ಮಹಿಳೆ ಸಬಲೆ

ಪರದೇಶದವರಿಗೆ ಬಾಡಿಗೆ ಕೊಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ

ಒಬ್ಬಳೇ ಮಗಳನ್ನು ಮದುವೆ ಮಾಡಿ ವಿದೇಶಕ್ಕೆ ಕಳುಹಿಸಿದ ನಂತರ ಗಂಡನನ್ನು ಕಳೆದುಕೊಂಡಿದ್ದ ಸೌಭಾಗ್ಯ ತಮ್ಮೊಬ್ಬರಿಗೆ ಮನೆ ದೊಡ್ಡದೆನಿಸಿ ಮಹಡಿಯ ಮನೆಯಲ್ಲಿ ತಾವಿದ್ದು, ಕೆಳಗಿನ ಮನೆಯನ್ನು ವಿದೇಶದಿಂದ ಯೋಗ ಕಲಿಯಲು ಬಂದಿದ್ದ ಒಬ್ಬ ಯುವಕ ಮತ್ತು ಯುವತಿಗೆ ಪರಿಚಯದವರು ಹೇಳಿದರು ಎಂದು ಹನ್ನೊಂದು ತಿಂಗಳುಗಳ ಕರಾರು ಮಾಡಿಕೊಂಡು ಬಾಡಿಗೆಗೆ ಕೊಟ್ಟಿದ್ದರು. ಅಗ್ರಿಮೆಂಟ್ ಇನ್ನೂ ನಾಲ್ಕು ತಿಂಗಳುಗಳು ಬಾಕಿ ಇರುವಾಗಲೇ ಒಂದು ದಿನ ಬೆಳಗಿನ ಜಾವದಲ್ಲಿ ದಢದಢ ಅಂತ ಬಂದ ಪೊಲೀಸರು ಮನೆಗೆ ಬೀಗ ಹಾಕಿ ಅವರಿಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋದರು.

ಗಾಬರಿಗೊಂಡ ಸೌಭಾಗ್ಯ ಪಕ್ಕದ ಮನೆಯವರೊಡನೆ ಪೊಲೀಸ್ ಸ್ಟೇಷನ್‌ಗೆ ಹೋದಾಗ ತಿಳಿದದ್ದು ಆ ಬಾಡಿಗೆದಾರರು ಡ್ರಗ್ಸ್ ವ್ಯವಹಾರದಲ್ಲಿ ಸಿಕ್ಕಿಹಾಕಿ ಕೊಂಡಿದ್ದಾರೆ ಎಂದು.

ಅಂತಹ ವಹಿವಾಟಿಗೆ ಇವರ ಮನೆ ಬಳಕೆಯಾಗಿದ್ದರಿಂದ ಇವರನ್ನೂ ಆರೋಪಿಯನ್ನಾಗಿ ಮಾಡಿ ಎಫ್‌ಐಆರ್ ಹಾಕಲಾಗಿತ್ತು. ಇದೇ ಕೊರಗಿನಲ್ಲಿ ಹಾಸಿಗೆ ಹಿಡಿದಾಕೆ ಮೇಲೇಳಲೇಯಿಲ್ಲ.

ಉದ್ಯೋಗದಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದ ಶೋಭಾ ತನ್ನ ನಿವೃತ್ತಿ ಜೀವನಕ್ಕೆ ಎಂದು ಪಕ್ಕದೂರಿನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿ ಮಾಡಿ ಅದನ್ನು ಹೊರ ದೇಶದಿಂದ ಬಂದು ಇಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಬಾಡಿಗೆ ಕೊಟ್ಟಿದ್ದಳು. ತಿಂಗಳ ಒಂದನೇ ತಾರೀಖು ಸರಿಯಾಗಿ ಬಾಡಿಗೆ ಬರುತ್ತಿತ್ತು. ಅಲ್ಲಿನ ನಿರ್ವಹಣಾ ವೆಚ್ಚವನ್ನೂ ಯಾವುದೇ ತಗಾದೆ ಇಲ್ಲದೆ ಭರಿಸುತ್ತಿದ್ದ ಬಾಡಿಗೆದಾರರೆಂದರೆ ಅಚ್ಚುಮೆಚ್ಚು ಶೋಭಾಳಿಗೆ. ‘ನಿಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಪೊಲೀಸ್ ಠಾಣೆಗೆ ಹಾಜರಾಗಬೇಕು’ ಎನ್ನುವ ನೋಟಿಸ್ ಬಂದಾಗಲೇ ಶೋಭಾರಿಗೆ ಆಘಾತ. ಸಹೋದ್ಯೋಗಿಗಳ ಸಲ್ಲದ ನೋಟಕ್ಕೆ ನೊಂದು ಆಕೆ ಕೆಲಸವನ್ನೇ ಬಿಟ್ಟಳು.

ವಿದೇಶಿಯರಿಗೆ ಮನೆ ಬಾಡಿಗೆ ಕೊಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ವಿದೇಶಿಯರ ಕಾಯಿದೆ 1946 ಇದರ ಅಡಿಯಲ್ಲಿ ಕೆಲವು ನಿಯಮಗಳನ್ನು ನೀಡಲಾಗಿದೆ. ಸೆಕ್ಷನ್ 7ರ ಪ್ರಕಾರ ಯಾವುದೇ ಬೇರೆ ದೇಶದ ಪ್ರಜೆಗೆ ಮನೆ ಬಾಡಿಗೆ ನೀಡುವಾಗ ಅವರುಗಳ ವಿವರವನ್ನು ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ನೋಂದಾಯಿಸಬೇಕಿರುತ್ತದೆ. ಕೊಲೆ, ದೇಶದ್ರೋಹದಸಂಚು, ಮಾನವ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ಮಾದಕ ವಸ್ತುಗಳ ಬಳಕೆ, ತಯಾರಿಕೆ ಮತ್ತು ಮಾರಾಟ ಇಂತಹ ಅಪರಾಧಗಳು ಘಟಿಸಿದಾಗ ಅಂತಹ ಕೃತ್ಯಗಳಿಗೆ ಬಳಸಿದ ಜಾಗದ ಮಾಲೀಕರನ್ನೂ ಪ್ರಚೋದನೆ ನೀಡಿದ ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಬಾಡಿಗೆದಾರರ ವಿವರಗಳನ್ನು ಪೊಲೀಸ್ ಠಾಣೆಗೆ ನೀಡಬೇಕು.

ಅಕ್ರಮ ವಲಸಿಗರಿಗೆ ಮನೆ ಬಾಡಿಗೆ ಕೊಡುವುದು, ವೀಸಾ ಅವಧಿ ಮುಗಿದ ನಂತರವೂ ನಮ್ಮ ದೇಶದಲ್ಲಿ ಇರುವುದು ಅಪರಾಧ. ಅಂತಹ ವ್ಯಕ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮಾಲೀಕರಿಗೂ ಶಿಕ್ಷೆಯಾಗುತ್ತದೆ. ಹಲವಾರು ಬಾರಿ ದೊಡ್ಡ ಕುಟುಂಬವಿದ್ದರೂ ಮನೆಯನ್ನು ಹೆಂಗಸಿನ ಹೆಸರಿನಲ್ಲಿ ಖರೀದಿ ಮಾಡಲಾಗಿರುತ್ತದೆ.

ಅಂತಹ ಸಂದರ್ಭದಲ್ಲೂ ಇಂತಹ ಅಪರಾಧಗಳು ಘಟಿಸಿದರೆ ಮನೆ ಯಾರ ಹೆಸರಿನಲ್ಲಿ ಇರುತ್ತದೆಯೋ ಆ ಮಹಿಳೆಯನ್ನೇ ಆರೋಪಿಯನ್ನಾಗಿಸಲಾಗುತ್ತದೆ. ಅದಕ್ಕಾಗಿಯೇ ಮನೆ ಮಾಲೀಕರಾದ ಮಹಿಳೆಯರು ಪುರುಷ ಮಾಲೀಕ ರಂತೆಯೇ ಇಂತಹ ತೊಂದರೆಗಳಿಗೆ ಸಿಕ್ಕಿಹಾಕಿ ಕೊಳ್ಳದಂತೆ ಇರಲು ವಿದೇಶಿಯರಿಗೆ ಬಾಡಿಗೆ ಕೊಡುವಾಗ ಮನೆ ಇರುವ ಏರಿಯಾದ ಠಾಣೆಗೆ ಮಾಹಿತಿ ಕೊಡುವುದು ಸುರಕ್ಷಿತ ಮತ್ತು ಕಡ್ಡಾಯ. ಇಂತಹ ಮಾಹಿತಿಯನ್ನು ನೀಡಲು ತಪ್ಪಿದರೆ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಿದೆ. ಮೊದಲು ವಿದೇಶಿಯರ ಪ್ರಾದೇಶಿಕ ನೋಂದಾವಣೆ ಕಚೇರಿ (FRRO) ಇವರ ವೆಬ್‌ಸೈಟ್‌ನಲ್ಲಿ ನೋಂದಾವಣೆ ಮಾಡಿ ನಂತರ ನಮೂನೆ ‘ಇ’ ಇದರಲ್ಲಿ ವಿವರ ತುಂಬಿಸಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕಿರುತ್ತದೆ.

ಅಂಜಲಿ ರಾಮಣ್ಣ
(ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು )

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

46 mins ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

1 hour ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

3 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

3 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

4 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

4 hours ago