ಆಂದೋಲನ ಪುರವಣಿ

ಯೋಗ ಕ್ಷೇಮ : ಬರಲಿರುವ ಚಳಿಗಾಲಕ್ಕೆ ತುಟಿಗಳ ಪೋಷಣೆ ಮಾಡಿ

ಇನ್ನೇನು ಚಳಿಗಾಲವನ್ನು ಆಹ್ವಾನ ಮಾಡಲಿದ್ದೇವೆ. ಈಗಿರುವಾಗ ಚರ್ಮದ ಕಾಳಜಿ ಅತಿ ಅಗತ್ಯ. ಅದರಲ್ಲಿಯೂ ನಮ್ಮ ತುಟಿಗಳನ್ನು ಚೆನ್ನಾಗಿ ಪೋಷಣೆ ಮಾಡುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ತುಟಿಗಳು ಒಡೆದುಕೊಂಡು ಸಮಸ್ಯೆಗಳನ್ನು ತಂದೊಡ್ಡುತ್ತವೆ.


ಚಳಿಗಾಲದಲ್ಲಿ ವಾತಾವಣರದಲ್ಲಿ ಆರ್ದತೆ ಕಡಿಮೆ ಇರುವುದರಿಂದ ಇದು ನೇರವಾಗಿ ಚರ್ಮ ಮತ್ತು ತುಟಿಗಳ ಮೇಲೆ ಪರಿಣಾಮ ಬೀರುತ್ತದೆ. ತುಟಿಗಳು ಒಡೆದುಕೊಳ್ಳುವುದು, ಕೆಲವು ವೇಳೆಯಲ್ಲಿ ಬಿರುಕು ಬಿಡುವುದೂ ಸಾಮಾನ್ಯ. ಈ ವೇಳೆಯಲ್ಲಿ ಸಿಂಪಲ್ ಮನೆಮದ್ದು ಟ್ರೈ ಮಾಡಿದರೆ ಸಮಸ್ಯೆಗೆ ಪರಿಹಾರವಾದೀತು.


ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಹಲವು ಬಗೆಯಲ್ಲಿ ಆರೋಗ್ಯಕ್ಕೆ ಪೂರಕ. ಚರ್ಮದ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯ ಔಷಧ. ರಾತ್ರಿ ಮಲಗುವ ವೇಳೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮೈಗೆ, ಕೈ ಕಾಲುಗಳಿಗೆ ತೆಳುವಾಗಿ ಹಚ್ಚುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ. ಇದರೊಂದಿಗೆ ತುಟಿಗಳಿಗೂ ಹಚ್ಚುವುದರಿಂದ ತುಟಿಗಳು ಬೇಗನೇ ಒಣಗುವುದಿಲ್ಲ. ಇದರಿಂದ ಒಡೆದುಕೊಳ್ಳುವುದೂ ಇಲ್ಲ.


ಆಲೋವೆರಾ

ಇಂದು ಮಾರುಕಟ್ಟೆಯಲ್ಲಿ ಆಲೋವೆರಾ ಜೆಲ್‌ಗಳು ಸಾಕಷ್ಟು ಸಿಗುತ್ತವೆ. ಇದರ ಜೊತೆಗೆ ನೈಸರ್ಗಿಕವಾಗಿಯೂ ಆಲೋವೆರಾ ಸಿಗುತ್ತದೆ. ಇವುಗಳ ಲೋಳೆಯನ್ನು ಸಂಗ್ರಹ ಮಾಡಿ ತುಟಿಗಳಿಗೆ, ಚರ್ಮಗಳಿಗೆ ಹಚ್ಚುವುದು ಸೂಕ್ತ. ಇದು ಚರ್ಮ ಮತ್ತು ತುಟಿಗಳ ಮೇಲೆ ತಾವಾಂಶ ಹೆಚ್ಚಿನ ಸಮಯ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತುಟಿಗಳು ಸುರಕ್ಷಿತವಾಗಿರುತ್ತವೆ.


ಹಾಲಿನ ಕೆನೆ, ತುಪ್ಪ

ರಾತ್ರಿ ಮಲಗುವ ವೇಳೆಯಲ್ಲಿ ತುಟಿಗಳ ಮೇಲೆ ಹಾಲಿನ ಕೆನೆ ಅಥವಾ ತುಪ್ಪವನ್ನು ತೆಳುವಾಗಿ ಹಚ್ಚುವುದು ಒಳ್ಳೆಯದ್ದು. ಇದರಲ್ಲಿ ಇರುವ ಜಿಡ್ಡಿನ ಅಂಶವು ತುಟಿಗಳನ್ನು ಮೃದು ಮಾಡುತ್ತದೆ. ಅಲ್ಲದೇ ಶುಷ್ಕತೆಯನ್ನು ನಿವಾರಿಸಿ ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ.


ಸಕ್ಕರೆ ಲೇಪನ

ಒಂದು ವೇಳೆ ತುಟಿಗಳು ಈಗಾಗಲೇ ಒಡೆದುಕೊಂಡಿದ್ದರೆ ತುಟಿಗಳಿಗೆ ತೆಳುವಾಗಿ ಸಕ್ಕರೆಯನ್ನು ಅಂಟಿಸಿಕೊಳ್ಳುವುದು ಒಳ್ಳೆಯದ್ದು. ಇದು ಈಗಾಗಲೇ ಒಡೆದಿರುವ ತುಟಿಯ ಮೇಲಿನ ಚರ್ಮವು ಬೀಳಲು ಸಹಕರಿಸುತ್ತದೆ. ಅಲ್ಲದೇ ಸಣ್ಣ ಪ್ರಮಾಣದ ಉರಿ ಇದ್ದರೆ ಅದು ಕಡಿಮೆಯಾಗುತ್ತದೆ.


ವ್ಯಾಸಲೀನ್ ಬಳಕೆ

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ವ್ಯಾಸಲೀನ್‌ಗಳು ಲಭ್ಯ. ಕೆಲವನ್ನು ಚರ್ಮಕ್ಕೆ ಮಾತ್ರ ಲೇಪಿಸಬಹುದು. ತುಟಿಗಳಿಗಾಗಿಯೇ ಕೆಲವಾರು ಉತ್ಪನ್ನಗಳು ಲಭ್ಯವಿದ್ದು, ಅವುಗಳ ಬಳಕೆ ಮಾಡಬಹುದು. ಅಲ್ಲದೇ ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದಲೂ ತುಟಿಗಳ ರಕ್ಷಣೆ ಸಾಧ್ಯ. ಹೆಚ್ಚು ನೀರು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಉಳಿಯುತ್ತದೆ. ಇದು ಚರ್ಮದ ರಕ್ಷಣೆಗೆ ಪೂರಕ.

andolanait

Recent Posts

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

36 mins ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

40 mins ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

1 hour ago

ಓದುಗರ ಪತ್ರ:  RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…

1 hour ago

ಓದುಗರ ಪತ್ರ:  ಮೈಸೂರಿನಲ್ಲಿ ಡಾಗ್ ಪಾರ್ಕ್ ಸ್ಥಾಪಿಸಿ

ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…

2 hours ago

ಚಲನಚಿತ್ರ: ಗಲ್ಲಾ ಪೆಟ್ಟಿಗೆ ಗಳಿಕೆ, ಬಾಡಿಗೆ, ಬಡ್ಡಿ, ಉಳಿಕೆ ಇತ್ಯಾದಿ

ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…

2 hours ago