ಆಂದೋಲನ ಪುರವಣಿ

‘ವಿಕ್ರಾಂತ ರೋಣ’ ಜೊತೆ ಮತ್ತೆರಡು ಈ ವಾರ

‘ವಿಕ್ರಾಂತ್ ರೋಣ’

ಶಾಲಿನಿ ಆರ್ಟ್ಸ್ ಸಂಸ್ಥೆ ಕಿಚ್ಚ ಕ್ರಿಯೇಶನ್ಸ್ ಸಹೋಂಗದಲ್ಲಿ ನಿರ್ಮಿಸಿರುವ ಚಿತ್ರ ‘ವಿಕ್ರಾಂತ್ ರೋಣ’ ಈ ವಾರದ ಬಿಡುಗಡೆ, ವಿಶ್ವಾದ್ಯಂತ ತೆರೆಕಾಣುತ್ತಿರುವ ಅತಿ ನಿರೀಕ್ಷೆಯ ಚಿತ್ರ. ಶಾಲಿನಿ ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅವರಿಗೆ ಅಲಂಕಾರ್ ಪಾಂಡ್ಯನ್ ನೆರವಾಗಿದ್ದಾರೆ. ಅನುಪ್ ಭಂಡಾರಿ ರಚನೆ, ನಿರ್ದೇಶನದ ಈ ಚಿತ್ರದ ಶೀರ್ಷಿಕಾ ಪಾತ್ರ ವಿಕ್ರಾಂತ್ ರೋಣ ಆಗಿ ಸುದೀಪ್ ನಟಿಸಿದ್ದಾರೆ. ಅವರೊಂದಿಗೆ ನಿರೂಪ್ ಭಂಡಾರಿ, ನೀತಾ ಅಶೋಕ, ಜಾಕ್ವೆಲಿನ್ ಫನಾರ್ಂಡಿಸ್, ರವಿಶಂಕರ್ ಗೌಡ, ಜನಾರ್ದನ್, ವಾಸುಕಿ ವೈಭವ್ ಇದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಸಂೋಂಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಇದೆ. ೩ಡಿ ತಂತ್ರಜ್ಞಾನದಲ್ಲಿ ತೆರೆಕಾಣುತ್ತಿರುವ ಈ ಚಿತ್ರ ೨ ಡಿಯಲ್ಲೂ ಲಭ್ಯವಿದೆ. ವಿಶ್ವಾದ್ಯಂತ ಈ ಚಿತ್ರ ತೆರೆಕಾಣುತ್ತಿದ್ದು ನಿರ್ಮಾಪಕ ಜಾಕ್ ಮಂಜು ಅವರ ಮೈಸೂರು ಟಾಕೀಸ್ ಜೊತೆ ಟಿ ಸೀರೀಸ್, ಸಲ್ಮಾನ್ ಖಾನ್ ಫಿಲ್ಸ್ತ್ಯ್ಮ್, ಜೀ ಸ್ಟುಡಿೋಂಸ್, ಪಿವಿಆರ್ ಸಿನಿಮಾಸ್, ಒನ್ ಟ್ವೆಂಟಿ ೮ ಮಾಧ್ಯಮ ಮುಂತಾದ ಸಂಸ್ಥೆಗಳು ಹಂಚಿಕೆ, ಪ್ರಸಾರಕ್ಕಾಗಿ ಕೈಗೂಡಿಸಿವೆ. ಸಿನೆ ಡಬ್  ಆಪ್ ತಮ್ಮ ಮೊಬೈಲ್‌ನಲ್ಲಿ ಇಳಿಸಿಕೊಂಡರೆ, ಪ್ರೇಕ್ಷಕರು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಅದು ಡಬ್ ಆದ ಯಾವುದೇ ಭಾಷೆಯಲ್ಲಿ ನೋಡಲು ಸಾಧ್ಯ. ‘ವಿಕ್ರಾಂತ್ ರೋಣ’ ಹಲವು ಮೊದಲುಗಳನ್ನು ದಾಖಲಿಸಿಕೊಂಡಿದ್ದು, ಎನ್‌ಎಫ್‌ಟಿ ಮೂಲಕ, ಮೊದಲ ಬಾರಿಗೆ ಪ್ರೀಮಿಯರ್ ಪ್ರದರ್ಶನವನ್ನು ಮೊನ್ನೆ ದುಬೈಯಲ್ಲಿ ನಡೆಸಿತ್ತು.


