ಆಂದೋಲನ ಪುರವಣಿ

ಮುತ್ತಿನ ಹಾರದ ಹಾಗಿದ್ದ ನನ್ನ ಅಜ್ಜಿ

ಲೇಖಕರು: ಸೌಮ್ಯ ಕೋರಿ
ಅಜ್ಜಿ ಎಂದಾಕ್ಷಣ ಮುಖದಲ್ಲಿ ಮಂದಹಾಸ. ನಾನು ನನ್ನ ತಂದೆ ತಾಯಿ ಜೊತೆಗಿನ ಒಡನಾಟಕ್ಕಿಂತ ಅಜ್ಜಿಯ ಜೊತೆ ಹೆಚ್ಚು ಸಮಯ ಕಳೆದೆ. ನಾನು ಮೊದಲನೆಯ ಮೊಮ್ಮಗಳಾಗಿದ್ದರಿಂದ ಮನೆಯಲ್ಲಿ ಎಲ್ಲರ ಪ್ರೀತಿ ಹೆಚ್ಚು. ಹಾಗಾಗಿ ನಾನು ಮೊದಲ ಮೊಮ್ಮಗಳಿಗಿಂತ ಹೆಚ್ಚಾಗಿ ಕೊನೆಯ ಮಗಳಾಗಿ ಅಜ್ಜಿಯ ಜೊತೆ ಬೆಳೆದೆ. ರಜೆ ಬಂದೊಡನೆ ಅಜ್ಜಿಯ ಮನೆಗೆ ಹೋಗಬೇಕೆಂಬ ಹಠ ನನ್ನದು.

ನನ್ನಜ್ಜಿ ಶಾಲೆಗೆ ಹೋಗಿರಲಿಲ್ಲ. ಆದರೆ ಓದುವುದನ್ನು ಕಲಿತಿದ್ದಳು. ಹಾಗಾಗಿ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನದ ಊಟದ ನಂತರ ಪೇಪರ್ ಓದುತ್ತಿದ್ದಳು. ಬಹುಶಃ ಅವರ ಓದಿನ ಗೀಳು ನನಗೂ ಬಂದಿರಬಹುದು. ಹಳೆಯ ಕಾಲದವರಾಗಿದ್ದರೂ ಹೊಸತನವನ್ನು ತನ್ನದಾಗಿಸಿಕೊಂಡಿದ್ದರು. ಹೆಚ್ಚು ಸಮಯ ಅವರೊಂದಿಗೆ ಕಳೆದಿದ್ದರಿಂದ ನನ್ನ ಜ್ಞಾನದ ಅರ್ಧ ಪಾಲು ಅವರದ್ದೇ.

ಮಾರುಕಟ್ಟೆಯಲ್ಲಿ ಹೇಗೆ ತರಕಾರಿ ಆರಿಸಬೇಕು, ಹೇಗೆ ಅಡುಗೆ ಮಾಡಬೇಕು ಎಂಬುದರ ಜತೆಗೆ ಹೇಗೆ ಎಲ್ಲರ ಜೊತೆ ಒಟ್ಟಿಗೆ ಇರಬೇಕು ಎನ್ನುವ ಗುಣವನ್ನು ಅವರಿಂದ ಕಲಿತೆ. ಅಜ್ಜಿ ಎಲ್ಲರನ್ನೂ ಒಟ್ಟಿಗೆ ಕೂಡಿಸಿದ ಮುತ್ತಿನ ಹಾರದ ದಾರವಾಗಿದ್ದರು. ಅವರಿಗೆ ಎಲ್ಲರೂ ಬೇಕು ಶುಭ ಸಮಾರಂಭಗಳಿಗೆ ಎಲ್ಲರನ್ನೂ ಕರೆದು ಎಲ್ಲರನ್ನೂ ಆತಿಥ್ಯಗೊಳಿಸುತ್ತಿದ್ದ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು.

ನಾವು ಯಾರ ಜೊತೆ ಅತಿ ಹೆಚ್ಚು ಸಮಯವನ್ನು ಕಳೆಯುತ್ತೇವೆಯೋ ಅವರ ಗುಣಗಳನ್ನು ನಾವೂ ಕಲಿಯುತ್ತೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ನನ್ನ ಜೀವನದಲ್ಲಿ ಎಷ್ಟೋ ಬಾರಿ ಕುಗ್ಗಿದಾಗ ನನಗೆ ಧೈರ್ಯ ಹೇಳುತ್ತಿದ್ದವರು ನನ್ನ ಅಜ್ಜಿ. ಎಷ್ಟೋ ಬಾರಿ ಆಕೆ ಈಗಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನ್ನ ಜೊತೆ ಮಾತನಾಡುತ್ತಿದ್ದರು. ಅದು ಆಕೆಗೆ ಹೊಸತನ್ನ ಅಳವಡಿಸಿಕೊಳ್ಳಬೇಕು ಅನ್ನುವ ಆಸಕ್ತಿಯನ್ನು ತೋರಿಸುತ್ತಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಇದ್ದರೂ ಆಕೆ ನನಗೆ ಹೊಸ ಮಾರ್ಡನ್ ಜಗತ್ತಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಎಲ್ಲ ವಿದ್ಯೆಗಳನ್ನು ಕಲಿ ಎಂದು ಧೈರ್ಯದಿಂದ ಮುನ್ನುಗ್ಗಲು ಪ್ರೋತ್ಸಾಹಿಸುತ್ತಿದ್ದರು. ರಜಾ ಮುಗಿದು ಶಾಲೆಯತ್ತ ಮರಳುವಾಗ ಅಜ್ಜಿ ಮಾಡಿದ ತಿನಿಸುಗಳನ್ನು ತರುತ್ತಿದ್ದೆವು.

ಅಂತಹ ರುಚಿ ಈಗ ಸಿಕ್ಕುತ್ತಾ ಹೇಳಿ? ಪ್ರತಿಯೊಂದು ಹಬ್ಬ ಹರಿದಿನಗಳ ಬಗ್ಗೆ ನಮಗೆ ಹೇಳಿಕೊಡುತ್ತಿದ್ದರು. ಏಕೆ ಈ ಹಬ್ಬ ಮಾಡಬೇಕು? ಏಕೆ ಈ ವಸ್ತುವನ್ನೇ ಬಳಸಬೇಕು? ಎಂಬುದರ ಬಗ್ಗೆ ಇಂಚಿಂಚೂ ಹೇಳುತ್ತಿದ್ದಳು. ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಅಲ್ಲಿ ಅಜ್ಜಿಯ ಸಲಹೆ ಅತ್ಯಗತ್ಯ.

ನಾನು ಅಡುಗೆ ಮಾಡುವ ಪ್ರೀತಿಯನ್ನು ಬೆಳೆಸಿಕೊಂಡಿದ್ದು ನನ್ನ ಅಜ್ಜಿಯಿಂದ. ಆಕೆ ಹೇಳುತ್ತಿದ್ದಳು, ಅವರಿಗೆ ಇಷ್ಟವಾಗುವ ಅಡುಗೆಯನ್ನು ಮಾಡಿಕೊಳ್ಳುವ ಉಡುಗೊರೆಗಿಂತ ಬೇರೆ ಉಡುಗೊರೆ ಇಲ್ಲ ಎಂದು. ಹಾಗಾಗಿ ನನಗೂ ನನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದರೆ ಅಡುಗೆಯ ಮೂಲಕ ನಾನು ವ್ಯಕ್ತಪಡಿಸುತ್ತೇನೆ. ಅಜ್ಜಿ ಜ್ಞಾನ ಭಂಡಾರ, ತಾನು ಓದದಿದ್ದರೂ ಎಲ್ಲ ತಿಳಿವಳಿಕೆಗಳನ್ನು ನಮಗೆ ಕೊಟ್ಟಂತಹ ವ್ಯಕ್ತಿ. ಜೀವನದ ಬುಟ್ಟಿಯಲಿ ಬಹುಪಾಲು ಸಿಹಿ ತಿನಿಸು ನನ್ನ ಅಜ್ಜಿ. ಎಲ್ಲವನ್ನ ಮೊಮ್ಮಕ್ಕಳಿಗೆ ಹೇಳದೆ ಕೊಡಿಸುತ್ತಿದ್ದ ಮಾಯಗಾರನ ಕೋಲು ನನ್ನ ಅಜ್ಜಿ.

sowmyakoti88@gmail.com

andolana

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

55 mins ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

4 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

4 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

4 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

4 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

4 hours ago