BREAKING NEWS

ಶಾಸಕರ ಅಮಾನತಿಗೆ ವಿರೋಧ: ವಿಧಾನಸೌಧದಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ಸೂಚಿಸಿದ ಆರೋಪದಲ್ಲಿ ಹತ್ತು ಮಂದಿ ಶಾಸಕರ ಅಮಾನತು ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸ್ಪೀಕರ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಸ್ಪೀಕರ್ ಅವರನ್ನು ಉಪಯೋಗಿಸಿಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,‌ ಸುನೀಲ್ ಕುಮಾರ್, ಸುರೇಶ್ ಕುಮಾರ್, ಮುನಿರತ್ನ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.

ಸದನಕ್ಕೆ ಗೈರು
ಇನ್ನು ಬಿಜೆಪಿ ಶಾಸಕರು ಸದನಕ್ಕೆ ಗೈರಾಗುವ ಮೂಲಕ ಮೂಲಕ ನಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಸದಸ್ಯರು ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ. ಜೆಡಿಎಸ್ ಕೂಡಾ ಸದನಕ್ಕೆ ಹಾಜರಾಗಿಲ್ಲ.

ಐಎಎಸ್ ಅಧಿಕಾರಿಗಳನ್ನು ವಿಪಕ್ಷ ನಾಯಕರ ಸ್ವಾಗತಕ್ಕೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಬುಧವಾರ ಧರಣಿ ನಡೆಸಿದ್ದರು

ಈ ವೇಳೆ ಪೀಠದಲ್ಲಿ ಇದ್ದ ಡೆಪ್ಯೂಟಿ ಸ್ಪೀಕರ್ ಮೇಲೆ ಕಾಗದ ಹರಿದು ಹಾಕಿದ್ದರು. ಪೀಠಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಹತ್ತು ಮಂದಿ‌ ಶಾಸಕರನ್ನು ಅಮಾನತು ಮಾಡಲಾಗಿತ್ತು.
ಬಳಿಕ ಸದನದಿಂದ ಅಮಾನತುಗೊಂಡ ಸದಸ್ಯರನ್ನು ಮಾರ್ಷಲ್ ಗಳು ಹೊರ ಹಾಕಿದ್ದರು. ಈ ವೇಳೆ ನಡೆದ ನೂಕಾಟ ತಳ್ಳಾಟದಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ ಅಸ್ವಸ್ಥಗೊಂಡಿದ್ದರು.

ರಾಜಭವನಕ್ಕೆ ತೆರಳುತ್ತಿರುವ ಬಿಜೆಪಿ ನಾಯಕರು
ಅಧಿವೇಶನಕ್ಕೆ ಹತ್ತು ಸದಸ್ಯರ ಅಮಾನತು ವಿಚಾರವಾಗಿ ಸ್ಪೀಕರ್ ನಡೆಯನ್ನು ವಿರೋಧಿಸಿ ಬಿಜೆಪಿ ನಾಯಕರು ರಾಜಪಾಲರನ್ನು ಭೇಟಿ ಮಾಡಲು ತೆರಳುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರ ನಾಯಕರು ರಾಜಭವನಕ್ಕೆ ಕಾಲುನಡಿಗೆಯ ಮೂಲಕ ತೆರಳುತ್ತಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಲು ಆಗಮಿಸಿದ ಬಿಜೆಪಿ ಶಾಸಕರಿಗೆ ಜೆಡಿಎಸ್ ಕೂಡಾ ಸಾಥ್ ನೀಡಿದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕರು ರಾಜಭವನಕ್ಕೆ ಆಗಮಿಸಿದ್ದಾರೆ. ಅಮಾನತು ವಿರೋಧಿಸಿ ರಾಜಪಾಲರಿಗೆ ಜಂಟಿಯಾಗಿ‌ ದೂರು ನೀಡಲಿದ್ದಾರೆ.

andolanait

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕೆನೆಪದರ ಪರಿಶಿಷ್ಟರಿಗೆ ಬೇಡವೆನ್ನುವ ಕೇಂದ್ರಕ್ಕೆ ಮತ್ತೆ ಸುಪ್ರೀಂ ತಾಕೀತು

ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…

1 min ago

ಸಂದು ಹೋದ ಜನಪದ ಹಾಡುಗಾರ ಕೈಲಾಸಮೂರ್ತಿಯ ಕುರಿತು…

ಸಿ.ಎಂ.ನರಸಿಂಹಮೂರ್ತಿ ಕೈಲಾಸಮೂರ್ತಿ ಗುಂಡು ಗುಂಡಾಗಿ, ಚೆಂದುಳ್ಳ ಚೆಲುವನಂತೆ ಕೆಂಪು ಕೆಂಪಾಗಿದ್ದವ. ಕೇವಲ ೩೮ ವರ್ಷ ವಯಸ್ಸು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕುಸಿದ್ದಯ್ಯನಪುರ…

7 mins ago

ಕರೆಂಟು ಕಾರಿನ ಛಾರ್ಜಿಂಗ್ ಫಜೀತಿಗಳು

ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್ ಶೋರೂಮಿನಿಂದ ಹೊರ ಬೀಳಬೇಕಾದರೆ ಕಾರಿನ ಬ್ಯಾಟರಿ ನೂರು ಪ್ರತಿಶತ ಛಾರ್ಜ್ ಆಗಿರುವುದಾಗಿ ತೋರಿಸುತ್ತಿತ್ತು. ಎರಡು…

11 mins ago

ಸಿಕ್ಕು ಒಂದು ಅಪೂರ್ವ ಕಥೆ

ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಕಥಾಲೋಕದಲ್ಲಿ ಸಣ್ಣಪ್ರಾಯದಲ್ಲೇ ಒಂದು ನಕ್ಷತ್ರದಂತೆ ಬೆಳಗುತ್ತಿದ್ದ ಶ್ರೀಕೃಷ್ಣ ಆಲನಹಳ್ಳಿ, ಅಷ್ಟೇ ಸಣ್ಣ ಪ್ರಾಯದಲ್ಲಿ ಈ ಲೋಕ…

18 mins ago

ಕೊಡಗಿನಲ್ಲಿ ತಲೆ ಎತ್ತುತ್ತಿರುವ ಅಕ್ರಮ ವಿಲ್ಲಾಗಳು: ಆರೋಪ

ಕಾಂಗೀರ ಬೋಪಣ್ಣ ಸೂಕ್ತ ತನಿಖೆಗೆ ಪರಿಸರವಾದಿಗಳ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ವಿರಾಜಪೇಟೆ: ಅಚ್ಚ ಹಸಿರಿನ ಸುಂದರ…

25 mins ago

ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ದಾಸೇಗೌಡ ಮಾ.೧೯ರಿಂದ ೩ ದಿನಗಳ ಕಾಲ ಉತ್ಸವ; ಹಾಲುಗಡ, ಇಟ್ನ ಗ್ರಾಮಗಳಲ್ಲಿ ಮನೆ ಮಾಡಿದ ಸಂಭ್ರಮ ಸರಗೂರು: ಇತಿಹಾಸ ಪ್ರಸಿದ್ಧ…

31 mins ago