‘ಬೈಪಾಸ್ ರಸ್ತೆ’

ಎಂಟಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಭರತ್‌ರಾಜ್ ಎಂ. ಮತ್ತು ಮಹೇಶ್ ಬಿ.ಎನ್.ನಿರ್ಮಿಸಿರುವ ಚಿತ್ರ ‘ಬೈಪಾಸ್ ರಸ್ತೆ’. ಎಸ್.ಬಿ.ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಬೈಪಾಸ್ ರಸ್ತೆಯಲ್ಲಿ ಪ್ರಯಾಣ ಮಾಡಿದ ದಂಪತಿಯ ಜೀವನದಲ್ಲಿ ನಡೆದ ಘಟನಾವಳಿಗಳ ಕಥೆ ಎನ್ನಲಾಗಿದ್ದು, ೨೦೧೭ರಲ್ಲೇ ಇದು ಸಿದ್ಧವಾಗಿತ್ತು. ವಿರಂಜನ ಬಾಬು ಛಾಯಾಗ್ರಹಣ, ವಿಜಯಕೃಷ್ಣ ಡಿ ಸಂಗೀತ ಸಂೋಂಜನೆಯ ಈ ಚಿತ್ರದ ತಾರಾಗಣದಲ್ಲಿ ಭರತ್‌ಕುಮಾರ್, ತಿಲಕ್, ಚಿಕ್ಕಣ್ಣ, ನೇಹಾ ಸಕ್ಸೇನಾ, ನೀತು ಗೌಡ, ಮಾಸ್ಟರ್ ತಬಲಾನಾಣಿ, ಉಗ್ರಂ ಮಂಜು, ಕುರಿ ರಂಗ ಮುಂತಾದವರಿದ್ದಾರೆ.


‘ರಕ್ಕಂ’

ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ನಿರ್ಮಿಸಿರುವ ಚಿತ್ರ ‘ರಕ್ಕಂ’. ಕೆ.ಸೆಂದಿಲ್ ನಿರ್ದೇಶನದ ಈ ಚಿತ್ರ ಪ್ರಧಾನಮಂತ್ರಿಗಳು ಡಿಮಾನಿಟೈಸೇಶನ್ ಮಾಡಿದ ಸಮಯದಲ್ಲಿ ಹುಟ್ಡಿದ ಕಥೆಯಂತೆ.
ರಣಧೀರ್ ಗೌಡ ಮುಖ್ಯಭೂಮಿಕೆಯಲ್ಲಿದ್ದು, ಅವರೊಂದಿಗೆ ಅಮೃತ ನಾಯರ್, ನಂಜಪ್ಪ ಬೆನಕ, ಬಿ.ರಾಮಮೂರ್ತಿ, ವಿನಯ್ ಪಾಂಡವಪುರ, ದಯಾನಂದ್ ಮೊದಲಾದವರು ತಾರಾಗಣದಲ್ಲಿದ್ದಾರೆ.
ಶ್ಯಾಮ್ ಛಾಯಾಗ್ರಹಣ, ಶ್ರೀವತ್ಸ ಸಂಗೀತ ಸಂೋಂಜನೆ, ಚಾಮರಾಜ್, ಅರುಣ್ ನೃತ್ಯ ಸಂೋಂಜನೆ ಇದೆ. ಸಂದೇಶ್ ಕಾರ್ಯನಿರ್ವಾಹಕ ನಿರ್ಮಾಪಕರು.

andolana

Recent Posts

ಸದ್ದಿಲ್ಲದೆ ಸಮಾಜಸೇವೆಗೆ ನಿಂತ ಎಂಬಿಶ್ರೀ ಪ್ರತಿಷ್ಠಾನ ತಂಡ

ಹೇಮಂತ್‌ಕುಮಾರ್ ಮಂಡ್ಯ: ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಸಾರ್ವಜನಿಕ ಮೂತ್ರಾಲಯವಾಗಿ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಎರಚಾಡುತ್ತ…

1 min ago

ನಟ ದರ್ಶನ್‌ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಆರೋಪ: ಕನ್ನಡ ಒಕ್ಕೂಟದಿಂದ ಧರಣಿಗೆ ಕರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್‌ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ…

15 mins ago

ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ಜಂಟಿ ದಾಳಿ

ಟೆಹರಾನ್:‌ ಇರಾನ್‌ ಮತ್ತು ಇಸ್ರೇಲ್‌ ನಡುವೆ ಯುದ್ಧದ ಕಾರ್ಮೋದ ಹೆಚ್ಚಿದ್ದು, ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ…

28 mins ago

ನಾಳೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ

ದಕ್ಷಿಣ ಕನ್ನಡ: ನಾಳೆ(ಮಾರ್ಚ್.‌1) ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಲಿದ್ದಾರೆ.…

38 mins ago

ಮಾರ್ಚ್.‌11ರಿಂದ ಸರ್ಕಾರಿ ವೈದ್ಯರ ಮುಷ್ಕರ

ಬೆಂಗಳೂರು: ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು ತಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮಾ.11ರಿಂದ ನಡೆಸಲು…

45 mins ago

ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ರಾಷ್ಟ್ರ ವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ರಾಜಸ್ಥಾನದ ಅಜ್ಮಿರ್‍ನಲ್ಲಿ…

51 mins ago