BREAKING NEWS

ಯಡಿಯೂರಪ್ಪ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರ ಕೈಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಏನಿದರ ಅರ್ಥ?

ಬೆಂಗಳೂರು: ಚುನಾವಣೆಯ ಕಾವು ಏರಿರುವ ಕರ್ನಾಟಕಕ್ಕೆ ಗುರುವಾರ ರಾತ್ರಿಯೇ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶುಕ್ರವಾರ ಬೆಳಗ್ಗೆ ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಕುತೂಹಲಕಾರಿ ವಿದ್ಯಮಾನವೊಂದು ನಡೆಯಿತು. ಅಮಿತ್ ಶಾ ಅವರನ್ನು ಸ್ವಾಗತಿಸಲು ಯಡಿಯೂರಪ್ಪನವರು ತಮ್ಮ ನಿವಾಸದ ಅಂಗಳದಲ್ಲಿ ಹೂಗುಚ್ಛಗಳನ್ನು ಹಿಡಿದು ಕಾಯುತ್ತಾ ನಿಂತಿದ್ದರು. ಅವರ ಜೊತೆಗೆ, ಅವರ ಪುತ್ರ ವಿಜಯೇಂದ್ರ ಹಾಗೂ ಮಕ್ಕಳು ಇದ್ದರು.
ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪನವರ ಕಡೆಗೆ ನಗುಮೊಗ ಬೀರಿದರಾದರೂ ಕಾರು ಇಳಿಯುತ್ತಲೇ, ಯಡಿಯೂರಪ್ಪನವರಿಗೆ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು. ಇದನ್ನು ನಿರೀಕ್ಷಸದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲೇ ಇಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ, ಅವರಿಗೆ ಕೊಡಿ ಅಂತ ಕೈ ತೋರಿಸಿ ಹೇಳಿದರು. ಆಗ ಫಕ್ಕನೆ ಅರ್ಥವಾದಂತಾಗಿ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು.
ಆಗ, ವಿಜಯೇಂದ್ರ ಅವರಿಂದ ಹೂಗುಚ್ಛವನ್ನು ಸ್ವೀಕಸಿರಿದ ಶಾ, ವಿಜಯೇಂದ್ರ ಅವರ ಬೆನ್ನು ತಟ್ಟಿದರು. ಅಷ್ಟರಲ್ಲಿ ಯಡಿಯೂರಪ್ಪನವರಿಗೆ ಅವರ ಪುತ್ರಿಯರು ತಮ್ಮಲ್ಲಿದ್ದ ಹೂಗುಚ್ಛವನ್ನು ಹಸ್ತಾಂತರಿಸಿದರು. ಆನಂತರ, ಅದನ್ನು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹಸ್ತಾಂತರಿಸಿದರು.
ರಾಜ್ಯ ರಾಜಕಾರಣದಿಂದ ಯಡಿಯೂರಪ್ಪನವರು ದೂರ ಸರಿದಿದ್ದಾರೆ. ಒಂದು ಕಡೆ, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು, ಅತ್ತ ವಿಜಯೇಂದ್ರ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನದಿಂದಾಗಿಯೇ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಹೈಕಮಾಂಡ್ ಗೂ ಯಡಿಯೂರಪ್ಪನವರ ಆಶಯ ಅರ್ಥವಾಗಿದೆ. ಅದರ ಪರಿಣಾಮವಾಗಿಯೇ, ಅಮಿತ್ ಶಾ ಅವರು ಯಡಿಯೂರಪ್ಪನವರ ಕೈಲಿದ್ದ ವಿಜಯೇಂದ್ರ ಕಡೆಯಿಂದ ಹೂಗುಚ್ಛವನ್ನು ಪಡೆದರು ಎಂದು ವಿಶ್ಲೇಷಿಸಲಾಗುತ್ತಿದೆ.
ಯಡಿಯೂರಪ್ಪನವರಿಗೆ ನಿರಾಸೆಯಾದರೂ ಸಮಾಧಾನ!
ಯಡಿಯೂರಪ್ಪನವರಿಗೆ ತಮ್ಮ ಕಡೆಯಿಂದ ಅಮಿತ್ ಶಾ ಅವರು ಹೂಗುಚ್ಛ ಸ್ವೀಕರಿಸದೇ ಇದ್ದರೂ, ತಮ್ಮ ಮಗನ ಕೈಯ್ಯಿಂದ ಹೂಗುಚ್ಛವನ್ನು ಸ್ವೀಕರಿಸಿದ್ದ ನಿರಾಸೆ ಹಾಗೂ ಸಮಾಧಾನ – ಇವರೆಡನ್ನೂ ಒಟ್ಟೊಟ್ಟಿಗೇ ತಂದಿರಬಹುದು. ಮುಂದೆ ತಮ್ಮ ಮಗನ ಭವಿಷ್ಯ ಗಟ್ಟಿಯಾಗುತ್ತದೆ ಎಂಬುದೂ ಇದರಿಂದ ಅವರಿಗೆ ಖಾತ್ರಿಯಾಗಿರಬಹುದು ಎಂದು ಹೇಳಬಹುದಾಗಿದೆ. ಬಿಜೆಪಿಯಲ್ಲೇ ಇರುವ ಯಡಿಯೂರಪ್ಪನವರ ವಿರೋಧಿಗಳು ವಿಜಯೇಂದ್ರ ಅವರನ್ನು ಯಡಿಯೂರಪ್ಪನವರು ಬೆಳೆಸುತ್ತಿರುವುದನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಇದು ಹೈಕಮಾಂಡ್ ವರೆಗೆ ಹೋದರೆ ಹೇಗೆ ಎಂಬ ಆತಂಕ ಯಡಿಯೂರಪ್ಪನವರಿಗೂ ಇದ್ದಿರಬಹುದು. ಆದರೆ, ಅಮಿತ್ ಅವರು ವಿಜಯೇಂದ್ರ ಅವರಿಂದ ಹೂಗುಚ್ಛ ಪಡೆದಿರುವುದು ಹಾಗೂ ಅವರ ಬೆನ್ನು ತಟ್ಟಿರುವುದು ಒಂದು ರೀತಿಯಲ್ಲಿ ಹೈಕಮಾಂಡ್ ‘ಅಭಯ’ ಸಿಕ್ಕಂತಾಗಿದೆ ಎಂಬ ಸಮಾಧಾನ ಯಡಿಯೂರಪ್ಪನವರಿಗೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.

lokesh

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

3 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

31 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago