ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. ಮಾರನೇ ದಿನ ಆಗಸವನ್ನೇ ಕೊಂಡುಕೊಂಡಷ್ಟು ಗತ್ತಿನಿಂದ ಹಾರುವುದೇನು! ಅದನ್ನು ಕಂಡದ್ದೇ ನಾನು ಮತ್ತು ನನ್ನ ಅಕ್ಕ ಸೇರಿ ಹುಮ್ಮಸ್ಸಿನಲ್ಲಿಯೇ ಗಾಳಿಪಟ ತಯಾರು ಮಾಡಿಬಿಟ್ಟೆವು. ಹಾರುವುದು ಹೋಗಲಿ, ಈ ಗಾಳಿಪಟ ಏಳುವುದೂ ಇಲ್ಲ. ಮತ್ತೆ ತಿಳಿದದ್ದು, ಗಾಳಿಪಟ ಹಾರುವುದಕ್ಕೆ ಹಗುರಾಗುವ ಅರ್ಹತೆಯಿರಬೇಕು ಎಂದು. ಮುಂದಿನ ಪ್ರಯತ್ನ ನಮ್ಮದು; ಸಹಕಾರ ಎದುರು ಮನೆಯವರದ್ದು. ಆದರೂ ನಾವೇ ಕೂತು ಮಾಡಿಸಿಕೊಂಡ ಕಾರಣಕ್ಕೆ ನಮ್ಮ ಹೆಸರಿಟ್ಟು ದಾರ ಕಟ್ಟಿ ಹಾರಿಸಿದ್ದೆವು. ಹಗುರಾಗಿ ಮೇಲಕ್ಕೆ ಥೇಟ್ ಹಕ್ಕಿಯಾಗಿ ಹಾರಾಡಿದ್ದ ಗಾಳಿಪಟವನ್ನು ಕಾಣುವಾಗ ಬೀಸಿದ್ದ ಚಪ್ಪಾಳೆ, ಖುಷಿಯಲ್ಲವು ಎಂಟು ಸಾಲಿನ ಪುಟ್ಟ ಕವಿತೆಯಾಗಿತ್ತು.
ಹಾಸ್ಟೆಲ್ನ ಏಕತಾನತೆಯ ಬದುಕಿನಲ್ಲಿ ಮನೆಯವರ ಫೋನ್ಗಾಗಿ ಕಾಯುವುದು ಕೂಡ ಸೇರಿಹೋಗಿತ್ತು. ಮನೆಯಿಂದ ಮತ್ತೆ ಹಾಸ್ಟೆಲ್ ಸೇರಿದ ದಿನ ವಿಪರೀತ ವೈರಾಗ್ಯ ತಾಳಿದ ಕವಿತೆ, ರುಚಿಗಟ್ಟಾದ ಅಡುಗೆಯು ಕವಿತೆ, ಬೆಳಗಿನ ಸೂರ್ಯೋದಯ ಮತ್ತು ರಾತ್ರಿಯ ಚಂದ್ರನ ಕುರಿತು ಹೀಗೆ ಹಲವು ಕವಿತೆಗಳನ್ನು ಸುಮ್ಮನೆ ಬರೆಯುತ್ತಿದ್ದೆನಷ್ಟೆ. ಅಡುಗೆ ಕವಿತೆ ಎಷ್ಟು ಯಶಸ್ವಿಯಾಯಿತೆಂದರೆ, ಕೇಳಿದ ತಕ್ಷಣವೆ ಮೆಸ್ ಆಂಟಿಯರೆಲ್ಲ ಮನೆಗೆ ಫೋನ್ ಮಾಡಿಕೊಡುತ್ತಿದ್ದರು. ಕವಿತೆಯ ಪ್ರೋಂಜನವೆಂದು ಈಗ ನಕ್ಕು ಸುಮ್ಮನಾಗುವುದು.
(ಲೇಖಕಿ ಮಾನಸಗಂಗೋತ್ರಿಯಲ್ಲಿ ಇದೀಗ ತಾನೇ ಕನ್ನಡ ಎಂ.ಎ. ವ್ಯಾಸಂಗ ಮುಗಿಸಿದ್ದಾರೆ)
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್ನ್ನು ಪ್ರತಿನಿಧಿಸುವ ಪಾಲಿಕೆ…