ಆಂದೋಲನ ಪುರವಣಿ

ಯೋಗ ಕ್ಷೇಮ : ಬರಲಿರುವ ಚಳಿಗಾಲಕ್ಕೆ ತುಟಿಗಳ ಪೋಷಣೆ ಮಾಡಿ

ಇನ್ನೇನು ಚಳಿಗಾಲವನ್ನು ಆಹ್ವಾನ ಮಾಡಲಿದ್ದೇವೆ. ಈಗಿರುವಾಗ ಚರ್ಮದ ಕಾಳಜಿ ಅತಿ ಅಗತ್ಯ. ಅದರಲ್ಲಿಯೂ ನಮ್ಮ ತುಟಿಗಳನ್ನು ಚೆನ್ನಾಗಿ ಪೋಷಣೆ ಮಾಡುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ತುಟಿಗಳು ಒಡೆದುಕೊಂಡು ಸಮಸ್ಯೆಗಳನ್ನು ತಂದೊಡ್ಡುತ್ತವೆ.


ಚಳಿಗಾಲದಲ್ಲಿ ವಾತಾವಣರದಲ್ಲಿ ಆರ್ದತೆ ಕಡಿಮೆ ಇರುವುದರಿಂದ ಇದು ನೇರವಾಗಿ ಚರ್ಮ ಮತ್ತು ತುಟಿಗಳ ಮೇಲೆ ಪರಿಣಾಮ ಬೀರುತ್ತದೆ. ತುಟಿಗಳು ಒಡೆದುಕೊಳ್ಳುವುದು, ಕೆಲವು ವೇಳೆಯಲ್ಲಿ ಬಿರುಕು ಬಿಡುವುದೂ ಸಾಮಾನ್ಯ. ಈ ವೇಳೆಯಲ್ಲಿ ಸಿಂಪಲ್ ಮನೆಮದ್ದು ಟ್ರೈ ಮಾಡಿದರೆ ಸಮಸ್ಯೆಗೆ ಪರಿಹಾರವಾದೀತು.


ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಹಲವು ಬಗೆಯಲ್ಲಿ ಆರೋಗ್ಯಕ್ಕೆ ಪೂರಕ. ಚರ್ಮದ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯ ಔಷಧ. ರಾತ್ರಿ ಮಲಗುವ ವೇಳೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮೈಗೆ, ಕೈ ಕಾಲುಗಳಿಗೆ ತೆಳುವಾಗಿ ಹಚ್ಚುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ. ಇದರೊಂದಿಗೆ ತುಟಿಗಳಿಗೂ ಹಚ್ಚುವುದರಿಂದ ತುಟಿಗಳು ಬೇಗನೇ ಒಣಗುವುದಿಲ್ಲ. ಇದರಿಂದ ಒಡೆದುಕೊಳ್ಳುವುದೂ ಇಲ್ಲ.


ಆಲೋವೆರಾ

ಇಂದು ಮಾರುಕಟ್ಟೆಯಲ್ಲಿ ಆಲೋವೆರಾ ಜೆಲ್‌ಗಳು ಸಾಕಷ್ಟು ಸಿಗುತ್ತವೆ. ಇದರ ಜೊತೆಗೆ ನೈಸರ್ಗಿಕವಾಗಿಯೂ ಆಲೋವೆರಾ ಸಿಗುತ್ತದೆ. ಇವುಗಳ ಲೋಳೆಯನ್ನು ಸಂಗ್ರಹ ಮಾಡಿ ತುಟಿಗಳಿಗೆ, ಚರ್ಮಗಳಿಗೆ ಹಚ್ಚುವುದು ಸೂಕ್ತ. ಇದು ಚರ್ಮ ಮತ್ತು ತುಟಿಗಳ ಮೇಲೆ ತಾವಾಂಶ ಹೆಚ್ಚಿನ ಸಮಯ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತುಟಿಗಳು ಸುರಕ್ಷಿತವಾಗಿರುತ್ತವೆ.


ಹಾಲಿನ ಕೆನೆ, ತುಪ್ಪ

ರಾತ್ರಿ ಮಲಗುವ ವೇಳೆಯಲ್ಲಿ ತುಟಿಗಳ ಮೇಲೆ ಹಾಲಿನ ಕೆನೆ ಅಥವಾ ತುಪ್ಪವನ್ನು ತೆಳುವಾಗಿ ಹಚ್ಚುವುದು ಒಳ್ಳೆಯದ್ದು. ಇದರಲ್ಲಿ ಇರುವ ಜಿಡ್ಡಿನ ಅಂಶವು ತುಟಿಗಳನ್ನು ಮೃದು ಮಾಡುತ್ತದೆ. ಅಲ್ಲದೇ ಶುಷ್ಕತೆಯನ್ನು ನಿವಾರಿಸಿ ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ.


ಸಕ್ಕರೆ ಲೇಪನ

ಒಂದು ವೇಳೆ ತುಟಿಗಳು ಈಗಾಗಲೇ ಒಡೆದುಕೊಂಡಿದ್ದರೆ ತುಟಿಗಳಿಗೆ ತೆಳುವಾಗಿ ಸಕ್ಕರೆಯನ್ನು ಅಂಟಿಸಿಕೊಳ್ಳುವುದು ಒಳ್ಳೆಯದ್ದು. ಇದು ಈಗಾಗಲೇ ಒಡೆದಿರುವ ತುಟಿಯ ಮೇಲಿನ ಚರ್ಮವು ಬೀಳಲು ಸಹಕರಿಸುತ್ತದೆ. ಅಲ್ಲದೇ ಸಣ್ಣ ಪ್ರಮಾಣದ ಉರಿ ಇದ್ದರೆ ಅದು ಕಡಿಮೆಯಾಗುತ್ತದೆ.


ವ್ಯಾಸಲೀನ್ ಬಳಕೆ

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ವ್ಯಾಸಲೀನ್‌ಗಳು ಲಭ್ಯ. ಕೆಲವನ್ನು ಚರ್ಮಕ್ಕೆ ಮಾತ್ರ ಲೇಪಿಸಬಹುದು. ತುಟಿಗಳಿಗಾಗಿಯೇ ಕೆಲವಾರು ಉತ್ಪನ್ನಗಳು ಲಭ್ಯವಿದ್ದು, ಅವುಗಳ ಬಳಕೆ ಮಾಡಬಹುದು. ಅಲ್ಲದೇ ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದಲೂ ತುಟಿಗಳ ರಕ್ಷಣೆ ಸಾಧ್ಯ. ಹೆಚ್ಚು ನೀರು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಉಳಿಯುತ್ತದೆ. ಇದು ಚರ್ಮದ ರಕ್ಷಣೆಗೆ ಪೂರಕ.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

5 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago