ಆಂದೋಲನ ಪುರವಣಿ

‘ಇದು ನಿಮ್ಮ ಅನುಭವವಾ?’ ಎಂಬ ಪ್ರಶ್ನೆ!

ಅರ್ಪಣ ಎಚ್.ಎಸ್.

ಬಹುತೇಕ ಎಲ್ಲಾ ಮಕ್ಕಳಂತೆ ನನ್ನ ಮಗನಿಗೂ ಸಣ್ಣವನಿದ್ದಾಗ ರಾತ್ರಿ ಮಲಗುವ ಮುನ್ನ ಒಂದು ಕತೆ ಹೇಳಲೇಬೇಕಿತ್ತು. ಅತ್ಯಂತ ಬೋರಿಂಗ್ ಎನಿಸುವ ಈ ದಿನಚರಿಯನ್ನು, ಬೇರೆ ದಾರಿಯಿಲ್ಲದೆ ಒಂದೆರಡು ವರ್ಷ ನಡೆಸಿಕೊಂಡು ಬಂದರೂ, ಅವನು ಕೊಂಚ ದೊಡ್ಡವನಾದ ಕೂಡಲೇ ದಿನಕ್ಕೊಂದು ಹೊಸ ಕತೆ ಪೂರೈಸಲಾಗದೆ ನಂಗೆ ಕತೆ ಗೊತ್ತಿಲ ್ನುವ ಮಂತ್ರ ಪಠಿಸತೊಡಗಿದೆ. ‘‘ನೀನೇ ಕತೆ ಬರೀತೀಯಲ್ಲ ಹೇಗೂ, ಅದೇ ಹೇಳು’’ ಅನ್ನುವ ಬೇಡಿಕೆ ಇಡತೊಡಗಿದ. ‘‘ನಾನು ಬರೆೋಂ ಕತೆ ನಿಂಗೆ ಅರ್ಥ ಆಗಲ್ಲ’’ ಅನ್ನತೊಡಗಿದೆ. ದಿನಾ ಇದೇ ಸಬೂಬು ಕೇಳಿ ರೋಸಿ ಹೋದ ಅವನು ಒಂದು ರಾತ್ರಿ ‘‘ಅಷ್ಟೊಂದು ಕತೆ ಬರೀತೀಯಾ, ನನ್ನ ಕತೆಗೆ ಬಹುಮಾನ ಬಂತು ಅಂತ ಬೇರೇ ಹೇಳ್ತೀಯ. ಅದರಲ್ಲಿ ಒಂದೂ ನಂಗೆ ಹೇಳೋಕೆ ಆಗಲ್ಲ ಅಂದ ಮೇಲೆ, ನೀನು ಏನು ಕತೆ ಬರೆದು ಏನು ಪ್ರೋಂಜನ ಹೋಗು’’ ಅಂದ.

ಅವತ್ತು ರಾತ್ರಿ ಅವನ ಮಾತು ಬಹಳ ಕಾಡಿ ಮರುದಿನ ಮಕ್ಕಳ ಕತೆ ಬರಿೋಂದಕ್ಕೆ ಯತ್ನಿಸಿ, ಸಾಧ್ಯವಾಗದೆ ಸುಮ್ಮನಾಗಿದ್ದೆ. ಮುಂದೆ ದೊಡ್ಡವನಾದ ಮೇಲೆ ನನ್ನ ಕತೆ ಓದುತ್ತಾನೆ ಅಂದುಕೊಂಡು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ನನ್ನ ಮಕ್ಕಳು ಮುಂದೆ ನನ್ನ ಕತೆಗಳನ್ನು ಓದುತ್ತಾರೆಂಬುದು ಆಗ ನನಗೆ ಸಮಾಧಾನ ಕೊಡುವ ಬದಲು ಹೆಚ್ಚು ತಳಮಳವನ್ನೇ ಉಂಟುಮಾಡಿತ್ತು. ಸುಮಾರು ಎಂಟು ವರ್ಷಗಳ ಹಿಂದೆ ನಾನು ಕತೆ ಬರೆಯಲು ಮತ್ತು ಅದು ಪ್ರಕಟವಾಗಲು ಶುರುವಾದಾಗ ನನಗೆ ಖುಷಿಯಾಗುವುದರ ಜೊತೆ ಜೊತೆಗೆ, ಕತೆಗಳನ್ನು ಜನ ಓದುತ್ತಾರಲ್ಲ ಎಂಬ ಆತಂಕ ಕಾಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅಪ್ಪ, ಅಮ್ಮ ನನ್ನ ಕತೆಗಳನ್ನು ಓದುತ್ತಾರೆ ಎಂಬುದು ದೊಡ್ಡ ಹಿಂಜರಿಕೆಗೆ ಕಾರಣವಾಗಿತ್ತು. ಈ ಆತಂಕ ಕೊಂಚಮಟ್ಟಿಗೆ ನನ್ನ ಕತೆಗಳನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದಕ್ಕೆ ಸಂಬಂಧಪಟ್ಟಿದ್ದಿರಬಹುದಾದರೋ, ಬಹುಮಟ್ಟಿಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲದ ಓದುಗರು ನನ್ನ ಕತೆಯ ಜೊತೆಗೆ ನನ್ನನ್ನು ಯಾವ ರೀತಿ ಜೋಡಿಸಬಹುದು, ನನ್ನನ್ನು ಹೇಗೆ ‘ಜಡ್ಜ್’ ಮಾಡಬಹುದು ಎಂಬುದಕ್ಕೆ ಸಂಬಂಧಪಟ್ಟದ್ದಾಗಿತ್ತು. ಹಾಗೆ, ನೋಡಿದರೆ ನನ್ನ ಕತೆಗಳಾವುವೂ ತೀರಾ ವೈಯಕ್ತಿಕವಲ್ಲ. ಆದರೂ, ಮೊದ ಮೊದಲಿಗೆ ಕಾಡುತ್ತಿದ್ದ ಈ ತಳಮಳ ನಾನು ಕತೆಗಳನ್ನು ಬರೆಯುವ ರೀತಿಯನ್ನೂ ಮತ್ತು ನನ್ನ ವಿಷಯದ ಆ್ಂಕೆುಯನ್ನು ಪ್ರಭಾವಿಸುತ್ತಿದ್ದವು ಎಂಬುದು ಸುಳ್ಳಲ್ಲ.

ಇದಕ್ಕೆ ಮುಖ್ಯ ಕಾರಣ ಕತೆಗಾರ್ತಿಯಾಗುವುದಕ್ಕೂ ಮೊದಲು ಓದುಗಳಾಗಿದ್ದ ನನಗೆ, ಒಂದು ಕೃತಿಯಲ್ಲಿ ಲೇಖಕರನ್ನು ಹುಡುಕುವ ಓದುಗರ ಅತೀ ಸಹಜವಾದ ಮತ್ತು ಸಾಮಾನ್ಯವಾದ ಪ್ರಕ್ರಿೆುಂಯ ಅರಿವಿರುವುದು. ಎಲ್ಲಾ ಕತೆ, ಕವಿತೆ, ಕೃತಿಗಳೂ ಯಾವುದೋ ಒಂದು ರೀತಿಯಲ್ಲಿ ಬರಹಗಾರನ ಬದುಕು, ಚಿಂತನೆ, ಭಾವನೆಗಳಿಂದ ಪ್ರಭಾವಿತವಾಗಿರುತ್ತದೆ ಎಂಬುದು ನಿಜವೇ. ಕೃತಿಯಲ್ಲಿ ಒಂದು ಪಾತ್ರವಾಗಿೆುೀಂ, ಘಟನೆಯಾಗಿೋಂ, ಮಾತಾಗಿೋಂ, ಭಾವವಾಗಿೋಂ ಅವನು ಅಥವಾ ಅವಳು ನುಸುಳಿರುತ್ತಾರೆ. ಆದರೆ, ಎಲ್ಲ ಕೃತಿಗಳನ್ನೂ ಅದು ಬರೆದವರ ಅತ್ಮ ಚರಿತ್ರೆೆುೀಂನೋ ಎಂಬಂತೆ ನೋಡುವ ಮಂದಿಯೂ ಸಾಕಷ್ಟಿದ್ದಾರೆ. ತಮಾಷೆೆುಂಂದರೆ, ನನ್ನ ಕತೆ, ಕವನಗಳಲ್ಲಿ ‘‘ನಾನು’’ ತುಂಬಾ ಕಡಿಮೆ ಇರುತ್ತೇನೆ ಎಂಬುದು ಅರಿವಾದಾಗ, ಮೋಸ ಹೋದವರಂತೆ ಸಿಟ್ಟುಗೊಂಡ ಕೆಲ ಓದುಗರನ್ನೂ ನಾನು ನೋಡಿದ್ದೇನೆ. ‘ನಮ್ಮ ಬರಹಗಳಲ್ಲಿರುವುದು ನಮ್ಮ ಬದುಕೇ’ ಎಂದು ಪರಿಭಾವಿಸುವ ಇಂತಹ ಓದುಗರಿಂದ ನಾನು ಗಮನಿಸಿದಂತೆ ಹೆಚ್ಚು ನಷ್ಟವಾಗಿರುವುದು ಮಹಿಳಾ ಸಾಹಿತಿಗಳಿಗೆ. ಇಂತಹ ಕಾರಣಗಳಿಂದಾಗಿೆುೀಂ ಯಾವುದೇ ಭಿಡೆ ಇಲ್ಲದೆ ಬರೆಯುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ.

ನಾನೇನೋ ಈಗ ಈ ಹಂತ ದಾಟಿದ್ದರೂ ‘‘ಇದು ನಿಮ್ಮ ಅನುಭವವಾ?’’ ಎಂಬ ಪ್ರಶ್ನೆಗೆ ಹೆದರಿ, ಅದೆಷ್ಟು ಕತೆಗಳು, ಕವಿತೆಗಳು ಹುಟ್ಟದೇ ಸತ್ತು ಹೋಗಿವೆೋಂ ಎಂದು ಒಮ್ಮೊಮ್ಮೆ ೋಂಚಿಸುತ್ತಿರುತ್ತೇನೆ.

 

andolana

Recent Posts

ಓದುಗರ ಪತ್ರ; ವಯೋಮಿತಿ ಸಡಿಲಿಕೆ ಸ್ವಾಗತಾರ್ಹ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…

8 mins ago

ಓದುಗರ ಪತ್ರ: ಸರ್ಕಾರದ ನಡೆ ಖಂಡನೀಯ

ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…

10 mins ago

ಓದುಗರ ಪತ್ರ: ಐಪಿಎಲ್ ಬೇಕಿತ್ತೇ?

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…

13 mins ago

ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವೆ ಸಮತೋಲನ ಅವಶ್ಯ

ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…

16 mins ago

ಮನುಷ್ಯನ ಮುಖವಾಡ ಕಳಚುವ ನಾಟಕ ‘ಪಾರ್ಟಿ’

ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…

22 mins ago

ತಣ್ಣಗೆ ಕಾಣುವ ಬಣ್ಣದ ಮಡಕೆ: ಆರೋಗ್ಯಕ್ಕೆ ಹಿತವೆ? ಅಹಿತವೇ?

‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್ ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು…

27 mins ago