ಆಂದೋಲನ ಪುರವಣಿ

ಕೊಡಗಿನ ಬಟರ್‌ಫ್ರೂಟ್‌ಗೆ ಸಖತ್ ಡಿಮ್ಯಾಂಡ್ !

ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ

ಈಗೀಗ ಅತಿ ಹೆಚ್ಚು ಬೇಡಿಕೆ ಕಂಡುಕೊಂಡಿರುವ ಅವಕಾಡೋ ಅಥವಾ ಬೆಣ್ಣೆಹಣ್ಣು ರೈತರ ಮುಂದೆ ಹೊಸ ಸಾಧ್ಯತೆ ತೆರೆದಿಟ್ಟಿರುವುದು ಸತ್ಯ. ಅತ್ಯಧಿಕ ಪೋಷಕಾಂಶಗಳು, ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಎನ್ನಿಸಿಕೊಂಡಿರುವ ಬೆಣ್ಣೆಹಣ್ಣು ಕೃಷಿಯಿಂದ ರೈತರ ಬಾಳಲ್ಲೂ ಸಿಹಿ ತುಂಬಲಿದೆ.
ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಾಕ್ಕೆ ಸೇರಿದ ಅವಕಾಡೋವನ್ನು ೧೯ನೇ ಶತವಾನದಲ್ಲೇ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಪರಿಚಯಿಸಿದವು. ಪ್ರಸ್ತುತ ೮೦ಕ್ಕೂ ಹೆಚ್ಚು ದೇಶಗಳಲ್ಲಿ ಒಟ್ಟು ೭.೨೬ ಲಕ್ಷ ಹೆಕ್ಟೇರು ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ. ವಿಶ್ವದ ಒಟ್ಟು ಉತ್ಪಾದನೆುಂಲ್ಲಿ ಶೇ. ೧೧.೧ರಷ್ಟು ಏಷ್ಯಾ ಖಂಡದಲ್ಲಿ ಬೆಳೆಯಲಾಗುತ್ತಿದೆ. ಈಗೀಗ ಭಾರತದಲ್ಲಿ ಇದರ ಕೃಷಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಕಾಫಿ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾದ ಬೆಣ್ಣೆಹಣ್ಣನ್ನು ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಡಲಾಗಿದೆ. ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಅವಕಾಡೊ ತಳಿ ಅಭಿವೃದ್ಧಿ ಹಾಗೂ ತರಬೇತಿ ಕಾರ್ಯಾಗಾರವೂ ನಡೆಯುತ್ತಿರುವುದರಿಂದ ಹೆಚ್ಚಿನ ಕೃಷಿಕರಿಗೆ ಅನುಕೂಲವಾಗುತ್ತಿದೆ.

ಬೆಣ್ಣೆಹಣ್ಣಿನ ಬೇಸಾಯ ಕ್ರಮಗಳು

* ಬೀಜಗಳ ಮೂಲಕ ಸಸಿ ಬೆಳೆಸಬಹುದಾದರೂ ಉತ್ತಮ ಗಿಡಗಳ ಕಾಂಡಗಳನ್ನು ಕಸಿಮಾಡಿ ಸಸಿ ಬೆಳೆಸುವುದು ಉತ್ತಮ ವಿಧಾನ

* ಸೀಳುಕಸಿ, ಪ್ಯಾಚ್ ಬಡ್ಡಿಂಗ್ ಮತ್ತು ಎಪಿಕೋ ಟೈಲ್‌ಗ್ರಾಫ್ಟಿಂಗ್ ವಿಧಾನಗಳಿಂದಲೂ ಸಸಿ ಪೋಷಣೆ

* ಬೆಣ್ಣೆಹಣ್ಣು ೧೫೦ ಪ್ರಬೇಧಗಳನ್ನು ಒಳಗೊಂಡಿದ್ದು, ವೆಸ್ಟ್‌ಇಂಡಿಸ್ ಪ್ರಬೇಧ, ಮೆಕ್ಸಿಕನ್ ಪ್ರಬೇಧ, ಗ್ವಾಟೆಮಲನ್ ಪ್ರಬೇಧ ಮುಖ್ಯವಾದವು.

* ಕರ್ನಾಟಕದಲ್ಲಿ ಅರ್ಕಾಸುಪ್ರೀಮ್ ತಳಿಯ ಪ್ರಮಾಣ ಹೆಚ್ಚಿದೆ. ಇದನ್ನುಕೊಡಗು ಜಿಲ್ಲೆುಂ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಬಿಡುಗಡೆ ವಾಡಲಾಗಿದೆ.


ಚೆಟ್ಟಳ್ಳಿಯಲ್ಲಿ ತಳಿ ಅಭಿವೃದ್ಧಿ
ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಚೆಟ್ಟಳಿುಂ ಕೇಂದ್ರೀಯ ತೋಟ ಗಾರಿಕಾ ಕೇಂದ್ರದಲ್ಲಿ ಅವಕಾಡೋ ತಳಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೆಣ್ಣೆಹಣ್ಣು ರೈತರಿಗೆ ಹೊಸ ಸಾಧ್ಯತೆ ತೆರೆದಿಟ್ಟಿದ್ದು, ಈ ಬಾರಿ ಒಂದು ಲಕ್ಷಗಿಡಗಳ ಬೇಡಿಕೆ ಬಂದಿದೆ ಎನ್ನುತ್ತಾರೆ ಚೆಟ್ಟಳ್ಳಿ ಕೇಂದ್ರದ ಉಪನಿರ್ದೇಶಕ ಡಾ. ಎಸ್ ರಾಜೇಂದ್ರನ್.


ಕೊಡಗಿನ ಬಟರ್‌ಫ್ರೂಟ್ ತಳಿಗೆ ಬೇಡಿಕೆ
ದಶಕಗಳಿಂದಲೂ ಕೊಡಗಿನ ವಾತಾವರಣಕ್ಕೆ ಸೂಕ್ತವಾದ ನಾಟಿ ತಳಿಗಳ ಬೆಳೆಯಲಾಗುತ್ತಿದ್ದು, ಇವುಗಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಕಳೆದ ಐದಾರು ವರ್ಷಗಳಿಂದ ಬಟರ್ ಫ್ರೂಟ್‌ಗೆ ಬೇಡಿಕೆ ಹೆಚ್ಚಿದಂತೆ ಕೊಡಗಿನ ಬಟರ್‌ಫ್ರೂಟ್ ತಳಿಗೆ ಬೇಡಿಕೆ ಹೆಚ್ಚತೊಡಗಿದೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಚಾಮರಾಜನಗರ, ಚಿಕ್ಕಮಂಗಳೂರು, ಮೈಸೂರು ಸೇರಿ ಇನ್ನು ಹಲವೆಡೆ ಕೊಡಗಿನ ಬಟರ್‌ಫ್ರೂಟ್ ತಳಿಗಳು ವಾರಾಟ ವಾಗುತಿವೆ ಎನ್ನುತ್ತಾರೆ ರಾಜೇಂದ್ರನ್.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

6 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago