ಆಂದೋಲನ ಪುರವಣಿ

ಬೀದಿ ನಾಯಿಗಳ ರಕ್ಷಣೆಗೆ ಸದಾ ಮುಂದು ನರ್ಗೀಸ್ ಭಾನು

‘ಒಂದು ಬಾರಿ ಹೀಗಾಗಿತ್ತು. ಒಂದು ನಾಯಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಮರಿ ಹಾಕಿತ್ತು. ಬಳಿಕ ನನ್ನ ಬಳಿ ಬಂದು ನನ್ನನ್ನು ಕರೆಯುವಂತೆ ಎಳೆಯುತ್ತಿತ್ತು. ಎಲ್ಲೋ ಇದು ಮರಿ ಹಾಕಿದೆ ಎಂದುಕೊಂಡು ಅದರ ಹಿಂದೆ ಹೋದೆ. ನಾನು ಹಿಂದೆ ಬರುತ್ತಿದ್ದೇನೋ ಇಲ್ಲವೋ ಎಂದು ಆಗಾಗ ಹಿಂದೆ ತಿರುಗಿ ನೋಡುತ್ತಲೇ ಇತ್ತು. ನಾನು ಹಿಂದೆ ಬರುತ್ತಿರುವುದನ್ನು ಕಂಡು ಸಂತೋಷದಿಂದ ಬಾಲ ಅಳ್ಳಾಡಿಸುತ್ತಾ ಮರಿ ಹಾಕಿದ್ದ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ನಾನು ಆ ಮರಿಗಳನ್ನು ಎತ್ತುಕೊಂಡು ನಮ್ಮ ಮನೆಗೆ ತಂದು ಪೋಷಣೆ ಮಾಡಿದೆ’

ಇದು ಚಾ.ನಗರದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ನರ್ಗೀಸ್ ಭಾನು ಅವರ ಕಥೆ. ಬೀದಿ ನಾಯಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತಮ್ಮ ಮನೆಯ ಸುತ್ತಮುತ್ತಲೂ ಇರುವ ನಾಯಿಗಳಿಗೆ ನಿತ್ಯ ಆಹಾರ, ಆರೋಗ್ಯ ಕೆಟ್ಟರೆ ಚಿಕಿತ್ಸೆ ಕೊಡಿಸುತ್ತಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ನಾಯಿಗಳ ಬಗ್ಗೆ ನನಗೆ ಬಾಲ್ಯದಿಂದಲೂ ಪ್ರೀತಿ ಇದೆ. ಇದು ನನಗೆ ಅಪ್ಪನಿಂದ ಬಂದಿದ್ದು. ಮದುವೆ ಆದ ಮೇಲೆ ಮನೆಗೆ ಒಂದು ನಾಯಿ ತಂದು ಸಾಕಿದೆ. ಪತಿಯೂ ಇದಕ್ಕೆ ಪ್ರೋತ್ಸಾಹ ನೀಡಿದರು. ಆಮೇಲೆ ಮಕ್ಕಳಾದ ಮೇಲೆ ನಾಯಿ ಸಾಕುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮತ್ತೆ ಬೀದಿ ನಾಯಿಗಳನ್ನು ಸಲಹುವ ಕಾರ್ಯಕ್ಕೆ ಮುಂದಾದೆ ಎನ್ನುತ್ತಾರೆ ನರ್ಗೀಸ್ ಭಾನು.

ಒಮ್ಮೆ ಪ್ರೀತಿ ತೋರಿದರೆ ಮತ್ತೆ ಮತ್ತೆ ಬಳಿ ಬರುತ್ತವೆ

ಜಾತಿ ನಾಯಿಗಳನ್ನು ಸಾಕುವುದು ಹಲವರಿಗೆ ಫ್ಯಾಷನ್. ನನಗೆ ಬೀದಿ ನಾಯಿಗಳ ಆರೈಕೆ ಮಾಡುವುದರಲ್ಲಿಯೇ ಖುಷಿ. ಒಮ್ಮೆ ಅವುಗಳಿಗೆ ತುತ್ತು ಅನ್ನ ಹಾಕಿದರೆ ಅವು ಮತ್ತೆ ಮತ್ತೆ ಬಳಿ ಬರುತ್ತವೆ. ಈಗ ಐದಾರು ನಾಯಿಗಳು ನಮ್ಮ ಮನೆಯಲ್ಲಿ ಇವೆ. ಅವುಗಳ ಆರೋಗ್ಯ ಕೆಟ್ಟಾಗ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಮರಿಗಳನ್ನು ಜೋಪಾನ ಮಾಡುತ್ತೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಬೀದಿ ನಾಯಿಗಳನ್ನು ಒಗ್ಗಿಸಿಕೊಂಡರೆ ಅವುಗಳಿಂದ ಸಮಸ್ಯೆ ಎನ್ನುವ ಆರೋಪವೂ ಕೆಲವರಿಂದ ವ್ಯಕ್ತವಾಗುತ್ತದೆ. ಆದರೆ ಇದರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದು ನರ್ಗೀಸ್ ಅವರ ಅಭಿಪ್ರಾಯ.

ಮನಸ್ಸಿನ ಖುಷಿಗೆ ಈ ಕಾಯಕ

ನನ್ನ ವೃತ್ತಿ, ಕುಟುಂಬ, ವಯಕ್ತಿಕ ಬದುಕು ನನ್ನದು. ಇದರ ನಡುವಲ್ಲಿ ಬಳಿಗೆ ಬಂದ ನಾಯಿಗಳನ್ನು ಆತ್ಮೀಯತೆಯಿಂದ ಕಾಣುವುದು, ಅವುಗಳಿಗೆ ಆಹಾರ ನೀಡುವುದು ನನಗೆ ಖುಷಿ ನೀಡುತ್ತದೆ. ಅವುಗಳ ಆರೋಗ್ಯ ಕೆಟ್ಟಾಗ ನನ್ನಲ್ಲಿ ಮರುಕ ಉಂಟಾಗುತ್ತದೆ. ಅವುಗಳ ತೋರುವ ಪ್ರೀತಿಗೆ ಮನಸ್ಸು ಕರಗುತ್ತದೆ. ಅವುಗಳಿಗೂ ಭಾವನೆಗಳಿವೆ. ಅದನ್ನು ಅರ್ಥ ಮಾಡಿಕೊಂಡರೆ ಮನಸ್ಸು ತಿಳಿಯಾಗುತ್ತದೆ. ಹೀಗಾಗಿ ಬೀದಿ ನಾಯಿಗಳ ಪೋಷಣೆಯಲ್ಲಿಯೇ ನನಗೆ ಸಂತೋಷ ಸಿಕ್ಕುತ್ತದೆ ಎನ್ನುತ್ತಾರೆ ನರ್ಗೀಸ್.

andolana

Recent Posts

2.20ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶ ; 26 ಮಂದಿ ಬಂಧನ.

ಮಂಡ್ಯ : ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. 28 ಮಂದಿ ಆರೋಪಿಗಳನ್ನು…

3 hours ago

ತಳಸಮುದಾಯಕ್ಕೆ ಆರ್ಥಿಕ ಸಾಮಾಜಿಕ ಶಕ್ತಿ ಅಗತ್ಯ : ಸಿಎಂ

ಬಾಗಲಕೋಟೆ : ಕಾಂಗ್ರೆಸ್ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ…

4 hours ago

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಜತೆ ನಿಲ್ಲುತ್ತೇನೆ : ಕೇಂದ್ರ ಸಚಿವ ಎಚ್‌ಡಿಕೆ

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ…

4 hours ago

IPL 2026 | ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

ನವದೆಹಲಿ : ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್ ಜತೆಗೆ ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್…

4 hours ago

ಇರಾನ್ ಮೇಲೆ ಕ್ಷಿಪಣಿ ದಾಳಿ ; ಬುಶೆಹರ್ ಅಣುಸ್ಥಾವರದ ಬಳಿ ಹಾನಿ

ಟೆಹ್ರಾನ್ : ಅಮೆರಿಕದ ಮಿತ್ರರಾಷ್ಟ್ರಗಳಲ್ಲಿನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರಿದಿರುವಂತೆಯೇ ಇತ್ತ ಇರಾನ್ ಮೇಲೆ ಮುಗಿಬಿದ್ದಿರುವ…

4 hours ago

ಇಂಧನ ವ್ಯತ್ಯಯ ಆತಂಕ ; ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಏರಿಕೆ

ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ…

5 hours ago