಐನೂರು ರೂಪಾಯಿಗಳಲ್ಲಿ ಕಾಣುತ್ತಿದ್ದೇವೆ… ಎಂತಹ ಬದಲಾವಣೆ ಇದು?

 

ಆಂದೋಲನ ಡೆಸ್ಕ್

Recent Posts

ಸಿಜೆಪಿ ಪ್ರತಿಭಟನೆ ; ಜಂತರ್‌ ಮಂತರ್‌ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ; ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯ

ಹೊಸದಿಲ್ಲಿ : ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ‘ಕಾಕ್ರೋಚ್…

28 mins ago

ಮುಚ್ಚಿದ್ದ ಶಾಲೆ ಗ್ರಾಮಸ್ಥರಿಂದಲೇ ಆರಂಭ!

ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿದ್ದೇ ಪೋಷಕರಿಗೆ ಪ್ರೇರೇಪಣೆ ಮಂಜು ಕೋಟೆ ಎಚ್‌.ಡಿ.ಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು, ಜಿಲ್ಲೆಯಲ್ಲಿ…

1 hour ago

ಗಾನ ಸರಸ್ವತಿಯ ವಿನಮ್ರ ಸೇವಕ ವೀರಭದ್ರಯ್ಯ

ಮೈಸೂರಿನಲ್ಲಿ ಉತ್ತರಾದಿ ಸಂಗೀತ ಪರಿಮಳ ಹರಡಲು ಪರಿಶ್ರಮ -ಡಾ.ರಮಾ ವಿ ಬೆಣ್ಣೂರ್ ಮೈಸೂರು ಮತ್ತು ಹಿಂದುಸ್ತಾನೀ ಸಂಗೀತದ ನಂಟು ಇಂದು…

1 hour ago

ಗಾಂಧಿ ಅಭಿಯಾನ ಅರಿವಿನ ಯಾನ | ಕಳ್ಳತನ ಮತ್ತು ಪ್ರಾಯಶ್ಚಿತ ; ತಂದೆಯಿಂದ ಅಹಿಂಸೆಯ ನೇರ ಪಾಠ

ಮಾಂಸಾಹಾರ ಮಾಡುತ್ತಿದ್ದ ಕಾಲದ ಮತ್ತು ಅದಕ್ಕೆ ಹಿಂದಿನ ನನ್ನ ಕೆಲವು ದೋಷಗಳನ್ನು ಹೇಳಬೇಕಾದುದು ಇನ್ನೂ ಬಾಕಿಯಿದೆ. ಅವು ನನ್ನ ಮದುವೆಯಾದ…

2 hours ago

ಗ್ರಾಮೀಣ ಕುಡಿಯುವ ನೀರಿಗೆ ಪ್ರಥಮ ಆದ್ಯತೆ:ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು…

14 hours ago

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ : ಮತ್ತೊಮ್ಮೆ ಶೇ.50 ರಿಯಾಯಿತಿ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ.50ರಷ್ಟು…

20 hours ago