ಅಂಕಣಗಳು

ನಿವೃತ್ತರಿಗಾಗಿ ನಿವೃತ್ತರಾದವರು ಕಟ್ಟಿಕೊಂಡ ಸೇವಾ ಸಂಸ್ಥೆ

• ಕೀರ್ತಿ ಬೈಂದೂರು
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರೆಲ್ಲ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ Railway Pensioners Welfare Association’ Rogows ತೊಡಗಿಸಿಕೊಂಡು, ಪಿಂಚಣಿ ಪಡೆಯಲು ಪರದಾಡುವ ಜನರಿಗೆ ತಮ್ಮಿಂದಾದಷ್ಟು ಸಹಾಯ ಮಾಡಬೇಕೆಂದು ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರಿನ ಬಂಬೂ ಬಜಾರ್ ಪಕ್ಕದಲ್ಲಿ ಸಂಸ್ಥೆಯ ಕಚೇರಿಯಿದೆ. ಸರ್ಕಾರಿ ವೃತ್ತಿಗಳೇ ಹಾಗೆ, ಅವು ವೃತ್ತಿ ಭರವಸೆ ನೀಡುತ್ತವೆ. ಆದರೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವವರು ನಿವೃತ್ತಿಯ ಮುನ್ನ ತೀರಿಹೋದರೆ, ಅವರ ಹೆಂಡತಿ, ಆನಂತರ ಮದುವೆಯಾಗದ ಮಕ್ಕಳು, ದಿವ್ಯಾಂಗ ಮಕ್ಕಳು ಪಿಂಚಣಿಗೆ ಹಕ್ಕುದಾರರಾಗುತ್ತಾರೆ. ಪಿಂಚಣಿ ಪಡೆಯುವುದೇನು ಸಾಮಾನ್ಯ ಸಂಗತಿಯಲ್ಲ, ದಾಖಲಾತಿ ನೀಡಿದರಾಯಿತು, ವಿನಂತಿ ಪತ್ರ ಲಗತ್ತಿಸಿದರಾಯಿತು ಎನ್ನುವಷ್ಟು ಸುಲಭವಿಲ್ಲ. ರೈಲ್ವೆ ನಿಯಮಗಳ ಬಗ್ಗೆ ಅರಿವು ಹೊಂದಿರುವವರಿಗೆ ಪೆನ್ಗನ್ ಪಡೆಯುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ತಾವೂ ಪೆನ್ನನ್ ಪಡೆಯಬಹುದು ಎಂದು ಅನೇಕರಿಗೆ ತಿಳಿದೇ ಇರುವುದಿಲ್ಲ ಅಥವಾ ತಿಳಿಸಿರುವುದಿಲ್ಲ.

ಪಿಂಚಣಿ ಸಿಗುತ್ತದೆ ಎಂದು ಎಷ್ಟೋ ವರ್ಷ ಬಿಟ್ಟು, ಸಂಸ್ಥೆಗೆ ಸಹಾಯ ಕೇಳಿ ಬಂದಿರುವ ಫಲಾನುಭವಿಗಳು ಅನೇಕರಿದ್ದಾರೆ. ‘ವೃತ್ತಿಯಲ್ಲಿದ್ದರೆ ಮಾಹಿತಿ ಕಲೆ ಹಾಕುವುದು ಸುಲಭವಾಗುತ್ತಿತ್ತು. ಈಗಲೂ ಪಡೆಯಬಹುದು. ಆದರೆ, ತುಸು ತಡವಾಗುತ್ತದಷ್ಟೇ’ ಎನ್ನುತ್ತಾರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ಥಸಾರಥಿ ಅವರು.

