ಸೈಬರ್ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಜನರು ಎಷ್ಟೇ ಜಾಗ್ರತೆವಹಿಸಿದ್ದರೂ ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ಯಾಪ್ಚಾ ಕೋಡ್ ಹೆಸರಿನಲ್ಲಿ ದೊಡ್ಡ ವಂಚನೆ ನಡೆಯುತ್ತಿದೆ.

ಗೂಗಲ್‌ನಲ್ಲಿ ಏನನ್ನಾದರೂ ಹುಡುಕುವಾಗ ಕ್ಯಾಪ್ಚಾ ಕೋಡ್‌ಅನ್ನು ಪರಿಶೀಲಿಸಲು ನೀವು ಅನೇಕ ಬಾರಿ ಪ್ರಾಪ್ಟ್‌ಅನ್ನು ನೋಡಿರಬೇಕು. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ‘ ನಾನು ರೋಬೋಟ್ ಅಲ್ಲ’ ಎಂಬ ಆಯ್ಕೆ ಸಿಗುತ್ತದೆ. ಅದನ್ನು ಟಿಕ್ ಮಾಡಿದ ನಂತರ ನೀವು ಮುಂದುವರಿಯಲು ಸಾಧ್ಯವಾಗುತ್ತದೆ. ವಾಸ್ತವವಾಗಿ ಯಾವುದೇ ರೋಬೋಟ್ ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಪರಿಶೀಲಿಸಲು ಸರ್ಚ್ ಇಂಜಿನ್‌ಗಳು ಈ ರೀತಿಯ ಕ್ಯಾಪ್ಚಾ ಕೋಡ್ ಹಾಕುತ್ತವೆ. ನಕಲಿ ವೆಬ್‌ಸೈಟ್ ಗಳು ಮತ್ತು ಕ್ಯಾಪ್ಚಾ ಕೋಡ್‌ಗಳ ಮೂಲಕ ಹೊಸ ರೀತಿಯ ವಂಚನೆ ಮಾಡಲಾಗುತ್ತಿದೆ. ಈ ವಂಚನೆಯಲ್ಲಿ ಲುಮಾ ಸ್ಟೀಲರ್ ಎಂಬ ಮಾಲ್ ವೇರ್‌ಅನ್ನು ಬಳಕೆದಾರರ ಫೋನ್ ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಹರಡಲಾಗುತ್ತಿದೆ. ಸೈಬರ್ ಅಪರಾಧಿಗಳು ಯಾವುದೇ ಜನಪ್ರಿಯ ವೆಬ್‌ಸೈಟ್‌ನ ನಕಲಿ ವೆಬ್‌ಸೈಟ್‌ಅನ್ನು ರೂಪಿಸಿ, ಬ್ರೌಸರ್ ಅಧಿಸೂಚನೆಗಳನ್ನು ಆನ್ ಮಾಡಲು ಪರದೆಯ ಮೇಲೆ ಪ್ರಾಂಪ್ಟ್‌ಅನ್ನು ಪ್ರದರ್ಶಿಸುತ್ತಾರೆ.

ಸೈಬರ್ ಅಪರಾಧಿಗಳು ಈಗ ಅಂತಹ ಕ್ಯಾಪ್ಚಾ ಕೋಡ್‌ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಮೂಲ ಕೋಡ್ಗಳ ಬದಲಿಗೆ ನಕಲಿ ಕ್ಯಾಪ್ಚಾ ಕೋಡ್ ಗಳನ್ನು ಸೇರಿಸುವ ಮೂಲಕ ಮಾಲ್ ವೇರ್ ಅಂದರೆ ವೈರಸ್‌ಗಳನ್ನು ಬಳಕೆದಾರರ ಮೊಬೈಲ್ ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಿಗೆ ಕಳುಹಿಸುತ್ತಿದ್ದಾರೆ. ಈ ವೈರಸ್‌ಗಳು ಬಳಕೆದಾರರ ಸಾಧನವನ್ನು ಪ್ರವೇಶಿಸಿ ಅವರ ಮಾಹಿತಿಯನ್ನು ಕಳ್ಳತನ ಮಾಡುತ್ತವೆ. ಇದು ಸೈಬರ್ ಅಪರಾಧಿಗಳು ವಂಚನೆ ಮಾಡಲು ಕಂಡುಕೊಂಡಿರುವ ಹೊಸ ವಿಧಾನವಾಗಿದೆ. ಬಳಕೆದಾರರು ಈ ಬಗ್ಗೆ ಎಚ್ಚರಿಕೆವಹಿಸಬೇಕು.

ಆಂದೋಲನ ಡೆಸ್ಕ್

Recent Posts

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

6 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

6 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

7 hours ago

PGCET| MBA, MCA ಪ್ರವೇಶ ಪರೀಕ್ಷೆ ಜೂನ್.‌4ಕ್ಕೆ ಮುಂದೂಡಿದ ಕೆಇಎ

ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶ್‌ ಪರೀಕ್ಷೆಯನ್ನು ಜೂನ್.‌14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…

8 hours ago

ಹನೂರು| ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…

8 hours ago

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…

8 hours ago