ಯುವ ಡಾಟ್ ಕಾಂ

ಕೇಳಿಯೇ ಕಲಿತ ಹಾಡುಗಾರ ಸಂಜಯ್‌

ಜಾನಪದ ಸಂಗೀತದ ಮೂಲಕ ಬದುಕು ಕಟ್ಟಿಕೊಂಡ ಕನಕಪುರ ಸಂಜಯ್

ಅನಿಲ್ ಅಂತರಸಂತೆ
ನಾವು ಆಧುನಿಕತೆಗೆ ತೆರೆದುಕೊಂಡಂತೆಯೇ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ದೂರ ಮಾಡಿಬಿಡುತ್ತೇವೆ. ಅದರಲ್ಲಿಯೂ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಂಡ ಬಳಿಕ ಜಾನಪದ ಸಂಗೀತ, ಸಾಹಿತ್ಯವನ್ನು ಸಂಪೂರ್ಣ ಮರೆತುಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಜಾನಪದ ಸಾಹಿತ್ಯ, ಭಕ್ತಿ ಗೀತೆ, ಭಾವಗೀತೆ, ಶೋಕ ಗೀತೆಗಳನ್ನು ಹಾಡುತ್ತಾ ಕಾರ್ಯಕ್ರಮಗಳನ್ನು ನೀಡಿ ಯುವಕರಿಗೆ ಜಾನಪದ ಸಂಗೀತದ ಪರಿಚಯ ಮಾಡಿಕೊಡುವ ಜತೆಗೆ ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಕನಕಪುರದ ಯುವ ಕಲಾವಿದ ಸಂಜಯ್.

ರಾಮನಗರ ಜಿಲ್ಲೆಯ ಕನಕಪುರದ ಸಂಜಯ್ ಯಾವುದೇ ಸಂಗೀತ ಅಭ್ಯಾಸ ಮಾಡದೆಯೂ ಲಯಬದ್ಧವಾಗಿ ಲೀಲಾ ಜಾಲವಾಗಿ ಹಾಡುವ ಅಪ್ಪಟ ಗ್ರಾಮೀಣ ಪ್ರತಿಭೆ , ಗಾಯನ ಕಲಾವಿದ. ಹಾಡುವ ಹವ್ಯಾಸವನ್ನೇ ವೃತ್ತಿ ಮಾಡಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಕನಕಪುರದ ರಾಜಣ್ಣ ಮತ್ತು ಶಶಿಕಲಾ ದಂಪತಿಯ ಮೂರನೇ ಮಗನಾದ ಸಂಜಯ್‌ರವರಿಗೆ ವಿದ್ಯಾಭ್ಯಾಸ ಅಷ್ಟಾಗಿ ತಲೆಗತ್ತಲಿಲ್ಲ. ೧೦ನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಜೀವನಾ ಧಾರಕ್ಕೆ ವಿವಿಧ ಕಾರ್ಖಾನೆಗಳಲ್ಲಿ ಕೆಲಸಗಳನ್ನು ಮಾಡಲು ಆರಂಭಿಸಿದರು. ಬಳಿಕ ಸ್ವಂತವಾಗಿ ಸಣ್ಣದೊಂದು ಟೀ ಅಂಗಡಿ ಯನ್ನೂ ನಡೆಸಿ ಅದರಿಂದ ಬದುಕನ್ನು ಕಟ್ಟಿಕೊಳ್ಳಲು ಪರದಾಡಿದರು. ಇಂತಹ ಸಂದರ್ಭದಲ್ಲಿ ಇವರ ಕೈಹಿಡಿದು ಒಂದು ಬದುಕು ನೀಡಿದ್ದು, ಇವರ ಎದೆಯಲ್ಲಿದ್ದ ಗಾಯನ ಕಲೆ. ಸಂಜಯ್ ೩ನೇ ತರಗತಿಯಲ್ಲಿದ್ದಾಗ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ, ವಿವಿಧ ಗೀತಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಗಾಯನ ಕಲೆಗೆ ಶಿಕ್ಷಕರೂ ಪ್ರೋತ್ಸಾಹ ನೀಡುತ್ತಿದ್ದರು. ಆರಂಭದಲ್ಲಿ ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸುತ್ತಿದ್ದ ಸಂಜಯ್‌ರವರಿಗೆ ದಿನ ಕಳೆದಂತೆ ಪ್ರಥಮ ಸ್ಥಾನ ಲಭಿಸಿದವು. ಇದು ಇವರ ಗಾಯನ ಹವ್ಯಾಸಕ್ಕೆ ಮತ್ತಷ್ಟು ಬಲ ತುಂಬಿತು.

ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಯವರ ಧ್ವನಿಯನ್ನು ಅನುಕರಿಸುವಂತೆ ಹಾಡುವ ಈ ಯುವಪ್ರತಿಭೆ ಗಾಯನ ಲೋಕಕ್ಕೆ ಕಾಲಿಡಲು ಮಳವಳ್ಳಿ ಮಹದೇವಸ್ವಾಮಿಯವರೇ ಸ್ಛೂರ್ತಿ. ಅವರ ಗಾಯನವನ್ನು ಕೇಳಿ ಪುಳುಕಿತರಾದ ಇವರು, ಅವರ ಧ್ವನಿಯನ್ನು ಅನುಕರಿಸಿ ಕೊಂಡು ಮಹದೇಶ್ವರ, ಸಿದ್ಧಾಪ್ಪಾಜಿಯ ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳನ್ನು ಹಾಡುತ್ತಾರೆ. ಸದ್ಯ ನಾನು ಗಾಯನ ಹವ್ಯಾಸವನ್ನು ಮುಂದುವರಿಸಲು ಮಳವಳ್ಳಿ ಮಹದೇವಸ್ವಾಮಿಯವರೇ ಸ್ಛೂರ್ತಿ. ಅವರೇ ನನ್ನ ಮೊದಲ ಗುರುಗಳು ಎನ್ನುತ್ತಾರೆ ಸಂಜಯ್.

ಸಂಜಯ್ ವಿವಿಧ ಶುಭ ಸಮಾರಂಭಗಳು, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆ, ಭಾವಗೀತೆಗಳನ್ನು ಹಾಡು ವುದು, ಸಾವನ್ನಪ್ಪಿರುವವರ ಮನೆಯಲ್ಲಿ ಶೋಕಗೀತೆಗಳನ್ನು ಹಾಡುವ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಲ್ಲಿಯ ವರೆಗೂ ಗುಂಡ್ಲುಪೇಟೆ, ಚಾಮರಾಜನಗರ, ಹಾಸನ, ಕನಕ ಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಮೈಸೂರು, ತಮಿಳುನಾಡು ಸೇರಿದಂತೆ ನಾನಾ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಕ್ಕಾಗಿ ತಂಡವೊಂದನ್ನೂ ಕಟ್ಟಿಕೊಂಡಿದ್ದಾರೆ.

ನಾನು ಯಾವುದೇ ಗಾಯನ ತರಬೇತಿ ಪಡೆದಿಲ್ಲ. ಶಾಲೆಯಲ್ಲಿ ಓದುವಾಗ ಹಾಡುಗಳನ್ನು ಕೇಳಿಯೇ ಕಲಿತು ಹಾಡುತ್ತಿದ್ದೆ. ಆ ಹವ್ಯಾಸವೇ ಈಗ ವೃತ್ತಿಯಾಗಿದೆ. ಅನ್ನ ನೀಡಿದೆ. ನನ್ನ ಗಾಯನವನ್ನು ನಾನು ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಳ್ಳುತ್ತೇನೆ. ಗಾಯನ ಕೇಳಿ ಪ್ರೋತ್ಸಾಹಿಸುವ ವರಂತೆಯೇ ಟೀಕಿಸುವವರೂ ಇದ್ದಾರೆ. ಆದರೆ ನನ್ನ ಕೈಹಿಡಿದಿರುವ ಗಾಯನ ಕಲೆಯನ್ನು ನಾನು ಎಂದಿಗೂ ಗೌರವಿಸುತ್ತೇನೆ ಎನ್ನುತ್ತಾರೆ ಸಂಜಯ್.

ಜಾನಪದ ಸಂಗೀತ, ಭಕ್ತಿಗೀತೆ, ಭಾವಗೀತೆಗಳಿಂದ ಯುವಸಮೂಹ ದೂರಾಗಿದೆ. ಹಳೇ ಸಾಹಿತ್ಯದ ಬಗ್ಗೆ ಒಲವು ಅವರಲ್ಲಿಲ್ಲ. ಇತ್ತೀಚಿನ ಸಾಹಿತ್ಯವು ಹಳೆಯ ಸಾಹಿತ್ಯದಂತೆ ಗುಣಮಟ್ಟ ಹೊಂದಿಲ್ಲ. ಇದ ರಿಂದಲೇ ಇಂದು ಯುವ ಸಮೂಹ ಪಾಶ್ಚಿಮಾತ್ಯ ಸಂಗೀತಕ್ಕೆ ಮೊರೆಹೋಗು ತ್ತಿದೆ. ನಮ್ಮ ಮೂಲ ಜಾನಪದ, ಭಕ್ತಿಗೀತೆ, ಭಾವಗೀತೆಗಳ ಗಾಯನದೆಡೆಗೆ ಎಲ್ಲರೂ ಹೆಚ್ಚು ಒಲವು ತೋರಬೇಕು ಎನ್ನುತ್ತಾರೆ ಸಂಜಯ್.

 

ಆಂದೋಲನ ಡೆಸ್ಕ್

Recent Posts

‘ಎಬೋಲಾ ಆತಂಕ ಬೇಡ’ ; ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದೇವೆ : ಆರೋಗ್ಯ ಸಚಿವ

ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…

2 hours ago

ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಸಿಎಂ ಶಂಕುಸ್ಥಾಪನೆ

ಆನೇಕಲ್‌ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…

4 hours ago

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…

5 hours ago

ಕಾಕ್ರೋಚ್‌ ಪಾರ್ಟಿಯ ಎಕ್ಸ್‌, ಇನ್‌ಸ್ಟಾ, ವೆಬ್‌ಸೈಟ್‌ಗೆ ತಡೆ ; ಅಭಿಜಿತ್‌ ದಿಪ್ಕೆ

ನವದೆಹಲಿ :  ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು  ಕಾಕ್ರೋಚ್​ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ.  ಈ…

6 hours ago

ಲಾರಿ ಹಾಗೂ ಕ್ರೂಸರ್‌ ವಾಹನದ ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು

ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…

8 hours ago

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

8 hours ago