ಅವಿದ್ಯಾವಂತೆ ಮಹಿಳೆಯೊಬ್ಬಳ ತಂದೆ ರೈಲ್ವೆ ಇಲಾಖೆಯಲ್ಲಿ ನಿವೃತ್ತಿ ಹೊಂದುವ ಮುನ್ನವೇ ತೀರಿಹೋಗಿದ್ದರು. ಆಕೆ ಗಂಡ ಮತ್ತು ತಾಯಿಯನ್ನೂ ಕಳೆದುಕೊಂಡಿದ್ದಳು. ಪಿಂಚಣಿಗಾಗಿ ಇಲಾಖೆಗಳಿಗೆ ಅಲೆಯುತ್ತಿರುವಾಗ, ಅನೇಕರು ಅವಮಾನಿಸಿದ್ದರು. ಹತ್ತು ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದ ಆಕೆ, ಸೋರುತ್ತಿರುವ ಮನೆಯಲ್ಲೇ ಬದುಕು ಕಟ್ಟಿಕೊಂಡಿದ್ದಳು. ಹೇಗೊ ವಿಳಾಸ ತಿಳಿದು, ಸಂಸ್ಥೆಗೆ ಬಂದಿದ್ದಳು. ಸಂಸ್ಥೆಯ ಅಧಿಕಾರಿಗಳೆಲ್ಲ ಸೇರಿ ಮಹಿಳೆಯ ಸಮಸ್ಯೆಯನ್ನು ಅರಿತರು. ಸಂಸ್ಥೆಯ ಸದಸ್ಯರು ಸೇರಿ ಆಕೆಯ ಸಮಸ್ಯೆ ಬಗೆಹರಿಸಲು ಎರಡು ತಿಂಗಳು ಬೇಕಾದವು. 19 ಲಕ್ಷ ರೂ.ಗಳಷ್ಟು ಬಾಕಿ ಹಣ ಕೊಡಿಸಿದರು. 15 ಸಾವಿರ ರೂ. ಗಳಷ್ಟು ಪಿಂಚಣಿಯ ಹಣ ಪ್ರತಿ ತಿಂಗಳು ಬರುವಂತೆ ನೋಡಿಕೊಂಡಿದ್ದಷ್ಟೇ ಅಲ್ಲ. ಹಣವನ್ನು ಜೋಪಾನವಾಗಿ ಖರ್ಚು ಮಾಡಬೇಕೆಂಬ ಎಚ್ಚರಿಕೆಯನ್ನೂ, ಕೆಲಸ ಮಾಡುತ್ತಿರು ಎಂದು ತಿಳಿವಳಿಕೆಯನ್ನು
ಹೇಳಿದರು.

ಪೈವೇಟ್ ಕಾನ್ವೆಂಟ್‌ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯದೂ ಇದೇ ಕತೆ. ತಾಯಿ ಸತ್ತು ಅದಾಗಲೇ ಹನ್ನೆರಡು ವರ್ಷಗಳು ಕಳೆದಿತ್ತು. ತಂದೆಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಯ ಬಗ್ಗೆ ಏನೂ ತಿಳಿದಿರಲಿಲ್ಲ.

ವಿಶೇಷತೆ ಎಂದರೆ ಅವರ ತಂದೆ ಆಂಗ್ಲೋ ಇಂಡಿಯನ್ ಆಗಿದ್ದರೆ, ತಾಯಿ ಸ್ಥಳೀಯ ಮಹಿಳೆಯಾಗಿದ್ದರು. ತಂದೆಯ ಹೆಸರೊಂದೇ ಇಟ್ಟುಕೊಂಡು ಸಂಸ್ಥೆಯ ಸದಸ್ಯರೆಲ್ಲ ಮಾಹಿತಿ ಹುಡುಕಲು ಆರಂಭಿಸಿದ್ದರು. ರೈಲ್ವೆ ಅಧಿಕಾರಿಗಳು ಅಷ್ಟು ಕೋಟಿ ಜನರ ನಡುವೆ ಆಕೆಯ ತಂದೆಯ ಹೆಸರನ್ನು ಹೇಗೆ ಹುಡುಕುವುದು ಎಂದಾಗ, ಸಂಸ್ಥೆಯ ಸದಸ್ಯರು ಆಕೆಯ ತಂದೆ ಆಂಗ್ಲೋ ಇಂಡಿಯನ್ ಮತ್ತವರ ಹೆಸರಿನ ವಿಶೇಷತೆ ತಿಳಿಸಿಕೊಟ್ಟರು. ಹದಿನೈದು ದಿನಗಳ ಸಮಯ ಕೇಳಿದ್ದ ಅಧಿಕಾರಿಗಳು ಮಾರನೆಯ ದಿನದ ಹೊತ್ತಿಗಾಗಲೇ ಪೂರ್ಣ ವಿವರಗಳನ್ನು ಇವರಿಗೆ ಕಳುಹಿಸಿಯಾಗಿತ್ತು. ಸಿಗಬೇಕಾದ 13 ಲಕ್ಷ ರೂ. ಬಾಕಿ ಹಣದೊಂದಿಗೆ ಆ ಮಹಿಳೆ 23 ಸಾವಿರ ರೂಪಾಯಿಗಳ ಪಿಂಚಣಿ ಪಡೆಯುತ್ತಾ, ಆರಾಮವಾಗಿದ್ದಾರೆ.

