ಹಾಡು ಪಾಡು

ಸಂದು ಹೋದ ಜನಪದ ಹಾಡುಗಾರ ಕೈಲಾಸಮೂರ್ತಿಯ ಕುರಿತು…

ಸಿ.ಎಂ.ನರಸಿಂಹಮೂರ್ತಿ

ಕೈಲಾಸಮೂರ್ತಿ ಗುಂಡು ಗುಂಡಾಗಿ, ಚೆಂದುಳ್ಳ ಚೆಲುವನಂತೆ ಕೆಂಪು ಕೆಂಪಾಗಿದ್ದವ. ಕೇವಲ ೩೮ ವರ್ಷ ವಯಸ್ಸು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕುಸಿದ್ದಯ್ಯನಪುರ ಗ್ರಾಮದ ದಿವಂಗತ ಮಲ್ಲಿಕಾರ್ಜುನ ಮತ್ತು ಲಕ್ಷ್ಮೀ ದಂಪತಿಯ ೨ನೇ ಮಗ. ತಾತ, ಅಜ್ಜಿ, ಅಪ್ಪ ಎಲ್ಲರೂ ಗುರು ಬೋಧನೆಯವರು, ಗುರು ಮಕ್ಕಳ ಪರಂಪರೆಯವರು.

ಬಿಳಿ ಅಂಗಿ, ಬಿಳಿ ಪಂಚೆ, ಹೆಗಲಿಗೆ ಕೆಂಪು ಶಾಲನ್ನು ಹಿಂದಕ್ಕೂ ಮುಂದಕ್ಕೂ ಇಳಿಬಿಟ್ಟು, ಹಣೆಗೆ ವಿಭೂತಿ ಭಸ್ಮ ಬಳಿದು ಕಂಕುಳಲ್ಲಿ ಜೋಳಿಗೆ, ಕೈಯಲ್ಲಿ ದಮ್ಮಡಿ ಹಿಡಿದು ತಂಡದ ಸಹ ಸದಸ್ಯರ ಜೊತೆ ಒಂದೇ ಸಮನೆ ಉಘೇ ಮಾತ್ಮಲಯೋ… ಎಂದು ಉಘೇ ಹಾಡುತ್ತಾ, ತಂಬೂರಿ ಮೀಟುತ್ತಾ, ದಮ್ಮಡಿ ನುಡಿಸುತ್ತ, ಜೊತೆಗೆ ಹಾಡು ಹಾಡುತ್ತಾ, ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದ ತಂಡ ಇಡೀ ಭಾರತವನ್ನು ಜನಪದ ಗೀತೆಗಳನ್ನು ಹಾಡುವ ಮೂಲಕ ಸುತ್ತಿ ಬಂದದ್ದು ಈಗ ಇತಿಹಾಸವಾಗಿದೆ. ೮ನೇ ತರಗತಿ ಓದುತ್ತಿದ್ದಾಗಲೇ ಮನೆಯವರು ದೇವರಗುಡ್ಡನನ್ನಾಗಿ ಮಾಡಿದರು. ವಿದ್ಯೆ ಅರ್ಧಕ್ಕೆ ನಿಂತಿತು. ದೇವರ ಗುಡ್ಡನಾಗಿ ಮಂಟೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗಸ್ವಾಮಿ ಕಾವ್ಯಗಳನ್ನು ಕಲಿಯಲು ಕುರುಬನಕಟ್ಟೆಯಲ್ಲಿ ಹಂಪಿ ವಿಶ್ವವಿದ್ಯಾನಿಲಯ ಆಗ ತಾನೆ ಆರಂಭಿಸಿದ್ದ ದೇಸೀ ಅಧ್ಯಯನ ಕೇಂದ್ರದ ನೀಲಗಾರರ ತರಬೇತಿ ಶಾಲೆಯಲ್ಲಿ ಸುವರ್ಣಾವಕಾಶ ಒದಗಿ ಬಂತು.

ಬೊಪ್ಪೇಗೌಡನಪುರ ಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀ ಪ್ರಭುದೇವರಾಜೇ ಅರಸರ ಕೃಪಾಶೀರ್ವಾದದಿಂದ ವಿದ್ಯೆ ಕಲಿತು ಪ್ರಸಿದ್ಧಿ ಪಡೆದುಕೊಂಡ. ದಮ್ಮಡಿ, ತಾಳ ನುಡಿಸುವುದರಲ್ಲಿ ಮಹಾನ್ ಪ್ರವೀಣನಾಗಿದ್ದ ಕೈಲಾಸಮೂರ್ತಿ ಜಾನಪದ ಹಾಡುಗಾರಿಕೆ ಮತ್ತು ಆಚರಣೆ ಪರಂಪರೆಗಳನ್ನು ಕಟ್ಟುವ, ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮಾದರಿಯಾಗಿದ್ದ. ಈತ ಮೈಸೂರು ಆಕಾಶವಾಣಿ, ಬೆಂಗಳೂರು ದೂರದರ್ಶನದಲ್ಲಿ ಹಾಡಿ ಜನಪ್ರಿಯನಾದವನು.

ಕೈಲಾಸಮೂರ್ತಿಗೆ ಚಾಮರಾಜನಗರ ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಅತ್ಯುತ್ತಮ ಯುವ ಗಾಯಕ ಪ್ರಶಸ್ತಿ, ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ, ಕರುನಾಡ ಸೇವಾ ಪ್ರಶಸ್ತಿ, ಅಂಕ ಪ್ರಶಸ್ತಿ, ಪ್ರಜಾಭೂಷಣ ರಾಷ್ಟ್ರ ಪ್ರಶಸ್ತಿಗಳಲ್ಲದೆ ಹಲವು ಬಿರುದು ಸನ್ಮಾನಗಳು ಸಂದಿದ್ದವು. ಪ್ರತಿ ವರ್ಷವೂ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವ, ಬಿಳಿಗಿರಿರಂಗನ ಬೆಟ್ಟದ ಜಾತ್ರಾ ಮಹೋತ್ಸವ, ಚಿಕ್ಕಲ್ಲೂರು- ಕುರುಬನಕಟ್ಟೆ ಮಂಟೇಸ್ವಾಮಿ ಉತ್ಸವ, ಕಪ್ಪಡಿ, ಸಿದ್ದಪ್ಪಾಜಿ ಉತ್ಸವ… ಹೀಗೆ ಅನೇಕ ರಾಜ್ಯ ಮಟ್ಟದ ಉತ್ಸವಗಳಲ್ಲಿ ಅಹೋರಾತ್ರಿ ಹಾಡುತ್ತಿದ್ದುದು ಈಗ ನೆನಪು ಮಾತ್ರ. ಈ ಪರಂಪರೆಯ ಹಿರಿಯ ಗಾಯಕರಾದ ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್, ಮಳವಳ್ಳಿ ನಾಗೇಂದ್ರ, ಡಾ. ಪಿ.ಕೆ.ರಾಜಶೇಖರ, ಶ್ರೀನಿವಾಸ ಜಿ. ಕಪ್ಪಣ್ಣ, ಪಿಚ್ಚಳ್ಳಿ ಶ್ರೀನಿವಾಸ್, ಮಂಜಮ್ಮ ಜೋಗತಿ ಹೀಗೆ ನಾಡಿನ ಘಟಾನುಘಟಿಗಳ ಜೊತೆ ಹೊಸ ತಲೆಮಾರಿನ ಯುವ ಜನಪದ ಗಾಯಕನಾಗಿ ಗುರುತಿಸಿಕೊಂಡಿದ್ದ. ತಾನೇ ಸ್ವತಃ ಸ್ವಗ್ರಾಮವಾದ ಸಿದ್ದಯ್ಯನಪುರದಲ್ಲಿ ಜಾನಪದ ಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದು, ‘ಹಾಡುವ ಕಾಯಕವೇ ಕೈಲಾಸ’ ಎಂದು ನಂಬಿದ್ದ ಕೈಲಾಸಮೂರ್ತಿ ಹಾಡು ಕಥೆಗಳ ಸರದಾರನಾಗಿದ್ದ. ಈತನ ಆತ್ಮಚರಿತ್ರೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಪ್ರಕಟಿಸಿರುವ ಹಿರಿಯ ಜಾನಪದ ವಿದ್ವಾಂಸಡಾ.ಹನೂರು ಕೃಷ್ಣಮೂರ್ತಿ ಸಂಪಾದಕತ್ವದ ‘ನಾವು ಕೂಗುವ ಕೂಗು’ ಎನ್ನುವ ಪುಸ್ತಕದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ ತ ಸಾಹಿತಿ ಮಹದೇವ ಶಂಕನಪುರ ಅವರು ದಾಖಲಿಸಿದ್ದಾರೆ.

ಕಳೆದ ತಿಂಗಳು ೧೨ನೇ ತಾರೀಖು ಕೈಲಾಸಮೂರ್ತಿ ಫೋನಿನಿಂದ ನನಗೆ ಕರೆ ಬರುತ್ತದೆ. ಪಕ್ಕದಲ್ಲೇ ಇಟ್ಟಿದ್ದ ಫೋನನ್ನು ಗಾಬರಿಯಿಂದ ನೋಡಿ ‘ಏನು ಕೈಲಾಸ ಮೂರ್ತಿ’ ಎನ್ನುತ್ತೇನೆ. ಅತ್ತಕಡೆಯಿಂದ ಕೈಲಾಸ ಮೂರ್ತಿಯ ಸಹೋದರನಂತಿದ್ದ ಸಹಪಾಠಿ ಕುಮಾರ್- ‘ಇನ್ನೆಲ್ಲಿ ಕೈಲಾಸಮೂರ್ತಿ ಅಣ್ಣ, ಕೈಲಾಸಮೂರ್ತಿ ಈವಾಗ ತೀರಿಹೋದ’ ಎಂದು ಅಳತೊಡಗಿದ. ನಾನು ಆ ಹೊತ್ತಿನಲ್ಲಿ ದಿಗ್ಭ್ರಾಂತನಾಗಿ ‘ಅಯ್ಯೋ ಏನಾಗಿತ್ತು?’ ಎಂದೆ. ಆತ ‘ಹಾರ್ಟ್ ಅಟ್ಯಾಕ್ ಅಣ್ಣ’ ಅಂದ, ಒಂದು ಕ್ಷಣ… ಏನು ಮಾತನಾಡದೆ ಮೌನವಾದೆ. ಚಿಕ್ಕ ವಯಸ್ಸಿನ ಹೆಂಡತಿ, ಎರಡು ಚಿಕ್ಕ ಮಕ್ಕಳು, ಆತನ ಕುಟುಂಬ ಮತ್ತು ತಂಡದ ಗೆಳೆಯರನ್ನು ಬಿಟ್ಟುಮಧ್ಯದಲ್ಲಿಯೇ ಇನ್ನಿಲ್ಲವಾಗಿದ್ದು ಅತೀವ ದುಃಖವನ್ನುಂಟು ಮಾಡಿದೆ.

ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವವರು ಕೈಲಾಸಮೂರ್ತಿ ಅವರ ಪತ್ನಿ ರೇಖಾ ಅವರ ಮೊಬೈಲ್ ನಂಬರ್ ೯೭೩೯೧ ೨೭೦೫೦ ಸಂಪರ್ಕಿಸಿ ಸಹಾಯ ಮಾಡಬಹುದು

” ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದೆ. ” 

 

 

ಆಂದೋಲನ ಡೆಸ್ಕ್

Recent Posts

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

25 mins ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

32 mins ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

2 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

5 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

5 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

5 hours ago