ವಾರಾಂತ್ಯ ವಿಶೇಷ

ನುಡಿ ಸುದರ್ಶನ ಅಭಿನಯದ ಸಕುಬಾಯಿ ಕಾಮ್‌ವಾಲಿ

ಸಕುಬಾಯಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದವಳು, ಏಳು ವರ್ಷದವಳಿದ್ದಾಗಲೇ ತಾಯಿ ಲಕ್ಷ್ಮೀಬಾಯಿ ಝಾಮಡೆ ಜೊತೆ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಕ್ಕೆ ಬಂದವಳು. ಎಲ್ಲರಂತೆ ತಾನೂ ಓದಬೇಕು ಎನ್ನುವ ಕನಸನ್ನು ಬದುಕಿನ ಅನಿವಾರ್ಯತೆಗಾಗಿ ಮೊಟಕುಗೊಳಿಸಿಕೊಂಡವಳು.

ಗಲ್ಲಿಗಲ್ಲಿಗಳಲ್ಲಿ ತಿರುಗುತ್ತ, ಮನೆಮನೆಗಳಲ್ಲಿ ಕೆಲಸ ಮಾಡುತ್ತ ಬದುಕಿನ ಅಪಾರ ಅನುಭವವನ್ನು ಪಡೆದುಕೊಂಡವಳು. ತನ್ನ ತಂದೆ, ತಾಯಿ, ತಂಗಿಗಾಗಿ ಮಿಡಿಯುವ ಹೃದಯದವಳು, ಸಂಸ್ಕೃತಿಹೀನ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡುತ್ತಲೇ, ಪಾತ್ರೆಗಳನ್ನು ತೊಳೆಯುತ್ತಲೇ ಮಗಳನ್ನು ಸುಸಂಸ್ಕೃತಳನ್ನಾಗಿ ಮಾಡಿದವಳು.

ಮನೆ ಮಂದಿಗಾಗಿ ದುಡಿಯುವ ತನ್ನ ತಂದೆ, ಯಾರದೋ ಆಮಿಷಕ್ಕೆ ಬಲಿಯಾಗಿ ಮುಂಬೈನ ಕಾಮಾಟಿಪುರದಲ್ಲಿ ನೇಣಿಗೆ ಶರಣಾಗುವ ತಂಗಿ, ಏಡ್ಸ್ ಮಹಾಮಾರಿಗೆ ಬಲಿಯಾಗುವ ಗಂಡ, ಈ ಎಲ್ಲ ಘಟನೆಗಳಿಗೆ ಎದುರುಗೊಳ್ಳುತ್ತ ಬದುಕು ಕಟ್ಟಿಕೊಳ್ಳಲು ಹೆಣಗುವವಳು. ಕೊನೆಯಲ್ಲಿ ಆಕೆಯ ಮಗಳೇ ಅವಳನ್ನು ಓದುವಂತೆ ಪ್ರೇರೇಪಿಸುತ್ತಾಳೆ. ಆ ಮೂಲಕ ಅಕ್ಷರಜ್ಞಾನದ ಕಡೆಗೆ ಮುಖ ಮಾಡುತ್ತಾಳೆ ಸಕುಬಾಯಿ.

• ಹಿಂದಿ ಮೂಲ: ನಾದಿರಾ ಒಬ್ಬರ್‌
• ಕನ್ನಡ ಅನುವಾದ ಡಿ.ಎಸ್.ಚೌಗಲೆ
• ನಿರ್ದೇಶನ- ಹುಲುಗಪ್ಪ ಕಟ್ಟಿಮನಿ
• ಮುದ್ರಿತ ಸಂಗೀತ ವಿನ್ಯಾಸ-
ಸಾಲಿಯಾನ ಉಮೇಶ್‌ ನಾರಾಯಣ
• ಪ್ರಸ್ತುತಿ- ನುಡಿರಂಗ ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

3 mins ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

12 mins ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

17 mins ago

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…

23 mins ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

10 hours ago