ಸಧ್ಯ ಮೈಸೂರು ಅರಮನೆಯ ಹಿಂದಿನ ಆನೆ ಬಿಡಾರವೊಂದರ ವಾಸಿಯಾಗಿರುವ ದೋಬಿ ಎಂಬ ಈ ಜೇನುಕುರುಬರ ಹಿರಿಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರದ ಬಳಿಯ ದುಬಾರೆ ಆನೆಕ್ಯಾಂಪಿನ ಕಾವೇರಿ ಎಂಬ ಆನೆಯ ಮಾವುತರಾಗಿರುವವರು. ಕಾಡಾನೆಗಳ ಕುರಿತೂ, ಜೇನು ನೊಣಗಳ ಕುರಿತೂ, ನಾಶವಾಗುತ್ತಿರುವ ಆದಿವಾಸಿಗಳ ಬದುಕಿನ ಕುರಿತು ಹಾಡೂ ಹಾಡಬಲ್ಲ, ಕಥೆಯೂ ಹೇಳಬಲ್ಲ, ಭಾಷಣವನ್ನೂ ಮಾಡಬಲ್ಲ ದೋಬಿ ಹಠದ ಮನುಷ್ಯ. ತಮ್ಮ ಆನೆ ಕಾವೇರಿ ಎಂಬ ಕುಮ್ಕಿ ಆನೆ ಮತ್ತು ಹೆಂಡತಿ, ಮಕ್ಕಳು ಮೊಮ್ಮಕ್ಕಳ ಜೊತೆಗೆ ಕಳೆದ ಹಲವು ವರ್ಷಗಳಿಂದ ಮೈಸೂರು ಅರಮನೆಗೆ ದಸರಾದ ಹೊತ್ತಿಗೆ ಬಂದು ವಿಜಯದಶಮಿ ಮುಗಿಸಿ ದುಬಾರೆಗೆ ಹಿಂತಿರುಗುವ ದೋಬಿ ಬಾಯಿ ಬಿಟ್ಟರೆ ಜೇನುಕುರುಬ ಜನಾಂಗದ ತಲೆತಲಾಂತರಗಳ ಕಥೆಯನ್ನು ಹೇಳಬಲ್ಲವರು. ಜೊತೆಗೆ ಜೇನುಕುರುಬ ಮಕ್ಕಳ ಈಗಿನ ಅತಂತ್ರ ಸ್ಥಿತಿಯನ್ನು ಕಲ್ಲೂ ನೀರೂ ಕರಗುವ ಹಾಗೆ ವಿವರಿಸಬಲ್ಲವರು.

ಯಾವಾಗಲೂ ಜೊತೆಯಲ್ಲಿ ಮಡದಿಯನ್ನೂ, ಮೊಮ್ಮಕ್ಕಳನ್ನೂ ಕರೆದುಕೊಂಡು ಮೈಸೂರು ಅರಮನೆಗೆ ಬರುವ ದೋಬಿಯವರು ಈ ಸಲದ ದಸರೆಗೆ ಏಕಾಂಗಿಯಾಗಿ ಬಂದಿರುವರು. ಕಾರಣ ಇವರ ಮೊಮ್ಮಗಳು ಅವಳಿ ಮಕ್ಕಳನ್ನು ಹೆತ್ತಿರುವಳು. ಅವಧಿ ಪೂರ್ಣವಾಗುವ ಮೊದಲೇ ಅಕಾಲಿಕವಾಗಿ ಜನಿಸಿದ ಆ ಅವಳಿ ಹಸುಗೂಸುಗಳು ಮಡಿಕೇರಿಯ ಸರಕಾರೀ ಆಸ್ಪತ್ರೆಯ ಇನ್‌ಕ್ಯುಬೇಟರಿನಲ್ಲಿ ಹಲವು ದಿನಗಳಿಂದ ಮಲಗಿರುವವು. ಆ ಚಿಂತೆಯಲ್ಲಿ ದುಬಾರೆಯಲ್ಲೇ ಉಳಿದಿರುವ ಮಡದಿ ಮಕ್ಕಳನ್ನು ನೆನೆದುಕೊಂಡು ದೋಬಿಯವರು ಮೈಸೂರಿನಲ್ಲಿ ಕಾವೇರಿ ಆನೆಯ ಜೊತೆ ತಮ್ಮ ಕಷ್ಟಸುಖಗಳನ್ನು ಮಾತಾಡಿಕೊಂಡು ದಿನ ದೂಡುತ್ತಿರುವರು.

ಇದು ದೋಬಿ ಎಂಬ ಒಬ್ಬ ಮಾವುತನ ಕಥೆ. ಮೈಸೂರು ಸುತ್ತಲಿನ ಹಲವು ಆನೆ ಕ್ಯಾಂಪುಗಳಿಂದ ಆನೆಯ ಸಮೇತ ಮೈಸೂರಿಗೆ ಬಂದಿರುವ ಎಲ್ಲ ಮಾವುತ ಕಾವಾಡಿಯರದ್ದೂ ಹೀಗೆ ಒಂದೊಂದು ಚಿಂತೆಯ ಕಥೆಗಳು. ಮೈಸೂರಿನ ಅರಮನೆಯ ಹಿಂದಿನ ಆನೆ ಬಿಡಾರಗಳಲ್ಲಿ ಇರುವಷ್ಟು ದಿನ ಅಷ್ಟಿಷ್ಟು ಸಂತೋಷದಲ್ಲಿ ಇರುವ ಇವರೆಲ್ಲ ವಾಪಾಸು ಹೋದ ಮೇಲೆ ಅವರದ್ದೂ ಇದೇ ಬದುಕು, ಇದೇ ಕಥೆ ಮತ್ತು ನಮಗೆ ಯಾರಿಗೂ ಅರಿವೇ ಆಗದ ನೂರಾರು ಖಾಸಗೀ ವ್ಯಥೆಗಳು!

andolana

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

50 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago