ಆಂದೋಲನ ಪುರವಣಿ

ವನಿತೆ ಮಮತೆ : ಹಕ್ಕಿಯ ಬೆನ್ನುಬಿದ್ದರೆ ದೂರ ದೂರವೆನಿಸದು

ಅಪರಿಮಿತ ಉತ್ಸಾಹಕ್ಕೆ ಲೀಲಾ ಅಪ್ಪಾಜಿ ಅವರನ್ನು ಆರಾಮವಾಗಿ ಉದಾಹರಿಸಬಹುದು. ನಿವೃತ್ತಿಯ ಜೀವನವನ್ನು ತಮ್ಮಿಷ್ಟದ ಫೋಟೋಗ್ರಫಿ ಪ್ರಪಂಚಕ್ಕೆ ಮೀಸಲಿಟ್ಟು ಕಾಡು, ಮೇಡು, ಬೆಟ್ಟ, ಬಯಲುಗಳನ್ನು ಹತ್ತಿಳಿದು ಹಕ್ಕಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಮಂಡ್ಯ ನೆಲದ ಸಾಧಕಿ ಲೀಲಾ ಅಪ್ಪಾಜಿ ಇಲ್ಲಿ ತಮ್ಮ ಬದುಕು ಮತ್ತು ಹಕ್ಕಿ ಛಾಯಾಗ್ರಹಣದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿಕೊಂಡಿದ್ದಾರೆ.

 

ಮೂವತ್ತೆ ದು ವರ್ಷ ಕನ್ನಡ ಉಪನ್ಯಾಸಕಿಯಾಗಿ, ನಂತರ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡಿ ನಿವೃತ್ತಿಯ ನಂತರ ಹಕ್ಕಿ ಛಾಯಾಗ್ರಹಣದ ಕ್ಷೇತ್ರಕ್ಕೆ ಬಂದೆ. ಕ್ಯಾಮೆರಾದ ಒಡನಾಟ ಆ ಮೊದಲೇ ಇದ್ದರೂ ಸೀಮಿತ ಉದ್ದೇಶಕ್ಕಾಗಿ ಬಳಕೆಯಾಗುತ್ತಿತ್ತು. ನನ್ನ ಸಂಶೋಧನಾ ಅಧ್ಯಯನ ಹಾಗೂ ಪ್ರಿನ್ಸಿಪಾಲ್ ಆದ ಬಳಿಕ ಎಲ್ಲ ಕಾರ್ಯಕ್ರಮಗಳಿಗೆ ಕ್ಯಾಮೆರಾ ಬಳಸುತ್ತಿದ್ದೆ. ಸಾಹಿತ್ಯದ ಪಾಠ ಮಾಡುವಾಗ ಅದರಲ್ಲೂ ತೇಜಸ್ವಿ ಕುರಿತು ಹೇಳುವಾಗ ಕ್ಯಾಮರಾ ಬಗ್ಗೆ ವಿಶೇಷ ಸೆಳೆತ ಇದ್ದೇ ಇತ್ತು. ಅದರಲ್ಲೂ ಅವರ ಛಾಯಾಗ್ರಹಣ ಹಾಗೂ ಪ್ರೋಂಗಗಳ ಬಗ್ಗೆ ಕುತೂಹಲ ಇತ್ತು. ಕೆಲಸದ ಜವಾಬ್ದಾರಿಯ ಒತ್ತಡ ಕಳೆದ ಬಳಿಕ ಅದುವರೆಗೂ ಹೆಚ್ಚು ಕೆಲಸ ಮಾಡದಿದ್ದ ಕ್ಷೇತ್ರದ ಆ್ಂಕೆುಯಾಗಿ ಹಕ್ಕಿ ಛಾಯಾಗ್ರಹಣ ಆರಿಸಿಕೊಂಡೆ. ಪಕ್ಷಿ ಜೊತೆಗೆ ಪರಿಸರವೂ ಎಷ್ಟು ಮಹತ್ವದ್ದೆಂಬುದೂ ಅರಿವಾಯಿತು. ಹಕ್ಕಿಗಳ ವೈವಿಧ್ಯತೆ ಬಣ್ಣ, ಕೊಕ್ಕು ಮತ್ತೊಂದು ಆಕರ್ಷಕ.

