ಯುವ ಡಾಟ್ ಕಾಂ

ಸಕಾರಾತ್ಮಕತೆ ಎಂಬ ಸಂಕಟ ಪರಿಹಾರ

ಡಾ.ನೀ.ಗೂ.ರಮೇಶ್

ಎಲ್ಲಿ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಎಲ್ಲಿಗೆ ಮುಟ್ಟಬೇಕೆಂಬುದನ್ನು ನಾವೇ ನಿರ್ಧಾರ ಮಾಡಿಕೊಳ್ಳಬಹುದು. ಹಾಗಾಗಿ, ನಮ್ಮ ಈಗಿನ ಕೆಟ್ಟ ಸ್ಥಿತಿಯ ಬಗ್ಗೆ ಕೊರಗುವುದಕ್ಕಿಂತ, ಯಾರನ್ನೋ ದೂರುವುದಕ್ಕಿಂತ ಅವುಗಳ ವಿರುದ್ಧ ಯೋಜಿತವಾಗಿ ಹೋರಾಡಲು ಪ್ರಾರಂಭಿಸುವುದು ಸಮಸ್ಯೆಯಿಂದ ಹೊರಬರುವ ಜಾಣತನ. ಇಂತಹ ಸಂದರ್ಭಗಳಲ್ಲಿ ನಮ್ಮ ಬೆನ್ನೆಲುಬಾಗಿ ನಿಲ್ಲುವುದು ಸಕಾರಾತ್ಮಕ ಮನೋಭಾವನೆ ಮಾತ್ರ. ‘ಅದು ನನ್ನಿಂದ ಸಾಧ್ಯವಾಗುತ್ತದೆ’ ಎಂದುಕೊಳ್ಳುವುದೂ ಒಂದು ಅಮೃತ ಘಳಿಗೆ! ಆದರೆ, ಇತ್ತೀಚೆಗೆ ಇಡೀ ಯುವ ಸಮೂಹ ನಕಾರಾತ್ಮಕ ಆಲೋಚನೆಯ ಕಡೆಗೆ ಚಲಿಸುತ್ತಿರುವುದೇ ಹೆಚ್ಚು. ನಕಾರಾತ್ಮಕ ಮನೋಭಾವನೆ ಎಲ್ಲೆಡೆ ಸಾಂಕ್ರಾಮಿಕ ವಾಗಿರುವಾಗ ಅದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಯಾವುದನ್ನು ಬೇಡ ಎನ್ನುತ್ತೇವೆಯೋ ಮನಸ್ಸು ಅದರ ಕಡೆಗೆ ಹೆಚ್ಚಾಗಿ ವಾಲುತ್ತದೆ. ಹತ್ತು ನಿಮಿಷ ಮೊಬೈಲ್ ಬಗ್ಗೆ ಯೋಚಿಸದಂತೆ ಕಣ್ಮುಚ್ಚಿ ಕುಳಿತುಕೊಳ್ಳಿ ಎಂದರೆ ಆ ಹತ್ತು ನಿಮಿಷ ಹಿಂದೆಂದಿಗಿಂತಲೂ ಹೆಚ್ಚಾಗಿ ಕಣ್ತುಂಬ ಮೊಬೈಲೇ ಕಾಣುತ್ತವೆ! ಇದು ಮನಸ್ಸಿನ ಚಾಂಚಲ್ಯದ ಸ್ಥಿತಿ. ಆಲಸ್ಯ, ಅಂಜಿಕೆ ಇವು ಎಂತಹ ಸಾಮರ್ಥ್ಯವಿದ್ದರೂ ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತವೆ.

ಬಹುತೇಕರು ಗೆಲುವಿಗಿಂತ ಸೋಲಿನ ಬಗ್ಗೆ ಚಿಂತಿಸುವುದೇ ಹೆಚ್ಚು. ಒಂದು ಉದ್ಯೋಗ ನೇಮಕಾತಿಯ ಸಂದರ್ಭದಲ್ಲಿ ಎಷ್ಟೋ ಬಾರಿ ೧೦೦ ಹುದ್ದೆಗಳಿಗೆ ಲಕ್ಷಗಟ್ಟಲೆ ಅರ್ಜಿಗಳು ಬಂದಿರುತ್ತವೆ. ನಕಾರಾತ್ಮಕ ವ್ಯಕ್ತಿಗಳು ಈ ಸಂಖ್ಯೆಯಿಂದಲೇ ಕುಗ್ಗಿ ಹೋಗುತ್ತಾರೆ. ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ಆದರೆ, ನೆನಪಿರಲಿ ಅರ್ಜಿ ಎಷ್ಟಾದರೂ ಬಂದಿರಲಿ. ನನಗೆ ಬೇಕಾಗಿರುವುದು ಒಂದೇ ಹುದ್ದೆ ಎಂದುಕೊಳ್ಳುವುದು ಸಕಾರಾತ್ಮಕತೆಯ ಸಲ್ಲಕ್ಷಣ.

