ಕಾಡುವ ಮೊಡವೆಗಳಿಗೆ ಸುಲಭ ಪರಿಹಾರ

ಮೊಡವೆಗಳು ದೇಹದ ಹಾರ್ಮೋನುಗಳ ಏರಿಳಿತಗಳಿಗೆ ಸಂಬಂಧಿಸಿವೆ. ಇವು ಹಾರ್ಮೋನುಗಳ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಟೆಸ್ಟೋಸ್ಟೆರಾನ್‌ನಂತಹ ಆಂಡ್ರೋಜಿನ್‌ಗಳ ಹೆಚ್ಚಳದಿಂದಾಗಿ ಮೊಡವೆಗಳು ಉಂಟಾಗಿ ನೋವಿನಿಂದ ಕೂಡಿರುತ್ತದೆ.

ಈ ಮೊಡವೆಗಳನ್ನು ನಿಯಂತ್ರಿಸುವುದು ಹೇಗೆ ಅಂತೀರಾ? ಅದಕ್ಕಾಗಿ ನೀವು ಚರ್ಮದ ಆರೈಕೆಯನ್ನು ದಿನಚರಿಯನ್ನಾಗಿ ಅನುಸರಿಸಬೇಕಾಗುತ್ತದೆ. ಇದು ಮೊಡವೆಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ.

ನಿಮ್ಮ ಮುಖವನ್ನು ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ತೊಳೆಯಬೇಕು. ಅತಿಯಾಗಿ ತೊಳೆಯುವುದೂ ಮೊಡವೆಗಳಿಗೆ ಒಳ್ಳೆಯದಲ್ಲ. ಮುಖವನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಕ್ಲೆನ್ಸರ್‌ ಬಳಸಬೇಕು. ಅದೂ ಕೂಡ ಅತಿಯಾಗಬಾರದು. ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಉತ್ತಮ.

ಆದಷ್ಟೂ ಸೌಂದರ್ಯ ವರ್ಧಕಗಳನ್ನು ಕಡಿಮೆ ಮಾಡುವುದು ಉತ್ತಮ.

ಚರ್ಮವನ್ನು ನೈಸರ್ಗಿಕವಾಗಿ ಇಟ್ಟುಕೊಳ್ಳಬೇಕು. ಮೊಡವೆಗಳಿಗೆ ಸ್ವಯಂ ಆರೈಕೆಯೇ ಮುಖ್ಯವಾದ ಚಿಕಿತ್ಸೆಯಾಗಿದ್ದು, ನಿಮ್ಮ ಮುಖದ ಚರ್ಮವನ್ನು ಸರಿಯಾಗಿ ನೋಡಿಕೊಂಡರೆ ಸಾಕು ಅದಕ್ಕೆ ಯಾವುದೇ ಔಷಧಿ ಅಗತ್ಯವಿರುವುದಿಲ್ಲ.
ಇವುಗಳೊಂದಿಗೆ ಆರೋಗ್ಯಕರ ಡಯಟ್ ತುಂಬಾ ಮುಖ್ಯ. ನಿಮ್ಮ ಆಹಾರ ಕ್ರಮವು ನಿಮ್ಮ ಮೊಡವೆ ಸ್ಥಿತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದರಿಂದ ಆಹಾರದಲ್ಲಿನ ಕೊಬ್ಬಿನಾಂಶ ಮತ್ತು ಕಾರ್ಬೋ ಹೈಡ್ರೆಟ್‌ಗಳು ನಿಮ್ಮ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಹೆಚ್ಚಿಸಬಹುದು. ಅದು ಮೊಡವೆಗೆ ಕಾರಣವಾಗಬಹುದು. ಆದ್ದರಿಂದ ಧಾನ್ಯಗಳು, ಸಿಹಿಕಾರಕಗಳು, ಹಾಲು ಮತ್ತು ಚೀಸ್ ಸೇರಿದಂತೆ ಡೈರಿ ಉತ್ಪನ್ನಗಳು, ಕರಿದ ಆಹಾರಗಳು ಮತ್ತು ಕೇಕ್‌ಗಳನ್ನು ಆದಷ್ಟು ಕಡಿಮೆ ಮಾಡಬೇಕು. ಹೀಗೆ ಮನೆಯಲ್ಲಿಯೇ ಚರ್ಮದ ಕಾಳಜಿ ವಹಿಸಿದರೆ ಮೊಡವೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಆಂದೋಲನ ಡೆಸ್ಕ್

Recent Posts

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

6 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

7 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

7 hours ago

PGCET| MBA, MCA ಪ್ರವೇಶ ಪರೀಕ್ಷೆ ಜೂನ್.‌4ಕ್ಕೆ ಮುಂದೂಡಿದ ಕೆಇಎ

ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶ್‌ ಪರೀಕ್ಷೆಯನ್ನು ಜೂನ್.‌14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…

8 hours ago

ಹನೂರು| ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…

9 hours ago

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…

9 hours ago