“ನಿಮಗೆ ಪಾಸ್‌ಬುಕ್‌ನಲ್ಲಿ ಹಣ ಬರುವ ತನಕ ಸಹಾಯ ಮಾಡುತ್ತೇವೆ. ಇದಕ್ಕೆ ಬದಲಿಯಾಗಿ ಹಣ ಕೊಡುವುದು ಇಲ್ಲಾ, ಸಿಹಿ ನೀಡಿ ಸಂಭ್ರಮಿಸುವಂತಿಲ್ಲ ಎಂಬ ಷರತ್ತನ್ನು ಮೊದಲಿಗೇ ತಿಳಿಸಿಬಿಡುತ್ತಾರೆ. ಕೆಲವರು ತಮ್ಮ ಬದುಕಿಗೆ ಆರ್ಥಿಕ ನೆರವು ಸಿಕ್ಕ ಖುಷಿಯಲ್ಲಿ ಹಣವನ್ನು ತೆಗೆದುಕೊಳ್ಳ ಲೇಬೇಕು ಎಂದು ಒತ್ತಾಯಿಸಿದಾಗ, ಸಂಸ್ಥೆಯ ಹೆಸರಿನಲ್ಲಿ ರಶೀದಿಯನ್ನು ನೀಡಿಯೇ ಹಣ ಪಡೆಯುತ್ತಾರೆ. ಈ ತತ್ವಕ್ಕೆ ಬದ್ಧರಾಗಿ ನಿವೃತ್ತ ರೈಲ್ವೆ ಅಧಿಕಾರಿಗಳೆಲ್ಲ ಕೈ ಜೋಡಿಸುತ್ತಿದ್ದಾರೆ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಸಾಲುಗಳನ್ನು ಜೀವನ ಪಾಠವಾಗಿಸಿಕೊಂಡವರ ಕಥೆಯಿದು.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ : ತುಂಡು ಬಟ್ಟೆಯ ಫಕೀರ ಮತ್ತು ಇಂಗ್ಲೆಂಡ್ ಚಕ್ರವರ್ತಿ

ಡಾ. ಪ್ರಮೀಳಾದೇವಿ ಬಿ.ಕೆ ೧೯೩೧-೩೨ರಲ್ಲಿ ಗಾಂಧಿಜಿಯವರು ಉಪ್ಪಿನ ಸತ್ಯಾಗ್ರಹದ ನಂತರ ರೌಂಡ್ ಟೇಬಲ್ ಮಾತುಕತೆಗಾಗಿ ಇಂಗ್ಲೆಂಡಿಗೆ ಹೋದರು. ಈ ವೇಳೆಗಾಗಲೆ…

20 hours ago

ಗಾಂಧಿ ಅಭಿಯಾನ ಅರಿವಿನ ಯಾನ : ಚಾಮರಾಜನಗರ ಸೀಮೆಯಲ್ಲಿ ಗಾಂಧಿಯ ಪ್ರಭಾವ

ಚಾಮರಾಜನಗರ ಮೈಸೂರು ಜಿಯ ಒಂದು ಸಣ್ಣ ತಾಲ್ಲೂಕು ಕೇಂದ್ರವಾಗಿತ್ತು. ಸುಮಾರು ೯೦ ವರ್ಷಗಳ ಹಿಂದೆ ಸಣ್ಣ ಪಟ್ಟಣ. ೧೯೨೬ರಿಂದ ಇಲ್ಲಿಗೆ…

22 hours ago

ಇಂದು ಮೈಸೂರಿಗೆ ಮೋದಿ ಆಗಮನ : ವಿವೇಕ ಸ್ಮಾರಕ ಲೋಕಾರ್ಪಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಐತಿಹಾಸಿಕ…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಹೊರದೇಶದ ಭಾಷೆಗಳನ್ನು ಕಲಿತೆ

ನೃತ್ಯ ಮುಂತಾದವುಗಳಲ್ಲಿ ನಾನು ನಡೆಸಿದ ಪ್ರಯೋಗಗಳಿಂದ ನಾನು ಉಚ್ಚೃಂಖಲ ಪ್ರವೃತ್ತಿಯುಳ್ಳವನಾಗಿದ್ದನೆಂದು ಯಾರೂ ತಿಳಿಯಬಾರದು. ಅದರಲ್ಲಿಯೂ ವಿವೇಕದ ಅಂಶ ಇದ್ದಿತೆಂಬುದು ವಾಚಕರಿಗೆ…

22 hours ago

ನಾಳೆ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು: ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಪ್ರಧಾನಿ…

2 days ago

ದಯವಿಟ್ಟು ಕರ್ನಾಟಕ ಬಂದ್‌ ಕೈಬಿಡಿ: ಸಿಎಂ ಡಿಕೆಶಿ ನಮ್ರತೆಯ ಮನವಿ

ಬೆಂಗಳೂರು: ರಾಜ್ಯದ ಹಿತ ಕಾಪಾಡೋಕೆ ನಾವಿದ್ದೀವಿ. ದಯವಿಟ್ಟು ಬಂದ್‌ ಕೈಬಿಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರದ ಪರವಾಗಿ ನಮ್ರತೆಯ ಮನವಿ…

2 days ago