ಟೆಕ್‌ ಸಮಾಚಾರ

ತನ್ನ ವಿಶಿಷ್ಟವಾದ ಸ್ಮಾರ್ಟ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೊ, ಭಾರತೀಯ ವಿವಿಧ ಹವಾಮಾನ ವೈವಿಧ್ಯಕ್ಕೆ ಹೊಂದಿಕೊಳ್ಳುವಂತೆ ವಿನೂತನ ವೈಶಿಷ್ಟ ಗಳೊಂದಿಗೆ ರೂಪಿಸಿರುವ ಒಪ್ಪೊ ಎಫ್ 29 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಸರಣಿಯ ಒಪ್ಪೊ ಎಫ್29 ಮತ್ತು ಎಫ್29 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ತೆಳುವಾದ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ಸಂಪರ್ಕತೆ ಮತ್ತು ದೀರ್ಘ ಬ್ಯಾಟರಿ ಬಾಳಿಕ ಹೊಂದಿರುವ ಫೋನ್ ಇದಾಗಿದೆ.

ಈ ಫೋನ್‌ಅನ್ನು ಭಾರತೀಯ ವಿವಿಧ ಹವಾಮಾನಗಳಾದ ಮಳೆ, ಚಳಿ, ದೂಳು, ತಾಪಮಾನಕ್ಕೆ ಹೊಂದಿಕೊಳ್ಳುವಂತೆ ರೂಪಿಸಲಾಗಿದ್ದು, ದೂಳು, ಮಳೆ,
ನೀರಿನೊಳಗೆ ಮುಳುಗುವ ಸಂದರ್ಭಗಳಲ್ಲಿ ಫೋನ್‌ಗೆ ರಕ್ಷಣೆ ಇರುತ್ತದೆ. ಸ್ಟಾಂಜ್ ಬಯೋನಿಕ್ ಕುಶನಿಂಗ್ ಮತ್ತು ಫೈಬರ್ ಗ್ಲಾಸ್ ಕವರ್ ಹಾಗೂ ಕ್ಯಾಮೆರಾ ಲೆನ್ಸ್ ರಕ್ಷಣಾತ್ಮಕ ರಿಂಗ್ ಇದರಲ್ಲಿದೆ.

ಒಪ್ಪೊ ಎಫ್20 ಪ್ರೋನಲ್ಲಿ 6000 ಎಂಎಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 80 ಡಬ್ಲ್ಯೂ ಸೂಪರ್‌ವೊಕ್ ವೇಗದ ಚಾರ್ಜಿಂಗ್ ವ್ಯವಸ್ಥೆಯಿದ್ದರೆ, ಒಪ್ಪೊ ಎಫ್29 ಸಾಧನದಲ್ಲಿ 6500 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. ಈ ಎರಡರಲ್ಲೂ ಕರೆಯ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ.

  • ಒಪ್ಪೊ ಎಫ್ 29 ಸರಣಿಯ ಫೋನ್‌ಗಳು 50ಎಂಪಿ ಪ್ರಧಾನ ಕ್ಯಾಮೆರಾ ಹಾಗೂ 2 ಎಂಪಿ ಡೆಪ್ತ್ ಕ್ಯಾಮೆರಾ ಹಾಗೂ 16ಎಂಪಿ ಸೆಲ್ಛಿ ಕ್ಯಾಮೆರಾದ ಜತೆಗೆ ಎಐ ಆಧಾರಿತ ಕ್ಯಾಮೆರಾ ಫೀಚರ್‌ಗಳನ್ನು ಹೊಂದಿದೆ.
  • ಒಪ್ಪೊ ಎಫ್29 ಪ್ರೊ ಏಪ್ರಿಲ್ 1ರಿಂದ ಲಭ್ಯವಾಗಲಿದ್ದು, 8ಜಿಬಿ+128ಜಿಬಿ ಫೋನ್‌ಗೆ 27,999 ರೂ. 8ಜಿಬಿ+256ಜಿಬಿ ಫೋನ್‌ಗೆ 29,999 ರೂ. ಹಾಗೂ 12ಜಿಬಿ+256 ಜಿಬಿ ಫೋನ್‌ಗೆ 31,999 ರೂ.ಗಳಿವೆ.
  • ಒಪ್ಪೊ ಎಫ್‌29 ಮಾರ್ಚ್‌ 27 ರಿಂದ ಲಭ್ಯವಿದ್ದು, 8 ಜಿಬಿ+128ಜಿಬಿ ಫೋನ್‌ಗೆ 23,999 ರೂ., 8ಜಿಬಿ+256ಜಿಬಿ ಫೋನ್‌ಗೆ 25,999 ರೂ.ಗಳಿಗೆ ಲಭ್ಯವಿದೆ.

 

ಆಂದೋಲನ ಡೆಸ್ಕ್

Recent Posts

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

2 mins ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

23 mins ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

4 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

6 hours ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

7 hours ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

7 hours ago