ಮನೆ ಗುಡಿಸಿ ಒರೆಸಲು ರೋಬೊ ವಾಕ್ಯೂಮ್ ಕ್ಲೀನರ್‌ಗಳಿಂದಲೇ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪೆನಿಯು ಇತ್ತೀಚೆಗೆ ‘ಸ್ಮಾರ್ಟ್ ಕ್ಲೀನ್ ವಿತ್ ಆಟೋ ಬಿನ್’ ಎಂಬ ನೂತನ ವಾಕ್ಯೂಮ್ ಕ್ಲೀನರನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್‌ನಲ್ಲಿ ಎರಡು ಸಾಧನಗಳಿವೆ. ಒಂದು ಕಸದಬುಟ್ಟಿಯಂತಿರುವ ದೊಡ್ಡ ಸಾಧನ. ಇದರಲ್ಲಿ ೪ ಲೀ. ಸಾಮರ್ಥ್ಯದ ಚೀಲವಿದ್ದು, ಇದರಲ್ಲಿ ಕಸ, ದೂಳು ಸಂಗ್ರಹಿಸಬಹುದಾಗಿದೆ. ಪ್ರಬಲವಾದ ಹೀರಿಕೊಳ್ಳುವ ವ್ಯವಸ್ಥೆ ಇದರಲ್ಲಿದ್ದು, ಮನೆಯ ತುಂಬಾ ಸುತ್ತಾಡಿ ಗುಡಿಸಿ ಒರೆಸುವ ಚಕ್ರಾಕಾರದ ರೋಬೊ ಎರಡನೇ ಸಾಧನ. ಅತ್ಯಾಧುನಿಕವಾದ ಲಿಡಾರ್ ೩.೦ ನೇವಿಗೇಶನ್ ತಂತ್ರಜ್ಞಾನ ಅಡಕವಾಗಿರುವ ಈ ಚಕ್ರಾಕಾರದ ರೋಬೊ ನೆಲವನ್ನು ಸ್ವಚ್ಛಗೊಳಿಸುವುದಕ್ಕಾಗಿ ಆರಂಭದಲ್ಲಿ ತಾನೇ ಮನೆಯೊಳಗೆ ಸುತ್ತಾಡಿ ನಕ್ಷೆ ರಚಿಸಿಕೊಳ್ಳುತ್ತದೆ. ಅಲ್ಲದೆ ಮರ್, ಟೈಲ್ಸ್, ಮಾರ್ಬಲ್ ಮತ್ತು ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಇದನ್ನು ಸ್ಮಾರ್ಟ್ ಲೈಫ್ ಆಪ್ ಮೂಲಕ ನಿಯಂತ್ರಿಸಬಹುದಾಗಿದೆ. ಅಮೆಜಾನ್‌ನ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿಯಿಂದಲೇ ಇದನ್ನು ನಿಯಂತ್ರಿಸಬಹುದು.

ಈ ಯಂತ್ರವು ಮೂರು ಕೆಲಸಗಳನ್ನು ಮಾಡಲಿದ್ದು, ಗುಡಿಸುವುದು, ಗುಡಿಸಿ ಸಂಗ್ರಹಿಸಿದ ಕಸವನ್ನು ಸ್ವಯಂಚಾಲಿತವಾಗಿ ಕಸದ ಬುಟ್ಟಿಗೆ ಸೇರಿಸುವುದು ಮತ್ತು ಒದ್ದೆ ಬಟ್ಟೆಯಲ್ಲಿ ನೆಲವನ್ನು ಒರೆಸುವ ಕೆಲಸ ಮಾಡುತ್ತದೆ. ಈ ಯಂತ್ರವನ್ನು ಚಾಲನೆ ಮಾಡಿದ ತಕ್ಷಣ ಅದು ಎಲ್ಲ ಕೊಠಡಿಗಳಿಗೂ ಚಲಿಸಿ ತಾನಾಗಿಯೇ ಮ್ಯಾಪಿಂಗ್ ಮಾಡಿಕೊಳ್ಳುತ್ತದೆ.

ಮರುದಿನವೂಅದೇ ಪಥದಲ್ಲಿ ತಿರಗಾಡುತ್ತಾ ಸ್ವಚ್ಛತಾ ಕೆಲಸವನ್ನು ಮಾಡುತ್ತದೆ. ಇದರಲ್ಲಿ ೫,೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ನಿರಂತರವಾಗಿ ಬಳಸಿದರೆ ಸುಮಾರು ೫ ಗಂಟೆಗಳ ಕಾಲ ಕೆಲಸ ಮಾಡಬಹು ದಾಗಿದೆ. ನಂತರ ರೀಚಾರ್ಚ್ ಮಾಡಿಕೊಳ್ಳಲು ಚಕ್ರಾಕಾರದ ರೋಬೊ ತಾನಾಗಿಯೇ ಬಂದು ಚಾರ್ಜರ್‌ಗೆ ಸೇರಿಕೊಳ್ಳುತ್ತದೆ. ಚಾರ್ಜಿಂಗ್ ಆಗುತ್ತದೆ. ಇದರ ಸದ್ಯದ ಮಾರುಕಟ್ಟೆಯ ಬೆಲೆ ೩೪,೯೯೯ ರೂ. ಆಗಿದೆ.

ಇದರ ಮತ್ತೊಂದು ವಿಶೇಷವೆಂದರೆ ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್ ಬೆಕ್ಕು, ನಾಯಿ ಸಾಕುವವರಿಗೆ ಹೆಚ್ಚಿನ ಅನುಕೂಲವಾಗಿದ್ದು, ನೆಲ ಅಥವಾ ಸೋಫಾ ಮೇಲೆ ಉದುರುವ ಅವುಗಳ ರೋಮಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

18 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

18 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago