ಹಾಡು ಪಾಡು

ಸಂದು ಹೋದ ಜನಪದ ಹಾಡುಗಾರ ಕೈಲಾಸಮೂರ್ತಿಯ ಕುರಿತು…

ಸಿ.ಎಂ.ನರಸಿಂಹಮೂರ್ತಿ

ಕೈಲಾಸಮೂರ್ತಿ ಗುಂಡು ಗುಂಡಾಗಿ, ಚೆಂದುಳ್ಳ ಚೆಲುವನಂತೆ ಕೆಂಪು ಕೆಂಪಾಗಿದ್ದವ. ಕೇವಲ ೩೮ ವರ್ಷ ವಯಸ್ಸು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕುಸಿದ್ದಯ್ಯನಪುರ ಗ್ರಾಮದ ದಿವಂಗತ ಮಲ್ಲಿಕಾರ್ಜುನ ಮತ್ತು ಲಕ್ಷ್ಮೀ ದಂಪತಿಯ ೨ನೇ ಮಗ. ತಾತ, ಅಜ್ಜಿ, ಅಪ್ಪ ಎಲ್ಲರೂ ಗುರು ಬೋಧನೆಯವರು, ಗುರು ಮಕ್ಕಳ ಪರಂಪರೆಯವರು.

ಬಿಳಿ ಅಂಗಿ, ಬಿಳಿ ಪಂಚೆ, ಹೆಗಲಿಗೆ ಕೆಂಪು ಶಾಲನ್ನು ಹಿಂದಕ್ಕೂ ಮುಂದಕ್ಕೂ ಇಳಿಬಿಟ್ಟು, ಹಣೆಗೆ ವಿಭೂತಿ ಭಸ್ಮ ಬಳಿದು ಕಂಕುಳಲ್ಲಿ ಜೋಳಿಗೆ, ಕೈಯಲ್ಲಿ ದಮ್ಮಡಿ ಹಿಡಿದು ತಂಡದ ಸಹ ಸದಸ್ಯರ ಜೊತೆ ಒಂದೇ ಸಮನೆ ಉಘೇ ಮಾತ್ಮಲಯೋ… ಎಂದು ಉಘೇ ಹಾಡುತ್ತಾ, ತಂಬೂರಿ ಮೀಟುತ್ತಾ, ದಮ್ಮಡಿ ನುಡಿಸುತ್ತ, ಜೊತೆಗೆ ಹಾಡು ಹಾಡುತ್ತಾ, ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದ ತಂಡ ಇಡೀ ಭಾರತವನ್ನು ಜನಪದ ಗೀತೆಗಳನ್ನು ಹಾಡುವ ಮೂಲಕ ಸುತ್ತಿ ಬಂದದ್ದು ಈಗ ಇತಿಹಾಸವಾಗಿದೆ. ೮ನೇ ತರಗತಿ ಓದುತ್ತಿದ್ದಾಗಲೇ ಮನೆಯವರು ದೇವರಗುಡ್ಡನನ್ನಾಗಿ ಮಾಡಿದರು. ವಿದ್ಯೆ ಅರ್ಧಕ್ಕೆ ನಿಂತಿತು. ದೇವರ ಗುಡ್ಡನಾಗಿ ಮಂಟೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗಸ್ವಾಮಿ ಕಾವ್ಯಗಳನ್ನು ಕಲಿಯಲು ಕುರುಬನಕಟ್ಟೆಯಲ್ಲಿ ಹಂಪಿ ವಿಶ್ವವಿದ್ಯಾನಿಲಯ ಆಗ ತಾನೆ ಆರಂಭಿಸಿದ್ದ ದೇಸೀ ಅಧ್ಯಯನ ಕೇಂದ್ರದ ನೀಲಗಾರರ ತರಬೇತಿ ಶಾಲೆಯಲ್ಲಿ ಸುವರ್ಣಾವಕಾಶ ಒದಗಿ ಬಂತು.

ಬೊಪ್ಪೇಗೌಡನಪುರ ಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀ ಪ್ರಭುದೇವರಾಜೇ ಅರಸರ ಕೃಪಾಶೀರ್ವಾದದಿಂದ ವಿದ್ಯೆ ಕಲಿತು ಪ್ರಸಿದ್ಧಿ ಪಡೆದುಕೊಂಡ. ದಮ್ಮಡಿ, ತಾಳ ನುಡಿಸುವುದರಲ್ಲಿ ಮಹಾನ್ ಪ್ರವೀಣನಾಗಿದ್ದ ಕೈಲಾಸಮೂರ್ತಿ ಜಾನಪದ ಹಾಡುಗಾರಿಕೆ ಮತ್ತು ಆಚರಣೆ ಪರಂಪರೆಗಳನ್ನು ಕಟ್ಟುವ, ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮಾದರಿಯಾಗಿದ್ದ. ಈತ ಮೈಸೂರು ಆಕಾಶವಾಣಿ, ಬೆಂಗಳೂರು ದೂರದರ್ಶನದಲ್ಲಿ ಹಾಡಿ ಜನಪ್ರಿಯನಾದವನು.

ಕೈಲಾಸಮೂರ್ತಿಗೆ ಚಾಮರಾಜನಗರ ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಅತ್ಯುತ್ತಮ ಯುವ ಗಾಯಕ ಪ್ರಶಸ್ತಿ, ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ, ಕರುನಾಡ ಸೇವಾ ಪ್ರಶಸ್ತಿ, ಅಂಕ ಪ್ರಶಸ್ತಿ, ಪ್ರಜಾಭೂಷಣ ರಾಷ್ಟ್ರ ಪ್ರಶಸ್ತಿಗಳಲ್ಲದೆ ಹಲವು ಬಿರುದು ಸನ್ಮಾನಗಳು ಸಂದಿದ್ದವು. ಪ್ರತಿ ವರ್ಷವೂ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವ, ಬಿಳಿಗಿರಿರಂಗನ ಬೆಟ್ಟದ ಜಾತ್ರಾ ಮಹೋತ್ಸವ, ಚಿಕ್ಕಲ್ಲೂರು- ಕುರುಬನಕಟ್ಟೆ ಮಂಟೇಸ್ವಾಮಿ ಉತ್ಸವ, ಕಪ್ಪಡಿ, ಸಿದ್ದಪ್ಪಾಜಿ ಉತ್ಸವ… ಹೀಗೆ ಅನೇಕ ರಾಜ್ಯ ಮಟ್ಟದ ಉತ್ಸವಗಳಲ್ಲಿ ಅಹೋರಾತ್ರಿ ಹಾಡುತ್ತಿದ್ದುದು ಈಗ ನೆನಪು ಮಾತ್ರ. ಈ ಪರಂಪರೆಯ ಹಿರಿಯ ಗಾಯಕರಾದ ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್, ಮಳವಳ್ಳಿ ನಾಗೇಂದ್ರ, ಡಾ. ಪಿ.ಕೆ.ರಾಜಶೇಖರ, ಶ್ರೀನಿವಾಸ ಜಿ. ಕಪ್ಪಣ್ಣ, ಪಿಚ್ಚಳ್ಳಿ ಶ್ರೀನಿವಾಸ್, ಮಂಜಮ್ಮ ಜೋಗತಿ ಹೀಗೆ ನಾಡಿನ ಘಟಾನುಘಟಿಗಳ ಜೊತೆ ಹೊಸ ತಲೆಮಾರಿನ ಯುವ ಜನಪದ ಗಾಯಕನಾಗಿ ಗುರುತಿಸಿಕೊಂಡಿದ್ದ. ತಾನೇ ಸ್ವತಃ ಸ್ವಗ್ರಾಮವಾದ ಸಿದ್ದಯ್ಯನಪುರದಲ್ಲಿ ಜಾನಪದ ಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದು, ‘ಹಾಡುವ ಕಾಯಕವೇ ಕೈಲಾಸ’ ಎಂದು ನಂಬಿದ್ದ ಕೈಲಾಸಮೂರ್ತಿ ಹಾಡು ಕಥೆಗಳ ಸರದಾರನಾಗಿದ್ದ. ಈತನ ಆತ್ಮಚರಿತ್ರೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಪ್ರಕಟಿಸಿರುವ ಹಿರಿಯ ಜಾನಪದ ವಿದ್ವಾಂಸಡಾ.ಹನೂರು ಕೃಷ್ಣಮೂರ್ತಿ ಸಂಪಾದಕತ್ವದ ‘ನಾವು ಕೂಗುವ ಕೂಗು’ ಎನ್ನುವ ಪುಸ್ತಕದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ ತ ಸಾಹಿತಿ ಮಹದೇವ ಶಂಕನಪುರ ಅವರು ದಾಖಲಿಸಿದ್ದಾರೆ.

