ಅಂಕಣಗಳು

ನಿವೃತ್ತರಿಗಾಗಿ ನಿವೃತ್ತರಾದವರು ಕಟ್ಟಿಕೊಂಡ ಸೇವಾ ಸಂಸ್ಥೆ

• ಕೀರ್ತಿ ಬೈಂದೂರು
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರೆಲ್ಲ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ Railway Pensioners Welfare Association’ Rogows ತೊಡಗಿಸಿಕೊಂಡು, ಪಿಂಚಣಿ ಪಡೆಯಲು ಪರದಾಡುವ ಜನರಿಗೆ ತಮ್ಮಿಂದಾದಷ್ಟು ಸಹಾಯ ಮಾಡಬೇಕೆಂದು ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರಿನ ಬಂಬೂ ಬಜಾರ್ ಪಕ್ಕದಲ್ಲಿ ಸಂಸ್ಥೆಯ ಕಚೇರಿಯಿದೆ. ಸರ್ಕಾರಿ ವೃತ್ತಿಗಳೇ ಹಾಗೆ, ಅವು ವೃತ್ತಿ ಭರವಸೆ ನೀಡುತ್ತವೆ. ಆದರೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವವರು ನಿವೃತ್ತಿಯ ಮುನ್ನ ತೀರಿಹೋದರೆ, ಅವರ ಹೆಂಡತಿ, ಆನಂತರ ಮದುವೆಯಾಗದ ಮಕ್ಕಳು, ದಿವ್ಯಾಂಗ ಮಕ್ಕಳು ಪಿಂಚಣಿಗೆ ಹಕ್ಕುದಾರರಾಗುತ್ತಾರೆ. ಪಿಂಚಣಿ ಪಡೆಯುವುದೇನು ಸಾಮಾನ್ಯ ಸಂಗತಿಯಲ್ಲ, ದಾಖಲಾತಿ ನೀಡಿದರಾಯಿತು, ವಿನಂತಿ ಪತ್ರ ಲಗತ್ತಿಸಿದರಾಯಿತು ಎನ್ನುವಷ್ಟು ಸುಲಭವಿಲ್ಲ. ರೈಲ್ವೆ ನಿಯಮಗಳ ಬಗ್ಗೆ ಅರಿವು ಹೊಂದಿರುವವರಿಗೆ ಪೆನ್ಗನ್ ಪಡೆಯುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ತಾವೂ ಪೆನ್ನನ್ ಪಡೆಯಬಹುದು ಎಂದು ಅನೇಕರಿಗೆ ತಿಳಿದೇ ಇರುವುದಿಲ್ಲ ಅಥವಾ ತಿಳಿಸಿರುವುದಿಲ್ಲ.

ಪಿಂಚಣಿ ಸಿಗುತ್ತದೆ ಎಂದು ಎಷ್ಟೋ ವರ್ಷ ಬಿಟ್ಟು, ಸಂಸ್ಥೆಗೆ ಸಹಾಯ ಕೇಳಿ ಬಂದಿರುವ ಫಲಾನುಭವಿಗಳು ಅನೇಕರಿದ್ದಾರೆ. ‘ವೃತ್ತಿಯಲ್ಲಿದ್ದರೆ ಮಾಹಿತಿ ಕಲೆ ಹಾಕುವುದು ಸುಲಭವಾಗುತ್ತಿತ್ತು. ಈಗಲೂ ಪಡೆಯಬಹುದು. ಆದರೆ, ತುಸು ತಡವಾಗುತ್ತದಷ್ಟೇ’ ಎನ್ನುತ್ತಾರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ಥಸಾರಥಿ ಅವರು.

ಅವಿದ್ಯಾವಂತೆ ಮಹಿಳೆಯೊಬ್ಬಳ ತಂದೆ ರೈಲ್ವೆ ಇಲಾಖೆಯಲ್ಲಿ ನಿವೃತ್ತಿ ಹೊಂದುವ ಮುನ್ನವೇ ತೀರಿಹೋಗಿದ್ದರು. ಆಕೆ ಗಂಡ ಮತ್ತು ತಾಯಿಯನ್ನೂ ಕಳೆದುಕೊಂಡಿದ್ದಳು. ಪಿಂಚಣಿಗಾಗಿ ಇಲಾಖೆಗಳಿಗೆ ಅಲೆಯುತ್ತಿರುವಾಗ, ಅನೇಕರು ಅವಮಾನಿಸಿದ್ದರು. ಹತ್ತು ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದ ಆಕೆ, ಸೋರುತ್ತಿರುವ ಮನೆಯಲ್ಲೇ ಬದುಕು ಕಟ್ಟಿಕೊಂಡಿದ್ದಳು. ಹೇಗೊ ವಿಳಾಸ ತಿಳಿದು, ಸಂಸ್ಥೆಗೆ ಬಂದಿದ್ದಳು. ಸಂಸ್ಥೆಯ ಅಧಿಕಾರಿಗಳೆಲ್ಲ ಸೇರಿ ಮಹಿಳೆಯ ಸಮಸ್ಯೆಯನ್ನು ಅರಿತರು. ಸಂಸ್ಥೆಯ ಸದಸ್ಯರು ಸೇರಿ ಆಕೆಯ ಸಮಸ್ಯೆ ಬಗೆಹರಿಸಲು ಎರಡು ತಿಂಗಳು ಬೇಕಾದವು. 19 ಲಕ್ಷ ರೂ.ಗಳಷ್ಟು ಬಾಕಿ ಹಣ ಕೊಡಿಸಿದರು. 15 ಸಾವಿರ ರೂ. ಗಳಷ್ಟು ಪಿಂಚಣಿಯ ಹಣ ಪ್ರತಿ ತಿಂಗಳು ಬರುವಂತೆ ನೋಡಿಕೊಂಡಿದ್ದಷ್ಟೇ ಅಲ್ಲ. ಹಣವನ್ನು ಜೋಪಾನವಾಗಿ ಖರ್ಚು ಮಾಡಬೇಕೆಂಬ ಎಚ್ಚರಿಕೆಯನ್ನೂ, ಕೆಲಸ ಮಾಡುತ್ತಿರು ಎಂದು ತಿಳಿವಳಿಕೆಯನ್ನು
ಹೇಳಿದರು.

ಪೈವೇಟ್ ಕಾನ್ವೆಂಟ್‌ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯದೂ ಇದೇ ಕತೆ. ತಾಯಿ ಸತ್ತು ಅದಾಗಲೇ ಹನ್ನೆರಡು ವರ್ಷಗಳು ಕಳೆದಿತ್ತು. ತಂದೆಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಯ ಬಗ್ಗೆ ಏನೂ ತಿಳಿದಿರಲಿಲ್ಲ.

ವಿಶೇಷತೆ ಎಂದರೆ ಅವರ ತಂದೆ ಆಂಗ್ಲೋ ಇಂಡಿಯನ್ ಆಗಿದ್ದರೆ, ತಾಯಿ ಸ್ಥಳೀಯ ಮಹಿಳೆಯಾಗಿದ್ದರು. ತಂದೆಯ ಹೆಸರೊಂದೇ ಇಟ್ಟುಕೊಂಡು ಸಂಸ್ಥೆಯ ಸದಸ್ಯರೆಲ್ಲ ಮಾಹಿತಿ ಹುಡುಕಲು ಆರಂಭಿಸಿದ್ದರು. ರೈಲ್ವೆ ಅಧಿಕಾರಿಗಳು ಅಷ್ಟು ಕೋಟಿ ಜನರ ನಡುವೆ ಆಕೆಯ ತಂದೆಯ ಹೆಸರನ್ನು ಹೇಗೆ ಹುಡುಕುವುದು ಎಂದಾಗ, ಸಂಸ್ಥೆಯ ಸದಸ್ಯರು ಆಕೆಯ ತಂದೆ ಆಂಗ್ಲೋ ಇಂಡಿಯನ್ ಮತ್ತವರ ಹೆಸರಿನ ವಿಶೇಷತೆ ತಿಳಿಸಿಕೊಟ್ಟರು. ಹದಿನೈದು ದಿನಗಳ ಸಮಯ ಕೇಳಿದ್ದ ಅಧಿಕಾರಿಗಳು ಮಾರನೆಯ ದಿನದ ಹೊತ್ತಿಗಾಗಲೇ ಪೂರ್ಣ ವಿವರಗಳನ್ನು ಇವರಿಗೆ ಕಳುಹಿಸಿಯಾಗಿತ್ತು. ಸಿಗಬೇಕಾದ 13 ಲಕ್ಷ ರೂ. ಬಾಕಿ ಹಣದೊಂದಿಗೆ ಆ ಮಹಿಳೆ 23 ಸಾವಿರ ರೂಪಾಯಿಗಳ ಪಿಂಚಣಿ ಪಡೆಯುತ್ತಾ, ಆರಾಮವಾಗಿದ್ದಾರೆ.

“ನಿಮಗೆ ಪಾಸ್‌ಬುಕ್‌ನಲ್ಲಿ ಹಣ ಬರುವ ತನಕ ಸಹಾಯ ಮಾಡುತ್ತೇವೆ. ಇದಕ್ಕೆ ಬದಲಿಯಾಗಿ ಹಣ ಕೊಡುವುದು ಇಲ್ಲಾ, ಸಿಹಿ ನೀಡಿ ಸಂಭ್ರಮಿಸುವಂತಿಲ್ಲ ಎಂಬ ಷರತ್ತನ್ನು ಮೊದಲಿಗೇ ತಿಳಿಸಿಬಿಡುತ್ತಾರೆ. ಕೆಲವರು ತಮ್ಮ ಬದುಕಿಗೆ ಆರ್ಥಿಕ ನೆರವು ಸಿಕ್ಕ ಖುಷಿಯಲ್ಲಿ ಹಣವನ್ನು ತೆಗೆದುಕೊಳ್ಳ ಲೇಬೇಕು ಎಂದು ಒತ್ತಾಯಿಸಿದಾಗ, ಸಂಸ್ಥೆಯ ಹೆಸರಿನಲ್ಲಿ ರಶೀದಿಯನ್ನು ನೀಡಿಯೇ ಹಣ ಪಡೆಯುತ್ತಾರೆ. ಈ ತತ್ವಕ್ಕೆ ಬದ್ಧರಾಗಿ ನಿವೃತ್ತ ರೈಲ್ವೆ ಅಧಿಕಾರಿಗಳೆಲ್ಲ ಕೈ ಜೋಡಿಸುತ್ತಿದ್ದಾರೆ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಸಾಲುಗಳನ್ನು ಜೀವನ ಪಾಠವಾಗಿಸಿಕೊಂಡವರ ಕಥೆಯಿದು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

1 hour ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

1 hour ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

1 hour ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

2 hours ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

2 hours ago

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು.  ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…

2 hours ago