ಆಂದೋಲನ ಪುರವಣಿ

ಯೋಗ ಕ್ಷೇಮ : ಬರಲಿರುವ ಚಳಿಗಾಲಕ್ಕೆ ತುಟಿಗಳ ಪೋಷಣೆ ಮಾಡಿ

ಇನ್ನೇನು ಚಳಿಗಾಲವನ್ನು ಆಹ್ವಾನ ಮಾಡಲಿದ್ದೇವೆ. ಈಗಿರುವಾಗ ಚರ್ಮದ ಕಾಳಜಿ ಅತಿ ಅಗತ್ಯ. ಅದರಲ್ಲಿಯೂ ನಮ್ಮ ತುಟಿಗಳನ್ನು ಚೆನ್ನಾಗಿ ಪೋಷಣೆ ಮಾಡುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ತುಟಿಗಳು ಒಡೆದುಕೊಂಡು ಸಮಸ್ಯೆಗಳನ್ನು ತಂದೊಡ್ಡುತ್ತವೆ.


ಚಳಿಗಾಲದಲ್ಲಿ ವಾತಾವಣರದಲ್ಲಿ ಆರ್ದತೆ ಕಡಿಮೆ ಇರುವುದರಿಂದ ಇದು ನೇರವಾಗಿ ಚರ್ಮ ಮತ್ತು ತುಟಿಗಳ ಮೇಲೆ ಪರಿಣಾಮ ಬೀರುತ್ತದೆ. ತುಟಿಗಳು ಒಡೆದುಕೊಳ್ಳುವುದು, ಕೆಲವು ವೇಳೆಯಲ್ಲಿ ಬಿರುಕು ಬಿಡುವುದೂ ಸಾಮಾನ್ಯ. ಈ ವೇಳೆಯಲ್ಲಿ ಸಿಂಪಲ್ ಮನೆಮದ್ದು ಟ್ರೈ ಮಾಡಿದರೆ ಸಮಸ್ಯೆಗೆ ಪರಿಹಾರವಾದೀತು.


ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಹಲವು ಬಗೆಯಲ್ಲಿ ಆರೋಗ್ಯಕ್ಕೆ ಪೂರಕ. ಚರ್ಮದ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯ ಔಷಧ. ರಾತ್ರಿ ಮಲಗುವ ವೇಳೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮೈಗೆ, ಕೈ ಕಾಲುಗಳಿಗೆ ತೆಳುವಾಗಿ ಹಚ್ಚುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ. ಇದರೊಂದಿಗೆ ತುಟಿಗಳಿಗೂ ಹಚ್ಚುವುದರಿಂದ ತುಟಿಗಳು ಬೇಗನೇ ಒಣಗುವುದಿಲ್ಲ. ಇದರಿಂದ ಒಡೆದುಕೊಳ್ಳುವುದೂ ಇಲ್ಲ.


ಆಲೋವೆರಾ

ಇಂದು ಮಾರುಕಟ್ಟೆಯಲ್ಲಿ ಆಲೋವೆರಾ ಜೆಲ್‌ಗಳು ಸಾಕಷ್ಟು ಸಿಗುತ್ತವೆ. ಇದರ ಜೊತೆಗೆ ನೈಸರ್ಗಿಕವಾಗಿಯೂ ಆಲೋವೆರಾ ಸಿಗುತ್ತದೆ. ಇವುಗಳ ಲೋಳೆಯನ್ನು ಸಂಗ್ರಹ ಮಾಡಿ ತುಟಿಗಳಿಗೆ, ಚರ್ಮಗಳಿಗೆ ಹಚ್ಚುವುದು ಸೂಕ್ತ. ಇದು ಚರ್ಮ ಮತ್ತು ತುಟಿಗಳ ಮೇಲೆ ತಾವಾಂಶ ಹೆಚ್ಚಿನ ಸಮಯ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತುಟಿಗಳು ಸುರಕ್ಷಿತವಾಗಿರುತ್ತವೆ.


ಹಾಲಿನ ಕೆನೆ, ತುಪ್ಪ

ರಾತ್ರಿ ಮಲಗುವ ವೇಳೆಯಲ್ಲಿ ತುಟಿಗಳ ಮೇಲೆ ಹಾಲಿನ ಕೆನೆ ಅಥವಾ ತುಪ್ಪವನ್ನು ತೆಳುವಾಗಿ ಹಚ್ಚುವುದು ಒಳ್ಳೆಯದ್ದು. ಇದರಲ್ಲಿ ಇರುವ ಜಿಡ್ಡಿನ ಅಂಶವು ತುಟಿಗಳನ್ನು ಮೃದು ಮಾಡುತ್ತದೆ. ಅಲ್ಲದೇ ಶುಷ್ಕತೆಯನ್ನು ನಿವಾರಿಸಿ ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ.


ಸಕ್ಕರೆ ಲೇಪನ

ಒಂದು ವೇಳೆ ತುಟಿಗಳು ಈಗಾಗಲೇ ಒಡೆದುಕೊಂಡಿದ್ದರೆ ತುಟಿಗಳಿಗೆ ತೆಳುವಾಗಿ ಸಕ್ಕರೆಯನ್ನು ಅಂಟಿಸಿಕೊಳ್ಳುವುದು ಒಳ್ಳೆಯದ್ದು. ಇದು ಈಗಾಗಲೇ ಒಡೆದಿರುವ ತುಟಿಯ ಮೇಲಿನ ಚರ್ಮವು ಬೀಳಲು ಸಹಕರಿಸುತ್ತದೆ. ಅಲ್ಲದೇ ಸಣ್ಣ ಪ್ರಮಾಣದ ಉರಿ ಇದ್ದರೆ ಅದು ಕಡಿಮೆಯಾಗುತ್ತದೆ.


ವ್ಯಾಸಲೀನ್ ಬಳಕೆ

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ವ್ಯಾಸಲೀನ್‌ಗಳು ಲಭ್ಯ. ಕೆಲವನ್ನು ಚರ್ಮಕ್ಕೆ ಮಾತ್ರ ಲೇಪಿಸಬಹುದು. ತುಟಿಗಳಿಗಾಗಿಯೇ ಕೆಲವಾರು ಉತ್ಪನ್ನಗಳು ಲಭ್ಯವಿದ್ದು, ಅವುಗಳ ಬಳಕೆ ಮಾಡಬಹುದು. ಅಲ್ಲದೇ ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದಲೂ ತುಟಿಗಳ ರಕ್ಷಣೆ ಸಾಧ್ಯ. ಹೆಚ್ಚು ನೀರು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಉಳಿಯುತ್ತದೆ. ಇದು ಚರ್ಮದ ರಕ್ಷಣೆಗೆ ಪೂರಕ.

andolanait

Recent Posts

ಕಾರು ಚಾಲಕನ ಪುತ್ರನಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬಂದ ದಳಪತಿ ವಿಜಯ್‌!

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ ಅವರ ಕಾರು ಚಾಲಕನ…

3 hours ago

ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು : ಮೈಸೂರಲ್ಲಿ ಸಂಭ್ರಮಾಚರಣೆ

ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…

4 hours ago

ವಿಜಯ್‌ ಭೇಟಿಯಾಗಿ ತ್ರಿಶಾ ಅಭಿನಂದನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…

4 hours ago

ತಮಿಳುನಾಡು| ಸಿಎಂ ಎಂ.ಕೆ.ಸ್ಟಾಲಿನ್‌ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…

7 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಜಯಭೇರಿ

ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…

8 hours ago

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…

8 hours ago