ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು: ನಮಗೆಲ್ಲಾ ಆದರ್ಶ ನಮ್ಮ ಮಲ್ಲೇಶ್ ಮೇಷ್ಟ್ರು

ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ, ಚಾಮರಾಜನಗರ

ಅದು ನಮ್ಮ ಪ್ರಾಥಮಿಕ ಶಾಲಾ ದಿನಗಳು ನಾನು 6ನೇ ತರಗತಿ ಓದುತ್ತಿದ್ದ ಸಂದರ್ಭ. ಆಗಷ್ಟೇ ತಮ್ಮ ಟಿಸಿಎಚ್ ಮುಗಿಸಿ ಶಿಕ್ಷಕರ ಹುದ್ದೆಯನ್ನು ಪಡೆದು ನಮ್ಮೂರ ಶಾಲೆಗೆ ಮೊದಲ ಬಾರಿಗೆ ಶಿಕ್ಷಕರಾಗಿ ಬಂದವರೇ ಮಲ್ಲೇಶ್ ಎಂಬ ನಮ್ಮೆಲ್ಲರ ನೆಚ್ಚಿನ ಮೇಷ್ಟ್ರು.

ಮಲ್ಲೇಶ್ ಸರ್ ಆಗಷ್ಟೇ ತರಬೇತಿ ಮುಗಿಸಿ ಬಂದು ಉತ್ಸಾಹದಲ್ಲಿದ್ದರು. ಅವರ ಬೋಧನಾ ಕ್ರಮ, ಶಿಸ್ತು ಬದ್ಧ ಕೆಲಸಗಳು, ಸಮಯ ಪ್ರಜ್ಞೆ, ಆದರ್ಶನೀಯವಾದ ಬದುಕು, ಅವರ ನಡೆ ನುಡಿ ನಮಗೆಲ್ಲ ಅತ್ಯಂತ ಆಕರ್ಷನೀಯವಾಗಿದ್ದವು.

ನಮಗೆ ಸಮಾಜ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಅವರು ಅಂದಿನ ಕಾಲದಲ್ಲೇ ನಮ್ಮಲ್ಲಿ ಬಸವಣ್ಣ ಅವರ ಸಮ ಸಮಾಜದ ಕನಸನ್ನು ಬಿತ್ತಿದ್ದಂತವರು. ಜೊತೆಗೆ ಸಮಾಜದಲ್ಲಿ ಆದರ್ಶನೀಯವಾಗಿ ಹೇಗೆ ಬದುಕಬೇಕೆಂಬುದನ್ನು ತಿಳಿ ಹೇಳಿದಂತವರು.

ನಮ್ಮೂರಿನ ಸರ್ಕಾರಿ ಶಾಲೆಗೆ ಕೀರ್ತಿತಂದ ಪ್ರಮುಖ ಶಿಕ್ಷಕರಲ್ಲಿ ಇವರೂ ಒಬ್ಬರು. ವಿದ್ಯಾರ್ಥಿಗಳ ಮನದಾಳವನ್ನು ಅರಿತು ಬೋಧಿಸುತ್ತಿದ್ದ ಅಪರೂಪದ ಶಿಕ್ಷರಾಗಿದ್ದ ನಮ್ಮೆಲ್ಲರ ಮೆಚ್ಚಿನ ಈ ಮೇಷ್ಟ್ರು ನಾಟಕ ಪ್ರಿಯರಾಗಿದ್ದರು. ಅದು ನಮಗೆಲ್ಲ ಅಂದಿಗೆ ಸೋಜಿಗ…! ನಾಟಕವೆಂದರೆ ಅವರಿಗೆ ಅಷ್ಟೊಂದು ಅಕ್ಕರೆ. ಅದಕ್ಕೆ ನಿರ್ದಶನವೆಂಬಂತೆ ನಮ್ಮ ಮೇಷ್ಟ್ರು ಅವರ ಊರಿನಲ್ಲಿ ನಡೆಯುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸಿ ಅದ್ಭುತವಾಗಿ ನಟಿಸುತ್ತಾ ಜನರ ಮನ ಗೆದ್ದಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದ ಅವರ ಪ್ರತಿಭೆಯನ್ನು ಕಂಡು ನಾವೇ ರೋಮಾಂಚಿತರಾಗಿದ್ದೆವು.

ಇಂತಹ ಸಕಲಕಲಾ ವಲ್ಲಭರಂತಹ ಮಲ್ಲೇಶ್ ಮೇಷ್ಟ್ರನ್ನು ಪಡೆದ ನಾವೇ ಧನ್ಯರು. ನಾವು ಇಂದು ಏನಾದರೂ ಅಷ್ಟೋ ಇಷ್ಟೋ ಆದರ್ಶನೀಯವಾಗಿ ಬದುಕುತ್ತಿದ್ದೇವೆಂದರೆ ಇಂತಹ ಆದರ್ಶನೀಯವಾದ ಗುರುಗಳ ಒಡನಾಟ ಹಾಗೂ ಮಾರ್ಗದರ್ಶನವೇ ಕಾರಣ. ಥ್ಯಾಂಕ್ಯೂ ಡಿಯರ್ ಮಲ್ಲೇಶ್ ಸರ್.

 

andolana

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

6 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

6 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

6 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

6 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

6 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

7 hours ago