ಕಡೆಗೆ ಒಂದೇ ಹುದ್ದೆ ಇದ್ದರೂ ಅದು ನನಗೇ ಸಿಗಬೇಕು ಎಂದುಕೊಳ್ಳುವವನದು ಈ ಜಗತ್ತು. ಅವನೇ ನಿಜವಾದ ಮಹತ್ವಾಕಾಂಕ್ಷಿ! ಇಂತಹ ಸಕಾರಾತ್ಮಕ ಮನೋಭಾವನೆಯು ಒಬ್ಬ ಸಾಧಕನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬೇರೆಯವರು ನಮ್ಮ ಬಗ್ಗೆ ಆಡುವ ಮಾತುಗಳಲ್ಲಿ, ಒಳ್ಳೆಯ ಅಂಶವನ್ನು ಕಂಡುಕೊಳ್ಳುವುದು ಆ ಸಕಾರಾತ್ಮಕತೆಯ ಮುಖ್ಯಗುಣ. ಆಗಿರುವುದು, ಆಗುತ್ತಿರು ವುದು, ಆಗಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂಬ ನಿರ್ಲಿಪ್ತ ಸ್ಥಿತಿ ಕೆಲವು ವೇಳೆ ಪೊಳ್ಳು ಮಾತಿನಂತೆ ಕಂಡರೂ ಹಲವು ಸಂದರ್ಭಗಳಲ್ಲಿ ನಮ್ಮನ್ನು ಸಂತೈಸುತ್ತದೆ.

ಆಕಸ್ಮಿಕವಾಗಿ ಏನೋ ಕೆಟ್ಟದ್ದು ಸಂಭವಿಸಿದಾಗ ‘ಸದ್ಯ ಇಷ್ಟಕ್ಕೇ ಮುಗಿಯಿತಲ್ಲ’ ಎಂಬಸಮಾಧಾನ ತುಂಬಾ ದೊಡ್ಡ ಅಪಾಯದಿಂದ ನಮ್ಮ ಮನಸ್ಸನ್ನು ಪಾರು ಮಾಡುತ್ತದೆ. ನಮ್ಮ ಬಳಿ ಎಲ್ಲವೂ ಇದ್ದು, ಸಕಾರಾತ್ಮಕ ಮನೋಭಾವನೆಯೊಂದು ಇಲ್ಲದಿದ್ದರೆ ಯಾವುದೂ ನಮ್ಮನ್ನು ಸಂತೋಷವಾಗಿಡಲಾರದು. ನಮ್ಮೊಳಗಿನ ಸಾವಿರ ಸಾಮರ್ಥ್ಯಗಳನ್ನು ಕ್ಷಣ ಮಾತ್ರದಲ್ಲಿ ಛಿದ್ರವಾಗಿಸುವ ಜಗತ್ತಿನ ಏಕೈಕ ದೌರ್ಬಲ್ಯವೆಂದರೆ ಅದು ನಕಾರಾತ್ಮಕತೆ ಮಾತ್ರ!

ಸಕಾರಾತ್ಮಕ ಮನೋಭಾವವೇ ನಾಯಕನ ಮೊದಲ ಗುಣ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇದು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ನಾಯಕತ್ವ ಗುಣ ಹಣ ವ್ಯಯಿಸಿ ತರಬೇತಿ ಪಡೆಯುವುದರಿಂದ ಬರುವಂಥದ್ದಲ್ಲ. ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ಸಾಹ ತುಂಬಿ ಹುರಿದುಂಬಿಸುವುದರಿಂದ ಮೈಗೂಡಿಕೊಳ್ಳುವ ಗುಣವಿದು. ಮಕ್ಕಳಿರಲಿ, ದೊಡ್ಡವರಿರಲಿ ಒಂದು ಗುಂಪಿನಲ್ಲಿದ್ದಾಗ ‘ಈ ಕೆಲಸ ಯಾರು ಮಾಡುತ್ತೀರಿ?’ ಎಂದಾಗ ಮೊದಲು ಅವಕಾಶ ತೆಗೆದುಕೊಂಡು ಆ ನಂತರ ಯೋಚಿಸುವವನೇ ನಿಜವಾದ ನಾಯಕ. ಸೀಮಿತ ಅವಕಾಶಗಳಿದ್ದಾಗ ನಾವು ಹಿಂದೆ ಸರಿದು, ಯೋಚಿಸಿ ನಿರ್ಧರಿಸುವ ವೇಳೆಗೆ ಆ ಅವಕಾಶ ಬೇರೆಯವರ ಪಾಲಾಗಬಹುದು.

ದುರಂತವೆಂದರೆ ನಾವು ಯೋಗ್ಯತೆ ಇದ್ದೂ ಅವಕಾಶ ತೆಗೆದುಕೊಳ್ಳದಿದ್ದರೆ ಯಾರೋ ಬೇರೆಯವರು ನಮ್ಮ ಗುಂಪಿನ ನಾಯಕರಾಗಿ, ನಾವು ಅವರ ಅಧೀನರಾಗಿ ಇರಬೇಕಾಗಬಹುದು!

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

18 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago