ಬನ್ನೂರು ಬಸ್ಸ್ಟಾಂಡಿನ ಪಕ್ಕ ಸೊಪ್ಪು ಮಾರುತ್ತ ಕೂತಿರುವ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಅಪ್ರತಿಮ ಹಾಡುಗಾತಿ ಅನ್ನುವುದು ಸೊಪ್ಪು ಕೊಳ್ಳಲು ಬರುವ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಪ್ರಕಾರ ಆಕೆ ಬಹಳ ಒಳ್ಳೆಯ ಮಾತುಗಾರ್ತಿ ಮತ್ತು ಆಗೀಗ ದನದ ದಲ್ಲಾಳಿ ಕೆಲಸ ಮಾಡುವ ಸಣ್ಣ ಮಟ್ಟಿಗಿನ ಏಜೆಂಟು ಮತ್ತು ಒಮ್ಮೊಮ್ಮೆ ಗಂಡಿಗೆ ಹೆಣ್ಣು ಹುಡುಕುವ, ಹೆಣ್ಣಿಗೆ ಗಂಡು ಹುಡುಕುವ ಮದುವೆ ದಲ್ಲಾಳಿ.
ಆದರೆ ಈ ಸೊಪ್ಪು ಮಾರಾಟ ಇತ್ಯಾದಿಗಳು ಆಕೆಗೆ ಹೊಟ್ಟೆಪಾಡಿನ ಚಿಂತೆ ನೀಗಿಸುವ ದಾರಿಗಳು ಮಾತ್ರ. ಆಕೆಯ ನಿಜವಾದ ಸಂತೋಷ ಇರುವುದು ಸೋಬಾನೆ ಹೇಳುವುದರಲ್ಲಿ ಮತ್ತು ಮೈಸೂರು ಸೀಮೆಯ ಜಾನಪದ ಕಾವ್ಯಗಳನ್ನು ಸಮಯದ ಪರಿವೆಯಿಲ್ಲದೆ ಹಾಡುವುದರಲ್ಲಿ.
ಹೀಗಿರುವ ಭಾಗ್ಯಮ್ಮ ಕೆಲಕಾಲದ ಹಿಂದೆ ಸೊಪ್ಪು ಮಾರಿದ ನಂತರ ಹಳ್ಳಿಗೆ ವಾಪಸು ನಡೆದುಕೊಂಡು ಹೋಗುತ್ತಿರುವಾಗ ವಾಹನವೊಂದು ಆಕೆಯ ಮೇಲೆ ನುಗ್ಗಿಬಂದು, ಒಂದು ಕಾಲು ಊನವಾಗಿ, ಆಗ ನಡೆದ ಆಪರೇಷನ್ನಿನಲ್ಲಿ ಹಾಕಿದ ರಾಡನ್ನು ಇನ್ನೂ ಕಾಲೊಳಗೆ ಇಟ್ಟುಕೊಂಡು ಆಕೆ ನಡೆಯುತ್ತಿರುವಳು. ಆಪರೇಷನ್ನು ನಡೆಸಲು ನೆರವಾದ ಮಹಾನುಭಾವರನ್ನು ನೆನೆದುಕೊಂಡು ಕೈಮುಗಿಯುವಳು. ಆಕೆಯ ಮಾತುಗಳಲ್ಲಿ ಯಾರ ಮೇಲೂ ಸಿಟ್ಟಿಲ್ಲ. ಕುಹಕವಿಲ್ಲ. ಯಾವುದರ ಮೇಲೂ ಬೇಸರವಿಲ್ಲ. ಯಾವ ಹೊತ್ತಿನಲ್ಲೂ ಮನಸ್ಸಿನೊಳಗೆ ಯಾವುದೋ ಒಂದು ಹಾಡನ್ನು ಗುನುಗಿಕೊಂಡು ಸಂತೋಷದಲ್ಲಿರುವಳು.
mysoorininda@gmail.com
ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…
ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…
ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…
ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್ ಸಹ ಕಳವಳ…
ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…
ಗಾಜಿಯಾಬಾದ್ : ಆನ್ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…