ಆಂದೋಲನ ಪುರವಣಿ

ಯೋಗ ಕ್ಷೇಮ : ಕಿಡ್ನಿ ಸ್ಟೋನ್: ಸ್ಪಷ್ಟತೆ ಇದ್ದರೆ ಅಪಾಯವಿಲ್ಲ

ಕಿಡ್ನಿ ಸ್ಟೋನ್ ಸಮಸ್ಯೆ ಈಗ ಸಾಮಾನ್ಯ ಎಂಬಂತಾಗಿದೆ. ಅತ್ಯಾಧುನಿಕ ಚಿಕಿತ್ಸೆಗಳಿಂದ ಇದನ್ನು ನಿವಾರಣೆ ಮಾಡಬಹುದಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಹೆಚ್ಚು ನೀರು ಕುಡಿಯುವುದು, ಉತ್ತಮ ಆಹಾರ ಸೇವಿಸುವುದರಿಂದಲೇ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸಿ ಆರೋಗ್ಯಯುತ ಜೀವನ ನಡೆಸಬಹುದು.
ತಿಳಿದಿರಬೇಕಾದ ಅಂಶಗಳು
* ದೇಹದಲ್ಲಿ ಉಪ್ಪು, ಕೆಲವು ಲವಣಾಂಶಗಳು ಹರಳಿನ ರೂಪಕ್ಕೆ ಮಾರ್ಪಟ್ಟು ಕಿಡ್ನಿಯಲ್ಲಿ ಸೇರುತ್ತವೆ. ಇವುಗಳನ್ನೇ ಸರಳವಾಗಿ ಕಿಡ್ನಿ ಸ್ಟೋನ್ ಎನ್ನುವುದು.
* ಹೆಚ್ಚು ನೀರು ಅಥವ ನೀರಿ ಅಂಶ ಹೆಚ್ಚಿರುವ ಆಹಾರ ಸೇವನೆಯಿಂದ ಘನ ರೂಪಕ್ಕೆ ತಿರುಗಿನ ಅರಳುಗಳು ಕರಗಿ ಮೂತ್ರದೊಂದಿಗೆ ಹೊರಗೆ ಬರುತ್ತವೆ.
* ನೀರಿನ ಸೇವನೆ ಕಡಿಮೆಯಾದಷ್ಟೂ ದೇಹದಲ್ಲಿನ ಲವಣಾಂಶಗಳು ಘನ ರೂಪಕ್ಕೆ ತಿರುಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತದೆ.
* ಹೊಟ್ಟೆಯ ಕೆಳಗೆ, ಪೆಕ್ಕೆಲುಬುಗಳ ಬಳಿ ನೋವು ಕಾಣಿಸಿಕೊಳ್ಳುವುದು, ಮೂತ್ರ ಮಾಡುವಾಗ ನೋವುಂಟಾಗುವುದು ಕಿಡ್ನಿ ಸ್ಟೋನ್‌ನ ಲಕ್ಷಣ.
* ಕಿಡ್ನಿ ಸ್ಟೋನ್ ಅನುವಂಶೀಯವೂ ಹೌದು. ವೈದ್ಯರ ಸಲಹೆ ಪಡೆದು ಉತ್ತಮ ಆಹಾರ ಕ್ರಮ ರೂಢಿಸಿಕೊಂಡರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
* ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದಲೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ.
* ನಾವು ಸೇವಿಸುವ ನೀರಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ, ಲವಣಾಂಶಗಳು ಇದ್ದರೆ ಅದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
* ದಿನಕ್ಕೆ ಕನಿಷ್ಟ ೪-೬ ಲೀ. ನೀರು ಅಥವಾ ಪೇಯಗಳ ಸೇವನೆಯಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಯಬಹುದು.
* ಅಕ್ಸಲೇಟ್ ಅಂಶ ಅಧಿಕವಾಗಿರುವ ಮಾಂಸ, ನಟ್ಸ್, ಬ್ರೋಕಲಿ ಮುಂತಾದ ಆಹಾರಗಳ ಸೇವನೆಗೆ ಮಿತಿ ಹೇರಬೇಕು.
* ತಂಬಾಕು, ಗುಟ್ಕಾ ಸೇವೆನೆ ಅತಿಯಾದರೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ಹಾಗಾಗಿ ಇವುಗಳಿಗೆ ಕಡಿವಾಣ ಹಾಕಬೇಕು.
* ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಂಡು, ಅಧಿಕ ಬೊಜ್ಜು ಉಂಟು ಮಾಡುವ ಆಹಾರಗಳನ್ನು ವರ್ಜಿಸಬೇಕು.
* ಎಳನೀರು, ನಿಂಬೆರಸ, ಬಾರ್ಲಿ ನೀರು, ಬಾಳೆ ದಿಂಡಿನ ರಸ, ದಾಳಿಂಬೆ ಜ್ಯೂಸ್, ಹಣ್ಣುಗಳ ಸೇವನೆ ಒಳ್ಳೆಯದು.
andolanait

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

3 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

6 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

6 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

6 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

6 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

6 hours ago