ಮನೆ ಗುಡಿಸಿ ಒರೆಸಲು ರೋಬೊ ವಾಕ್ಯೂಮ್ ಕ್ಲೀನರ್ಗಳಿಂದಲೇ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪೆನಿಯು ಇತ್ತೀಚೆಗೆ ‘ಸ್ಮಾರ್ಟ್ ಕ್ಲೀನ್ ವಿತ್ ಆಟೋ ಬಿನ್’ ಎಂಬ ನೂತನ ವಾಕ್ಯೂಮ್ ಕ್ಲೀನರನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್ನಲ್ಲಿ ಎರಡು ಸಾಧನಗಳಿವೆ. ಒಂದು ಕಸದಬುಟ್ಟಿಯಂತಿರುವ ದೊಡ್ಡ ಸಾಧನ. ಇದರಲ್ಲಿ ೪ ಲೀ. ಸಾಮರ್ಥ್ಯದ ಚೀಲವಿದ್ದು, ಇದರಲ್ಲಿ ಕಸ, ದೂಳು ಸಂಗ್ರಹಿಸಬಹುದಾಗಿದೆ. ಪ್ರಬಲವಾದ ಹೀರಿಕೊಳ್ಳುವ ವ್ಯವಸ್ಥೆ ಇದರಲ್ಲಿದ್ದು, ಮನೆಯ ತುಂಬಾ ಸುತ್ತಾಡಿ ಗುಡಿಸಿ ಒರೆಸುವ ಚಕ್ರಾಕಾರದ ರೋಬೊ ಎರಡನೇ ಸಾಧನ. ಅತ್ಯಾಧುನಿಕವಾದ ಲಿಡಾರ್ ೩.೦ ನೇವಿಗೇಶನ್ ತಂತ್ರಜ್ಞಾನ ಅಡಕವಾಗಿರುವ ಈ ಚಕ್ರಾಕಾರದ ರೋಬೊ ನೆಲವನ್ನು ಸ್ವಚ್ಛಗೊಳಿಸುವುದಕ್ಕಾಗಿ ಆರಂಭದಲ್ಲಿ ತಾನೇ ಮನೆಯೊಳಗೆ ಸುತ್ತಾಡಿ ನಕ್ಷೆ ರಚಿಸಿಕೊಳ್ಳುತ್ತದೆ. ಅಲ್ಲದೆ ಮರ್, ಟೈಲ್ಸ್, ಮಾರ್ಬಲ್ ಮತ್ತು ಕಾರ್ಪೆಟ್ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.
ಇನ್ನು ಇದನ್ನು ಸ್ಮಾರ್ಟ್ ಲೈಫ್ ಆಪ್ ಮೂಲಕ ನಿಯಂತ್ರಿಸಬಹುದಾಗಿದೆ. ಅಮೆಜಾನ್ನ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿಯಿಂದಲೇ ಇದನ್ನು ನಿಯಂತ್ರಿಸಬಹುದು.
ಈ ಯಂತ್ರವು ಮೂರು ಕೆಲಸಗಳನ್ನು ಮಾಡಲಿದ್ದು, ಗುಡಿಸುವುದು, ಗುಡಿಸಿ ಸಂಗ್ರಹಿಸಿದ ಕಸವನ್ನು ಸ್ವಯಂಚಾಲಿತವಾಗಿ ಕಸದ ಬುಟ್ಟಿಗೆ ಸೇರಿಸುವುದು ಮತ್ತು ಒದ್ದೆ ಬಟ್ಟೆಯಲ್ಲಿ ನೆಲವನ್ನು ಒರೆಸುವ ಕೆಲಸ ಮಾಡುತ್ತದೆ. ಈ ಯಂತ್ರವನ್ನು ಚಾಲನೆ ಮಾಡಿದ ತಕ್ಷಣ ಅದು ಎಲ್ಲ ಕೊಠಡಿಗಳಿಗೂ ಚಲಿಸಿ ತಾನಾಗಿಯೇ ಮ್ಯಾಪಿಂಗ್ ಮಾಡಿಕೊಳ್ಳುತ್ತದೆ.
ಮರುದಿನವೂಅದೇ ಪಥದಲ್ಲಿ ತಿರಗಾಡುತ್ತಾ ಸ್ವಚ್ಛತಾ ಕೆಲಸವನ್ನು ಮಾಡುತ್ತದೆ. ಇದರಲ್ಲಿ ೫,೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ನಿರಂತರವಾಗಿ ಬಳಸಿದರೆ ಸುಮಾರು ೫ ಗಂಟೆಗಳ ಕಾಲ ಕೆಲಸ ಮಾಡಬಹು ದಾಗಿದೆ. ನಂತರ ರೀಚಾರ್ಚ್ ಮಾಡಿಕೊಳ್ಳಲು ಚಕ್ರಾಕಾರದ ರೋಬೊ ತಾನಾಗಿಯೇ ಬಂದು ಚಾರ್ಜರ್ಗೆ ಸೇರಿಕೊಳ್ಳುತ್ತದೆ. ಚಾರ್ಜಿಂಗ್ ಆಗುತ್ತದೆ. ಇದರ ಸದ್ಯದ ಮಾರುಕಟ್ಟೆಯ ಬೆಲೆ ೩೪,೯೯೯ ರೂ. ಆಗಿದೆ.
ಇದರ ಮತ್ತೊಂದು ವಿಶೇಷವೆಂದರೆ ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್ ಬೆಕ್ಕು, ನಾಯಿ ಸಾಕುವವರಿಗೆ ಹೆಚ್ಚಿನ ಅನುಕೂಲವಾಗಿದ್ದು, ನೆಲ ಅಥವಾ ಸೋಫಾ ಮೇಲೆ ಉದುರುವ ಅವುಗಳ ರೋಮಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…