BREAKING NEWS

ಅಡಿಡಾಸ್, ನೈಕ್‌ ಸ್ಪೋರ್ಟ್ಸ್‌ ಶೂ ತಯಾರಿಕಾ ಕಂಪನಿಯಿಂದ ತಮಿಳುನಾಡಿನಲ್ಲಿ ಭಾರೀ ಹೂಡಿಕೆ

ಚೆನ್ನೈ : ವಿಶ್ವದ ಅತಿದೊಡ್ಡ ಬ್ರಾಂಡೆಡ್‌ ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಎನಿಸಿರುವ ತೈವಾನ್‌ ಮೂಲದ ಪೌ ಚೆನ್‌ ಕಂಪನಿಯ ಅಂಗ ಸಂಸ್ಥೆಯೊಂದು ತಮಿಳುನಾಡಿನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ 2,302 ಕೋಟಿ ರೂ.ಗಳ ಭಾರೀ ಹೂಡಿಕೆ ಮಾಡಲಿದೆ.

ಹಲವು ಜಾಗತಿಕ ಬ್ರಾಂಡ್‌ಗಳಿಗೆ ಶೂಗಳನ್ನು ಉತ್ಪಾದಿಸುವ ಮೂಲಕ ಜಾಗತಿಕ ಮನ್ನಣೆ ಗಳಿಸಿರುವ ಪೌ ಚೆನ್‌ ಕಂಪೆನಿಯು 2022ರಲ್ಲಿ 27.2 ಕೋಟಿ ಜೋಡಿ ಶೂಗಳನ್ನು ತಯಾರಿಸಿ ವಿಶ್ವದಾದ್ಯಂತ ರಫ್ತು ಮಾಡಿದೆ. ಇದು ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳಾದ ನೈಕಿ, ಅಡಿಡಾಸ್‌, ಏಸಿಕ್ಸ್‌, ಕ್ಲಾರ್ಕ್ಸ್‌, ರೀಬಾಕ್‌, ಪೂಮಾ, ಕ್ರಾಕ್ಸ್‌, ಟಿಂಬರ್‌ಲ್ಯಾಂಡ್‌ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಶೂಗಳನ್ನು ತಯಾರಿಸುತ್ತದೆ. ಇಂಥ ದೈತ್ಯ ಕಂಪನಿಯ ಅಂಗ ಸಂಸ್ಥೆಯು ತಮಿಳುನಾಡಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ಮಾಡಲು ಸಿದ್ಧತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರೊಂದಿಗೆ ಆನ್‌ಲೈನ್‌ ಮೂಲಕ ಸಭೆ ನಡೆಸಿದ ಬಳಿಕ ಪೌ ಚೆನ್‌ ಕಂಪೆನಿಯ ಉಪಾಧ್ಯಕ್ಷ ಜಾರ್ಜ್‌ ಲಿಯು ಅವರು “ಇದು ಭಾರತದಲ್ಲಿ ಬರಲಿರುವ ಅನೇಕ ಹೂಡಿಕೆಗಳಲ್ಲಿ ಮೊದಲನೆ ಪ್ರಯತ್ನವಾಗಿದೆ. ನಮ್ಮ ಹೂಡಿಕೆ ಯೋಜನೆಗೆ ಉತ್ತಮ ಬೆಂಬಲ ಸಿಗಲಿದೆ ಎಂಬ ವಿಶ್ವಾಸವಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಬ್ರಾಂಡೆಡ್‌ ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಪೌ ಚೆನ್‌ನ ಅಂಗ ಸಂಸ್ಥೆಯ ಹೂಡಿಕೆಯಿಂದ ತಮಿಳುನಾಡಿನಲ್ಲಿ 12 ವರ್ಷಗಳ ಅವಧಿಯಲ್ಲಿ ಸುಮಾರು 20,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತೈವಾನ್‌ ಮೂಲದ ಕಂಪನಿಯು ಹೇಳಿಕೊಂಡಿದೆ.

ಜಾರ್ಜಿಯೊ ಅರ್ಮಾನಿ ಮತ್ತು ಗುಚ್ಚಿ ಸೇರಿದಂತೆ ಅನೇಕ ಬ್ರಾಂಡ್‌ಗಳಿಂದ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಪಡೆದುಕೊಂಡಿರುವ ನೆರೆಯ ರಾಜ್ಯ ತಮಿಳುನಾಡು, ಭಾರತದ ಪಾದರಕ್ಷೆ ರಫ್ತಿನಲ್ಲಿ ಇದೀಗ ಶೇ. 45ರಷ್ಟು ಪಾಲು ಪಡೆದಿದೆ ಎಂದು ಅಲ್ಲಿನ ರಾಜ್ಯ ಸರಕಾರದ ವರದಿ ತಿಳಿಸಿದೆ. ಈ ಹೊಸ ಹೂಡಿಕೆಯು ತಮಿಳುನಾಡಿನ ಪಾದರಕ್ಷೆ ಉದ್ಯಮಕ್ಕೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಎಂ.ಕೆ. ಸ್ಟಾಲಿನ್‌ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.

ತಮಿಳುನಾಡು ರಾಜ್ಯವು ಅನಾದಿ ಕಾಲದಿಂದಲೂ ಉದ್ಯಮಗಳಿಗೆ ಹೆಸರಾಗಿದ್ದು, ಪಾದರಕ್ಷೆ, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಅಂತರಾಷ್ಟ್ರೀಯ ತಯಾರಕರಿಗೆ ಜನಪ್ರಿಯ ತಾಣವಾಗಿ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಚಿಪ್‌ ತಯಾರಿಕೆ, ಮೊಬೈಲ್‌ ಫೋನ್‌ ಉತ್ಪಾದನೆ, ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಯಲ್ಲೂ ಹೆಸರು ಮಾಡುತ್ತಿದ್ದು, ಹೊಸ ತಲೆಮಾರಿನ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕ ನೆರೆಯ ರಾಜ್ಯಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ.

lokesh

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

9 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

9 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

9 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

9 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

9 hours ago