ಆಂದೋಲನ ಪುರವಣಿ

ವನಿತೆ ಮಮತೆ: ನೆನಪುಗಳಿಗೆ ಜಾರಿಸಿದ ಶುಭಾಷಯ ಪತ್ರ

 

 ಎಂ.ಕೆ. ನಂದಿನಿ,

ಟೆಲಿಕಾಂ ಕಾಲೋನಿ, ಮೈಸೂರು

ಮನೆಯ ಬೀರುವನ್ನು ಶುಚಿಗೊಳಿಸುವಾಗ ಸಿಕ್ಕ ಶುಭಾಷಯ ಪತ್ರವೊಂದು ಮನಸ್ಸಲ್ಲಿ ಎಷ್ಟೆಲ್ಲಾ ಭಾವಗಳನ್ನು ಹುಟ್ಟಿಹಾಕಿತು. ಹಳೆಯ ನೆನಪುಗಳನ್ನು ಕೆದಕಿತು. ಅಂದು-ಇಂದುಗಳನ್ನು ಎದುರಾಬದುರ ಇಟ್ಟು ತುಲನೆ ಮಾಡುವಂತೆ ಮಾಡಿತು. ಅದೊಂದು ಶುಭಾಷಯ ಪತ್ರಕ್ಕೆ ಅಷ್ಟು ತಾಕತ್ತಿತ್ತು.

ಹೌದು, ೧೯೯೯ನೇ ವರ್ಷ ಅಂದರೆ ೧೯ನೇ ಶತಮಾನದ ಕಡೆ, ಇಪ್ಪತ್ತನೇ ಶತಮಾನದ ಹೊಸ್ತಿಲು. ಅದಕ್ಕೆ ಶುಭ ಕೋರಲು ನನ್ನ ಮೂರನೇ ಸಹೋದರಿಗೆ ಅವಳ ಗೆಳತಿ ನೀಡಿದ್ದ ಗ್ರೀಟಿಂಗ್ ಕಾರ್ಡ್ ಅದಾಗಿತ್ತು. ಬರೋಬ್ಬರಿ ೨೩ ವರ್ಷಗಳ ಹಿಂದಿನ ನೆನಪು.

ಪತ್ರ ನನ್ನ ಸಹೋದರಿಯದ್ದೇ ಆಗಿದ್ದರೂ ಅದೇ ರೀತಿಯ ಪತ್ರಗಳು ನನಗೂ ಬಂದಿದ್ದವು, ನಾನೂ ಬರೆದಿದ್ದೆ. ಬಹುಶ ನಮ್ಮ ತಲೆಮಾರಿನ ಎಲ್ಲರೂ ಇದೊಂದು ಚೆಂದದ ಅನುಭವವನ್ನು ಕಟ್ಟಿಕೊಂಡಿರುತ್ತಾರೆ. ಅವುಗಳು ಹೊರಗೆ ಬಂದು ಮೆಲುಕು ಹಾಕುವಂತೆ ಆಗಲು ಈ ರೀತಿಯ ಕಾರಣಗಳು ಸಿಗಬೇಕು ಅಷ್ಟೆ.

ಆಗೆಲ್ಲಾ ಹೊಸ ವರ್ಷ ಬಂತೆಂದರೆ ಶುಭಾಷಯ ಪತ್ರಗಳನ್ನು ಕೊಳ್ಳುವುದೇ ಕೆಲಸ. ಅತ್ಯಾಪ್ತರು, ಆಪ್ತರು, ಸಾಮಾನ್ಯ ಸ್ನೇಹಿತರೆಂದು ಗುರುತು ಮಾಡಿಕೊಂಡು ಬಗೆ ಬಗೆಯ ಬೆಲೆಯ ಕಾರ್ಡ್‌ಗಳನ್ನು ಕೊಂಡು ಅದರಲ್ಲಿ ಕವಿತೆಗಳನ್ನು ಬರೆದು ಕಳಿಸುವ ಖುಷಿಯೇ ಬೇರೆ. ಬರೆಯುವಾಗ ಮನಸ್ಸಲ್ಲಿ ಮೂಡುತ್ತಿದ್ದ ಭಾವ, ಪತ್ರದ ಜೊತೆಗೆ ಸೇರಿಸಿ ಕಳಿಸುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು.

ಬರೆದು ಮುಗಿಸಿದ ಮೇಲೆ ಸ್ಟಾಂಪ್ ಅಂಟಿಸಿ ಅಂಚೆ ಪೆಟ್ಟಿಗೆಗೆ ಹಾಕಿ ಬಂದ ಮೇಲೆ ಏನೋ ಒಂದು ರೀತಿಯ ಸಂತಸ ಮನಸ್ಸಿಗೆ. ಅದಾದ ಮೇಲೂ ಪತ್ರ ಅವರ ವಿಳಾಸಕ್ಕೆ ಸರಿಯಾಗಿ ತಲುಪಿದೆಯೇ? ಇಲ್ಲವೇ? ಎನ್ನುವ ಆತಂಕ ಮತ್ತೊಂದೆಡೆ.

ಶುಭಾಷಯ ಪತ್ರದಲ್ಲಿ ಬರೆಯುವಾಗ ಭಾವ ಲೋಕದಲ್ಲಿ ವಿಹರಿಸಿದಂತಾಗುತ್ತಿತ್ತು. ಗೆಳೆತನ ಗಟ್ಟಿಯಾಗುತ್ತಿದೆ ಎನ್ನುವ ಭಾವ ವ್ಯಕ್ತವಾಗುತ್ತಿತ್ತು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮೆಸೇಜ್‌ಗಳನ್ನು ದಬ್ಬಿ ಶುಭಾಷಯ ಹೇಳುವುದು ಜಾಲ್ತಿಗೆ ಬಂದಿದೆ. ಇಂದಿನವರಿಗೆ ಇದು ಇಷ್ಟವಾಗಿರಬಹುದು. ಅಥವಾ ಈಗಲೂ ಹಲವರು ಕಾರ್ಡ್‌ನಲ್ಲಿ ಬರೆದು ಶುಭಾಷಯ ಹಂಚಿಕೊಳ್ಳುತ್ತಿರಬಹುದು. ಆದರೆ ಇವೆಲ್ಲವೂ ಬದುಕಿನ ಘಟ್ಟದ ಸುಮಧುರ ಭಾವಗಳು. ಬದುಕಿನಲ್ಲಿ ಎಲ್ಲರ ಬುತ್ತಿಯಲ್ಲೂ ಇರಲೇಬೇಕಾದ ಸುಂದರ ತವಕಗಳು.

andolanait

Recent Posts

ಫೆ.೫ರಂದು ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ

ಹೇಮಂತ್ ಕುಮಾರ್ ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ  ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ…

38 mins ago

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ …

42 mins ago

ಸುರಕ್ಷತೆಯ ಗ್ಯಾರಂಟಿ ಇಲ್ಲದ ಶಾಲಾ ವಾಹನಗಳಲ್ಲಿ ಮಕ್ಕಳ ಪ್ರಯಾಣ!

ಮಹದೇಶ್ ಎಂ.ಗೌಡ ಹನೂರು ತಾಲ್ಲೂಕಿನ ಹಲವು ಶಾಲೆಗಳಲ್ಲಿ ದುರಸ್ತಿಗೆ ಬಂದಿರುವ, ವಿಮೆ ಇಲ್ಲದ ವಾಹನಗಳ ಬಳಕೆ; ಸಾರ್ವಜನಿಕರಲ್ಲಿ ಆತಂಕ ಹನೂರು:…

46 mins ago

ಈ ಜಾಗ ನೋಡಿ; ಕಸ ಹಾಕುವ ಮುನ್ನ ಯೋಚನೆ ಮಾಡಿ!

ಕೆ.ಬಿ.ರಮೇಶ ನಾಯಕ ಕಸ ಎಸೆಯುತ್ತಿದ್ದ ಸ್ಥಳಗಳಲ್ಲಿ ಮನರಂಜನಾ ವಸ್ತುಗಳ ಚಿತ್ತಾಕರ್ಷಣೆ ರಸ್ತೆ ಬದಿ ಕಸ ಹಾಕುವವರ ಮನ ಪರಿವರ್ತನೆಗೆ ವಿನೂತನ…

51 mins ago

ಉಂಡವಾಡಿ ಪೈಪ್‌ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳು

ಎಂ.ಅನುಚೇತನ್ ಸಂಚಾರಕ್ಕೆ ಅಡಚಣೆ,ಆರೋಗ್ಯಕ್ಕೆ ಕುತ್ತು, ಶಾಲಾ ಮಕ್ಕಳು, ಸ್ಥಳೀಯರು ಹೈರಾಣ ಮೈಸೂರು: ಮೈಸೂರಿನಲ್ಲಿ ಕುಡಿಯುವ ನೀರಿನ ಬರ ನೀಗಿಸುವ ಸಲುವಾಗಿ,…

56 mins ago

ಫ್ಲೋರೈಡ್‌ಯುಕ್ತ ನೀರು ಕುಡಿದು ಕಿಡ್ನಿ ಸಮಸ್ಯೆ!

ಮಹದೇಶ್ ಎಂ.ಗೌಡ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತ; ಫ್ಲೋರೈಡ್‌ ಯುಕ್ತ ನೀರು ಸೇವಿಸಿ ಆರೋಗ್ಯ ಸಮಸ್ಯೆ ಎನ್ನುವ ಸ್ಥಳೀಯರು…

1 hour ago