ಆಂದೋಲನ ಪುರವಣಿ

ಕುಕ್ಕರಹಳ್ಳಿ ಕೆರೆಯ ಸೆಕ್ಯೂರಿಟಿ ಶಿವಣ್ಣ

  • ಅಭಿಜಿತ್

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶಿವಣ್ಣ ಅವರಿಗೆ ಈಗ 63 ವರ್ಷ. ಇವರು ಪಡುವಾರಹಳ್ಳಿಯಲ್ಲೇ ಹುಟ್ಟಿ, ಬೆಳೆದವರು. ಬೇಸಾಯ ಮಾಡುತ್ತಿದ್ದ ತಂದೆ ತಾಯಿ ತಮ್ಮ ಮಕ್ಕಳ ಓದಿನ ಬಗ್ಗೆ ಗಮನಹರಿಸಲೂ ಸಾಧ್ಯವಾಗದ ಕಾಲ. ಆದರೆ ಹೊಟ್ಟೆಯ ಹಿಟ್ಟಿಗೆ ಮೈಬಗ್ಗಿಸಿ ದುಡಿಯಬೇಕೆಂಬ ತತ್ವವನ್ನು ಅವರಿಂದಲೇ ಶಿವಣ್ಣ ಅವರು ಕಲಿತದ್ದು.

ಆಗ ದಿನಕ್ಕೆರಡು ಹೊತ್ತು ಊಟ ಸಿಕ್ಕರೆ ಪುಣ್ಯ. ಬೆಳಿಗ್ಗೆ ಎದ್ದು ಕುರಿ, ಕೋಳಿಗಳನ್ನು ಗೂಡಿಂದ ಹೊರಕ್ಕೆ ಬಿಡುವಲ್ಲಿಂದ ಆರಂಭವಾಗುತ್ತಿದ್ದ ಕೆಲಸ, ಸಂಜೆಹಸು-ಕರುಗಳನ್ನು ಮರಳಿ ಮನೆಗೆ ಸೇರಿಸುವ ತನಕ ಒಂದರ ಬೆನ್ನಿಗೊಂದರಂತೆ ನಿರಂತರವಾಗಿ ಇರುತ್ತಿತ್ತು. ‘ಇಸ್ಕೂಲಿಗ್ ಹೋಗಿಲ್ಲ, ಅಕ್ಷರ ಬರೆಯಕೆ ಬರಕಿಲ್ಲ. ಹಸಿವು ಇತ್ತಲಪ್ಪಾ, ಅದು ಇಸ್ಕೂಲಿನ್ ಪಾಠಕ್ಕಿಂತ ಹೆಚ್ಚು ಕಲ್ಲಿದೆ ಎಂದು ಆ ದಿನಗಳನ್ನು ನೆನೆಯುತ್ತಾರೆ.‌

ಬೆಳೆದ ಬೆಳೆಯನ್ನು ಆಗ ಕೂಡಿಡುವುದಕ್ಕೂ ಚೀಲಗಳಿರಲಿಲ್ಲ. ದೊಡ್ಡವರ ಮನೆಯಲ್ಲಿ ಚೀಲ ಕೇಳುವಂತಿರಲಿಲ್ಲ. ಕೇಳಿದರೂ ಕೊಡುತ್ತಿರಲಿಲ್ಲ ಬಿಡಿ. ಜೋಳವನ್ನು ಸ್ವಲ್ಪವೇ ಉಳಿಸಿ, ಅದನ್ನು ಗದ್ದೆಯ ಒಳಗೆ ಹೂತಿಟ್ಟು, ಅಗತ್ಯ ಬಿದ್ದಾಗ ಅದನ್ನು ಬಳಸಿಕೊಳ್ಳುತ್ತಿದ್ದರು. ಸುಮಾರು ಇಪ್ಪತೈದು ಕೆಜಿಯವರೆಗೂ ಧಾನ್ಯಗಳನ್ನು ಶೇಖ ರಿಸಿಟ್ಟು ಕೊಳ್ಳಬಹುದಾಗಿತ್ತು. ಇಷ್ಟಿದ್ದರೂ, ಕೂಡು ಕುಟುಂಬದ ಎಲ್ಲರ ಹೊಟ್ಟೆ ತುಂಬುತ್ತಲೇ ಇರಲಿಲ್ಲ! ಆಗೆಲ್ಲ ಕೆಂಪುಜೋಳವನ್ನು ಬೆಲ್ಲವೆಂದು ತಿಳಿದು, ಗಬಗಬನೆ ತಿನ್ನುತ್ತಿದ್ದರು. ಇವತ್ತಿಗೆ ಹಸಿವಿನ ಅನುಭವ ಆಗದಿರುವಷ್ಟು ತಿನ್ನುವ ಸುಖವಿದ್ದರೂ ಶಿವಣ್ಣ ಅವರು ಹೊಟ್ಟೆ ಹಸಿವಲ್ಲೇ ಕಳೆದ ದಿನಗಳನ್ನು ಮರೆತೇ ಇಲ್ಲ.

