ಆಂದೋಲನ ಪುರವಣಿ

ಮುತ್ತಿನ ಹಾರದ ಹಾಗಿದ್ದ ನನ್ನ ಅಜ್ಜಿ

ಲೇಖಕರು: ಸೌಮ್ಯ ಕೋರಿ
ಅಜ್ಜಿ ಎಂದಾಕ್ಷಣ ಮುಖದಲ್ಲಿ ಮಂದಹಾಸ. ನಾನು ನನ್ನ ತಂದೆ ತಾಯಿ ಜೊತೆಗಿನ ಒಡನಾಟಕ್ಕಿಂತ ಅಜ್ಜಿಯ ಜೊತೆ ಹೆಚ್ಚು ಸಮಯ ಕಳೆದೆ. ನಾನು ಮೊದಲನೆಯ ಮೊಮ್ಮಗಳಾಗಿದ್ದರಿಂದ ಮನೆಯಲ್ಲಿ ಎಲ್ಲರ ಪ್ರೀತಿ ಹೆಚ್ಚು. ಹಾಗಾಗಿ ನಾನು ಮೊದಲ ಮೊಮ್ಮಗಳಿಗಿಂತ ಹೆಚ್ಚಾಗಿ ಕೊನೆಯ ಮಗಳಾಗಿ ಅಜ್ಜಿಯ ಜೊತೆ ಬೆಳೆದೆ. ರಜೆ ಬಂದೊಡನೆ ಅಜ್ಜಿಯ ಮನೆಗೆ ಹೋಗಬೇಕೆಂಬ ಹಠ ನನ್ನದು.

ನನ್ನಜ್ಜಿ ಶಾಲೆಗೆ ಹೋಗಿರಲಿಲ್ಲ. ಆದರೆ ಓದುವುದನ್ನು ಕಲಿತಿದ್ದಳು. ಹಾಗಾಗಿ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನದ ಊಟದ ನಂತರ ಪೇಪರ್ ಓದುತ್ತಿದ್ದಳು. ಬಹುಶಃ ಅವರ ಓದಿನ ಗೀಳು ನನಗೂ ಬಂದಿರಬಹುದು. ಹಳೆಯ ಕಾಲದವರಾಗಿದ್ದರೂ ಹೊಸತನವನ್ನು ತನ್ನದಾಗಿಸಿಕೊಂಡಿದ್ದರು. ಹೆಚ್ಚು ಸಮಯ ಅವರೊಂದಿಗೆ ಕಳೆದಿದ್ದರಿಂದ ನನ್ನ ಜ್ಞಾನದ ಅರ್ಧ ಪಾಲು ಅವರದ್ದೇ.

ಮಾರುಕಟ್ಟೆಯಲ್ಲಿ ಹೇಗೆ ತರಕಾರಿ ಆರಿಸಬೇಕು, ಹೇಗೆ ಅಡುಗೆ ಮಾಡಬೇಕು ಎಂಬುದರ ಜತೆಗೆ ಹೇಗೆ ಎಲ್ಲರ ಜೊತೆ ಒಟ್ಟಿಗೆ ಇರಬೇಕು ಎನ್ನುವ ಗುಣವನ್ನು ಅವರಿಂದ ಕಲಿತೆ. ಅಜ್ಜಿ ಎಲ್ಲರನ್ನೂ ಒಟ್ಟಿಗೆ ಕೂಡಿಸಿದ ಮುತ್ತಿನ ಹಾರದ ದಾರವಾಗಿದ್ದರು. ಅವರಿಗೆ ಎಲ್ಲರೂ ಬೇಕು ಶುಭ ಸಮಾರಂಭಗಳಿಗೆ ಎಲ್ಲರನ್ನೂ ಕರೆದು ಎಲ್ಲರನ್ನೂ ಆತಿಥ್ಯಗೊಳಿಸುತ್ತಿದ್ದ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು.

ನಾವು ಯಾರ ಜೊತೆ ಅತಿ ಹೆಚ್ಚು ಸಮಯವನ್ನು ಕಳೆಯುತ್ತೇವೆಯೋ ಅವರ ಗುಣಗಳನ್ನು ನಾವೂ ಕಲಿಯುತ್ತೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ನನ್ನ ಜೀವನದಲ್ಲಿ ಎಷ್ಟೋ ಬಾರಿ ಕುಗ್ಗಿದಾಗ ನನಗೆ ಧೈರ್ಯ ಹೇಳುತ್ತಿದ್ದವರು ನನ್ನ ಅಜ್ಜಿ. ಎಷ್ಟೋ ಬಾರಿ ಆಕೆ ಈಗಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನ್ನ ಜೊತೆ ಮಾತನಾಡುತ್ತಿದ್ದರು. ಅದು ಆಕೆಗೆ ಹೊಸತನ್ನ ಅಳವಡಿಸಿಕೊಳ್ಳಬೇಕು ಅನ್ನುವ ಆಸಕ್ತಿಯನ್ನು ತೋರಿಸುತ್ತಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಇದ್ದರೂ ಆಕೆ ನನಗೆ ಹೊಸ ಮಾರ್ಡನ್ ಜಗತ್ತಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಎಲ್ಲ ವಿದ್ಯೆಗಳನ್ನು ಕಲಿ ಎಂದು ಧೈರ್ಯದಿಂದ ಮುನ್ನುಗ್ಗಲು ಪ್ರೋತ್ಸಾಹಿಸುತ್ತಿದ್ದರು. ರಜಾ ಮುಗಿದು ಶಾಲೆಯತ್ತ ಮರಳುವಾಗ ಅಜ್ಜಿ ಮಾಡಿದ ತಿನಿಸುಗಳನ್ನು ತರುತ್ತಿದ್ದೆವು.

ಅಂತಹ ರುಚಿ ಈಗ ಸಿಕ್ಕುತ್ತಾ ಹೇಳಿ? ಪ್ರತಿಯೊಂದು ಹಬ್ಬ ಹರಿದಿನಗಳ ಬಗ್ಗೆ ನಮಗೆ ಹೇಳಿಕೊಡುತ್ತಿದ್ದರು. ಏಕೆ ಈ ಹಬ್ಬ ಮಾಡಬೇಕು? ಏಕೆ ಈ ವಸ್ತುವನ್ನೇ ಬಳಸಬೇಕು? ಎಂಬುದರ ಬಗ್ಗೆ ಇಂಚಿಂಚೂ ಹೇಳುತ್ತಿದ್ದಳು. ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಅಲ್ಲಿ ಅಜ್ಜಿಯ ಸಲಹೆ ಅತ್ಯಗತ್ಯ.

ನಾನು ಅಡುಗೆ ಮಾಡುವ ಪ್ರೀತಿಯನ್ನು ಬೆಳೆಸಿಕೊಂಡಿದ್ದು ನನ್ನ ಅಜ್ಜಿಯಿಂದ. ಆಕೆ ಹೇಳುತ್ತಿದ್ದಳು, ಅವರಿಗೆ ಇಷ್ಟವಾಗುವ ಅಡುಗೆಯನ್ನು ಮಾಡಿಕೊಳ್ಳುವ ಉಡುಗೊರೆಗಿಂತ ಬೇರೆ ಉಡುಗೊರೆ ಇಲ್ಲ ಎಂದು. ಹಾಗಾಗಿ ನನಗೂ ನನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದರೆ ಅಡುಗೆಯ ಮೂಲಕ ನಾನು ವ್ಯಕ್ತಪಡಿಸುತ್ತೇನೆ. ಅಜ್ಜಿ ಜ್ಞಾನ ಭಂಡಾರ, ತಾನು ಓದದಿದ್ದರೂ ಎಲ್ಲ ತಿಳಿವಳಿಕೆಗಳನ್ನು ನಮಗೆ ಕೊಟ್ಟಂತಹ ವ್ಯಕ್ತಿ. ಜೀವನದ ಬುಟ್ಟಿಯಲಿ ಬಹುಪಾಲು ಸಿಹಿ ತಿನಿಸು ನನ್ನ ಅಜ್ಜಿ. ಎಲ್ಲವನ್ನ ಮೊಮ್ಮಕ್ಕಳಿಗೆ ಹೇಳದೆ ಕೊಡಿಸುತ್ತಿದ್ದ ಮಾಯಗಾರನ ಕೋಲು ನನ್ನ ಅಜ್ಜಿ.

sowmyakoti88@gmail.com

andolana

Recent Posts

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…

49 mins ago

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

1 hour ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

1 hour ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

1 hour ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

3 hours ago