ಹೊಸ ಚಿತ್ರದ ಹಾಡುಗಳನ್ನು ಒಮ್ಮೆಲೇ ಈಗ ಬಿಡುಗಡೆ ಮಾಡುವುದು ಕಡಿಮೆ. ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಎಷ್ಟು ಮಂದಿ ವೀಕ್ಷಿಸಿದರು ಎನ್ನುವುದರ ಮೂಲಕ ಚಿತ್ರದ ಯಶಸ್ಸಿನ ಲೆಕ್ಕಾಚಾರ ಹಾಕುವುದು ಇತ್ತೀಚಿನ ಬೆಳವಣಿಗೆ. ಅದರಲ್ಲೂ ದುಬಾರಿ ವೆಚ್ಚದ ಚಿತ್ರಗಳು, ಜನಪ್ರಿಯ ನಟರ ಚಿತ್ರಗಳು ಸಾಕಷ್ಟು ಮೊದಲೇ ಬಿಡುಗಡೆ ದಿನಾಂಕ ನಿರ್ಧರಿಸಿ, ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುತ್ತವೆ. ಕಳೆದ ವಾರ ‘ಗಾಳಿಪಟ ೨’ ಮತ್ತು ‘ಬನಾರಸ್’ ಚಿತ್ರಗಳ ಒಂದೊಂದು ಹಾಡು ಲೋಕಾರ್ಪಣೆಯಾಯಿತು.
‘ಗಾಳಿಪಟ ೨’ ರಮೇಶ್ ರೆಡ್ಡಿ ಅವರಿಗಾಗಿ ೋಂಗರಾಜ್ ಭಟ್ ನಿರ್ದೇಶಿಸಿರುವ ಚಿತ್ರ. ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾ ರಾವ್ ಮುಂತಾದವರು ನಟಿಸಿರುವ ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಬರೆದಿರುವ ‘ನೀನು ಬಗೆಹರಿಯದ ಹಾಡು…’ ಎಂದು ಆರಂಭವಾಗುವ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ರಾಗ ಸಂೋಂಜಿಸಿ, ನಿಹಾಲ್ ತಾವ್ರೋ ಹಾಡಿರುವ ಈ ಹಾಡಿನಲ್ಲಿ ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದಾರೆ. ಧನು ನೃತ್ಯಸಂೋಂಜನೆಗೆ ಛಾಯಾಗ್ರಹಣ ಸಂತೋಷ್ ರೈ ಪಾತಾಜೆ ಅವರದು.
‘ಬನಾರಸ್’ ಚಿತ್ರದಲ್ಲಿ ‘ಹೆಣ್ಣು ಹಡೆಯಲು ಬ್ಯಾಡಾ’ ಜನಪ್ರಿಯ ಜಾನಪದ ಗೀತೆಯನ್ನು ಬಳಸಿಕೊಳ್ಳಲಾಗಿದೆ. ಈ ಗೀತೆಗೆ ಅಜನೀಶ್ ಲೋಕನಾಥ್ ರಾಗ ಸಂೋಂಜಿಸಿದ್ದು, ಹರ್ಷಿಕಾ ದೇವನಾಥ್ ಹಾಡಿದ್ದಾರೆ. ತಿಲಕ್ ಬಲ್ಲಾಳ್ ನಿರ್ಮಾಣದ ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದು, ಝೈದ್ ಖಾನ್ ಈ ಚಿತ್ರದ ಮೂಲಕ ಚಿತ್ರರಸಿಕರಿಗೆ ಪರಿಚಯವಾಗಲಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಿಗೆ ಡಬ್ ಆಗಿದೆ.
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…
ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…