ಹರೆಯಕ್ಕೆ ಬರುತ್ತಿದ್ದಂತೆ ವ್ಯವಸಾಯವೊಂದನ್ನೇ ನಂಬಿ ಕೂತರೆ ಜೀವನ ಸಾಗುವುದಿಲ್ಲ ಎಂದು ತಿಳಿದದ್ದೇ ತಡ ಫ್ಯಾಕ್ಟರಿ ಕೆಲಸಕ್ಕೆ ಹೋದರು. ಚಹ, ಕಾಫಿ ಯಾವುದಕ್ಕೂ ದುಡ್ಡು ಖರ್ಚು ಮಾಡದೇ ಹಣ ಕೂಡಿಟ್ಟುಕೊಂಡರು. ಎರಡು ಫ್ಯಾಕ್ಟರಿ ಕೆಲಸ ಮಾಡಿದ ಮೇಲೆ, ಕಬ್ಬಿಣ ದಂಗಡಿಯಲ್ಲಿ ಕೆಲಸ ಮಾಡುವ ಸಂದರ್ಭ ಒದಗಿಬಂತು. ಬದುಕು ಸಾಗಿಸಲೇಬೇಕಾದ ಅನಿ ವಾರ್ಯತೆಗೆ ಕಟ್ಟುಬಿದ್ದು, ಇಪ್ಪತ್ತು ವರ್ಷಗಳವರೆಗೆ ಕೆಲಸ ಮಾಡಿದರು. ಹೇಳಿ ಕೇಳಿ ಕಬ್ಬಿಣದ ಕೆಲಸ, ಜೀವವನ್ನು ಇನ್ನಷ್ಟು ದಣಿಸಿ, ಸುಸ್ತು ಬಡಿಸಿತು. ಹಣವಂತರ ಮನೆಗೆ ಕಬ್ಬಿಣ ಹಾಕು ವಾಗ ಒಂದಷ್ಟು ದುಡ್ಡು ಕೊಡುತ್ತಿದ್ದರು. ಕೆಲಸದ ಕುರುಹಾಗಿ ಇವರ ದೇಹದಲ್ಲಿ ಈಗಲೂ ಗೀರುಗಳಿವೆ.

ಎತ್ತಿನಗಾಡಿಯನ್ನು ಓಡಿಸುತ್ತಿದ್ದ ಶಿವಣ್ಣ ಅವರು ಸೈಕಲ್ ಕಲಿಯುವುದಕ್ಕೆ ಹರಸಾಹಸವನ್ನೇ ಪಟ್ಟಿದ್ದರು. ಊರಿನ ಹಿರಿಯವಾರಿಗೆಯವರು ಸೈಕಲ್ ನಿಲ್ಲಿಸಿದ್ದರೆ, ಬೇಡಿ ಪಡೆದು, ಒಂದು ಪೆಡಲ್ ತುಳಿಯುತ್ತಾ ಕಲಿತರು. ಇದಕ್ಕಿಂತ ತಮ್ಮ ಎತ್ತಿನಗಾಡಿಯೇ ವಾಸಿ ಅನಿಸಿತು. ಕಬ್ಬಿಣದಂಗಡಿ ಕೆಲಸಕ್ಕೆ ಹೋಗುವಾಗಲೂ ಇವರ ಎತ್ತಿನಗಾಡಿಯನ್ನು ಆಚೀಚೆಯ ಜನರೆಲ್ಲ ಬಿಟ್ಟುಕಣ್ಣು ಬಿಟ್ಟಂತೆ ನೋಡುತ್ತಿದ್ದ ನೆನಪುಗಳನ್ನು ನೆನೆಯುವಾಗ ಶಿವಣ್ಣ ಅವರ ಮುಖದಲ್ಲಿ ಮಾಸದ ನಗುವಿತ್ತು.

ದೇವಸ್ಥಾನಕ್ಕೆ ಹೋದರೆ ಪ್ರಸಾದ ಸಿಗುತ್ತಿತ್ತೆಂದು ಹರಿದ ಅಂಗಿಯಲ್ಲೇ ಮೈಮುಚ್ಚಿಕೊಂಡು ಹೋಗುತ್ತಿದ್ದರಂತೆ. ಬಟ್ಟೆ ಹರಿದಿದೆ ಎಂಬುದಕ್ಕಿಂತ ಹಸಿವಿನ ತೀವ್ರತೆ ಇತ್ತು. ಈಗ ತಕ್ಕಮಟ್ಟಿಗೆ ಅನುಕೂಲವಿದೆ. ಮಕ್ಕಳು ಇದನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋದರೆ ಅಷ್ಟೇ ಸಾಕು ಎಂಬುದೇ ಇವರ ಮನದ ಪ್ರಾರ್ಥನೆ.

ಸೆಕ್ಯೂರಿಟಿ ಕೆಲಸದ ಬಗ್ಗೆ ಶಿವಣ್ಣ ಅವರಿಗೆ ತಡವಾಗಿ ತಿಳಿಯಿತು. ಪರಿಚಿತರೊಬ್ಬರಿಂದ ತಮಗೆ ಕೆಲಸ ಸಿಕ್ಕಿತೆಂಬ ತೃಪ್ತಿಯ ಜೊತೆಗೆ ಬದುಕು ಸುಗಮವಾಗಿದೆ ಎನ್ನುತ್ತಾರೆ. ಚಿಕ್ಕಂದಿ ನಲ್ಲಿ ಓಡಾಡಿ ಬೆಳೆದ ಕುಕ್ಕರಹಳ್ಳಿ ಕೆರೆಯೇ ಇವರ ಸದ್ಯದ ಕಾಯಕದ ತಾಣ.

ಬೆಳಿಗ್ಗೆ ಆರು ಗಂಟೆಗೆ ಗಂಗೋತ್ರಿಯ ಸೆನೆಟ್ ಭವನಕ್ಕೆ ಬರುತ್ತಾರೆ. ನಂತರ ಎಂಟು ಗಂಟೆಯ ಹೊತ್ತಿಗೆ ಕುಕ್ಕರಹಳ್ಳಿ ಕೆರೆಯ ಬಳಿ ಬರುತ್ತಾರೆ. ಗೇಟಿಗೆ ಬೀಗ ಹಾಕಿ ಅಲ್ಲೇ ಓಡಾಡುತ್ತಲಿರುತ್ತಾರೆ. ಪ್ರಕೃತಿಯ ಹಸಿರು, ಹಕ್ಕಿಗಳ ಚಿಲಿಪಿಲಿ ನಾದದಲ್ಲಿ ವಯಸ್ಸು ಹಿಂದಕ್ಕೆ ಸರಿಯುತ್ತವೆ ಎಂಬ ಸಂಭ್ರಮ ಇವರದು.

ಆಂದೋಲನ ಡೆಸ್ಕ್

Recent Posts

ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ: ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಮೈಸೂರು: ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಅಧಿಕಾರಿಗಳಿಗೆ ಸೂಚನೆ…

2 hours ago

ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತ ಸರ್ಕಾರವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಲ್ವಾನ್‌ ಕಣಿವೆಯಲ್ಲಿ…

2 hours ago

ಶರದ್‌ ಪವಾರ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮುಂಬೈ: ಆರೋಗ್ಯ ಸಮಸ್ಯೆಯಿಂದ ಮುಂಬೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಶರದ್‌ ಪವಾರ್‌ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಶರದ್‌ ಪವಾರ್‌…

2 hours ago

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ವ್ಯಕ್ತಿ

ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ…

4 hours ago

ಚಲುವಾಂಬ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ಮಗು ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು…

4 hours ago

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

4 hours ago