ಆಂದೋಲನ ಪುರವಣಿ

ಯೋಗ ಕ್ಷೇಮ : ಮಾನಸಿಕ ಆರೋಗ್ಯಕ್ಕೆ ಜೀವನ ಕೌಶಲವೇ ಮೂಲ

ವರ್ತಮಾನದಲ್ಲಿ ಬದುಕಲು ಕಲಿಯಿರಿ; ಸಾಧನೆಯ ಹಾದಿ ಹಿಡಿಯಿರಿ

ಕರುಣಾಲಕ್ಷ್ಮೀ.ಕೆ.ಎಸ್., ಸಹಾಯಕ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಬೆಟ್ಟಂಪಾಡಿ.

ಮಾನಸಿಕ ಆರೋಗ್ಯ ಶಾರೀರಿಕ ಆರೋಗ್ಯದಷ್ಟೇ ಮಹತ್ವವುಳ್ಳದ್ದು. ಮನಸ್ಸು ಶರೀರದ ಸಾರಥಿಯಿದ್ದಂತೆ. ಹಾಗಾಗಿಯೇ ಜನಪದರು ‘ಮನಸ್ಸಿದ್ದರೆ ಮಾದೇವ’ ಎಂದಿರುವುದು. ಇಂದಿನ ಧಾವಂತದ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಒತ್ತಡಗಳಿಗೆ, ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಿರುತ್ತಾರೆ. ಇದೇ ಸಾಧನೆಗೆ ತೊಡಕಾಗುವುದು ಸಹಜ. ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಬದುಕಿನಲ್ಲಿ ಸಮಸ್ಥಿತಿಯನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ.

ರೋಗ-ರುಜಿನಗಳು, ಅವಘಡಗಳು, ಆರ್ಥಿಕ ಸಮಸ್ಯೆಗಳು, ಸಂಬಂಧಗಳ ಬಿರುಕುಗಳು ಸೇರಿ ಹಲವಾರು ಕಾರಣಗಳಿಂದ ಮನಸ್ಸು ಮುದುಡುತ್ತದೆ. ಇದು ಎಲ್ಲರ ಬಾಳಲ್ಲೂ ಸಹಜ. ಆದರೆ ಮನಸ್ಸನ್ನು ಮರಳಿ ಅರಳಿಸಿಕೊಳ್ಳಬೇಕು. ಇಲ್ಲದೇ ಹೋದರೆ ಖಿನ್ನತೆ ಆವರಿಸಿಕೊಂಡು ಮಾನಸಿಕ ಆರೋಗ್ಯ ಕೆಡಬಹುದು.

ವರ್ತಮಾನದಲ್ಲಿ ಜೀವಿಸಿ

‘ಬಾರದು ಬಪ್ಪುದು, ಬಪ್ಪುದು ತಪ್ಪದು’ ಎಂಬುದು ಡಿ.ವಿ.ಗುಂಡಪ್ಪನವರ ವಾಣಿ. ಇದನ್ನು ಮನನ ಮಾಡಿಕೊಂಡು ಆಸೆಗಳಿಗೆ ಕಡಿವಾಣ ಹಾಕುವುದು, ಸಮಚಿತ್ತವನ್ನು ಕಾಯ್ದುಕೊಂಡರೆ ಮಾನಸಿಕ ಆರೋಗ್ಯ ಉತ್ತಮವಾಗಿ ಇರುತ್ತದೆ. ವ್ಯಕ್ತಿ ವರ್ತಮಾನದಲ್ಲಿ ಜೀವಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಬಹುತೇಕರು ವರ್ತಮಾನದ ಸ್ಥಿತಿಯನ್ನು ಅನುಭವಿಸದೆ ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ ಸುಖಿಸುತ್ತಲೋ, ದುಃಖಿಸುತ್ತಲೋ ಕೊರಗುತ್ತಲೋ ಇರುತ್ತಾರೆ. ಹಾಗೆೆಯೇ ಮುಂದಿನದನ್ನು ಕಲ್ಪಿಸಿಕೊಳ್ಳುತ್ತಾ ಕಳವಳಪಡುತ್ತಲೋ ಅಥವಾ ಮನಸ್ಸಿನಲ್ಲಿೆಯೇ ಕಲ್ಪನೆಯ ಮಹಲನ್ನು ಕಟ್ಟುತ್ತಲೋ ಸಂಭ್ರಮಿಸುತ್ತಿರುತ್ತಾರೆ. ಭೂತಕಾಲದ ಕಾಡುವಿಕೆ, ಭವಿಷ್ಯದ ಕನವರಿಕೆ ಎರಡೂ ಸಾಧನೆಯ ಮಾರ್ಗದಲ್ಲಿ ಅಡೆತಡೆಗಳನ್ನುಉಂಟುಮಾಡುತ್ತವೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತವೆ.

ಊರ್ಮಿಳೆಯ ಪ್ರಸಂಗ

ಲಕ್ಷ್ಮಣ ತನ್ನ ಅಗ್ರಜನಾದ ರಾಮರೊಡನೆ ಕಾಡಿಗೆ ಹೊರಟು ನಿಂತಾಗ ಪತ್ನಿ ಊರ್ಮಿಳೆಗಾದ ಮಾನಸಿಕ ಕ್ಷೋಭೆ ಅಷ್ಟಿಷ್ಟಲ್ಲ. ಆ ಮಾನಸಿಕ ಆಘಾತದಿಂದ ಆಕೆ ಕುಸಿದುಹೋಗುತ್ತಾಳೆ. ಹದಿನಾಲ್ಕು ವರ್ಷಗಳ ದೀರ್ಘಕಾಲ ಅಳುತ್ತಾ, ಕೊರಗುತ್ತಿದ್ದರೂ ಕಾಲ ಕಳೆಯುತ್ತದೆ, ಅಥವಾ ಯಾವುದಾದರೂ ರಚನಾತ್ಮಕ ಕಾರ್ಯಕ್ರಮಗಳನ್ನು ಮAಡುತ್ತಿದ್ದರೂ ಕಾಲ ಕಳೆಯುತ್ತದೆ ಎಂಬ ಅರಿವು ಬಂದೊಡನೆ ಆಕೆ ಆ ಹದಿನಾಲ್ಕು ವರ್ಷಗಳನ್ನು ರಚನಾತ್ಮಕವಾಗಿ ಕಳೆಯುತ್ತಾಳೆ. ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಾಳೆ. ಇದೇ ರೀತಿ ಸೀತೆಯೂ ಗಂಡನೊಡನೆ ಕಾಡಿಗೆ ಹೋಗಿ ಕುಟೀರವನ್ನೇ ರಾಜಭವನವೆಂದು ಸಂಭ್ರಮಿಸುತ್ತ ಕಷ್ಟದ ದಿನಗಳನ್ನು ದಾಟುತ್ತಾಳೆ. ಇಂತಹ ವೇಳೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿ ಇರದೇ ಇದ್ದರೆ ಆರೋಗ್ಯ ಕೆಡುವುದು ಸಹಜ ಎಂಬುದನ್ನು ಹಿಂದೆಯು ಪ್ರಮುಖ ಕವಿಗಳಾದ ಮೈಥಿಲೀಶರಣ ಗುಪ್ತರು ತಮ್ಮ ಕಾವ್ಯವಾದ ‘ಸಾಕೇತ’ದಲ್ಲಿ ಬಣ್ಣಿಸಿದ್ದಾರೆ.

ಯುವಕರೇ ತಿಳಿಯಿರಿ

ಇಂದಿನ ಯುವಜನರಲ್ಲಿ ಅದರಲ್ಲೂ ವಿದ್ಯಾರ್ಥಿಗಳಿಗೆ ವರ್ತಮಾನದ ಅರಿವು ಬಹಳ ಮುಖ್ಯ. ಸುಂದರ ಭವಿಷ್ಯದ ಕನಸನ್ನು ಸಾಕಾರಗೊಳಿಸಿಕೊಳ್ಳಲು, ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ವರ್ತಮಾನದಲ್ಲಿ ಬದುಕುವುದು ಮುಖ್ಯ. ಸಾಧಕರ ಜೀವನ ಕ್ರಮಗಳನ್ನು ತಿಳಿದು ಅವರಿಂದ ಪ್ರೇರಣೆ ಪಡೆಯುತ್ತಾ ಧನಾತ್ಮಕ ಮನಃಸ್ಥಿತಿಯನ್ನು ರೂಢಿಸಿಕೊಂಡು ವರ್ತಮಾನದಲ್ಲಿ ಜೀವಿಸಿದರೆ ಉತ್ತಮ ಬದುಕನ್ನು, ಉತ್ತಮ ಮಾನಸಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

andolanait

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

13 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

15 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

17 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

17 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

18 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

19 hours ago