ಕಳೆದ ತಿಂಗಳು ೧೨ನೇ ತಾರೀಖು ಕೈಲಾಸಮೂರ್ತಿ ಫೋನಿನಿಂದ ನನಗೆ ಕರೆ ಬರುತ್ತದೆ. ಪಕ್ಕದಲ್ಲೇ ಇಟ್ಟಿದ್ದ ಫೋನನ್ನು ಗಾಬರಿಯಿಂದ ನೋಡಿ ‘ಏನು ಕೈಲಾಸ ಮೂರ್ತಿ’ ಎನ್ನುತ್ತೇನೆ. ಅತ್ತಕಡೆಯಿಂದ ಕೈಲಾಸ ಮೂರ್ತಿಯ ಸಹೋದರನಂತಿದ್ದ ಸಹಪಾಠಿ ಕುಮಾರ್- ‘ಇನ್ನೆಲ್ಲಿ ಕೈಲಾಸಮೂರ್ತಿ ಅಣ್ಣ, ಕೈಲಾಸಮೂರ್ತಿ ಈವಾಗ ತೀರಿಹೋದ’ ಎಂದು ಅಳತೊಡಗಿದ. ನಾನು ಆ ಹೊತ್ತಿನಲ್ಲಿ ದಿಗ್ಭ್ರಾಂತನಾಗಿ ‘ಅಯ್ಯೋ ಏನಾಗಿತ್ತು?’ ಎಂದೆ. ಆತ ‘ಹಾರ್ಟ್ ಅಟ್ಯಾಕ್ ಅಣ್ಣ’ ಅಂದ, ಒಂದು ಕ್ಷಣ… ಏನು ಮಾತನಾಡದೆ ಮೌನವಾದೆ. ಚಿಕ್ಕ ವಯಸ್ಸಿನ ಹೆಂಡತಿ, ಎರಡು ಚಿಕ್ಕ ಮಕ್ಕಳು, ಆತನ ಕುಟುಂಬ ಮತ್ತು ತಂಡದ ಗೆಳೆಯರನ್ನು ಬಿಟ್ಟುಮಧ್ಯದಲ್ಲಿಯೇ ಇನ್ನಿಲ್ಲವಾಗಿದ್ದು ಅತೀವ ದುಃಖವನ್ನುಂಟು ಮಾಡಿದೆ.

ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವವರು ಕೈಲಾಸಮೂರ್ತಿ ಅವರ ಪತ್ನಿ ರೇಖಾ ಅವರ ಮೊಬೈಲ್ ನಂಬರ್ ೯೭೩೯೧ ೨೭೦೫೦ ಸಂಪರ್ಕಿಸಿ ಸಹಾಯ ಮಾಡಬಹುದು

” ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದೆ. ” 

 

 

ಆಂದೋಲನ ಡೆಸ್ಕ್

Recent Posts

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

5 hours ago

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

5 hours ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

10 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

10 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

10 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

10 hours ago