ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು: ನಮಗೆಲ್ಲಾ ಆದರ್ಶ ನಮ್ಮ ಮಲ್ಲೇಶ್ ಮೇಷ್ಟ್ರು

ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ, ಚಾಮರಾಜನಗರ

ಅದು ನಮ್ಮ ಪ್ರಾಥಮಿಕ ಶಾಲಾ ದಿನಗಳು ನಾನು 6ನೇ ತರಗತಿ ಓದುತ್ತಿದ್ದ ಸಂದರ್ಭ. ಆಗಷ್ಟೇ ತಮ್ಮ ಟಿಸಿಎಚ್ ಮುಗಿಸಿ ಶಿಕ್ಷಕರ ಹುದ್ದೆಯನ್ನು ಪಡೆದು ನಮ್ಮೂರ ಶಾಲೆಗೆ ಮೊದಲ ಬಾರಿಗೆ ಶಿಕ್ಷಕರಾಗಿ ಬಂದವರೇ ಮಲ್ಲೇಶ್ ಎಂಬ ನಮ್ಮೆಲ್ಲರ ನೆಚ್ಚಿನ ಮೇಷ್ಟ್ರು.

ಮಲ್ಲೇಶ್ ಸರ್ ಆಗಷ್ಟೇ ತರಬೇತಿ ಮುಗಿಸಿ ಬಂದು ಉತ್ಸಾಹದಲ್ಲಿದ್ದರು. ಅವರ ಬೋಧನಾ ಕ್ರಮ, ಶಿಸ್ತು ಬದ್ಧ ಕೆಲಸಗಳು, ಸಮಯ ಪ್ರಜ್ಞೆ, ಆದರ್ಶನೀಯವಾದ ಬದುಕು, ಅವರ ನಡೆ ನುಡಿ ನಮಗೆಲ್ಲ ಅತ್ಯಂತ ಆಕರ್ಷನೀಯವಾಗಿದ್ದವು.

ನಮಗೆ ಸಮಾಜ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಅವರು ಅಂದಿನ ಕಾಲದಲ್ಲೇ ನಮ್ಮಲ್ಲಿ ಬಸವಣ್ಣ ಅವರ ಸಮ ಸಮಾಜದ ಕನಸನ್ನು ಬಿತ್ತಿದ್ದಂತವರು. ಜೊತೆಗೆ ಸಮಾಜದಲ್ಲಿ ಆದರ್ಶನೀಯವಾಗಿ ಹೇಗೆ ಬದುಕಬೇಕೆಂಬುದನ್ನು ತಿಳಿ ಹೇಳಿದಂತವರು.

ನಮ್ಮೂರಿನ ಸರ್ಕಾರಿ ಶಾಲೆಗೆ ಕೀರ್ತಿತಂದ ಪ್ರಮುಖ ಶಿಕ್ಷಕರಲ್ಲಿ ಇವರೂ ಒಬ್ಬರು. ವಿದ್ಯಾರ್ಥಿಗಳ ಮನದಾಳವನ್ನು ಅರಿತು ಬೋಧಿಸುತ್ತಿದ್ದ ಅಪರೂಪದ ಶಿಕ್ಷರಾಗಿದ್ದ ನಮ್ಮೆಲ್ಲರ ಮೆಚ್ಚಿನ ಈ ಮೇಷ್ಟ್ರು ನಾಟಕ ಪ್ರಿಯರಾಗಿದ್ದರು. ಅದು ನಮಗೆಲ್ಲ ಅಂದಿಗೆ ಸೋಜಿಗ…! ನಾಟಕವೆಂದರೆ ಅವರಿಗೆ ಅಷ್ಟೊಂದು ಅಕ್ಕರೆ. ಅದಕ್ಕೆ ನಿರ್ದಶನವೆಂಬಂತೆ ನಮ್ಮ ಮೇಷ್ಟ್ರು ಅವರ ಊರಿನಲ್ಲಿ ನಡೆಯುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸಿ ಅದ್ಭುತವಾಗಿ ನಟಿಸುತ್ತಾ ಜನರ ಮನ ಗೆದ್ದಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದ ಅವರ ಪ್ರತಿಭೆಯನ್ನು ಕಂಡು ನಾವೇ ರೋಮಾಂಚಿತರಾಗಿದ್ದೆವು.

ಇಂತಹ ಸಕಲಕಲಾ ವಲ್ಲಭರಂತಹ ಮಲ್ಲೇಶ್ ಮೇಷ್ಟ್ರನ್ನು ಪಡೆದ ನಾವೇ ಧನ್ಯರು. ನಾವು ಇಂದು ಏನಾದರೂ ಅಷ್ಟೋ ಇಷ್ಟೋ ಆದರ್ಶನೀಯವಾಗಿ ಬದುಕುತ್ತಿದ್ದೇವೆಂದರೆ ಇಂತಹ ಆದರ್ಶನೀಯವಾದ ಗುರುಗಳ ಒಡನಾಟ ಹಾಗೂ ಮಾರ್ಗದರ್ಶನವೇ ಕಾರಣ. ಥ್ಯಾಂಕ್ಯೂ ಡಿಯರ್ ಮಲ್ಲೇಶ್ ಸರ್.

 

andolana

Recent Posts

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

15 seconds ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

26 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

29 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

43 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

49 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago