ಆಂದೋಲನ ಪುರವಣಿ

ಬೀದಿ ನಾಯಿಗಳ ರಕ್ಷಣೆಗೆ ಸದಾ ಮುಂದು ನರ್ಗೀಸ್ ಭಾನು

‘ಒಂದು ಬಾರಿ ಹೀಗಾಗಿತ್ತು. ಒಂದು ನಾಯಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಮರಿ ಹಾಕಿತ್ತು. ಬಳಿಕ ನನ್ನ ಬಳಿ ಬಂದು ನನ್ನನ್ನು ಕರೆಯುವಂತೆ ಎಳೆಯುತ್ತಿತ್ತು. ಎಲ್ಲೋ ಇದು ಮರಿ ಹಾಕಿದೆ ಎಂದುಕೊಂಡು ಅದರ ಹಿಂದೆ ಹೋದೆ. ನಾನು ಹಿಂದೆ ಬರುತ್ತಿದ್ದೇನೋ ಇಲ್ಲವೋ ಎಂದು ಆಗಾಗ ಹಿಂದೆ ತಿರುಗಿ ನೋಡುತ್ತಲೇ ಇತ್ತು. ನಾನು ಹಿಂದೆ ಬರುತ್ತಿರುವುದನ್ನು ಕಂಡು ಸಂತೋಷದಿಂದ ಬಾಲ ಅಳ್ಳಾಡಿಸುತ್ತಾ ಮರಿ ಹಾಕಿದ್ದ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ನಾನು ಆ ಮರಿಗಳನ್ನು ಎತ್ತುಕೊಂಡು ನಮ್ಮ ಮನೆಗೆ ತಂದು ಪೋಷಣೆ ಮಾಡಿದೆ’

ಇದು ಚಾ.ನಗರದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ನರ್ಗೀಸ್ ಭಾನು ಅವರ ಕಥೆ. ಬೀದಿ ನಾಯಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತಮ್ಮ ಮನೆಯ ಸುತ್ತಮುತ್ತಲೂ ಇರುವ ನಾಯಿಗಳಿಗೆ ನಿತ್ಯ ಆಹಾರ, ಆರೋಗ್ಯ ಕೆಟ್ಟರೆ ಚಿಕಿತ್ಸೆ ಕೊಡಿಸುತ್ತಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ನಾಯಿಗಳ ಬಗ್ಗೆ ನನಗೆ ಬಾಲ್ಯದಿಂದಲೂ ಪ್ರೀತಿ ಇದೆ. ಇದು ನನಗೆ ಅಪ್ಪನಿಂದ ಬಂದಿದ್ದು. ಮದುವೆ ಆದ ಮೇಲೆ ಮನೆಗೆ ಒಂದು ನಾಯಿ ತಂದು ಸಾಕಿದೆ. ಪತಿಯೂ ಇದಕ್ಕೆ ಪ್ರೋತ್ಸಾಹ ನೀಡಿದರು. ಆಮೇಲೆ ಮಕ್ಕಳಾದ ಮೇಲೆ ನಾಯಿ ಸಾಕುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮತ್ತೆ ಬೀದಿ ನಾಯಿಗಳನ್ನು ಸಲಹುವ ಕಾರ್ಯಕ್ಕೆ ಮುಂದಾದೆ ಎನ್ನುತ್ತಾರೆ ನರ್ಗೀಸ್ ಭಾನು.

ಒಮ್ಮೆ ಪ್ರೀತಿ ತೋರಿದರೆ ಮತ್ತೆ ಮತ್ತೆ ಬಳಿ ಬರುತ್ತವೆ

ಜಾತಿ ನಾಯಿಗಳನ್ನು ಸಾಕುವುದು ಹಲವರಿಗೆ ಫ್ಯಾಷನ್. ನನಗೆ ಬೀದಿ ನಾಯಿಗಳ ಆರೈಕೆ ಮಾಡುವುದರಲ್ಲಿಯೇ ಖುಷಿ. ಒಮ್ಮೆ ಅವುಗಳಿಗೆ ತುತ್ತು ಅನ್ನ ಹಾಕಿದರೆ ಅವು ಮತ್ತೆ ಮತ್ತೆ ಬಳಿ ಬರುತ್ತವೆ. ಈಗ ಐದಾರು ನಾಯಿಗಳು ನಮ್ಮ ಮನೆಯಲ್ಲಿ ಇವೆ. ಅವುಗಳ ಆರೋಗ್ಯ ಕೆಟ್ಟಾಗ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಮರಿಗಳನ್ನು ಜೋಪಾನ ಮಾಡುತ್ತೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಬೀದಿ ನಾಯಿಗಳನ್ನು ಒಗ್ಗಿಸಿಕೊಂಡರೆ ಅವುಗಳಿಂದ ಸಮಸ್ಯೆ ಎನ್ನುವ ಆರೋಪವೂ ಕೆಲವರಿಂದ ವ್ಯಕ್ತವಾಗುತ್ತದೆ. ಆದರೆ ಇದರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದು ನರ್ಗೀಸ್ ಅವರ ಅಭಿಪ್ರಾಯ.

ಮನಸ್ಸಿನ ಖುಷಿಗೆ ಈ ಕಾಯಕ

ನನ್ನ ವೃತ್ತಿ, ಕುಟುಂಬ, ವಯಕ್ತಿಕ ಬದುಕು ನನ್ನದು. ಇದರ ನಡುವಲ್ಲಿ ಬಳಿಗೆ ಬಂದ ನಾಯಿಗಳನ್ನು ಆತ್ಮೀಯತೆಯಿಂದ ಕಾಣುವುದು, ಅವುಗಳಿಗೆ ಆಹಾರ ನೀಡುವುದು ನನಗೆ ಖುಷಿ ನೀಡುತ್ತದೆ. ಅವುಗಳ ಆರೋಗ್ಯ ಕೆಟ್ಟಾಗ ನನ್ನಲ್ಲಿ ಮರುಕ ಉಂಟಾಗುತ್ತದೆ. ಅವುಗಳ ತೋರುವ ಪ್ರೀತಿಗೆ ಮನಸ್ಸು ಕರಗುತ್ತದೆ. ಅವುಗಳಿಗೂ ಭಾವನೆಗಳಿವೆ. ಅದನ್ನು ಅರ್ಥ ಮಾಡಿಕೊಂಡರೆ ಮನಸ್ಸು ತಿಳಿಯಾಗುತ್ತದೆ. ಹೀಗಾಗಿ ಬೀದಿ ನಾಯಿಗಳ ಪೋಷಣೆಯಲ್ಲಿಯೇ ನನಗೆ ಸಂತೋಷ ಸಿಕ್ಕುತ್ತದೆ ಎನ್ನುತ್ತಾರೆ ನರ್ಗೀಸ್.

andolana

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

5 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

5 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

6 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

7 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

7 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

10 hours ago