ಹಕ್ಕಿ ಕಲಿಸಿದ ಮೌನ
ಮಾತುಗಾರಿಕೆಯ ಉಪನ್ಯಾಸಕಿಯಾಗಿ, ಭಾಷಣಕಾರ್ತಿಯಾಗಿ ಕಾಲ ಕಳೆದಿದ್ದ ನನಗೆ ಹಕ್ಕಿ ಮೌನ ಕಲಿಸಿದೆ, ಏಕಾಗ್ರತೆ ತಂದಿದೆ, ಹೊಸ ಉತ್ಸಾಹ ತುಂಬಿದೆ. ದೈಹಿಕ ನೋವು ಆಯಾಸಗಳನ್ನು ಮರೆಸಿ ಉತ್ಸಾಹ ತುಂಬಿಸಿದೆ. ಅಲ್ಲಿಯ ತನಕ ನಾ ಕಾಣದೇ ಇದ್ದ ಹೊಸತೊಂದು ಲೋಕಕ್ಕೆ ಕರೆದೊಯ್ದಿದೆ. ಬೇರೆ ಎಲ್ಲ ಫೋಟೋಗ್ರಾಫಿಗಳಿಗಿಂತ ಹಕ್ಕಿ ಫೋಟೋಗ್ರಾಫಿಯಲ್ಲಿ ತೇಜಸ್ವಿ ಹೇಳಿದಂತೆ ಯಾವುದೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಿಡಿಯಷ್ಟಿರುವ ಹಕ್ಕಿ ಅನಂತದಷ್ಟು ತಾಳ್ಮೆ ಕಲಿಸುತ್ತದೆ. ಹಕ್ಕಿಯ ಚಲನವಲನಗಳ ಅರಿವು, ಆಹಾರಾಭ್ಯಾಸ, ಬ್ರೀಡಿಂಗ್ ಸೀಜನ್ ಇತ್ಯಾದಿಗಳ ಜ್ಞಾನ ಅತ್ಯವಶ್ಯ.

ಎಲ್ಲದರ ಹಿಂದೆ ಇದೆ ರೋಚಕ ಹಿನ್ನೆಲೆ
ನಿಸದು. ಭಾರತದ ಬಹುತೇಕ ರಾಜ್ಯಗಳಲ್ಲಿ ಅಡ್ಡಾಡುವಾಗ ಆ ಪ್ರದೇಶದ ವಿಶಿಷ್ಟ ಹಕ್ಕಿಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ. ಕಾಡು, ಕಡಲು, ಹಿಮಾಲಯ… ಹೀಗೆ ಎಲ್ಲೆಲ್ಲೂ ಹೊಸ ಹೊಸ ಅನುಭವಗಳು ಸಾಕಷ್ಟಾಗಿವೆ. ಪ್ರತಿ ಹಕ್ಕಿಯ ಹುಡುಕಾಟದ ಹಿಂದೆ ರೋಚಕ ಹಿನ್ನೆಲೆ,ಅಲೆತ ಇದ್ದೇ ಇದೆ. ಉಸಿರುಗಟ್ಟಿದ ಅನುಭವಗಳಾದರೂ ಬಯಸಿದ ಹಕ್ಕಿ ಸಿಕ್ಕಿದಾಗ ಸಂಭ್ರಮವೂ ಮುಗಿಲು ಮುಟ್ಟಿರುತ್ತದೆ.

ಹಕ್ಕಿ ಫೋಟೋಗ್ರಾಫಿ ಒಂದು ಧ್ಯಾನ. ತನ್ಮಯತೆ, ತಾಳ್ಮೆ ಇದ್ದರೆ ನೀವು ಬಯಸಿದ ಚಿತ್ರ ತೆಗೆಯಲು ಸಾಧ್ಯವಾಗಬಹುದು. ಕ್ಯಾಮೆರಾ ಸಲಕರಣೆಗಳು ಎಷ್ಟು ಅಗತ್ಯವೋ ಅಷ್ಟೆ ಅವನ್ನು ಸಮರ್ಪಕವಾಗಿ ಸಾಂದರ್ಭಿಕವಾಗಿ ಬಳಸುವ ತಿಳಿವಳಿಕೆಯೂ ಅತ್ಯಗತ್ಯ.

andolana

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

54 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago