ಬನ್ನೂರು ಬಸ್‌ಸ್ಟಾಂಡಿನ ಪಕ್ಕ ಸೊಪ್ಪು ಮಾರುತ್ತ ಕೂತಿರುವ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಅಪ್ರತಿಮ ಹಾಡುಗಾತಿ ಅನ್ನುವುದು ಸೊಪ್ಪು ಕೊಳ್ಳಲು ಬರುವ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಪ್ರಕಾರ ಆಕೆ ಬಹಳ ಒಳ್ಳೆಯ ಮಾತುಗಾರ್ತಿ ಮತ್ತು ಆಗೀಗ ದನದ ದಲ್ಲಾಳಿ ಕೆಲಸ ಮಾಡುವ ಸಣ್ಣ ಮಟ್ಟಿಗಿನ ಏಜೆಂಟು ಮತ್ತು ಒಮ್ಮೊಮ್ಮೆ ಗಂಡಿಗೆ ಹೆಣ್ಣು ಹುಡುಕುವ, ಹೆಣ್ಣಿಗೆ ಗಂಡು ಹುಡುಕುವ ಮದುವೆ ದಲ್ಲಾಳಿ.
ಆದರೆ ಈ ಸೊಪ್ಪು ಮಾರಾಟ ಇತ್ಯಾದಿಗಳು ಆಕೆಗೆ ಹೊಟ್ಟೆಪಾಡಿನ ಚಿಂತೆ ನೀಗಿಸುವ ದಾರಿಗಳು ಮಾತ್ರ. ಆಕೆಯ ನಿಜವಾದ ಸಂತೋಷ ಇರುವುದು ಸೋಬಾನೆ ಹೇಳುವುದರಲ್ಲಿ ಮತ್ತು ಮೈಸೂರು ಸೀಮೆಯ ಜಾನಪದ ಕಾವ್ಯಗಳನ್ನು ಸಮಯದ ಪರಿವೆಯಿಲ್ಲದೆ ಹಾಡುವುದರಲ್ಲಿ.
ಹೀಗಿರುವ ಭಾಗ್ಯಮ್ಮ ಕೆಲಕಾಲದ ಹಿಂದೆ ಸೊಪ್ಪು ಮಾರಿದ ನಂತರ ಹಳ್ಳಿಗೆ ವಾಪಸು ನಡೆದುಕೊಂಡು ಹೋಗುತ್ತಿರುವಾಗ ವಾಹನವೊಂದು ಆಕೆಯ ಮೇಲೆ ನುಗ್ಗಿಬಂದು, ಒಂದು ಕಾಲು ಊನವಾಗಿ, ಆಗ ನಡೆದ ಆಪರೇಷನ್ನಿನಲ್ಲಿ ಹಾಕಿದ ರಾಡನ್ನು ಇನ್ನೂ ಕಾಲೊಳಗೆ ಇಟ್ಟುಕೊಂಡು ಆಕೆ ನಡೆಯುತ್ತಿರುವಳು. ಆಪರೇಷನ್ನು ನಡೆಸಲು ನೆರವಾದ ಮಹಾನುಭಾವರನ್ನು ನೆನೆದುಕೊಂಡು ಕೈಮುಗಿಯುವಳು. ಆಕೆಯ ಮಾತುಗಳಲ್ಲಿ ಯಾರ ಮೇಲೂ ಸಿಟ್ಟಿಲ್ಲ. ಕುಹಕವಿಲ್ಲ. ಯಾವುದರ ಮೇಲೂ ಬೇಸರವಿಲ್ಲ. ಯಾವ ಹೊತ್ತಿನಲ್ಲೂ ಮನಸ್ಸಿನೊಳಗೆ ಯಾವುದೋ ಒಂದು ಹಾಡನ್ನು ಗುನುಗಿಕೊಂಡು ಸಂತೋಷದಲ್ಲಿರುವಳು.
mysoorininda@gmail.com

andolana

Recent Posts

ಹೆಚ್ಚುತ್ತಿರುವ ಯುವತಿಯರ ಆತ್ಮಹತ್ಯೆ ; ಯುವತಿಯರಿಗೆ ಕಂಗನಾ ರಣಾವತ್ ಕಿವಿಮಾತು

ದೆಹಲಿ : ಮದುವೆಯಾದ ಯುವತಿಯರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಯುವತಿಯರಿಗೆ…

5 hours ago

ಆ.31ರೊಳಗೆ ಜಿಬಿಎ ಚುನಾವಣೆ ನಡೆಸಿ ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಂತಿಮ ಗಡುವು

ಹೊಸದಿಲ್ಲಿ : ಆಗಸ್ಟ್ ೩೧ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ…

7 hours ago

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶವಿಲ್ಲ : ಈಶ್ವರ ಖಂಡ್ರೆ

ಸಫಾರಿ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಲು ಖಂಡ್ರೆ ಸೂಚನೆ ಬೆಂಗಳೂರು :  ರಾಜ್ಯದ ಐದು ಹುಲಿ…

8 hours ago

ಮ.ಬೆಟ್ಟ | ಮರದ ಕೊಂಬೆ ಬಿದ್ದು ಮೂವರಿಗೆ ಗಾಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಮೇಲೆ ಮರದ ಕೊಂಬೆ ಬಿದ್ದು ಮೂವರು ಗಾಯಗೊಂಡಿರುವ…

10 hours ago

ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ…

13 hours ago

ಯಳಂದೂರು: ಬೋನಿಗೆ ಬಿದ್ದ ಚಿರತೆ

ಯಳಂದೂರು: ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ…

14 hours ago