ಯುವ ಡಾಟ್ ಕಾಂ

ಕಾಡಿನ ಕಾವಲಿಗೆ ರೆಡಿಯಾದ ಸೌಮ್ಯ

• ಕೀರ್ತಿ ಬೈಂದೂರು
ಇಂಜಿನಿಯರ್ ಆಗಿ ಐದಾರು ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿ, ಪ್ರಕೃತಿಯ ಪ್ರೇಮ- ಸೆಳೆತದ ನಡುವೆ ಶ್ರದ್ಧೆ, ಶಿಸ್ತಿನ ಅಧ್ಯಯನದೊಂದಿಗೆ ಸೌಮ್ಯ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ 33ನೇ ರ್ಯಾಂಕ್ ಗಳಿಸಿದ್ದಾರೆ. ನಿಸರ್ಗ ಮತ್ತು ಇವರ ತಾದಾತ್ರ್ಯವೇ ಬಹುಶಃ ಈ ರೂಪದಲ್ಲಿ ಒದಗಿರಬಹುದು ಎಂದು ಪರಿಭಾವಿಸುತ್ತಾರೆ.

ಒಮ್ಮೆ ರಾಜ್‌ಕುಮಾರ್ ನಟಿಸಿದ್ದ ಗಂಧದಗುಡಿ ಚಿತ್ರ ನೋಡಿ ಖುಷಿಪಟ್ಟು, ‘ಆಗೋದಾದ್ರೆ ಫಾರೆಸ್ಟ್ ಆಫೀಸರ್‌ ಆಗಬೇಕಪ್ಪಾ’ ಅಂದುಕೊಂಡಿದ್ದರು. ಎಂದರೆ ಬದುಕು ಆಗಲೇ ಕನಸು ಕಟ್ಟಲು ಆರಂಭಿಸಿತ್ತು. ಮೊದಲು ಐಎಎಸ್‌ ಗೆಂದು ತಯಾರಿ ನಡೆಸುತ್ತಿರುವಾಗ ಐಎಫ್‌ಎಸ್‌ ಕುರಿತಾಗಿ ಮಾಹಿತಿಯನ್ನೂ ಕಲೆಹಾಕಿದ್ದರು. ಮಹಿಳಾ ಐಎಫ್‌ಎಸ್ ಅಧಿಕಾರಿಗಳ ಬಗೆಗೆ ವಿವರವಾದ ಸಂಗತಿಗಳೆಲ್ಲ ದಾಖಲಾದ ‘ದ ಗ್ರೀನ್ ಸ್ಟೀನ್ಸ್ ಆಫ್ ಇಂಡಿಯಾ‌ʼ ಪುಸ್ತಕದ ಓದು ಬದುಕಿಗೆ ತಿರುವು ನೀಡಿತು.

ಯುಪಿಎಸ್‌ಸಿ ಗುರಿ ಬೆನ್ನತ್ತಿದ ಅನೇಕರು ಪಿಯುಸಿ ಅಥವಾ ಪದವಿ ಹಂತದಿಂದಲೇ, ಅಧ್ಯಯನವನ್ನು ಆರಂಭಿಸುತ್ತಾರೆ. ಆದರೆ ಎದುರಿಗೆ ಬೇರೆ ಆಯ್ಕೆಗಳಿ ದ್ದರೂ ಆ ಬಗ್ಗೆ ಸೌಮ್ಯ ಅವರು ಯೋಚಿಸಲೇ ಇಲ್ಲ. ಹಾಗಾಗಿ ಎಲ್ಲರೂ ಇಂಜಿನಿಯರಿಂಗ್ ಮಾಡು ಎಂದಿದ್ದಕ್ಕೆ, ಕಾಕತಾಳಿಯವಾಗಿ ಅವಕಾಶಗಳೂ ಒದಗಿಬಂದಿದ್ದರಿಂದ ಸಹಜವಾಗಿ ಆ ಕಡೆಗೇ ವಾಲಿದರು. ಓದು ಮುಗಿದ ತಕ್ಷಣ ಕೆಲಸವೂ ಸಿಕ್ಕಿತು. ‘ತಡವಾಗಿರುವುದು ಯಾವತ್ತಿಗೂ ಉತ್ತಮ ಎಂಬುದು ಇವರ ಯಶಸ್ಸಿನ ಸೂತ್ರ. ‘ನಂಗಿಷ್ಟು ವಯಸ್ಸಾಯ್ತು ಇನ್ನೇನು ಯುಪಿಎಸ್‌ಸಿ ತಯಾರಿ ಮಾಡೋದು! ಅಂತ ತುಂಬಾ ಜನ ಹೇಳ್ತಿರ್ತಾರೆ. ಆದ್ರೆ, ಆ ವಯಸ್ಸಲ್ಲಿ ಪರೀಕ್ಷೆ ಬರೆಯೋದಕ್ಕೆ ಅರ್ಹತೆ ಇದ್ದು, ಪ್ರೋತ್ಸಾಹ ಮತ್ತೆ ಉತ್ಸಾಹ ಎರಡೂ ಇತ್ತಂದ್ರೆ ಖಂಡಿತಾ ಆಗುತ್ತೆ’ ಎನ್ನುವ ಇವರ ಮಾತಿನಲ್ಲಿ ಬದುಕಿನ ಬಗೆಗೆ ಆತ್ಮವಿಶ್ವಾಸವಿದೆ.

ಸಮರ್ಪಕವಾದ ಸಮಯ ನಿಗದಿ ಮಾಡಿಕೊಂಡು ಅಧ್ಯಯನಕ್ಕೆ ತೊಡಗಿಕೊಳ್ಳಬೇಕಾದ ಕಾರಣಕ್ಕೆ ಆದಷ್ಟು ಸಾಮಾಜಿಕವಾಗಿ ಬೆರೆಯುವುದಕ್ಕೆ ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಸುತ್ತಲ ಜನರ ಅಪೇಕ್ಷೆಗಳೇ ಬೇರೆ, ಕೇಂದ್ರ ಲೋಕಸೇವಾ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವವರ ಆದ್ಯತೆಯೇ ಬೇರೆ ಇರುವುದರಿಂದ ಓದಿಗೆ ಸಮಸ್ಯೆಯಾಗಬಹುದು ಎಂದು ಬಹುತೇಕರು ಪ್ರತ್ಯೇಕವಾಗಿ ಉಳಿದುಬಿಡುತ್ತಾರೆ. ಇವರ ವಿಷಯದಲ್ಲೂ ಇದು ಹೊರತಲ್ಲ. ಹಾಗಾಗಿ, ಯಾವುದೇ ಸಾಮಾಜಿಕ ಜಾಲತಾಣಗಳು ಇವರ ಮನಸ್ಸು ತಪ್ಪಿಯೂ ಸುಳಿಯುತ್ತಿರಲಿಲ್ಲ.

ರಾತ್ರಿ ಎಷ್ಟು ಹೊತ್ತಾದರೂ ಕೂತು ಓದಬಹುದು ಎನ್ನುವ ಸೌಮ್ಯ ಅವರಿಗೆ ಬೆಳಗೆಂದರೆ ಗದ್ದಲ. ಇವರ ಓದಿಗೆ ಜೊತೆಯಾಗಿದ್ದೇ, ಇರುಳಿನ ನೀರವ ಮೌನ. ಜೊತೆಗೆ, ಮನಸ್ಸಿಗೆ ಹಿತ ಭಾವ ನೀಡುತ್ತಿದ್ದ ಭಾವಗೀತೆಗಳು, ಮೆಲೋಡಿ ಹಾಡುಗಳನ್ನು ಕೇಳುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದಿನ ಜಗತ್ತಿನಿಂದ ಹೊರಬಂದಾಗೆಲ್ಲ ಕಲಾತ್ಮಕ ಚಿತ್ರಗಳೆಲ್ಲ ಕೈ ಬೀಸಿ ಕರೆಯುತ್ತಿದ್ದವು. ಪೆನ್ಸಿಲ್ ಸ್ಕೆಚ್ ಇವರಿಷ್ಟದ ಹವ್ಯಾಸ. ಪ್ರಕೃತಿಯನ್ನು ಪ್ರೀತಿಸುವ ಸೌಮ್ಯ ಅವರಿಗೆ ಐಎಫ್‌ಎಸ್ ನ ಮೂಲಕವೇ ಕೊಡುಗೆ ನೀಡಬೇಕೆನ್ನುವ ಮನಸ್ಸಿದೆ. ಅಂತೆಯೇ ದೊರೆತ ಅವಕಾಶವನ್ನೇ ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂಬ ಭರವಸೆ ಇವರ ಜೊತೆಗಿದೆ. ಆಸೆ ಮತ್ತು ಆಸಕ್ತಿ ಎರಡೂ ಇದ್ದರೆ ವಯಸ್ಸು ಯಾವುದಕ್ಕೂ ಅಡ್ಡಿಯಲ್ಲ ಎನ್ನುವ ಸೌಮ್ಯ ಅವರು ಲೋಕಸೇವಾ ಉದ್ಯೋಗಾಕಾಂಕ್ಷಿಗಳಿಗೆ ಮಾದರಿ.

ಪೋಷಕರು ಸಮಾರಂಭಕ್ಕೆ ಹೋದಾಗೆಲ್ಲ, ‘ಮಗಳು ನಿರುದ್ಯೋಗಿ ಅಲ್ವಾ? ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳಾ?’ ಹೀಗೆ ತರತರಹದ ಪ್ರಶ್ನೆಗಳಿಗೆ ಪೋಷಕರು ಉತ್ತರ ಕೊಡಲಾಗದಿದ್ದರೂ ತನ್ನ ಮೇಲಿನ ಭರವಸೆ ಕಳೆದುಕೊಳ್ಳದೆ ಸದಾ ಬೆಂಬಲವಾಗಿ ನಿಂತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸರಿಯಾದ ವ್ಯಕ್ತಿಗಳ ಸೂಕ್ತವಾದ ಮಾರ್ಗದರ್ಶನ ಜೀವನಕ್ಕೆ ಬಹಳ ಮುಖ್ಯ ಎಂಬುದು ಇವರ ಅಭಿಪ್ರಾಯ. ಬಹುಶಃ ಇದು ಐಎಎಸ್ ತಯಾರಿಯಲ್ಲಿ ಸಿಗಲಿಲ್ಲ ಎಂಬ ಬೇಸರವಿದ್ದರೂ ಐಎಫ್‌ಎಸ್ ಪರೀಕ್ಷೆಗೆ ಮಾತ್ರ ಅನೇಕ ಐಎಫ್‌ಎಸ್ ಅಧಿಕಾರಿಗಳು ನೀಡಿದ ಸಲಹೆಗಳನ್ನು ನೆನಪಿಸಿಕೊಳ್ಳುತ್ತಾರೆ. ಸತತವಾಗಿ ಐದನೆಯ ಪ್ರಯತ್ನದಲ್ಲಿ ಐಎಫ್‌ಎಸ್‌ನ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಮೈನ್ಸ್ ಪರೀಕ್ಷೆ ಪಾಸ್ ಆಗುವುದಕ್ಕೆ ಎರಡೇ ಪ್ರಯತ್ನಗಳು ಸಾಕಾಯಿತು.

andolana

Recent Posts

ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ: ಈಶ್ವರ್‌ ಖಂಡ್ರೆ

ನವದೆಹಲಿ: ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಈಶ್ವರ್‌ ಖಂಡ್ರೆ ಅವರು ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ…

8 hours ago

ಕೊಡಗಿನ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ: ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟನೆ

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ…

8 hours ago

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: ನಿತಿನ್‌ ನಬಿನ್‌ಗೆ ರಾಜೀನಾಮೆ ಸಲ್ಲಿಕೆ

ನವದೆಹಲಿ: ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರನ್ನು ಭೇಟಿಯಾಗಿ ರಾಜೀನಾಮೆ…

10 hours ago

ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಸಹೋದರ ವಾಸುದೇವನ್‌ ನಿಧನ

ಮೈಸೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಸಹೋದರ ಎನ್.ಜೆ.ವಾಸುದೇವನ್‌ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮೈಸೂರು ಜಿಲ್ಲೆಯ…

10 hours ago

ನಾಳೆ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ…

12 hours ago

ರಾಜ್ಯಕ್ಕೆ ಜೂನ್.‌5ರಂದು ಮುಂಗಾರು ಪ್ರವೇಶ

ಬೆಂಗಳೂರು: ರಾಜ್ಯಕ್ಕೆ ಜೂನ್.‌5ರಂದು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ಮುಂಗಾರು ಪ್ರವೇಶ ತಡ…

12 hours ago