BREAKING NEWS

ಏಕಕಾಲಿಕ ಚುನಾವಣೆಗಳು 2029ರಲ್ಲಷ್ಟೇ ಸಾಧ್ಯ: ಕಾನೂನು ಆಯೋಗ

ನವದೆಹಲಿ : ಸಂವಿಧಾನಕ್ಕೆ ಅಗತ್ಯ ಸಂಭಾವ್ಯ ಬದಲಾವಣೆಗಳು ಸೇರಿದಂತೆ ಮಾರ್ಗಸೂಚಿಯೊಂದನ್ನು ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳ ಪ್ರಸ್ತಾವವನ್ನು ಪರಿಶೀಲಿಸುತ್ತಿರುವ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಗೆ ಸಲ್ಲಿಸಿದೆ.

ಆಯಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ಮೂಲಕ ಎಲ್ಲ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ತಾನು ಸೂತ್ರವೊಂದನ್ನು ರೂಪಿಸಬೇಕಿದೆ ಮತ್ತು ಇದಕ್ಕೆ ಸಮಯಾವಕಾಶ ಅಗತ್ಯವಿದೆ, ಹೀಗಾಗಿ ಏಕಕಾಲಿಕ ಚುನಾವಣೆಗಳ ಪ್ರಸ್ತಾವವು 2029ರ ವೇಳೆಗಷ್ಟೇ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದು ಆಯೋಗವು ಹೇಳಿದೆ. ಈ ಸಂಬಂಧ ಕಾನೂನು ಆಯೋಗದಿಂದ ವರದಿ ಇನ್ನೂ ಬಾಕಿಯುಳಿದಿದ್ದು, ಕೋವಿಂದ್ ಸಮಿತಿಯೊಂದಿಗೆ ಇನ್ನೊಂದು ಸುತ್ತಿನ ಚರ್ಚೆಗಾಗಿ ಅದನ್ನು ಆಹ್ವಾನಿಸಲಾಗುವುದು.

ಕಾನೂನು ಆಯೋಗವು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದರೆ ಕೋವಿಂದ್ ಸಮಿತಿಯು ವಿಧಾನಸಭೆ, ಸಂಸತ್, ನಗರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ.

ಕೋವಿಂದ್ ಸಮಿತಿಗೆ ‘ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಉನ್ನತ ಮಟ್ಟದ ಸಮಿತಿ (ಎಚ್‌ಎಲ್‌ಸಿ)’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ ಎಂದು ಕಾನೂನು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಏಕಕಾಲಿಕ ಚುನಾವಣೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಿ ಎಚ್‌ಎಲ್‌ಸಿ ಈಗಾಗಲೇ ದೇಶಾದ್ಯಂತದ ರಾಜಕೀಯ ಪಕ್ಷಗಳಿಗೆ ಪತ್ರಗಳನ್ನು ಬರೆದಿದೆ.

ಬುಧವಾರ ಸಭೆ ನಡೆಸಿದ ಎಚ್‌ಎಲ್‌ಸಿಯು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ ಚೌಧುರಿ ಅವರು ಸಮಿತಿಯ ಸದಸ್ಯತ್ವಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಗಮನಕ್ಕೆ ತೆಗೆದುಕೊಂಡಿದೆ.

andolanait

Recent Posts

ಎಂಬತ್ತರ ದಶಕದ ಮೈಸೂರಿನ ಜೆನ್ ಝೀಗಳು

ಎಸ್.ಗಂಗಾಧರಯ್ಯ ಕಾಲೇಜು ಹಾಗೂ ಯೂನಿ ವರ್ಸಿಟಿಗಳೇ ಚಳವಳಿಗಳ ತಾಲೀಮು ರಂಗವಾಗಿದ್ದ ಕಾಲವೊಂದಿತ್ತು. ಮೇಷ್ಟ್ರುಗಳೂ ವಿದ್ಯಾರ್ಥಿಗಳನ್ನು ಚಳವಳಿಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ಖುದ್ದು…

20 seconds ago

ಸಂಕಷ್ಟಕ್ಕೆ ಸಿಲುಕಿದ ಸರ್ಕಾರಕ್ಕೆ ವರದಾನವಾದ ಕಬಿನಿ

ಮಂಜು ಕೋಟೆ ಕಬಿನಿ ಜಲಾಶಯ ಭರ್ತಿ; ೧೦ ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಬರದ ನಡುವೆಯೂ  ಕೇರಳದ…

6 mins ago

ಗಾಂಧಿ ಅಭಿಯಾನ ಅರಿವಿನ ಯಾನ : ತುಂಡು ಬಟ್ಟೆಯ ಫಕೀರ ಮತ್ತು ಇಂಗ್ಲೆಂಡ್ ಚಕ್ರವರ್ತಿ

ಡಾ. ಪ್ರಮೀಳಾದೇವಿ ಬಿ.ಕೆ ೧೯೩೧-೩೨ರಲ್ಲಿ ಗಾಂಧಿಜಿಯವರು ಉಪ್ಪಿನ ಸತ್ಯಾಗ್ರಹದ ನಂತರ ರೌಂಡ್ ಟೇಬಲ್ ಮಾತುಕತೆಗಾಗಿ ಇಂಗ್ಲೆಂಡಿಗೆ ಹೋದರು. ಈ ವೇಳೆಗಾಗಲೆ…

20 hours ago

ಗಾಂಧಿ ಅಭಿಯಾನ ಅರಿವಿನ ಯಾನ : ಚಾಮರಾಜನಗರ ಸೀಮೆಯಲ್ಲಿ ಗಾಂಧಿಯ ಪ್ರಭಾವ

ಚಾಮರಾಜನಗರ ಮೈಸೂರು ಜಿಯ ಒಂದು ಸಣ್ಣ ತಾಲ್ಲೂಕು ಕೇಂದ್ರವಾಗಿತ್ತು. ಸುಮಾರು ೯೦ ವರ್ಷಗಳ ಹಿಂದೆ ಸಣ್ಣ ಪಟ್ಟಣ. ೧೯೨೬ರಿಂದ ಇಲ್ಲಿಗೆ…

22 hours ago

ಇಂದು ಮೈಸೂರಿಗೆ ಮೋದಿ ಆಗಮನ : ವಿವೇಕ ಸ್ಮಾರಕ ಲೋಕಾರ್ಪಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಐತಿಹಾಸಿಕ…

22 hours ago