ಆಂದೋಲನ ಪುರವಣಿ

ಯೋಗ ಕ್ಷೇಮ : ಕಿಡ್ನಿ ಸ್ಟೋನ್: ಸ್ಪಷ್ಟತೆ ಇದ್ದರೆ ಅಪಾಯವಿಲ್ಲ

ಕಿಡ್ನಿ ಸ್ಟೋನ್ ಸಮಸ್ಯೆ ಈಗ ಸಾಮಾನ್ಯ ಎಂಬಂತಾಗಿದೆ. ಅತ್ಯಾಧುನಿಕ ಚಿಕಿತ್ಸೆಗಳಿಂದ ಇದನ್ನು ನಿವಾರಣೆ ಮಾಡಬಹುದಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಹೆಚ್ಚು ನೀರು ಕುಡಿಯುವುದು, ಉತ್ತಮ ಆಹಾರ ಸೇವಿಸುವುದರಿಂದಲೇ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸಿ ಆರೋಗ್ಯಯುತ ಜೀವನ ನಡೆಸಬಹುದು.
ತಿಳಿದಿರಬೇಕಾದ ಅಂಶಗಳು
* ದೇಹದಲ್ಲಿ ಉಪ್ಪು, ಕೆಲವು ಲವಣಾಂಶಗಳು ಹರಳಿನ ರೂಪಕ್ಕೆ ಮಾರ್ಪಟ್ಟು ಕಿಡ್ನಿಯಲ್ಲಿ ಸೇರುತ್ತವೆ. ಇವುಗಳನ್ನೇ ಸರಳವಾಗಿ ಕಿಡ್ನಿ ಸ್ಟೋನ್ ಎನ್ನುವುದು.
* ಹೆಚ್ಚು ನೀರು ಅಥವ ನೀರಿ ಅಂಶ ಹೆಚ್ಚಿರುವ ಆಹಾರ ಸೇವನೆಯಿಂದ ಘನ ರೂಪಕ್ಕೆ ತಿರುಗಿನ ಅರಳುಗಳು ಕರಗಿ ಮೂತ್ರದೊಂದಿಗೆ ಹೊರಗೆ ಬರುತ್ತವೆ.
* ನೀರಿನ ಸೇವನೆ ಕಡಿಮೆಯಾದಷ್ಟೂ ದೇಹದಲ್ಲಿನ ಲವಣಾಂಶಗಳು ಘನ ರೂಪಕ್ಕೆ ತಿರುಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತದೆ.
* ಹೊಟ್ಟೆಯ ಕೆಳಗೆ, ಪೆಕ್ಕೆಲುಬುಗಳ ಬಳಿ ನೋವು ಕಾಣಿಸಿಕೊಳ್ಳುವುದು, ಮೂತ್ರ ಮಾಡುವಾಗ ನೋವುಂಟಾಗುವುದು ಕಿಡ್ನಿ ಸ್ಟೋನ್‌ನ ಲಕ್ಷಣ.
* ಕಿಡ್ನಿ ಸ್ಟೋನ್ ಅನುವಂಶೀಯವೂ ಹೌದು. ವೈದ್ಯರ ಸಲಹೆ ಪಡೆದು ಉತ್ತಮ ಆಹಾರ ಕ್ರಮ ರೂಢಿಸಿಕೊಂಡರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
* ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದಲೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ.
* ನಾವು ಸೇವಿಸುವ ನೀರಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ, ಲವಣಾಂಶಗಳು ಇದ್ದರೆ ಅದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
* ದಿನಕ್ಕೆ ಕನಿಷ್ಟ ೪-೬ ಲೀ. ನೀರು ಅಥವಾ ಪೇಯಗಳ ಸೇವನೆಯಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಯಬಹುದು.
* ಅಕ್ಸಲೇಟ್ ಅಂಶ ಅಧಿಕವಾಗಿರುವ ಮಾಂಸ, ನಟ್ಸ್, ಬ್ರೋಕಲಿ ಮುಂತಾದ ಆಹಾರಗಳ ಸೇವನೆಗೆ ಮಿತಿ ಹೇರಬೇಕು.
* ತಂಬಾಕು, ಗುಟ್ಕಾ ಸೇವೆನೆ ಅತಿಯಾದರೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ಹಾಗಾಗಿ ಇವುಗಳಿಗೆ ಕಡಿವಾಣ ಹಾಕಬೇಕು.
* ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಂಡು, ಅಧಿಕ ಬೊಜ್ಜು ಉಂಟು ಮಾಡುವ ಆಹಾರಗಳನ್ನು ವರ್ಜಿಸಬೇಕು.
* ಎಳನೀರು, ನಿಂಬೆರಸ, ಬಾರ್ಲಿ ನೀರು, ಬಾಳೆ ದಿಂಡಿನ ರಸ, ದಾಳಿಂಬೆ ಜ್ಯೂಸ್, ಹಣ್ಣುಗಳ ಸೇವನೆ ಒಳ್ಳೆಯದು.
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

9 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

37 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago