ಆಂದೋಲನ ಪುರವಣಿ

ಬರಹ-ಬದುಕು : ಅವಳ ಬಗ್ಗೆ ಕವನ ಬರೆದರೆ ಮೈಯೆಲ್ಲಾ ಬೆವರು

ಪ್ರತಿಭಾ ನಂದಕುಮಾರ್ prathibhanandakumar@gmail.com

ದೇವಿ ಮಹಾತ್ಮೆಯನ್ನು ಓದುತ್ತಾ ಅದಕ್ಕೆ ಸಂಬಂಧಪಟ್ಟ ಕಥೆ ಪುರಾಣಗಳನ್ನೆಲ್ಲಾ ಕಲೆ ಹಾಕುತ್ತಾ ವ್ಯಾಖ್ಯಾನಿಸುತ್ತ ಇದ್ದೆ. ಪ್ರತಿಯೊಂದು ಕಥೆಯಲ್ಲೂ ದೇವಿಯ ವ್ಯಕ್ತಿತ್ವ ವಿಸ್ಮಯಕಾರಕ. ಅವಳ ನಡವಳಿಕೆ ಮಾತು ನಗೆ ಕೋಪ ಕರುಣೆ ಪ್ರೀತಿ ಎಲ್ಲವೂ ಅನಿರೀಕ್ಷಿತ ಮತ್ತು ಆಶ್ಚರ್ಯಜನಕ. ದೇವಿಯನ್ನು ಕೇವಲ ಹೆಣ್ಣು ಅಂದುಕೊಳ್ಳಿ ಅಥವಾ ಜಗನ್ಮಾತೆ ಜಗದ್ರಕ್ಷಿಣಿ ಅಂದುಕೊಳ್ಳಿ ಅವಳನ್ನು ಕುರಿತ ಎಲ್ಲವೂ ಅತಿಶಯ. ಹೀಗೇ ಚಿಂತಿಸುತ್ತಾ ವಿಚಿತ್ರ ಮನಸ್ಥಿತಿಗೆ ಒಳಪಟ್ಟಾಗ ಒಂದು ಬೇರೆೆುೀಂ ಪ್ರಪಂಚ ಒಳಹೊಕ್ಕ ಹಾಗಾಯಿತು. ಸರಸರನೆ ಕವನದ ಸಾಲುಗಳು ಜಲಬುಗ್ಗೆಯ ಹಾಗೆ ತನ್ನಿಂತಾನೇ ಹೊಮ್ಮತೊಡಗಿದವು.

ಆದರೆ ಅಲ್ಲಿ ಎಂದಿನಂತೆ ಅಥವಾ ಎಲ್ಲರೂ ಬರೆಯುವ ಹಾಗೆ ಸ್ತೋತ್ರವಾಗಿರಲಿಲ್ಲ ಅವು: ಅವಳನ್ನು ಇವತ್ತಿಗೆ ಕರೆತಂದು ಎದುರಿಗೆ ಕೂರಿಸಿಕೊಂಡು ಮಾತನಾಡಿದ ಹಾಗೆ. ಒಂದು ಕಡೆ ದೇವಿಯ ಬಗ್ಗೆ ವರ್ಣಿಸುವಾಗ ಹೇಳುತ್ತಾರೆ ‘‘ಸ್ತ್ರೋತ್ರ ಮಾತ್ರೇಣ ಸಿದ್ಧ್ಯತಿ’’ ಅವಳು. ಅಂದರೆ ಕೇವಲ ಸ್ತ್ರೋತ್ರ ಮಾಡಿದರೆ ಸಾಕು, ಅವಳು ಸಿದ್ಧಿಯಾಗುತ್ತಾಳೆ. ಇನ್ನೊಂದರ್ಥ ಸ್ತೋತ್ರ ಮಾಡುವುದರಿಂದ ಮಾತ್ರವೇ ಅವಳು ಸಿದ್ಧಿಯಾಗುವುದು.
ಸ್ತೋತ್ರವೆಂದರೆ? ಅವಳನ್ನು ವರ್ಣಿಸಿ ಸ್ತುತಿಸುವುದು ತಾನೇ? ಅಥವಾ ಅಷ್ಟೆಯೇ?!

ಅವಳ ಕಥೆಯನ್ನು ಪದೇಪದೇ ಕೇಳಿಸಿಕೊಳ್ಳುವುದು ಅಥವಾ ಓದುವುದು. ಜೊತೆಗೆ ಧ್ಯಾನ, ಜಪ. ಸರಳವಾಗಿ ಪೂಜೆ.
ಸಪ್ತಶತೀ ಪಾರಾಯಣ. ಜೊತೆಗೆ ಸೂಕ್ತಗಳು – ಶ್ರೀ ಸೂಕ್ತ, ದುರ್ಗಾ ಸೂಕ್ತ, ವಾಕ್ ಸೂಕ್ತ. ಇಷ್ಟು ಹೇಳಿ ಮಂಗಳಾರತಿ ಮಾಡಿದರೆ ಒಲಿಯುತ್ತಾಳೆ. ಹೌದೇ?
‘‘ಏನು ಕೊಟ್ಟರೆ ಒಲಿದಾಳು ತಾಯೀ? ಎಲ್ಲಕ್ಕಿಂತ ಶ್ರೇಷ್ಠ ಕಾಣಿಕೆ ಯಾವುದು ಅರ್ಚಕರೇ?’’
‘‘ತಾಯಿ ರಕ್ತ ಕೇಳುತ್ತಾಳೆ ತಾಯೀ
ಕೊಟ್ಟರೆ ಕೊಡಿ ಮರಿ,
ಇಲ್ಲವೇ ಎರಡು ಕೋಳಿ’’
ಇಲ್ಲಿಗೇ ನಿಂತುಹೋಯಿತು ಕವನ. ನಾವು ತಿನ್ನುವರಲ್ಲವಲ್ಲಾ? ಹೇಗೆ ಕೊಡುವುದು ಮರಿ, ಕೋಳಿ? ಹಾಗಾದರೆ ದೇವಿಯನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು? ಸ್ತೋತ್ರ ಮಾತ್ರೇಣ ಸಿದ್ಧತ್ಯೃತಿ? ಅಷ್ಟರಲ್ಲಿ ಅರ್ಚಕರು ಹೇಳಿದರು
‘‘ಹಾಗಾದರೆ ಎರಡು ತೆಂಗಿನ ಕಾಯಿ!’’
ಫಳಾರನೆ ಮಿಂಚಿತು ಗರ್ಭಗುಡಿಯಲ್ಲಿ
ಅವಳ ಮೂಗುತಿಯೋ ನಕ್ಕದ್ದಕ್ಕೆ ಕಂಡ ಹಲ್ಲಿನ ಕಾಂತಿಯೋ?
ಹೂಹಣ್ಣು ಕಾಯಿಗೆ ಜೀವವಿಲ್ಲವೋ?
ಒಂದು ಹೂವೊಳಗೆ ಒಂದು ತೋಟ
ಒಂದು ಹಣ್ಣೊಳಗೆ ಒಂದು ಕಾಡು
ಕಾೆುಂಂದರೆ ಅದು ಕಲ್ಪವೃಕ್ಷ.’’
ಅಲ್ಲವೇ ಮತ್ತೆ? ಅಷ್ಟರಲ್ಲಿ ದೇವಿ ಕೇಳಿದಳು ‘‘ಮರಿಯ ಕೊಚ್ಚಲಾರದವಳು ಕಾಯಿ ಚಚ್ಚುವೆಯಾ? ಅಲ್ಲಿ ಚಿಲ್ಲನೆ ಚಿಮ್ಮಿದರೆ ಇಲ್ಲಿ ಟೊಳ್ಳನೆ ಸಿಡಿಯುತ್ತದೆ’’
ಆದರೆ ನನ್ನ ಹೂಹಣ್ಣು ಕಾಯಿಯ ಅರ್ಪಣೆಯ ಸಮಯಾಚಾರದ ಹಂಗು ಇನ್ನೂ ಬಿಟ್ಟಿಲ್ಲ ನನ್ನನ್ನು. ನಾನೂ ವಾದ ಮಾಡಿದೆ
‘‘ಇದು ಬರಿಯ ತಣ್ಣಗಿನ ನೀರು ತಾಯಿ
ಅದರಂತೆ ಕೆಂಪು ಬಿಸಿ ರಕ್ತವಲ್ಲ’’
ಅಹಹಾ ಎಂಥಾ ವಾದ ಹೂಡಿದೆ ನಾನು, ಸೋತೇ ಬಿಡಬೇಕು ದೇವಿ ಅಂತ ನನ್ನ ಭ್ರಮೆ. ಆದರೆ ಜ್ವಾಲಾಮುಖಿ ಅಮ್ಮನವರ ಸನ್ನಿಧಿಯಲ್ಲಿ ಗೆಲುವು ಬುದ್ಧಿಗೋ ಭಕ್ತಿಗೋ?


‘‘ಇದು ಇದರ ರಕ್ತ! ಜೀವ ಸೃಷ್ಟಿಯ ದ್ರವ್ಯ’’ ಅಂತ ಮೊದಲ ಪೆಟ್ಟು ಕೊಟ್ಟಳು ತಾಯಿ.
ಮತ್ತೆ ಇನ್ನಷ್ಟು ಸ್ಪಷ್ಟೀಕರಣ ಬೇರೆ!
ವರ್ಣದ ಹಂಗಿಲ್ಲ ಇದಕ್ಕೆ. ಗರ್ಭಕೋಶದ ಹಾಗೆ
ಕೂಡಿಟ್ಟು ಕಾಪಾಡಿ ಕುಡಿ ಮೊಳೆಯುವಾಗ
ಜತನದಲ್ಲಿ ಹೊರಕಳಿಸುವುದು ಚಿಗುರು.
ಮರಿಯ ಕೊರಳನುಳಿಸಿ ಬೀಗಬೇಕಿಲ್ಲ
ಇದೇ ಭ್ರೂಣ ಹತ್ಯೆ!’’
ಇನ್ನು ನನ್ನ ಬುದ್ಧಿ ಮತ್ತು ಮನಸ್ಸು ಎರಡೂ ಅಲ್ಲಿಗೇ ಸ್ತಬ್ಧವಾಯಿತು. ಕವನವೂ ಇಲ್ಲ ಮಣ್ಣಂಗಟ್ಟಿಯೂ ಇಲ್ಲ.
ಎದ್ದು ದೇವಸ್ಥಾನದ ಪ್ರಕಾರದ ಪ್ರದಕ್ಷಿಣೆ ಮಾಡಿದೆ. ಹೊರಗೆ ತಮಟೆ ಬಡಿಯಲು ಶುರುವಾಗಿತ್ತು. ಜಡಜಣುಕ್ಕು..ನಕ್ಕು ನಕ್ಕು…
ಕಾಲು, ತಲೆ ತನ್ನಿಂತಾನೇ ಕುಣಿಯತೊಡಗಿದವು. ಒಳಗಿನ ಗೊಂದಲಗಳಿಗೆಲ್ಲ ತೆರೆ ಬಿತ್ತು.
ಜೋರಾಗಿ ಕೂಗಿದೆ
‘‘ತಪ್ಪಾಯಿತು ತಾಯೀ, ಎಲ್ಲ ನಿನ್ನದೇ ಮಾೆುಂ
ಏ …ತನ್ನಿರೋ ಮರಿಯ, ಬಡಿಯಿರಿ ತಮಟೆ
ತಾಯಿ ರಕ್ತ ಕೇಳುತ್ತಾಳೆ ತಣಿಸಿ ತಣಿಸಿ
ಈಗದು ಬಿಸಿ ರಕ್ತವಲ್ಲ
ಬರಿಯ ತಣ್ಣನೆಯ ನೀರು.’’
ಹೀಗೇ ಒಂದೊಂದಾಗಿ ದೇವಿ ಕಳಚಿದಳು ಮಾೆುಂಯ ಮುಸುಕು. ಸರಸರನೆ ಹೊರಹರಿಯಿತು ಜ್ವಾಲಾಮುಖಿ ಅಮ್ಮನವರ ಸರಣಿ ಕವನಗಳು. ‘‘ಮಹಾಲಿಂಗ – ಮಹಾ ಕಾಳಿ’’, ‘‘ಅತಿರತಿ’’ ‘‘ಕೇಶಾಕರ್ಷಣ ವಿಹ್ವಲಾಂ’’, ‘‘ಮಾತೇ ಮೃತ್ಯು’’, ‘‘ಶಾಪ ಮರುಶಾಪ’’ ಇತ್ಯಾದಿ ಪುಂಖಾನುಪುಂಖ! ಉರಿಮಾರಿ ಅವಳು. ಬೆಂಕಿ, ಚಾಮುಂಡಿ. ಅವಳ ಬಗ್ಗೆ ಕವನ ಬರೆದರೆ ಮೈೆುಂಲ್ಲಾ ಬೆವರು! ಕೈ ನಡುಕ. ಚಿತ್ತಚಂಚಲ. ದೇವಿಯ ಬಗ್ಗೆ ಕವನ ಬರೆಯುವುದು ನನ್ನ ಪ್ರಯತ್ನ ಅಲ್ಲವೇ ಅಲ್ಲ. ಬರೆಸಿಕೊಳ್ಳುವವಳು ಅವಳೇ. ಪೂಜಿಸಿಕೊಳ್ಳುವವಳೂ ಅವಳೇ.
ದೇವಿಯ ಸಿರಿಮುಡಿಗೆ ಕೈಹಾಕಿದವರಿಗಾದ ದುರ್ಗತಿಯ ಬಗ್ಗೆ ನೂರೆಂಟು ಕಥೆ.
ಅವಳ ಅಡಿಗೆರಗಿದರೆ ನಿರಾಯಾಸ ಕಾವ್ಯ ಧಾರೆ!

 

andolana

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

3 hours ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

6 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

7 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

7 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

8 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

8 hours ago