ಬನ್ನೂರು ಬಸ್‌ಸ್ಟಾಂಡಿನ ಪಕ್ಕ ಸೊಪ್ಪು ಮಾರುತ್ತ ಕೂತಿರುವ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಅಪ್ರತಿಮ ಹಾಡುಗಾತಿ ಅನ್ನುವುದು ಸೊಪ್ಪು ಕೊಳ್ಳಲು ಬರುವ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಪ್ರಕಾರ ಆಕೆ ಬಹಳ ಒಳ್ಳೆಯ ಮಾತುಗಾರ್ತಿ ಮತ್ತು ಆಗೀಗ ದನದ ದಲ್ಲಾಳಿ ಕೆಲಸ ಮಾಡುವ ಸಣ್ಣ ಮಟ್ಟಿಗಿನ ಏಜೆಂಟು ಮತ್ತು ಒಮ್ಮೊಮ್ಮೆ ಗಂಡಿಗೆ ಹೆಣ್ಣು ಹುಡುಕುವ, ಹೆಣ್ಣಿಗೆ ಗಂಡು ಹುಡುಕುವ ಮದುವೆ ದಲ್ಲಾಳಿ.
ಆದರೆ ಈ ಸೊಪ್ಪು ಮಾರಾಟ ಇತ್ಯಾದಿಗಳು ಆಕೆಗೆ ಹೊಟ್ಟೆಪಾಡಿನ ಚಿಂತೆ ನೀಗಿಸುವ ದಾರಿಗಳು ಮಾತ್ರ. ಆಕೆಯ ನಿಜವಾದ ಸಂತೋಷ ಇರುವುದು ಸೋಬಾನೆ ಹೇಳುವುದರಲ್ಲಿ ಮತ್ತು ಮೈಸೂರು ಸೀಮೆಯ ಜಾನಪದ ಕಾವ್ಯಗಳನ್ನು ಸಮಯದ ಪರಿವೆಯಿಲ್ಲದೆ ಹಾಡುವುದರಲ್ಲಿ.
ಹೀಗಿರುವ ಭಾಗ್ಯಮ್ಮ ಕೆಲಕಾಲದ ಹಿಂದೆ ಸೊಪ್ಪು ಮಾರಿದ ನಂತರ ಹಳ್ಳಿಗೆ ವಾಪಸು ನಡೆದುಕೊಂಡು ಹೋಗುತ್ತಿರುವಾಗ ವಾಹನವೊಂದು ಆಕೆಯ ಮೇಲೆ ನುಗ್ಗಿಬಂದು, ಒಂದು ಕಾಲು ಊನವಾಗಿ, ಆಗ ನಡೆದ ಆಪರೇಷನ್ನಿನಲ್ಲಿ ಹಾಕಿದ ರಾಡನ್ನು ಇನ್ನೂ ಕಾಲೊಳಗೆ ಇಟ್ಟುಕೊಂಡು ಆಕೆ ನಡೆಯುತ್ತಿರುವಳು. ಆಪರೇಷನ್ನು ನಡೆಸಲು ನೆರವಾದ ಮಹಾನುಭಾವರನ್ನು ನೆನೆದುಕೊಂಡು ಕೈಮುಗಿಯುವಳು. ಆಕೆಯ ಮಾತುಗಳಲ್ಲಿ ಯಾರ ಮೇಲೂ ಸಿಟ್ಟಿಲ್ಲ. ಕುಹಕವಿಲ್ಲ. ಯಾವುದರ ಮೇಲೂ ಬೇಸರವಿಲ್ಲ. ಯಾವ ಹೊತ್ತಿನಲ್ಲೂ ಮನಸ್ಸಿನೊಳಗೆ ಯಾವುದೋ ಒಂದು ಹಾಡನ್ನು ಗುನುಗಿಕೊಂಡು ಸಂತೋಷದಲ್ಲಿರುವಳು.
mysoorininda@gmail.com

andolana

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

8 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

8 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

9 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

9 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

10 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

10 hours ago