ಆಂದೋಲನ ಪುರವಣಿ

ಹಾಡು ಪಾಡು: ಜೋರು ಸದ್ದಿನ ಗೌಜಲಕ್ಕಿ

ಭಾರತದ ಪಾರಂಪರಿಕ ಬೇಟೆ ಪಕ್ಷಿಗಳಲ್ಲಿ ಪ್ರಮುಖವಾದ ಗೌಜಿಗ, ದುಂಡು ಕೋಳಿ ಹಾಗಿರುವ ನೆಲದ ಮೇಲೆ ವಾಸಿಸುವ ಪಕ್ಷಿ. ಬೂದುಗಂದು ಬಣ್ಣದ ಇದು ಮಣ್ಣಿನಲ್ಲಿ ಬೆರೆತಾಗ ಗುರುತಿಸಲು ಅಸಾಧ್ಯ, ತನ್ನ ಗೌಜು -ಗದ್ದಲಕ್ಕೆ ಹೆಸರುವಾಸಿಯಾದ ಇದರ ಸದ್ದೇ ಇದರ ಇರವನ್ನು ತೋರಿಸುವುದು.
ಭಾರತದ ಉಪಖಂಡ ಹಾಗೂ ಇರಾನ್ ದೇಶದ ಮೂಲ ನಿವಾಸಿಯಾದ ಗೌಜಿಗ ಬಯಲಿನಲ್ಲಿ, ಕೃಷಿ ಭೂಮಿ, ಕುರುಚಲು ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ದಟ್ಟ ಕಾಡುಗಳಲ್ಲಿ ನೆಲೆಸುವುದಿಲ್ಲ. ಇದು ಚಿಕ್ಕ ಗುಂಪುಗಳಲ್ಲಿ ಬಾಳ್ವೆ ನಡೆಸುತ್ತಾ ಅಪಾಯ ಕಂಡೊಡನೆ ಕಾ..ತೀ..ತರ್…ತೀ..ತರ್… ಎಂದು ಕೀರಲು ಧ್ವನಿಯಲ್ಲಿ ಗಲಾಟೆ ಮಾಡುತ್ತಾ ಹುಯಿಲೆಬ್ಬಿಸುವುದು. ಹಾಗಾಗಿ, ಉತ್ತರ ಭಾರತದಲ್ಲಿ ಇದನ್ನು ತೀತರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಕೋಳಿ ಕಾಳಗದಂತೆ ತೀತರ್‌ಗಳನ್ನೂ ಸಹ ಪಂದ್ಯದಲ್ಲಿ ಬಳಸಿಕೊಳ್ಳುವುದರಿಂದ, ಇದು ಜನರ ಮನದಲ್ಲಿ ನೆಲೆಸಿರುವ ಪ್ರಿಯ ಹಕ್ಕಿ.
ಬೂದು ಗೌಜಿಗ ಅಥವಾ ಬೂದು ಕವುಜುಗ, ಗ್ರೇ ಫ್ರಾಂಕೋಲಿನ್, ಗ್ರೇ ಪಾರ್ಟ್ರಿಡ್ಜ್ ಎಂದು ಹಲವು ಹೆಸರಿನಿಂದ ಕರೆಯಿಸಿಕೊಳ್ಳುವ ತಿಳಿ ಬೂದುಗಂದು ಬಣ್ಣದ, ಗಾಢ ಹಳದಿ ಮೊಂಡು ಬಾಲದ, ಕರಿಯ ದಪ್ಪ ಕೊಕ್ಕಿನ ಈ ಪಕ್ಷಿಯ ಮೈ ಮೇಲೆ ಕಪ್ಪು ಅಡ್ಡಡ್ಡ ಗೀರುಗಳಿವೆ. ಇದರ ತಿಳಿ ಹಳದಿ ಮುಖದಲ್ಲಿ ದ್ರಾಕ್ಷಿಯಂತೆ ಹೊಳೆಯುವ ಕಪ್ಪು ಕಣ್ಣು, ಎದ್ದು ಕಾಣುವ ಗಾಢ ಹಳದಿಗಂದು ಬಣ್ಣದ ಹುಬ್ಬು, ಗಂಟಲು, ಕುತ್ತಿಗೆ-ಎದೆ ಬೇರ್ಪಡಿಸುವಂತೆ ತೋರುವ ಕಪ್ಪು ಗುರುತು ಎಲ್ಲವೂ ಹಕ್ಕಿಯನ್ನು ವಿಶೇಷವಾಗಿಸಿವೆ. ಇದರ ಕೆಳಮೈ ತಿಳಿ ಬೂದುಗಂದು ವರ್ಣಕ್ಕಿದ್ದು, ಕುತ್ತಿಗೆಯಿಂದ ಹೊಟ್ಟೆಯವರೆಗೆ ಕಾಣುವ ಕಪ್ಪು ಅಡ್ಡ ಪಟ್ಟಿ ಹಕ್ಕಿಯನ್ನು ಪರಿಸರದಲ್ಲಿ ಮರೆಮಾಚಿಸಲು ಸಹಾಯ ಮಾಡುತ್ತದೆ. ಗೌಜುಗ ನೆಲದ ಹಕ್ಕಿಯಾದ್ದರಿಂದ ಬಲವಾದ ಕಾಲುಗಳು, ಗಡುಸಾದ ಕಾಲ್ಬೆರಳುಗಳು ವೇಗದ ಓಟಕ್ಕೆ ನೆರವಾದರೆ ಕಾಲಿನ ಬಿರುಸು ಉಗುರುಗಳು ಆಹಾರವನ್ನು ನೆಲದಿಂದ ಕೆದಕಿ, ಕ್ರಿಮಿ-ಕೀಟಗಳನ್ನು ಹುಡುಕಲು ಅನುವು ಮಾಡುವುದು. ಬಲು ನಾಚಿಕೆ ಸ್ವಭಾವದ ಗೌಜುಗ, ಅಪಾಯ ಕಂಡೊಡನೆ ಜೋರಾಗಿ ಪಟಪಟನೆ ರೆಕ್ಕೆ ಬಡಿಯುತ್ತಾ ಓಡುತ್ತಾ ಹಾರಿದರೂ ತುಂಬಾ ದೂರ ಹಾರಲಾರದು. ಕಾರಣ, ಇದರ ಪುಟ್ಟ ಗುಂಡನೆಯ ರೆಕ್ಕೆಗಳು. ಹಾಗಿದ್ದೂ, ಇದರ ಪ್ರಬಲವಾದ ಎದೆಯ ಮಾಂಸಖಂಡಗಳು ತ್ವರಿತ ವೇಗದ ಹಾರಾಟಕ್ಕೆ ಸಹಾಯ ಮಾಡಿವೆೆ. ಆದ್ದರಿಂದ ಗೌಜುಗ ಕೊಂಚ ಜಾಗರೂಕಾಗಿ ಓಡಾಡುತ್ತಾ, ಗಾಬರಿಯಾದಾಗ ಹಾರುವುದಕ್ಕಿಂತ ಓಡಿ ಅವಿತುಕೊಳ್ಳುವುದುಂಟು. ನೆಲದಲ್ಲಿ ಓಡಾಡುವಾಗ ಮಣ್ಣಿನಲ್ಲಿ ಸಿಗುವ ಬೀಜ, ಕಾಳು, ಹುಳ, ಕ್ರಿಮಿ-ಕೀಟ ಮುಖ್ಯವಾಗಿ ಗೆದ್ದಲು, ಜೀರುಂಡೆೆುೀಂ ಇದರ ಆಹಾರ, ಕೆಲವೊಮ್ಮೆ ಚಿಕ್ಕ ಹಾವುಗಳನ್ನು ಕೂಡ ಸವಿಯುವುದು.

ಗೌಜುಗದ ಗಂಡು ಹೆಣ್ಣು ಹಕ್ಕಿಗಳು ರೂಪದಲ್ಲಿ ಒಂದೇ ರೀತಿಯಾಗಿ ಕಂಡರೂ ಆಕಾರದಲ್ಲಿ ಗಂಡು ತುಸು ದೊಡ್ಡದು. ಗಂಡು ಹಕ್ಕಿಗೆ ಕಾಲಿನಲ್ಲಿ ಚೂಪಾದ ಮುಳ್ಳು ಕಂಡು ಬಂದರೆ ಇದು ಹೆಣ್ಣಿನಲ್ಲಿ ಇರುವುದಿಲ್ಲ. ಪ್ರಜನ ಕಾಲದಲ್ಲಿ ಗಂಡು ಹಕ್ಕಿ ತನ್ನ ಸಂಗಾತಿಯನ್ನು ಒಲಿಸಿಕೊಳ್ಳಲು ತಾರಕ ಸ್ವರದಲ್ಲಿ ಕೂಗುತ್ತದೆ. ಒಮ್ಮೊಮ್ಮೆ ಸಂಗಾತಿಗಳೆರಡೂ ಸೇರಿ ಯುಗಳ ಗೀತೆ ಹಾಡುವವು. ಏಪ್ರಿಲ್- ಸೆಪ್ಟೆಂಬರ್ ಕಾಲದಲ್ಲಿ ನೆಲದ ಮೇಲೆ, ಹುಲ್ಲಿನ ನಡುವೆ ಮಣ್ಣಿನ ಮೇಲೆ ಹುಲ್ಲಿನಿಂದ ಗೂಡು ಕಟ್ಟಿ ಅದರಲ್ಲಿ ೬-೮ ಕೆಂಪು ಚುಕ್ಕೆ ಇರುವ ನಸು ಹಳದಿ ಬಣ್ಣದ ಮೊಟ್ಟೆ ಇಡುತ್ತದೆ. ತಾಯಿ ಹಕ್ಕಿೆುೀಂ ಮೊಟ್ಟೆಗಳಿಗೆ ಶಾಖ ಕೊಟ್ಟರೆ ಮರಿಗಳ ಪೋಷಣೆಯನ್ನು ತಂದೆ-ತಾಯಿ ಹಕ್ಕಿಗಳೆರಡೂ ಸೇರಿ ನಿರ್ವಹಿಸುತ್ತವೆ.

ಪಂದ್ಯದಲ್ಲಿ ವೀರಾವೇಶದಿಂದ ಹೋರಾಡುವ ಗೌಜುಗ, ತನ್ನ ಒಡೆಯನ ಅತ್ಯಂತ ಸೌಮ್ಯ ಹಾಗೂ ನಂಬುಗೆಯ ಹಕ್ಕಿ. ಉತ್ತರ ಭಾರತದ ಜಾನಪದ ಕಥೆಯಲ್ಲಿ ಪಕ್ಷಿ ಬೇಟೆಗಾರ ಒಡೆಯನಿಗಾಗಿ ಜೋರಾಗಿ ಕೂಗು ಹಾಕಿ ತನ್ನ ಗೆಳೆಯರನ್ನೆಲ್ಲ ಮೋಸದಿಂದ ಒಟ್ಟುಮಾಡಿ ಅವನ ವ್ಯಾಪಾರಕ್ಕೆ ನೆರವಾಗಿದ್ದುದರಿಂದ ದ್ರೋಹಿ ಎಂಬ ಕುಖ್ಯಾತಿ ಪಟ್ಟ. ಈಗಲೂ ಮಧ್ಯ ಭಾರತದ ಪರ್ಧಿ ಜನಾಂಗದವರು ಗೌಜುಗ ಹಕ್ಕಿಯನ್ನು ಕರೆಯಲು ಬಳಸುವ ಪೀಪಿಯನ್ನು ಆಭರಣದಂತೆ ಕೊರಳ ಸುತ್ತ ಹಾಕಿಕೊಳ್ಳುವುದನ್ನು ನೋಡಬಹುದು.

andolana

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

4 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

4 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

4 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

4 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

4 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

4 hours ago