ಕೆಂಪುಸೀರೆ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಕೆಂಪುಸೀರೆ ಉಟ್ಟುಕೊಂಡಿದ್ದ ತಾಯಿ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಹಂತಕರು ಸಾಯಿಸುತ್ತಾರೆ. ಮಗಳ ಆತ್ಮ ಕೆಂಪು ಸೀರೆ ಉಟ್ಟಿದ್ದ ತಾಯಿಯ ಆತ್ಮವನ್ನು ಹುಡುಕುವ ಕಥೆಯಂತೆ ಇದು! ದಸರಾ ವೇಳೆಗೆ ಈ ಚಿತ್ರ ತೆರೆಗೆ ಬರಲಿದೆಯಂತೆ. ಸುಮನ್ ಬಾಬು ರಚನೆ, ನಿರ್ದೇಶನದ, ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ ನಿರ್ಮಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಕನ್ನಡವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಗೆ ಬರಲಿದೆ ಎನ್ನುತ್ತಿದೆ ಚಿತ್ರತಂಡ. ಚಿತ್ರದಲ್ಲಿನ ಅಘೋರಿ ಪಾತ್ರದಲ್ಲಿ ಸಾಯಿಕುಮಾರ್ ಸೋದರ ಅಯ್ಯಪ್ಪ ಶರ್ಮ, ಜೊತೆಗೆ ಸುಮನ್ ಬಾಬು, ಕಾರುಣ್ಯ ಚೌಧರಿ, ಸಂಜನಶೆಟ್ಟಿ, ಆಲಿ, ಶ್ರೀಕಾಂತ್ (ಶ್ರೀರಾಮ್), ಅಜಯ್, ಜೀವಾ, ಬೇಬು ಸಾಯಿ ತೇಜಸ್ವಿನಿ ನಟಿಸಿದ್ದಾರೆ. ಪ್ರಮೋದ್ ರಾಗಸಂಯೋಜನೆ, ಚಿನ್ನು ಹಿನ್ನೆಲೆ ಸಂಗೀತ, ಚಂದ್ರು ಛಾಯಾಗ್ರಹಣ, ಸಂಗೋಪಿ ವಿಮಲ ಸಂಭಾಷಣೆ, ಅಜಯ್ ಶಿವಶಂಕರ್ ಅಕುಲ್ ನೃತ್ಯ ಸಂಯೋಜನೆ, ವೆಂಕಟಪ್ರಭು ಸಂಕಲನ ಈ ಚಿತ್ರಕ್ಕಿದೆ.
ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…
ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…